Police Bhavan Kalaburagi

Police Bhavan Kalaburagi

Friday, April 19, 2013

GULBARGA DISTRICT REPORTED CRIMES



ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ : ದಿನಾಂಕ:19-03-2013 ರಂದು ಬೆಳಿಗ್ಗೆ 9-30 ಗಂಟೆ ಸುಮಾರಿಗೆ ಗುಲಬರ್ಗಾ ಗ್ರಾಮೀಣ ಮತಕೇತ್ರದ ವ್ಯಾಪ್ತಿಯಲ್ಲಿ ಬರುವ ಕಮಲಾಪೂರ ಗ್ರಾಮದಲ್ಲಿ ಕೆ.ಜೆ.ಪಿ ಪಕ್ಷದ ಟೆಂಗನಿಕಾಯಿ ಚಿಹ್ನೆ ಮತ್ತು ಆ ಪಕ್ಷದ ಮುಖಂಡರ ಭಾವವಿತ್ರವಿರುವ ಬಿತ್ತಿ ಪತ್ರಗಳು ಬಸವೇಶ್ವರ ಕಟ್ಟೆಯ ಸಮೀಪ ಲೈಟ ಕಂಬದ ಮೇಲೆ ಯಾವದೇ ಪರವಾನಿಗೆ ಪಡೆಯದೆ ಕೆ.ಜೆ.ಪಿ ಪಕ್ಷದ ಅಧಿಕೃತ ಅಭ್ಯರ್ತಿಯವರು ಅಂಟಿಸಿರುತ್ತಾರೆ. ಹಾಗೂ ಪ್ರೀಂಟಗಳು ಹಾಗೂ  ತಯಾರಕರ ಹೆಸರು ನಮೂದಿಸಿರುವದಿಲ್ಲ  ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 38/2013  ಕಲಂ,3 Karnataka open places prevention disfigurement act ಮತ್ತು 188 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ :ದಿನಾಂಕ:19-04-2013 ರಂದು 12-30 ಗಂಟೆಸಮಯದಲ್ಲಿಗುಲಬರ್ಗಾ ಗ್ರಾಮೀಣ ಮತ ಕ್ಷೇತ್ರದ ಕಮಲಾಪೂರ ಗ್ರಾಮದಲ್ಲಿ ಪರಿವೀಕ್ಷಣೆಮಾಡುತ್ತಿರುವಾಗ ಕಮಲಾಪೂರ ಗ್ರಾಮದ ಸೇತುವೆ ಹತ್ತಿರ ಇರುವ ಗುಂಡಪ್ಪಾ ಮೂಲಿಮನಿ ಇವರ ಅಂಗಡಿಯ ಮೇಲೆ ಬಿ.ಎಸ್.ಆರ್ ಪಕ್ಷದ ಚಿಹ್ನೆ ಪತ್ರ ಶ್ರೀರಾಮಲು ಹಾಗೂ ಈ ಕ್ಷೇತ್ರದ ಬಿ.ಎಸ್.ಆರ್ ಪಕ್ಷದ ಅಬ್ಯರ್ಥಿಯಾದ ಬಾಬು ಹೂನ್ನ ನಾಯಕ ಭಾವಚಿತ್ರಅಂಟಿಸುವ  ಇರುವ ಭಿತಿ ಪತ್ರ ಅಂದಾಜು ಸೈಜ್  6 8 ಇಂಚ್ ಅಂಟಿಸಿದ್ದು ಕಂಡುಬಂದಿದೆ ಇದರ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ರೀತಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಪಡೆಯದೆ ಭೀತಿ ಪತ್ರ ಅಂಟಿಸುವದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ  ಮಾಡಿರುತ್ತಾರೆ.  ಅಲ್ಲದೆ  ಪಾಂಪಪ್ಲೇಟಗಳ ಮೇಲೆ ಅಧಿಕೃತವಾಗಿ ಎಷ್ಟು ಪ್ರೀಂಟಗಳು ಮತ್ತು ತಯಾರಕರ ಹೆಸರು ವಿಳಾಸ ನಮೂದಿಸಿರುವದಿಲ್ಲ ಅಂತಾ ಶ್ರೀ, ನಾಗೇಂದ್ರ ಬಿರಾದಾರ ಗ್ರಾಮೀಣ ಮತಕ್ಷೇತ್ರದ ಚುನಾವಣೆ ಜಾಗೃತ ಅಧಿಕಾರಿಗಳು  ವರದಿ ಸಲ್ಲಿಸಿದ ಸಾರಂಶದ ಮೇಲಿಂದಠಾಣೆ ಗುನ್ನೆ ನಂ. 39/2013 ಕಲಂ. ಕರ್ನಾಟಕ ಓಪನ್ ಪ್ಲೇಸ್ ಪ್ರಿವೇನಶನ್ ಆಫ್ ಡಿಸ ಪಿಗರಮೇಂಟ್ ಕಾಯ್ದೆ -1981 ಸಬ್ ಕಲಂ. 3 ಸಂ. 188 ಐಪಿಸಿ ಪ್ರಕಾರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

No comments: