Police Bhavan Kalaburagi

Police Bhavan Kalaburagi

Wednesday, December 7, 2011

GULBARGA DIST REPORTED CRIME

ಆಕಸ್ಮಿಕವಾಗಿ ಕುಸ್ತಿ ಪಟು ಸಾವು:
ದೇವಲ ಗಾಣಗಾಪೂರ ಠಾಣೆ: ಶ್ರೀ ಜ್ನಾನದೇವ ತಂದೆ ನಾನಾ ಮಾನೆ ಸಾ ಶಾವಳ ತಾ ಅಕ್ಕಲಕೋಟ ಜಿಲ್ಲಾ: ಸೋಲಾಪೂರ ರವರು ನನ್ನ ಚಿಕ್ಕಪ್ಪನ ಮಗ ಮಚೇಂದ್ರ ತಂದೆ ಶ್ರೀಮಂತ ಮಾನೆ ಇವನು ಕುಸ್ತಿ ಪಟ್ಟು ಇದ್ದು ಅವನಿಗೆ ಸುಮಾರು 58 ವರ್ಷಗಳಾಗಿರುತ್ತವೆ. ಅವನು ಕುಸ್ತಿ ಆಡಲು ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಮತ್ತು ಕರ್ನಾಟಕದ ಹಳ್ಳಿಗಳಿಗೂ ಜಾತ್ರೆ ಕೇತ್ರಿಗಳಲ್ಲಿ ಮತ್ತು ಕುಸ್ತಿ ಕಾರ್ಯಕ್ರಮವಿದ್ದಲ್ಲಿಗೆ ಹೋಗಿ ಬರುತ್ತಿರುತ್ತಾನೆ. ದಿನಾಂಕ:06/12/2011 ರಂದು ಮುಂಜಾನೆ ಅಫಜಲಪೂರ ತಾಲ್ಲೂಕಿನ ಬಿದನೂರ ಗ್ರಾಮದಲ್ಲಿ ಜಾತ್ರೆ ಇದ್ದು ಕುಸ್ತಿ ಕಾರ್ಯಕ್ರಮಕ್ಕೆ ಹೋಗುವದಾಗಿ ಮನೆಯಲ್ಲಿ ಹೇಳಿ ಬಂದಿದ್ದನು. ಮದ್ಯಾಹ್ನ ಅಂದಾಜ 12 ಗಂಟೆಯ ಸುಮಾರಿಗೆ ಬಿದನೂರ ಗ್ರಾಮಸ್ಥರು ನಮಗೆ ಫೋನ ಮಾಡಿ ಹೇಳಿದ್ದೆನೆಂದರೆ ಮಚೇಂದ್ರ ಇವರು ಇಂದು ದಿನಾಂಕ:06/12/2011 ರಂದು ಮುಂಜಾನೆ 11-30 ಗಂಟಯ ಸುಮಾರಿಗೆ ಕುಸ್ತಿ ಆಡುವ ಕಾಲಕ್ಕೆ ಕುಸ್ತಿಯ ಪೌಳಿಯಲ್ಲಿ ಸತ್ತಿರುತ್ತಾನೆ ಅಂತಾ ತಿಳಿಸಿದ್ದರಿಂದ ನಾವು ಗಾಬರಿಗೊಂಡು ಇತರೆ ಸಂಬಂದಿಕರೊಂದಿಗೆ ನಾನು ಬಿದನುರ ಗ್ರಾಮಕ್ಕೆ ಬಂದು ನೋಡಲು ನನ್ನ ಚಿಕ್ಕಪ್ಪನ ಮಗ ಮಚೇಂದ್ರ ಇವನ ಶವವು ಬಿದನೂರ ಗ್ರಾಮದ ಪಕ್ಕದಲ್ಲಿರುವ ಹೊಲದಲ್ಲಿಯ ಕುಸ್ತಿಯ ಪೌಳಿಯಲ್ಲಿ ಅಂಗಾತವಾಗಿ ಬಿದ್ದಿತ್ತು ಮೈಮೇಲೆ ಚಡ್ಡಿ ಮಾತ್ರ ಇತ್ತು ನನ್ನ ಚಿಕ್ಕಪ್ಪನ ಮಗ ಮಚೇಂದ್ರನು ಕುಸ್ತಿ ಆಡುವಾಗ ಆಕಸ್ಮೀಕವಾಗಿ ದಮ್ಮು ಬಂದು ಸತ್ತಿರಬಹುದು ಮಚೇಂದ್ರನ ಸಾವಿನಲ್ಲಿ ಯಾರ ಮೇಲೆ ಯಾವ ರೀತಿಯ ಸಂಶಯವಿರುವುದಿಲ್ಲಾ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: