Police Bhavan Kalaburagi

Police Bhavan Kalaburagi

Saturday, August 13, 2011

GULBARGA DIST REPORTED CRIMES

ಹಲ್ಲೆ ಪ್ರಕರಣ :

ಚಿಂಚೋಳಿ ಪೊಲೀಸ ಠಾಣೆ: ಶ್ರೀ.ಶಿವಾನಂದ ತಂದೆ ಕಾಶಪ್ಪಾ ತಳವಾರ ಸಾಃ ಹರಿಜನವಾಡಾ ಚಿಂಚೋಳಿ ರವರು ನಾನು ಇಂದು ದಿನಾಂಕ: 13-08-2011 ರಂದು ಮಧ್ಯಾಹ್ನ 14.30 ಗಂಟೆಯ ಸುಮಾರಿಗೆ ನಾನು ಕೆಲಸ ಮಾಡುತ್ತಿರುವ ಸನಾ ಹೋಟಲ್ ಕ್ಕೆ ಲಕ್ಷ್ಮಿಕಾಂತ ತಂದೆ ಮಾಣಿಕ ತಳವಾರ ಸಾಃ ಅಣವಾರ   ಎಂಬುವವನು ಬಂದು ಊಟ ಮಾಡಿಕೊಂಡು ಬಿಲ್ಲು ಕೊಡದೇ ಹೋಗುತ್ತಿದ್ದು, ಮಾಲಿಕ ಹೇಳಿದಂತೆ ಬಿಲ್ಲ ಕೊಡದೇ ಹಾಗೆಯೇ ಹೋಗುತ್ತಿದ್ದವನಿಗೆ ಊಟದ ಬಿಲ್ಲ ಕೇಳಲು ನಿನ್ನ ಮಾಲಿಕನೇ ನನಗೆ ಊಟ ಮಾಡಿದ ಬಿಲ್ಲು ಕೇಳಿಲ್ಲಾ , ನೀನು ನನಗೆ ಬಿಲ್ಲು ಕೇಳುತ್ತಿಯಾ ಅಂತಾ ಅವಾಚ್ಯವಾಗಿ ಬೈದು ಕಾಲಿನಿಂದ ಒದ್ದು, ಕೈಯಿಂದ ಬೆನ್ನಿಗೆ ಎದೆಗೆ ರೆಟ್ಟೆಗೆ ಹೊಡೆದು ಕಲ್ಲಿನಿಂದ ಬಲ ಕಿವಿಗೆ ಹೊಡೆದು ಎಡಭಾಗದ ಮೆಲಕಿಗೆ ಕಚ್ಚಿ ಭಾರಿ ರಕ್ತಗಾಯ ಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: