Police Bhavan Kalaburagi

Police Bhavan Kalaburagi

Friday, September 9, 2011

GULBARGA DIST REPORTED CRIMES

ಅಪಘಾತ ಪ್ರಕರಣ :-
ಫರಹತಾಬಾದ ಠಾಣೆ :
ಶ್ರೀ ಅಹ್ಮದ ಹುಸೇನ ತಂದೆ ಮಹ್ಮದ ಹುಸೇನ ಅಜಮೇರಿ ಸಾ: ರಾಮಾ ಮೊಹಲ್ಲಾ ಶಹಾಬಾದ ರವರು, ನಾನು ನನ್ನ ಲಾರಿ ನಂ: ಕೆಎ 25 ಬಿ-599 ನೇದ್ದರಲ್ಲಿ ಶಹಾಬಾದದಲ್ಲಿ ಫರಸಿ ಲೋಡ ಮಾಡಿಕೊಂಡು ಬಿಜಾಪೂರಕ್ಕೆ ಹೋರಟು, ಮುಂದೆ ಶಹಾಬಾದ ಕ್ರಾಸ ದಾಟಿ ರಾಷ್ಟ್ರೀಯ ಹೆದ್ದಾರಿ 218 ರಸ್ತೆ ಸೊಮನಾಥ ಹಳ್ಳಿ ಕ್ರಾಸ ಹತ್ತಿರ ಹೋಗುತ್ತಿದ್ದಾಗ ನನ್ನ ಲಾರಿಯ ಕಚ್ ಪ್ಲೇಟ ಮತ್ತು ಡೈನೋಮೊ ಫೇಲ್ ಆಗಿದ್ದರಿಂದ ಲಾರಿಯನ್ನು ರಸ್ತೆಯ ಎಡಬದಿಗೆ ನಿಲ್ಲಿಸಿದೇನು. ರಾತ್ರಿ 9-45 ಗಂಟೆಯ ಸುಮಾರಿಗೆ ಗುಲಬರ್ಗಾ ಕಡೆಯಿಂದ ಒಬ್ಬ ಅಂಬ್ಯುಲೇನ್ಸ ಚಾಲಕನು ತನ್ನ ವಾಹವನ್ನು ಅತಿವೇಗ ಮತ್ತು ಅಲಕ್ಷನತದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಲಾರಿಗೆ, ಅಪಘಾತ ಪಡಿಸಿದ್ದು, ಅಂಬ್ಯಲೇನ್ಸದ ಎಡಭಾಗದ ಪೂರ್ತಿ ಬಾಡಿ ಕಿತ್ತಿದ್ದು ಆಗ ನಾನು ಅಂಬ್ಯುಲೇನ್ಸ ವಾಹನ ಕೆಎ 32 ಜಿ-373 ಚಾಲಕನಿಗೆ ವಿಚಾರಿಸಲು ತನ್ನ ಹೆಸರು ನಾಗರಾಜ @ ನಾಗೇಂದ್ರಪ್ಪಾ ತಂದೆ ಶಿವಣ್ಣಾ ತೇಲಿ ಎಂದು ಹೇಳಿದ್ದು, ನಾಗೇಂದ್ರಪ್ಪನಿಗೆ ಬಲಗಡೆ ಕಣ್ಣಿನ ಹತ್ತಿರ ರಕ್ತಗಾಯವಾಗಿರುತ್ತದೆ. ಕಾರಣ ಅಪಘಾತ ಪಡಿಸಿದ ಅಂಬ್ಯುಲೇನ್ಸ ಚಾಲಕನ ಮೇಲೆ  ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರಹತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :-
ಶಹಾಬಾದ ನಗರ ಠಾಣೆ :
ಶ್ರೀ ರಾಘವೇಂದ್ರ ತಂದೆ ರಂಗೆರಾವ ದೇಶಪಾಂಡೆ ಸಾ: ರೈಲ್ವೇ ಸ್ಟೇಷನ ಶಹಾಬಾದ ರವರು, ದಿನಾಂಕ 30-08-11 ರಂದು ನನ್ನು ತಮ್ಮನಾದ ಧನಂಜಯನು ತನ್ನ ಮೋಟಾರ ಸೈಕಲ್ ನಂ ಕೆ.ಎ 32 ಎಸ್ 3128 ನೇದ್ದನ್ನು ಅತಿ ವೇಗ ಮತ್ತು ನಿಷ್ಕಳಜಿತನದಿಂದ ನಚಲಾಯಿಸಿಕೊಂಡು ಬಂದು ಶಹಾಬಾದದ ಜಗಜೀವನ ರಾಮ ಕ್ರಾಸ ಹತ್ತಿರ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸದರಿ ಮೋಟಾರ ಸೈಕಲ್ ಸ್ಕಿಡಾಗಿ ಬಿದ್ದು ಬಲಗಣ್ಣಿನ ಮೇಲೆ ಬಾರಿ ರಕ್ತಗಾಯವಾಗಿದ್ದು ಇರುತ್ತದೆ. ನಂತರ ಹೆಚ್ದಿನ ಉಪಚಾರ ಕುರಿತು ಕಾಮಿನಿ ಆಸ್ಪತ್ರೆ ಹೈದ್ರಾಬಾದದಲ್ಲಿ ಸೇರಿಕೆ ಮಾಡಿದಾಗ ಉಪಚಾರ ಹೊಂದುತ್ತಾ ದಿನಾಂಕ 02-09-11 ರಂದು 5 ಎ.ಎಂ ಕ್ಕೆ ಮೃತಪಟ್ಟಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: