Police Bhavan Kalaburagi

Police Bhavan Kalaburagi

Sunday, July 3, 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಸಂಚಾರಿ ಠಾಣೆ : ಶ್ರೀ ನೀಲಕಂಠ ತಂದೆ ಬಾಭುರಾವ ಸಿರಸಗಿ ಸಾ|| ದುಬೈ ಕಾಲೋನಿ ಗುಲಬರ್ಗಾ ರವರು ನನ್ನ ತಮನಾದ ರಾಜು ಇತನು ಹುಮನಬಾ್ ಬೆಸದಿಂದ ಚೌಕ ಕಡೆಯಿಂದ ನಡೆದುಕೊಂಡು ಹೊರಟಾಗ ಯಾವಧೋ ಒಮದು ವಾಹನ ಚಾಲಕನು ತನ್ನ ವಾಹನವನ್ನು ಅತೀವೆಗ ಮತ್ತು ನಿಷ್ಕಾಳಜಿತನದಿಂದ ನಡೆಯಿಸಿ ಕೊಂಡು ಬಂದು ಡಿಕ್ಕಿ ಪಡಿಸಿ ಹೋಗಿರುತ್ತಾನೆ ಡಿಕ್ಕಿ ಪಡಿಸಿದ ಪರಿಣಾಮ ರಾಜು ಇತನು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಲೆ ಪ್ರಕರಣ :

ಚಿಂಚೋಳಿ ಠಾಣೆ. ವಿಜಯಕುಮಾರ ತಂದೆ ಚಂದ್ರು ಸಾ: ಗಂಗೂನಾಯಕ ಚಂದಾಪುರ ತಾಂಡಾ ರವರು ನಾನು ಇಂದು ದಿನಾಂಕ 02.07.2011 ರಂದು ಸಾಯಂಕಾಲ ನಾನು ಜೆ.ಸಿ.ಬಿ ಯನ್ನು ಚಂದಾಪುರ ಕ್ರಾಸದಲ್ಲಿರುವ ಪೇಟ್ರೋಲ ಪಂಪನ ಹತ್ತಿರ ನಿಲ್ಲಿಸಿ ಊಟ ಮಾಡಬೇಕೆಂದು ನಮ್ಮ ಮನೆಗೆ ಬಂದು ನಮ್ಮ ಮನೆಯ ಹಿಂದುಗಡೆ ರಾಮಶೆಟ್ಟಿ ಇವರ ಮನೆಯಲ್ಲಿ ನಮ್ಮ ತಾಯಿಯೂ ಕುಳಿತಿದ್ದನ್ನು ನೋಡಿ ನಾನು ಕೂಡಾ ರಾಮಶೆಟ್ಟಿಯವರ ಮನೆಯ ಮುಂದುಗಡೆ ಕುಳಿತುಕೊಂಡಾಗ ಹೀರಾಸಿಂಗ್ ತಂದೆ ರಾಮಜೀ ಜಾದವ್ ಇತನು ಅವಾಚ್ಯ ಶಬ್ದಗಳಿಂದ ಬೈದು ಕೊಯತ್ತಾ ತಂದು ಹೊಡೆದಿರುತ್ತಾನೆ ಇದನ್ನು ಕೇಳಲು ಬಂದ ನಮ್ಮ ಅಣ್ಣ ರಾಜು ಇತನು ಯಾಕೇ ಹೊಡೆದಿರುವಿ ಅಂತಾ ಕೇಳುವಷ್ಟರಲ್ಲಿ ಹೀರಾಸಿಂಗ್ ತಂದೆ ರಾಮಜೀ ಜಾದವ , ಚಂದ್ರು ತಂದೆ ರಾಮಜೀ ಜಾದವ ಚಾಂಗಿಬಾಯಿ ಗಂಡ ಹೀರಾಸಿಂಗ್ ಇವರೆಲ್ಲರೂ ಬಂದು ನನಗೆ ಚಾಂಗಿಬಾಯಿ ಇವಳು ಒತ್ತಿ ಹಿಡಿದುಕೊಂಡಳು. ಹೀರಾಸಿಂಗ್ ಮತ್ತು ಚಂದ್ರು ಕೂಡಿ ನಮ್ಮ ಅಣ್ಣನಿಗೆ ಹಿಂದಿನಿಂದ ಕಾಲಿನಿಂದ ಒದ್ದಿದ್ದರಿಂದ ನಮ್ಮ ಅಣ್ಣನು ಹೀರಾಸಿಂಗ್ ನ ಮನೆಯ ಮುಂದೆ ಇರುವ ನಾಲಿಯಲ್ಲಿ ಬೋರಲಾಗಿ ಬಿದ್ದನು. ಆಗ ನಾನು ಚಿರಾಡುತ್ತಿದ್ದಾಗ ಸದರಿ ಆಪಾದಿತರಾದ ಹೀರಾಸಿಂಗ್ , ಚಂದ್ರು ಹಾಗೂ ಚಾಂಗೀಬಾಯಿ ಇವರು ಅಲ್ಲಿಂದ ಹೋದರು. ನಾನು ಮತ್ತು ರಾಮಶೆಟ್ಟಿ ತಂದೆ ವಸೂರಾಮ ಕೂಡಿ ನಮ್ಮ ಅಣ್ಣನಿಗೆ ನೋಡಲು ಅವನಿಗೆ ಎಡ ಹಣೆಗೆ ಹಾಗೂ ಎಡ ಮೆಲಕಿನ ಹತ್ತಿರ ಗಾಯಗಳಾಗಿದ್ದವು. ಆಗ ನಮ್ಮ ಅಣ್ಣನಿಗೆ ಮಾತಾಡಿಸಲು ಅವನು ಸತ್ತಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಲತನ ಮಾಲು ಜಪ್ತಿ ಮಾಡಿದ ಬಗ್ಗೆ .

ಗ್ರಾಮೀಣ ಠಾಣೆ :
ಠಾಣೆ ವ್ಯಾಪ್ತಿಯ ಎಸ್‌ಎಮ್‌ ಕೃಷ್ಣಾ ಕಾಲನಿಯಲ್ಲಿ ವಾಹನಗಳ ಪರವಾನಿಗೆ ಇಲ್ಲದೆ ಹಲವಾರು ಮೋಟಾರ ಸೈಕಲಗಳನ್ನು ಇಟ್ಟುಕೊಂಡು ಅವುಗಳನ್ನು ಬಿಡಿಬಾಗಳನ್ನು ಬಿಚ್ಚುತ್ತಿದ್ದಾರೆ ಅಂತಾ ತಿಳಿದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಅವರನ್ನು ವಿಚಾರಿಸಿದಾಗ ಅನ್ವರ ಅಲಿ ಖಾನ ತಂದೆ ಎಜ್ಜಾಜ ಅಲಿ ಖಾನ ಸಾಃ ಸಿಐಬಿ ಕಾಲನಿ ಗುಲಬರ್ಗಾ , ಇರಫಾನ ಪಟೇಲ ತಂದೆ ಶಬ್ಬಿರ ಪಟೇಲ ಸಾಃ ಎಕ್ಬಾಲ ಕಾಲನಿ ಗುಲಬರ್ಗಾ ಅಂತಾ ತಿಳಿದಿದ್ದು , ಈ ವ್ಯಕ್ತಿಗಳು ಕೇಲವು ಕಂಪನಿಗಳ 4 ಮೋಟಾರ ಸೈಕಲಕಗಳನ್ನು ಸಿಕ್ಕಿದ್ದು ಅವುಗಳ ದಾಖಲಾತಿಗಳ ಪರಿಶೀಲಿಸಲಾಗಿ ಯಾವುದೇ ದಾಖಲಾತಿಗಳು ಇಲ್ಲದೆ ಇರುವದು ಕಂಡು ಬಂದಿರುತ್ತದೆ . ವಾಹನಗಳ ಮತ್ತು ಬಿಡಿ ಭಾಗಗಳನ್ನು ಜಪ್ತಿ ಮಾಡಿ ಠಾಣೆಯಲ್ಲಿ ಇಟ್ಟು ಕೊಳ್ಳಲಾಗಿದೆ. ಸಂಬಂಧ ಪಟ್ಟವರು ಈ ಕೆಳಕಂಡ ನಂಬರಿಗೆ ಸಂಪರ್ಕಿಸಲು ಕೋರಲಾಗಿದೆ . ಮೊ 9480803553 ಆಪೀಸ ನಂ: 08472/263631 ಮತ್ತು 08472/263630

No comments: