Police Bhavan Kalaburagi

Police Bhavan Kalaburagi

Sunday, March 24, 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
:: ಒಂದು ವಾರದ ಹಿಂದೆ ಕೊಲೆ ಮಾಡಿದ ಆರೋಪಿತರ ಬಂಧನ::
       ಗುಲಬರ್ಗಾ ನಗರದ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಉದನೂರ ಸಮೀಪ ದಿನಾಂಕ:17-03-2013 ರಂದು ಸುರೇಶ ತಂದೆ ಜನಕರಾಜ ಮೂಲಗೆ ಇತನನ್ನು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆ ಕುರಿತು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾ, ಹಾಗೂ ಶ್ರೀ ತಿಮ್ಮಪ್ಪಾ ಡಿ.ಎಸ್.ಪಿ ಗ್ರಾಮೀಣ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ,ಕೆ.ಎಮ್.ಸತೀಷ ಗ್ರಾಮೀಣ ವೃತ್ತ ರವರ ನೇತ್ರತ್ವದಲ್ಲಿ ಪಿ.ಎಸ.ಐ ರವರ ಆನಂದರಾವ ಎಸ್.ಎನ್., ಗಜಾನನ ಪಿ.ಎಸ.ಐ (ಪ್ರೋ) ಹಾಗೂ ಸಿಬ್ಬಂದಿಯವರಾದ ಸಂಜೀವರೆಡ್ಡಿ, ಹಣಮಂತ, ಕೇಶವ ಬಿರಾದಾರ, ನರಸಿಂಹ, ರಾಜಕುಮಾರ, ಹಾಗೂ ಮಲ್ಲಿಕಾರ್ಜುನ ರವರು ಕೂಡಿಕೊಂಡು ಕೊಲೆ ಮಾಡಿದ ಆರೋಪಿಗಳಾದ 1) ಅಮಿತ ತಂದೆ ವಿಜಯಕುಮಾರ ಕೊರಳ್ಳಿ, 2) ಜೈ ಭೀಮ @ ಬಿಲ್ಲಾ ತಂದೆ ಶಿವಲಿಂಗಪ್ಪಾ ಕೊರಳ್ಳಿ, 3) ಪ್ರಕಾಶ ತಂದೆ ಬಾಬುರಾವ ಕೊರಳ್ಳಿ, 4) ಪವನ ತಂದೆ ಶಿವಲಿಂಗಪ್ಪಾ ಸಾವಳಗಿ ಸಾ|| ಎಲ್ಲರೂ ತಾ||ಜಿ|| ಗುಲಬರ್ಗಾ,  5) ಮಲ್ಲಿಕಾರ್ಜುನ ತಂದೆ ಹಾಜಪ್ಪಾ ರದ್ದೋಡಗಿ ಸಾ|| ಶಹಾಬಾದ ರವರನ್ನು ಶಹಾಬಾದ ರೋಡಿಗೆ ಇರುವ ಶಹಾಬಾದ ಪಟ್ಟಣದ ವಾಡಿ ಕ್ರಾಸ ಹತ್ತಿರ  5 ಜನ ಕೊಲೆ  ಮಾಡಿದ ಆರೋಪಿತರನ್ನು ಬಂಧಿಸಿರುತ್ತಾರೆ.
ಕೊಲೆ ಮಾಡಿದ ಈ ಐದು (5) ಜನ ಆರೋಪಿತರನ್ನು ಪತ್ತೆ ಮಾಡಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ  ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.

No comments: