Police Bhavan Kalaburagi

Police Bhavan Kalaburagi

Saturday, October 29, 2011

GULBARGA DIST REPORTED CRIMES

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಓಂಪ್ರಕಾಶ ತಂದೆ ನೂರಂದಪ್ಪNN ಮಲಕೊಡ ಸಾ|| ನೇರು ಚೌಕ ಆರ್,ಬಿ.ರೋಡ ಶಾಹಾಬಾದ ತಾ|| ಚಿತ್ತಾಪೂರ ರವರು ನಾನು ದಿನಾಂಕ: 20/08/2011 ರಂದು 1900 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟದಲ್ಲಿರುವ ಕಾಮತ ಹೊಟೇಲ ಎದುರುಗಡೆ ನನ್ನ ಮೋಟರ ಸೈಕಲ ನಂ: ಕೆಎ 32 ಎಲ್ 4264 ಅ||ಕಿ|| 30,000/- ನೇದ್ದನ್ನು ನಿಲ್ಲಿಸಿ ಕಾಮತ ಹೊಟೇಲ ಒಳಗಡೆ ಹೊಗಿ ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 204/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಪ್ರೇಮನಾಥ ತಂದೆ ಶಿವಶರಣಪ್ಪಾ ಕಾಮಶೆಟ್ಟಿ ಉದ್ಯೋಗ; ಶಿಕ್ಷಕ ಸರಕಾರಿ ನೌಕರ ವಿಳಾಸ;-ಅವರಾದ (ಬಿ) ತಾ;ಜಿ;ಗುಲಬರ್ಗಾ ಸದ್ಯ|| ವಿಠಲರಾವ ಜೈಶಟ್ಟಿ ರೇವಣಸಿದ್ದೇಶ್ವರ ಕಾಲೂನಿ ಹುಮನಾಬಾದ ರೋಡ ಗುಲಬರ್ಗಾ ರವರು ನಾನು ದಿನಾಂಕ.27-10-2011 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಮನೆಯ ಕೀಲಿ ಹಾಕಿಕೊಂಡು ಅವರಾದ (ಬಿ) ಗ್ರಾಮಕ್ಕೆ ಹೋಗಿರುತ್ತೆನೆ. ದಿನಾಂಕ. 28-10-2011 ರಂದು ನಮ್ಮ ಪಕ್ಕದ ಮನೆಯವರಾದ ಸಿದ್ರಾಮಪ್ಪಾ ತಂದೆ ಗುರುಬಸ್ಸಪ್ಪಾ ಪಾಟೀಲ್ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಿಮ್ಮ ಮನೆಯ ಬಾಗಿಲ ಕೊಂಡಿ ಮುರಿದಿದ್ದು, ಬಾಗಿಲು ತೆರೆದಿರುತ್ತದೆ. ಮನೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾಣು ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಆಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 320/2011 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಳಾಗಿದೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಬಸವಣ್ಣಪ್ಪ ಲೆಂಡೆ ಸಾ: ಜವಳಗಾ ಗ್ರಾಮ ರವರು ನಾನು ಉಮರ್ಗಾ ತಾಲೂಕಿನ ಖಸಗಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಮರಳಿ ಬಸ್ಸಿನಲ್ಲಿ ಬರುತ್ತಿರುವಾಗ ನಾವು ಕುಳಿತ ಬಸ್ಸು ಲಿಂಗಣ್ಣ ತಂದೆ ಸೈಬಣ್ನ ಡಿಗ್ಗಿ ಇವರ ಹೋಲದ ಹತ್ತಿರ ರೋಡಿನ ಮೇಲೆ ಬಸ್ಸ ಬಂದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಅತೀ ವೇಗದಿಂದ ಹಾಗು ಅಲಕ್ಷತನದಿಂದ ಬಂದು ಬಜಾಜ ಎಂ80 ಸವಾರನಿಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದನು ನಾವು ಬಸ್ಸಿನಿಂದ ಕೆಳಗೆ ಇಳಿದು ನೋಡಲಾಗಿ ಬಜಾಜ ಎಂ80 ವಾಹನ ನಂ ಎಂಹೆಚ್-12 ವಿ.ಎ-1397 ಇದ್ದು ಅದರ ಸವಾರ ಪರಮೇಶ್ವರ ತಡಕಲೆ ಇದ್ದು ಅಪಗಾತದಿಂದ ಅವನಿಗೆ ಭಾರಿ ತಕರ ಗಾಯವಾಗಿತ್ತು ಅಪಘಾತ ಪಡಿಸಿದ ಹೀರೊ ಹೊಂಡಾ ಸ್ಪ್ಲೆಂಡರ ಮೋಟರ ಸೈಕಲ ನಂ ಕೆ.ಎ-32, ಎಕ್ಸ್- 6096 ಇದ್ದು ಅದರ ಮೇಲಿದ್ದ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿರರುತ್ತವೆ. ಉಪಚಾರ ಫಲಕಾರಿಯಾಗದೇ ಪರಮೇಶ್ವರನು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನನೆ ನಂ: 250/2011 ಕಲಂ 279, 337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: