Police Bhavan Kalaburagi

Police Bhavan Kalaburagi

Thursday, August 16, 2012

GULBARGA DISTRICT


ಮನೆಗಳ್ಳರ ಬಂಧನ, 1.8 ಲಕ್ಷ ರೂಪಾಯಿಗಳ ಮೌಲ್ಯದ ಆಭರಣ ವಶ.
ಮಾನ್ಯ ಶ್ರೀ ಪ್ರವೀಣ ಮಧುಕರ ಪವಾರ ಎಸ್.ಪಿ ಗುಲಬರ್ಗಾ , ಶ್ರೀ ಕಾಶಿನಾಥ ತಳಕೇರಿ ಹೆಚ್ಚುವರಿ ಎಸ್.ಪಿ. ಗುಲಬರ್ಗಾ   ಮತ್ತು  ಶ್ರೀ ಹೆಚ್. ತಿಮ್ಮಪ್ಪ  ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:15/8/2012 ರಂದು ನಸುಕಿನ ವೇಳೆ 5-00 ಗಂಟೆಯ ಸುಮಾರಿಗೆ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ನಗರ ವೃತ್ತ ಗುಲಬರ್ಗಾರವರ ನೇತೃತ್ವದಲ್ಲಿ ಶ್ರೀ ಶರಣಬಸವೇಶ್ವರ, ಶ್ರೀ ಪಂಡಿತ ಸಗರ, ಶ್ರೀ ಸಂಜೀವಕುಮಾರ, ಭೋಜರಾಜ ರಾಠೋಡ, ಆನಂದ ಡೊಣಿ, ಶ್ರೀದೇವಿ ಬಿರಾದಾರ  ಮತ್ತು ಸಿಬ್ಬಂದಿಯವರಾದ ಶ್ರೀ ಶಿವಪುತ್ರಸ್ವಾಮಿ ಹೆಚ್.ಸಿ, ಶ್ರೀ ಶ್ರೀನಿವಾಸರೆಡ್ಡಿ ಪಿಸಿ, ಸಿದ್ರಾಮಯ್ಯಸ್ವಾಮಿ ಪಿಸಿ, ಮಸೂದ ಪಿಸಿ,  ಅರ್ಜುನ ಎ.ಪಿ.ಸಿ, ಪ್ರಭಾಕರ ಪಿಸಿ, ಚಂದ್ರಕಾಂತ ಪಿಸಿ, ವೇದರತ್ನಂ ಪಿಸಿ, ಶಂಕರ ಹೆಚ್.ಸಿ, ಸುಧಾ ಮಪಿಸಿ, ಉಮಾದೇವಿ ಮಪಿಸಿ, ಕವಿತಾ ಮ.ಹೆಚ್.ಸಿ, ಗಿರಿಜಾ ಮಪಿಸಿ  ರವರು ಖಚಿತ ಭಾತ್ಮಿ ಮೇರೆಗೆ ನಗರದ ಹೋಸ ಆರ್.ಟಿ.ಓ ಆಫೀಸ್ ಹತ್ತಿರ ಮನೆ ಕಳವು ಮಾಡುವ ಆರೋಪಿತರಾದ  ಅಂಬಿಕಾ ಗಂಡ ಚರಣದಾಸ ವಃ 40 ವರ್ಷ ಜಾಃ ಮಾಂಗರವಾಡಿ ಉಃ ಪ್ಲಾಸ್ಟಿಕ ಆಯುವದು ಸಾ|| ಬಾಪು ನಗರ ಮಾಂಗರವಾಡಿ ಗಲ್ಲಿ ಗುಲಬರ್ಗಾ, ದೇವಿಕಾ ಗಂಡ ಮಹೇಶ ಪಾಟೀಲ ವಃ 22 ವರ್ಷ ಜಾಃ ಮಾಂಗರವಾಡಿ ಉಃ ಪ್ಲಾಸ್ಟಿಕ ಆಯುವದು ಸಾ||ಬಾಪು ನಗರ ಮಾಂಗರವಾಡಿ ಗಲ್ಲಿ ಗುಲಬರ್ಗಾ, ರಾಣಿ ತಂದೆ ಚರಣದಾಸ ವಃ 9 ವರ್ಷ ಜಾಃ ಮಾಂಗರವಾಡಿ ಉಃ ಪ್ಲಾಸ್ಟಿಕ ಆಯುವದು ಸಾ||ಬಾಪು ನಗರ ಮಾಂಗರವಾಡಿ ಗಲ್ಲಿ ಗುಲಬರ್ಗಾ, ಇವರು ಪೊಲೀಸರನ್ನು ನೋಡಿ ಓಡಿ ಹೋಗುತ್ತಿರುವಾಗ ನೋಡಿ ಸಂಶಯ ಬಂದು ಅವರನ್ನು ಠಾಣೆಗೆ ಕರೆತಂದು ಕೂಲಂಕೂಶವಾಗಿ ವಿಚಾರಣೆಗೆ ಒಳಪಡಿಸಿದಾಗ ಸುಮಾರು 5 ದಿವಸಗಳ ಹಿಂದೆ ಗುಲಬರ್ಗಾ ನಗರದ ಎಮ್.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯ ಸಾಯಿ ನಗರ ಬಡಾವಣೆಯ ಬೀಗ ಹಾಕಿದ  ಮನೆಯ ಬಾಗಿಲ ಕೀಲಿ ಮುರಿದು ಅಲಮಾರಿಯಲ್ಲಿಟ್ಟಿದ್ದ ಬಂಗಾರದ ಆಭರಣಗಳು  ಮತ್ತು ನಗದು ಹಣ ಕಳವು ಮಾಡಿಕೊಂಡು ಹೋದ ಬಗ್ಗೆ ಮತ್ತು ತಮ್ಮ ಬೆರಳು ಮುದ್ರೆಗಳನ್ನು ಮೂಡದಂತೆ ಹ್ಯಾಂಡ ಗ್ಲೌಜಗಳನ್ನು ಬಳಸಿ ಕಳ್ಳತನ ಮಾಡಿರುವ ಬಗ್ಗೆ ಮತ್ತು ಓಂ ನಗರ ಗೇಟ ಹತ್ತಿರ ನಿಲ್ಲಿಸಿ ಒಂದು ಮೋಟಾರ ಸೈಕಲ ಬ್ಯಾಗಿನಿಂದ ಬಂಗಾರದ ಆಭರಣ ಮತ್ತು ನಗದು ಹಣ ಕಳ್ಳತನ ಮಾಡಿರುವ ಬಗ್ಗೆ ತನಿಖೆ ಕಾಲಕ್ಕೆ ಒಪ್ಪಿಕೊಂಡಿದ್ದು, ಸದರಿ ಆರೋಪಿತರಿಂದ  ಸುಮಾರು 1.8 ಲಕ್ಷ ರೂಪಾಯಿಗಳ ಮೌಲ್ಯದ ಬಂಗಾರದ ಆಭರಣಗಳಾದ ಕಿವಿ ಓಲೆ, ಒಂದು ನೆಕ್ಲೇಸ, ಎರಡು ಪಾಟ್ಲಿಗಳು, ಸುತ್ತುಂಗುರ  ಮತ್ತು ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಮತ್ತು ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ  ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

No comments: