Police Bhavan Kalaburagi

Police Bhavan Kalaburagi

Sunday, March 10, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ:ಶ್ರೀ, ಭೀಮಾಶಂಕರ ತಂದೆ ಸಾಯಿಬಣ್ಣ ಕಣ್ಣಿ ಪೊಲೀಸ್ ಕಾನ್ಸಟೇಬಲ್ ಸಾ|| ಜಯತಿರ್ಥ ನಗರ ಉದನೂರ ರೋಡ ಗುಲಬರ್ಗಾ ರವರು ನಾನು ಮತ್ತು ಶಿವರಾಜ ತಂದೆ ಅಮೃತ ಕೇರೂರ ಸಾ|| ಬ್ರಹ್ಮಪೂರ ಇಬ್ಬರೂ ಕೂಡಿಕೊಂಡು ಕೆಎ-32 ಟಿಬಿ-6217 ನೇದ್ದರ ಹಿರೋ ಹೊಂಡಾ ಮೋಟಾರ ಸೈಕಲ್ ಮೇಲೆ ಶರಣಸಿರಸಗಿ ಮಡ್ಡಿಯ ರಸ್ತೆಯಲ್ಲಿ ಹೊರಟಾಗ ಶಿವರಾಜ ಇತನು ಅತೀವೇಗದಿಂದ ಚಲಾಯಿಸಿ ಒಮ್ಮೇಲೆ ಬ್ರೆಕ್ ಹಾಕಿದಾಗ ಮೋಟಾರ ಸೈಕಲ್ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ಮೋಟಾರ ಸೈಕಲ್  ಹಿಂದೆ ಕುಳಿತಿರುವ ನನಗೆ ಬಲಗೈ ಮೊಳಕೈಗೆ ಭಾರಿಗಾಯವಾಗಿರುತ್ತದೆ ಅಂತಾ ಭೀಮಾಶಂಕರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 125/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಯಲ್ಲಾಲಿಂಗ ತಂದೆ ಬಾಬುರಾವ ಜಮಾದಾರ ಸಾ: ಬನ್ನೂರ ತಾ||ಜಿ||ಗುಲಬರ್ಗಾರವರು ದಿನಾಂಕ: 08-03-2013 ರಂದು ಸಾಯಂಕಾಲ 5-00  ಗಂಟೆಯ ಸುಮಾರಿಗೆ ನಾನು ನಡೆದು ಕೊಂಡು ಹೋಗುವಾಗ ವಿಜಯಕುಮಾರ ತಂದೆ ಶಿವಶರಣಪ್ಪಾ ಇನತು ನನಗೆ ಮಾರಿದ ಹೊಲ ಸರ್ವೇ ನಂ 26/3 1 ಎಕರೆ ಹೊಲದ ಪಹಣೆ ನಿಮ್ಮ ಹೆಸರಿಗೆ ಆಗುವವರಿಗೆ ಹೊಲದಲ್ಲಿ ಕಬ್ಬು ಹಚ್ಚಬೇಡರಿ ಅಂತ ಜಗಳ ತೆಗೆದು ಕಾಲಿನಿಂದ ಒಯ್ದು ಗಾಯ ಮಾಡಿದ್ದಲ್ಲದೇ ನಮ್ಮ ಕಡೆಯವರಿಗೂ ಸಹ ವಿಜಯಕುಮಾರ, ಬಸಪ್ಪಾ, ಸೀತಾರಾಮ, ಸಾಬಮ್ಮ  ಇವರೆಲ್ಲರೂ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಯಲ್ಲಾಲಿಂಗ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2013 ಕಲಂ, 341 323 324 504 506 ಸಂ 34  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: