Police Bhavan Kalaburagi

Police Bhavan Kalaburagi

Tuesday, August 9, 2011

GULBARGA DISTRICT REPORTED CRIMES


ಹೆಣ್ಣು ಮಗಳು ಕಾಣೆಯಾದ ಪ್ರಕರಣ:

ಅಶೋಕ ನಗರ ಠಾಣೆ :ಶ್ರೀ ಸಂಗಯ್ಯಾ ಸ್ವಾಮಿ ತಂದೆ ಶರಣಯ್ಯ ಸ್ವಾಮಿ ಮಠಪತಿ ಸಾ:ತೋಳನವಾಡಿ ತಾ:ಆಳಂದ ಜಿ: ಗುಲಬರ್ಗಾ ರವರು ನನ್ನ ತಂಗಿ ಶ್ರೀಮತಿ ನಾಗಮ್ಮ ಗಂಡ ಬೂದಯ್ಯಾಸ್ವಾಮಿ ಹಿರೇಮಠ ವಯ: 19 ಜಾತಿ: ಸ್ವಾಮಿ ಸಾ: ರಾಮಪೂರ ತಾ: ಜೇವರ್ಗಿ ಜಿ: ಗುಲಬರ್ಗಾರವರು ತನ್ನ ಗಂಡನ ಮನೆಗೆ ಹೋಗುವ ಕುರಿತು ದಿನಾಂಕ 08/08/2011 ರಂದು ಮಧ್ಯಾಹ್ನ ಗುಲಬರ್ಗಾಕ್ಕೆ ಬಂದು ಗುಲಬರ್ಗಾ ಕೇಂದ್ರ ಬಸ್ಸ ನಿಲ್ದಾಣದಿಂದ ತನ್ನ ಗಂಡ ನಾದ ಬೂದಯ್ಯಾ ಇತನು ಹೂವು ತೆಗದುಕೊಂಡು ಬರುವಷ್ಠರಲ್ಲಿಯೆ ಬಸ್ಸ ನಿಲ್ದಾಣದಿಂದ ಕಾಣೆಯಾಗಿರುತ್ತಾಳೆ ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲಾ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ :
ಶ್ರೀ ಮಹ್ಮದ ಆರೀಫ  ತಂದೆ ಮಹ್ಮದ ಮಹಿಮೂದ  ಸೋನಿಯಾಗಾಂದಿ ಕಾಲೋನಿ ಮಾಲಗತ್ತಿ ರೋಡ  ಗುಲಬರ್ಗಾ  ರವರು ನಾನು ದಿನಾಂಕ:08-08-2011 ರಂದು ರಾತ್ರಿ ರಾಷ್ಟ್ರಪತಿ ಸರ್ಕಲ್ ದಿಂದ ಪಟೇಲ್ ಸರ್ಕಲ್ ಮೇನ ರೋಡಿನಲ್ಲಿ ಬರುತ್ತಿರುವಾಗ ಕೆ .ಎಸ್.ಆರ್.ಟಿ.ಸಿ.ಬಸ್  ಡಿಪೊ ನಂ: 01 ಮೇನ ಗೇಟ ಎದುರು ರೋಡಿನ ಮೇಲೆ ಅಟೋರಿಕ್ಷಾ ನಂ: ಕೆಎ 32 -8896 ನೆದ್ದರ ಚಾಲಕ ಕೇಂದರ ಬಸ್ ನಿಲ್ದಾಣ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂದೆ ಹೋಗುತ್ತಿದ್ದ  ಅಟೋರಿಕ್ಷಾ ನಂ: ಕೆಎ 32 ಬಿ 1739 ನೆದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ಎರಡು ಅಟೋರೀಕ್ಷಾ ಪಲ್ಟಿಯಾಗಿದ್ದು ಅಟೋರೀಕ್ಷಾ ನಂ; ಕೆಎ 32 ಬಿ 1739 ನೆದ್ದರಲ್ಲಿದ್ದ  ಚಾಲಕನಿಗೆ ಮತ್ತು ಅಟೋರೀಕ್ಷಾ ನಂ: ಕೆಎ 32 -8896 ನೆದ್ದರಲ್ಲಿ ಪ್ರಯಾಣಿಸುತ್ತಿದ್ದವರಿಗೆ ಗಾಯಗಳಾಗಿದ್ದು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ:

ಸುಲೇಪೇಟ ಠಾಣೆ : ದಿನಾಂಕ: 08-08-2011 ರಂದು ಹೂವಿನಹಳ್ಳೀ ಗ್ರಾಮದಲ್ಲಿ ಶ್ರೀ ಬೀರಣ್ಣ ದೇವರ ಗುಡಿಯ ಕಟ್ಟೆಯ ಮೇಲೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಖಚಿತ ಮಾಃಇತಿ ಬಂದ ಮೇರೆಗೆ ಸಿಪಿಐ ಸುಲೇಪೇಟ ರವರು ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮಾಶೆಪ್ಪಾ ತಂದೆ ಬುದ್ದಪ್ಪಾ ವಡ್ಡರ ಸಾ|| ಹೂವಿನಹಳ್ಳಿ ತಾ|| ಚಿಂಚೋಳಿ ರವರನ್ನು ವಶಕ್ಕೆ ತೆಗೆದುಕೊಂಡು ಅವರಿಂದ ಮಟಕಾ ಚೀಟಿ ಬರೆದುಕೊಂಡ ಸಂಗ್ರಹಿಸಿದ ರೂ 3040/- ಹಾಗು ಮಟಕಾ ಚೀಟಿಗಳು ಹಾಗು ಇನ್ನಿತರ ವಸ್ತುಗಳನ್ನು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: