Police Bhavan Kalaburagi

Police Bhavan Kalaburagi

Thursday, January 26, 2012

GULBARGA DIST REPORTED CRIMES

ಎಟಿಎಂ ದಿಂದ ಹಣ ಲಪಾಟಿಸಿದ ಬಗ್ಗೆ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಕರಬಸಯ್ಯ ತಂದೆ ಮಳೇಂದ್ರಯ್ಯ ಹೀರೆಮಠ ಸಾ:ಕೆರಾಫ ಅಬ್ದುಲ ರಹೀಮಸಾಬ ಚೌದ್ರಿ ಮನೆ ನಂ ಎಲ್.ಐ.ಜಿ 40 ಹೌಸಿಂಗ ಬೋರ್ಡ ಕಾಲೋನಿ ಶಾಂತಿನಗರ ಗುಲಬರ್ಗಾ ರವರು ನಾನು ದಿನಾಂಕ 01/01/2012 ರಂದು ರಾತ್ರಿ 9-15 ರ ಸುಮಾರಿಗೆ ಎಸ್.ಬಿ.ಎಚ್.ಬ್ಯಾಂಕ ವಿದ್ಯಾನಗರ ಶಾಖೆಯ ಎ.ಟಿ.ಎಂ.ಕ್ಕೆ ಹಣ ಡ್ರಾ ಮಾಡಿಕೊಳ್ಳಲು ಹೋದಾಗ 24 ವರ್ಷದ ಒಬ್ಬ ಯುವಕ ಎ.ಟಿ.ಎಂ.ದಲ್ಲಿ ನಿಂತಿದ್ದನ್ನು ನಾನು ಹಣ ಡ್ರಾ ಮಾಡಲು ನನ್ನ ಎ.ಟಿ.ಎಂ. ಮಷಿನದಲ್ಲಿ ಹಾಕಿ ನನ್ನ ಕಾರ್ಡ ರಹಸ್ಯ ನಂಬರ ಹೊಡೆಯುವಾಗ ರಹಸ್ಯ ನಂಬರನ್ನು ತಿಳಿದುಕೊಂಡು ನೀವು ಸರಿಯಾಗಿ ಕಾರ್ಡ ಹಾಕಿರುವದಿಲ್ಲಾ ನಾನು ಸರಿಪಡಿಸಿಕೊಡುತ್ತೇನೆ ಅಂತಾ ಹೇಳಿದನು. ನಾನು ಬೇಡ ಅಂದರೂ ಸಹ ಅವನು ಎ.ಟಿ.ಎಂ. ಮಷಿನದಲ್ಲಿದ್ದ ನನ್ನ ಕಾರ್ಡನ್ನು ತೆಗೆದು ನನಗೆ ಕೊಟ್ಟು ಹೋದನು. ಅವನು ಹೊದ ನಂತರ ನಾನು ಎ.ಟಿ.ಎಂ.ಕಾರ್ಡನ್ನು ಮಷಿನದಲ್ಲಿ ಹಾಕಿ ನನ್ನ ರಹಸ್ಯ ನಂಬರ ಹೊಡೆದು ನೋಡಲಾಗಿ ಹಣ ಬರಲಿಲ್ಲ , ದಿನಾಂಕ 02/01/2012 ರಂದು ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋದಾಗ ನನ್ನ ಅಕೌಂಟ ನಂ 52011409786 ನೇದ್ದರಲ್ಲಿ ಹಣ ಶಿಲ್ಕಿನಲ್ಲಿ ಇಲ್ಲಾ ಅಂತಾ ಗೊತ್ತಾಯಿತು. ಕಾರಣ ದಿನಾಂಕ 01/01/2012 ರ ರಾತ್ರಿ ಎಸ್.ಬಿ.ಎಚ್. ಬ್ಯಾಂಕಿನ ವಿದ್ಯಾನಗರದ ಎ.ಟಿ,ಎಂ.ದಲ್ಲಿ ಆಪರಿಚಿತ ಯುವಕನೊಬ್ಬ ನನ್ನ ಹತ್ತಿರ ಇದ್ದ ಬೇರೆ ಕಾರ್ಡನ್ನು ನನಗೆ ಕೊಟ್ಟು ನಂಬಿಕೆ ದ್ರೋಹ ಮಾಡಿ ನನ್ನ ಕಾರ್ಡನ್ನು ಲಪಟಾಯಿಸಿ ನನಗೆ ಮೋಸ ಮಾಡಿ ಎ.ಟಿ.ಎಂ. ಕಾರ್ಡನ್ನು ಲಪಟಾಯಿಸಿ ದಿನಾಂಕ 01/01/2012 ರ ದಿವಸದ ರಾತ್ರಿ ವೇಳೆಯಲ್ಲಿ ಯುಕೊ ಬ್ಯಾಂಕ ಎ.ಟಿ.ಎಂ.ದಿಂದ 10,000=00 ರೂ ಹಾಗೂ 8,500=00 ರೂ ಹೀಗೆ ಒಟ್ಟು 18,500=00 ರೂಪಾಯಿಗಳನ್ನು ಅಪರಿಚಿತ ವ್ಯಕ್ತಿ ನನ್ನ ಅಕೌಂಟಿನಲ್ಲಿದ್ದ ಹಣವನ್ನು ನನ್ನ ಎ.ಟಿ.ಎಂ.ಕಾರ್ಡನಲ್ಲಿದ್ದ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 08/2012 ಕಲಂ 406, 420 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹೆಂಡತಿಗೆ ಕಿರುಕುಳ ನೀಡಿದ ಬಗ್ಗೆ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀ ಮಂಜುಳಾ ಗಂಡ ಚನ್ನಪ್ಪ ಗುತ್ತೇದಾರ ಗ ಸಾ: ಹುಮನಾಬಾದ ಹಾವಹೀರಾಪೂರ ತಾಜಿಗುಲಬರ್ಗಾರವರು ನನಗೆ ನನ್ನ ಗಂಡ ಚೆನ್ನಪ್ಪ ತಂದೆ ಅಂಬಯ್ಯ ಗುತ್ತೇದಾರ ಸಾ: ಹೀರಾಪೂರ ಮತ್ತು ನಾದಿನಿ ಚಂದ್ರಕಲಾ ಗಂಡ ಭೀಮ್ಮಯ್ಯ ಗುತ್ತೇದಾರ ಸಾ: ಹೀರಾಪೂರ ರವರು ನನ್ನ ಶೀಲದ ಬಗ್ಗೆ ಸಂಶಯ ಪಟ್ಟು ಕೈಯಿಂದ ಹೊಡೆ ಬಡೆ ಮಾಡಿ ದೈಹಿಕ ಮಾನಸಿಕ ಕಿರುಕುಳ ಕೊಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2012 ಕಲಂ 498 (ಎ) 341 323 504 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಆಳಂದ ಪೊಲೀಸ್ ಠಾಣೆ :
ಶ್ರೀ ಬಸವರಾಜ ತಂದೆ ಶಾಂತಪ್ಪ ಮೋರೆ ಸಾ ಮಾದನ ಹಿಪ್ಪರರ್ಗಾ ರವರು ನಾನು ದಿನಾಂಕ 22/01/2012 ರಂದು ಆಳಂದದಲ್ಲಿ ಎ.ವಿ.ಮಾಲಿಪಾಟೀಲ ಮಲ್ಯಾಣ ಪಂಟಪದ ಹತ್ತಿರ ಮಾಳಿ ಸಮಾಜದ ಜನ ಜಾಗ್ರತಿ ಸಮಾವೇಶಕ್ಕೆ ಬಂದಾಗ ನಾನು ಮತ್ತು ನನ್ನ ಸ್ನೆಹಿತನಾದ ಕೃಷ್ಣರಾಜ ಕಲ್ಯಾಣಿ ಸಿಂಗೆ ಇಬ್ಬರು ಕುಡಿಕೊಂಡು ನನ್ನ ದ್ವಿ-ಚಕ್ರ ವಾಹನ ಕೆಎ-32 ಆರ್-4282 ನೇದ್ದು ಹನುಮಾನ ಟಾಕೀಜ ಹತ್ತಿರ ನಿಲ್ಲಿಸಿ ಕಾರ್ಯಕ್ರಮಕ್ಕೆ ಹೋಗಿರುತ್ತೆವೆ. ಕಾರ್ಯಕ್ರಮ ಮುಗಿಸಿಕೊಂಡು ಬಂದು ನೋಡಿದಾಗ ನಿಲ್ಲಿಸಿದ ಸ್ಥಳದಲ್ಲಿ ನನ್ನ ದ್ವಿಚಕ್ರವಾಹನ ಇರಲ್ಲಿಲ್ಲ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 19/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: