Police Bhavan Kalaburagi

Police Bhavan Kalaburagi

Monday, May 7, 2012

GULBARGA DIST REPORTED CRIMES


ಕೊಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಇಂದುಬಾಯಿ ಗಂಡ ಕಿಶನ ಜಾಧವ ವ|| 45, ಜಾ|| ಲಂಬಾಣಿ, ಉ|| ಮನೆ ಕೆಲಸ,ಸಾ|| ಶಹಾಬಜಾರ ತಾಂಡ ಗುಲಬರ್ಗಾ ರವರು ನನ್ನ ಮಗನಾದ ದಶರಥ ಮತ್ತು ಸತೀಷ ತಂದೆ ತಿಪ್ಪಣ್ಣ @ ತಿಪ್ಪು ರಾಠೋಡ ಮಧ್ಯ ಸುಮಾರು 3-4 ದಿವಸಗಳ ಹಿಂದೆ ಬಾಯಿ ಮಾತಿನ ಜಗಳವಾಗಿತ್ತು, ನಾನು ಸತೀಷನ ಮನೆಗೆ ಜಗಳದ ಬಗ್ಗೆ ವಿಚಾರಿಸಲು ಹೋದಾಗ ಸತೀಶನು ನನಗೆ ಬೈದು ಹೆದರಿಸಿರುತ್ತಾನೆ. ದಿನಾಂಕ 06-05-2012 ರಂದು ಮದ್ಯಾಹ್ನ 3 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ಪಕ್ಕದ ಮನೆಯ ಲವಕುಮಾರ @ ಲವ್ಯಾ ತಂದೆ ರೂಪ್ಲು ರಾಠೋಡ ಈತನು ನಮ್ಮ ಮನೆಗೆ ಬಂದು ಮನೆಯಲ್ಲಿದ್ದ ನನ್ನ ಮಗ ದಶರಥ ಈತನಿಗೆ ಕೆಲಸ ಇದೆ ಬಾ ಅಂತ ಮೋಟಾರ್ ಸೈಕಲ್ ನಂ ಕೆಎ-32/ಎಕ್ಸ್-906 ನೇದ್ದರ ಮೇಲೆ ಬೋರಾಭಾಯಿ ನಗರದ ದರ್ಮಶಾಲೆ ಹತ್ತಿರ ಕರೆದುಕೊಂಡು ಹೋಗಿ ಸತೀಷ ತಂದೆ ತಿಪ್ಪಣ್ಣ @ ತಿಪ್ಪು ರಾಠೋಡ, ಲವಕುಮಾರ @ ಲವ್ಯಾ ತಂದೆ ರೂಪ್ಲಾ ರಾಠೋಡ, ಚಂದ್ರಕಾಂತ ತಂದೆ ಮೋಹನ ಕಾರಬಾರಿ, ಹೀರಾ, ಶಿವಶರಣಪ್ಪ ತಂದೆ ಕೆಂಚೆಪ್ಪ ಇವರ ಸಂಗಡ ಇನ್ನೂ 4 ಜನರು ಹೀಗೆ ಎಲ್ಲರೂ ಒಟ್ಟಿಗೆ ಕೂಡಿಕೊಂಡು ಧರ್ಮಶಾಲೆಯ ಆವರಣದಲ್ಲಿ  ಚಾಕು, ತಲವಾರ ಮತ್ತು ಗಾಜಿನಿಂದ ಭಾರಿ ರಕ್ತಗಾಯ ಪಡಿಸಿ ಕೊಲೆ ಮಾಡಿರುತ್ತಾರೆ ಆತನ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 31/12 ಕಲಂ 143, 147, 148, 302 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ದಿನಾಂಕ 05/05/2012 ರಂದು ರಾತ್ರಿ 11-00  ಗಂಟೆಯಿಂದ ದಿ: 6/5/12 ರಂದು 4 ಎಎಮ  ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ಆಳಂದ ರೋಡಿನ ಪಕ್ಕದಲ್ಲಿರುವ ಸಂತೋಷ ಧಾಬಾದ  ಹಿಂದುಗಡೆ ಇರುವ  R.G. Build Con ಗೆ ಸಂಬಂಧಿಸಿದ  ನಮ್ಮ ಕಂಪನಿಯ ಪ್ಲಾಂಟ್  ಇದ್ದು ಇಲ್ಲಿ ಸಂಗ್ರಹಿಸಿ ಇಡಲಾಗಿದ ಸುಮಾರು  1 ಟನ್‌‌ ಕಬ್ಬಿಣದ ರಾಡು ಅಂದಾಜು ಮೊತ್ತ 40,000/- ರೂ. ಗಳಷ್ಟು ಬೆಲೆ ಬಾಳುವ  ರಾಡುಗಳು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ರಾಜಕುಮಾರ ತಂದೆ ಪ್ರಭುಲಿಂಗ ಪಾಟೀಲ ಗುಲಬರ್ಗಾ ಸಲಗರೆ ಆರ್.ಜೆ. ಬೀಲ್ಡ್ರರ್ಸ & ಕನ್‌‌ಷ್ಟ್ರಕ್ಷನ್‌‌  ಲಾಲಗೇರಿ ಕ್ರಾಸ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:141/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: