Police Bhavan Kalaburagi

Police Bhavan Kalaburagi

Tuesday, January 3, 2012

GULBARGA DIST REPORTED CRIMES

ಅಪಘಾತ ಪ್ರಕರಣ:
ಫರಹತಾಬಾದ ಪೊಲೀಸ್ ಠಾಣೆ :
ಶ್ರೀ ಅಬ್ದುಲ್ ರಜಾಕ ತಂದೆ ಶಮಸೋದ್ದಿನ ಇನಾಮಾದಾರ ಸಾ: ಸರಡಗಿ(ಬಿ) ತಾ:ಜಿ: ಗುಲಬರ್ಗಾರವರು ನನ್ನ ತಮ್ಮನಾದ ರುಕ್ಮೋದ್ದಿನ್ ಇತನು ತನ್ನ ಹೊಲದಲ್ಲಿ ಬೆಳದಿದ್ದ 11 ಚೀಲ ತೊಗರಿಯನ್ನು ತೂಕ ಮಾಡುವ ಕುರಿತು ನನ್ನ ಮೋಟಾರ ಸೈಕಲ್ ನಂ. ಕೆಎ-32 ಜೆ-2435 ಕವಾಸಕಿ ಬಜಾಜ ನೇದ್ದರ ಮೇಲೆ ಸರಡಿಗಿಯಿಂದ ಫರಹತಾಬಾದಕ್ಕೆ ಹೋಗಿದ್ದು ಸರಡಗಿ (ಬಿ) ಕ್ರಾಸ್ ಹೆದ್ದಾರಿಯ ಮೇಲೆ ಒಬ್ಬ ಮನುಷ್ಯನಿಗೆ ರಸ್ತೆ ಅಪಘಾತವಾಗಿದೆ ಅಂತ ಸುದ್ದಿ ತಿಳಿದುಕೊಂಡು ಕೂಡಲೆ ನಾನು ಮತ್ತು ನನ್ನ ತಮ್ಮ ಖಲಿಲ ಹಾಗೂ ಸಿದ್ದಿಪಾಶಾ, ಪಿರುಶಾ ಪಟೇಲ್ ಇವರೊಂದಿಗೆ ಘಟನಾ ಸ್ಥಳಕ್ಕೆ ಬೇಟಿ ನೀಡಿ ನೋಡಲಾಗಿ ನನ್ನ ತಮ್ಮನು ರಸ್ತೆಯ ಮೇಲೆ ಅಪಘಾತ ಹೊಂದಿ ಮಾತನಾಡದ ಸ್ಥಿತಿಯಲ್ಲಿ ಇದ್ದನು ಪರೀಶಿಲಿಸಿ ನೋಡಲಾಗಿ ನನ್ನ ತಮ್ಮ ತನ್ನ ಮೋಟಾರ ಸೈಕಲ್ ನ್ನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ವೇಗದ ನಿಯಂತ್ರಣ ತಪ್ಪಿ ರಸ್ತಯ ಮೇಲೆ ಬಿದ್ದು ಗದ್ದಕ್ಕೆ ಹೊಟ್ಟೆಗೆ ಮತ್ತು ತಲೆಗೆ ಭಾರಿ ಒಳಪೆಟ್ಟಾಗಿ ಗಾಯಹೊಂದ್ದಿದ್ದು ಉಪಚಾರ ಕುರಿತು 108 ಅಂಲುಲೆನ್ಸದಲ್ಲಿ ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿದ್ದಾಗ ಮಾರ್ಗ ಮದ್ಯ ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:03/2012 ಕಲಂ 279. 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಠಾಣೆ:
ಶ್ರೀಮತಿ ಸೀತಾಬಾಯಿ ಗಂಡ ನಾಗಪ್ಪ ಕುಚನ್ ಸಾ:ನರೋಣ ಹಾ.ವ ಬೀಮನಗರ ಆಳಂದ ರವರು ನನ್ನ ಗಂಡನು ಆಳಂದ ತಾಲುಕಿನ ಖಾನಾಪುರ ಗ್ರಾಮದ ಮೌಲಾ ಸರಸಂಬಿ ಇವರ ತೋಟದ ಹೊಲವನ್ನು ಆರ್ದ ಪಾಲಿನಿಂದ ಮಾಡಿರುತ್ತಾನೆ. ನನ್ನ ಗಂಡನು ಗುಲ್ಬರ್ಗಾದಿಂದ ಬಾರೆ ಹಣ್ಣ ಮಾರಿಕೊಂಡು ಮನೆಗೆ ಬಂದು ನನಗೆ ಪೋನ ಮಾಡಿ ಹೇಳಿದೆನೆಂದರೆ ನಾನು ಹೊಲಕ್ಕೆ ಬರಲಿ ಹೇಗೆ ಅಂದಾಗ ನಾನು ಒಬ್ಬಕೆ ಇದ್ದು ಜೊತೆಯಲ್ಲಿ ವಯಸ್ಸಾದ ಬಂಡಪ್ಪನವರು ಇದ್ದಾರೆ ನೀನು ಬಾ ಎಂದು ಹೇಳಿದೆನು ಅದಕ್ಕೆ ನನ್ನ ಗಂಡನು ಬರುತ್ತೆನೆಂದು ಹೇಳಿದ್ದರು, ರಾತ್ರಿಯಾದರು ಬರಲಿಲ್ಲ ಹಾಗೆನೆ ಹೊಲದಲ್ಲಿ ಮಲಗಿಕೊಂಡೆನು. ದಿನಾಂಕ 03/01/2012 ರಂದು ಬೆಳಿಗ್ಗೆ 6-7. ಗಂಟೆ ಸುಮಾರಿಗೆ ನಾವು ಮಾಡಿದ ಹೊಲದ ಪಕ್ಕದ ಹೋಲದವನಾದ ಬಂಗಾರಪ್ಪ ಸರಸಂಬಿ ರವರು ನಿನ್ನ ಗಂಡನಾದ ನಾಗಪ್ಪ ಶವವು ಖಾನಾಪುರ ಬಸ್ಸ ಸ್ಟಾಂಡದಿಂದ ಅಂದಾಜು 60 ಪೀಟ ಮೇಲೆ ವಗದರಿ –ಆಳಂದ ರೋಡಿನ ಮೇಲೆ ಬಿದ್ದಿದೆ ಎಂದು ತಿಳಿಸಿದಾಗ ನಾನು ಗಾಬಾರಿಯಾಗಿ ಹೋಗಿ ನೋಡಲಾಗಿ ನನ್ನ ಗಂಡನ ಶವವು ಅಂಗಾತಾಗಿ ಇದ್ದು ಭಾರಿ ರಕ್ತಗಾಯವಾಗಿ ಬಾಯಿಯಿಂದ ರಕ್ತ ಬಂದಿರುತ್ತದೆ ಮತ್ತು ಶವದ ಹತ್ತಿರ ವಾಹನದ ಗಾಜಿನ ಚೂರುಗಳು ಮಡಗಾರ್ಡ ಚೂರು ಬಿದ್ದಿದು ಯಾವದೋ ವಾಹನ ಅಪಘಾತಪಡಿಸಿದರಿಂದ ಭಾರಿಗಾಯವಾಗಿ ಸ್ಥಳದಲ್ಲೇ ಮೃತ ಪಟ್ಟಿರುವದು ಕಂಡುಬಂದಿರುತ್ತೆದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 3/2012 ಕಲಂ 279, 304 (ಎ) ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: