Police Bhavan Kalaburagi

Police Bhavan Kalaburagi

Friday, October 26, 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ ಶ್ರೀ ಆಕಾಶ ತಂದೆ ಅನಿಲಕುಮಾರ ಕಲಶಟ್ಟಿ ವ|| 18, ಸಾ|| ಅಳಂದ ಕಾಲೋನಿ ಗುಲಬರ್ಗಾ ನಾನು ದಿನಾಂಕ 24-10-12 ರಂದು ಮದ್ಯಾಹ್ನ 3-30 ಗಂಟೆಯ ಸುಮಾರಿಗೆ ದೇವಿ ನಗರ ಬಡಾವಣೆಯಲ್ಲಿ ದೇವಿ ಮೆರವಣಿಗೆ ಇದ್ದ ಪ್ರಯುಕ್ತ, ಡ್ಯಾನ್ಸ್ ಮಾಡುತ್ತಿದ್ದಾಗ, ನಮ್ಮ ಬಡಾವಣೆಯ ಕಿರಣ ತಂದೆ ಮಲ್ಲಿಕಾರ್ಜುನ, ರವಿ, ಅನಿಲ್ ಮೂವರು ಕೂಡಿಕೊಂಡು ಡ್ಯಾನ್ಸ್ ಮಾಡುತ್ತಿದ್ದ ನನ್ನ ಮೈಮೇಲೆ ಬೀಳುತ್ತಿದ್ದಾಗ ನಾನು ಯಾಕೆ ಮೈಮೇಲೆ ಬೀಳುತ್ತಿದ್ದರಿ ಅಂತ ಕೇಳಿದ್ದಕ್ಕೆ, ಕಿರಣ, ರವಿ ಮತ್ತು ಅನಿಲ್ ಮೂವರು ಕೂಡಿಕೊಂಡು ಕೈಮುಷ್ಠಿ ಮಾಡಿ ನನಗೆ ಎದೆಯ ಮೇಲೆ, ಕುತ್ತಿಗೆಯ ಮೇಲೆ ಹಾಗು ಬೆನ್ನಿನ ಮೇಲೆ ಹೊಡೆಯುತ್ತಿದ್ದಾಗ, ಅದೇ ಸಮಯಕ್ಕೆ ಅಲ್ಲಿಯೇ ಇದ್ದ ನಮ್ಮ ಕಾಲೋನಿಯ ಶಿವು ಯಲಗಾರ ಹಾಗು ರಾಜು ಇವರುಗಳು ಜಗಳ ಬಿಡಿಸಿ ಕಳುಹಿಸಿದ್ದು, ಸದರಿ ಮೂರು ಜನರು ನನಗೆ ಹೊಡೆದಿದ್ದರಿಂದ ನನಗೆ ಗುಪ್ತಗಾಯಗಳಾಗಿದ್ದು, ನನಗೆ ಕೈಯಿಂದ ಹೊಡೆಬಡೆ ಮಾಡಿದ ಕಿರಣ ತಂದೆ ಮಲ್ಲಿಕಾರ್ಜುನ, ರವಿ, ಅನಿಲ್  ಇವರುಗಳ ಮೇಲೆ ಕಾನೂನು ಕ್ರಮ ಜರೂಗಿಸಬೇಕು ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:77/2012 ಕಲಂ 323, 324, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಂಗಳ ಸೂತ್ರ ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ರೇಣುಕಾದೇವಿ ಗಂಡ ಗಣಪತಿ ಬಬಲಾದ ವ:  35 ವರ್ಷ ಜಾತಿ: ಹರಿಜನ ಉ: ಮನೆ ಕೆಲಸ ಸಾ: ಕರ್ನಾಟಕ ಹೈ ಸ್ಕೂಲ್ ಹತ್ತಿರ ಘಾಟಗೇ ಲೇಔಟ ಗುಲಬರ್ಗಾ ರವರು ನಾನು ಮತ್ತು ನನ್ನ ಗಂಡ ಇಬ್ಬರೂ ಕೂಡಿಕೊಂಡು ದಿನಾಂಕ:25-12-2012 ರಂದು ರಾತ್ರಿ  8-50  ಗಂಟೆ ಸುಮಾರಿಗೆ ನಮ್ಮ ಚಿಕ್ಕಮ್ಮಾ ಜಯಶ್ರೀ ರವರಿಗೆ ಬನ್ನಿ ಕೊಟ್ಟು ಮರಳಿ ಮನೆಗೆ ಹೋಗುತ್ತಿರುವಾಗ  ಘಾಟಗೇ ಲೇಔಟ ಬುದ್ದ ವಿಹಾರದ ಹತ್ತಿರ ಸಿ.ಸಿ ರಸ್ತೆ ಮೇಲೆ ಸೀರೆ ಸೆರಗು ಸರಿಪಡಿಸುತ್ತಿರುವಾಗ ಎದುರುಗಡೆಯಿಂದ ಒಬ್ಬ ಮೋಟಾರ ಸೈಕಲ್ ಸವಾರನು ಮುಖಕ್ಕೆ ಬಟ್ಟಿ ಕಟ್ಟಿಕೊಂಡು ಬಂದವನೇ ಒಮ್ಮೇಲೆ ಕೊರಳಲ್ಲಿ ಕೈ ಹಾಕಿ 4 ತೊಲೆ ಬಂಗಾರದ ಎರಡು ಎಳೆವುಳ್ಳ ಮಂಗಳಸೂತ್ರವನ್ನು ಕಿತ್ತುಕೊಂಡು ಹೋಗಿರುತ್ತಾನೆ.ಬಡಾವಣೆಯಲ್ಲಿ ಕರೆಂಟ ಹೋಗಿರುವುದ್ದರಿಂದ ಕತ್ತಲಲ್ಲಿ ಮೋಟಾರ ಸೈಕಲ್ ನಂಬರ, ಅವನ ಮುಖ ಸರಿಯಾಗಿ ಕಾಣಿಸಿರಲಿಲ್ಲಾ. ತೆಳ್ಳನೆ ಮೈಕಟ್ಟಿನವನಿದ್ದು ಬಿಳಿ ಶರ್ಟ ಧರಿಸಿದ್ದನು. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:91/2012 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: