Police Bhavan Kalaburagi

Police Bhavan Kalaburagi

Wednesday, May 1, 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ: 30/04/2013 ರಂದು ಬೆಳಿಗ್ಗೆ 11-00 ಗಂಟೆಗೆ ನಿಂಬಾಳ ಗ್ರಾಮದ ಬಸ್ಸ ನಿಲ್ದಾಣ ಚೆಕ್ಕ ಪೊಷ್ಟ ಹತ್ತಿರ ಜೀಪ ನಂ ಎಮ್. ಹೆಚ್.15 ಕೆ-2880 ನೇದ್ದರ ಚಾಲಕ ಮಾಹಾಂತಪ್ಪಾ ತಂದೆ ಭೀಮಾಶಂಕರ ಚಟ್ಟರಕಿ ಸಾಃ ಮಾದನಹಿಪ್ಪರಗಾ ಇವರು ಕೆ.ಜೆ.ಪಿ. ಪಕ್ಷದ ಪರವಾಗಿ ಪರವಾನಿಗೆ ಇಲ್ಲದೆ ಪ್ರಚಾರ ಮಾಡುತ್ತಿದ್ದಾಗ  ನಾನು ಮತ್ತು ನನ್ನ ತಂಡದವರು ವಾಹನ  ಚೆಕ್ಕ ಮಾಡಲು ಕೆ.ಜೆ.ಪಿ. ಪಕ್ಷದ ಚಿನ್ಹೆವುಳ 3 ಟಾವಲಗಳು ಹಾಗೂ ಕರ್ನಾಟಕ ವಿಧಾನ ಸಭಾ ಚುಣಾವಣೆ 2013 ಆಳಂದ ಮತ ಕ್ಷೇತ್ರ ಕೆ.ಜೆ.ಪಿ. ಪಕ್ಷದ ಮಾದರಿ ಮತ ಯಂತ್ರವುಳ್ಳ ಕರ ಪತ್ರಗಳು ಪರವಾನಿಗೆ ಪಡೆಯದೆ ಜೀಪ ಚಾಲಕನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾನೆ ಅಂತಾ ಶ್ರೀ ನಾಗಪ್ಪ ಬಿರಾದಾರ ಎಸ್.ಎಸ್.ಟಿ. ತಂಡದ ಮುಖ್ಯಸ್ಥರು ನಿಂಬಾಳ ಚೆಕ್ಕ ಪೊಸ್ಟ, ತಾ:ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:37/2013 ಕಲಂ ಕಲಂ 133 ಆಪ್. ದಿ ರೀಪ್ರೀವೆನ್ಸನ್ ಆಫ್ ದಿ ಪೀಪಲ್ ಆಕ್ಟ 1951 ಮತ್ತು ಕಲಂ 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಗುಲಬರ್ಗಾ ಅಫಜಲಪೂರ ಮುಖ್ಯ ರಸ್ತೆಯಲ್ಲಿಯ ಶರಣಸಿರಸಗಿ ಗ್ರಾಮದ ಶ್ರೀ ರಚಿ-ಕುಮಾರ ಆಳಂದ ಇವರ ಅಂಗಡಿ ಶೆಟ್ಟರ ಮೇಲ್ಬಾಗದಲ್ಲಿ ಬಿಜೆ.ಪಿ ಪಕ್ಷದ ಚಿಹ್ನೆ ಮತ್ತು ಅಭ್ಯರ್ಥಿಯ ಭಾವಚಿತ್ರವುಳ ಸ್ಟಿಕರಗಳು ಅಂಟಿಸಿದ್ದು ಇರುತ್ತದೆ. ಸ್ಟಿಕರಗಳು ಅಂಟಿಸಿದ್ದರಿಂದ ತೆಗೆಯಲು ಆಗಿರುವದಿಲ್ಲ. ಬಿ,ಜೆ,ಪಿ  ಪಕ್ಷದ ಗುಲ್ಬರ್ಗಾ ದಕ್ಷಿಣ ವಿಧಾನ ಸಭಾ ಮತಕ್ಷೇತ್ರ ಅಭ್ಯರ್ಥಿ ದತ್ರಾತ್ರೇಯ ತಂದೆ ಚಂದ್ರಶೇಖರ ಪಾಟೀಲ ಸಾ:ಗುಲಬರ್ಗಾ ರವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ,ಡಾ||  ಡಿ ಎಮ್ ಮಣ್ಣೂರ ಮ್ಯಾಜಿಸ್ಟ್ರೇಟ ಪ್ಲಾಯಿಂಗ ಸ್ವ್ಕಾಡ್‌  ಎಮ್ಸಿಸಿ ಮಾದರಿ ಚುನಾವಣೆ ನೀತಿ ಸಂಹೀತೆ ಅಧಿಕಾರಿ ಗುಲಬರ್ಗಾ ದಕ್ಷಿಣ ವಿಧಾನಸಭಾ ಚುನಾವಣೆ ಅಧಿಕಾರಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 221/2013 ಕಲಂ,[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಉನ್ಯಾ ಚವ್ಹಾಣ  ಮ್ಯಾಜಿಸ್ಟ್ರೇಟ ಪ್ಲಾಯಿಂಗ ಸ್ವ್ಕಾಡ್‌  ಎಮ್ಸಿಸಿ ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿಗಳು ಗಸ್ತುವಿನಲ್ಲಿದ್ದಾಗ ಜೆ.ಡಿ.ಎಸ ಪಕ್ಷದ   ಅಭ್ಯರ್ಥಿ  ಶ್ರೀ,   ಶಶೀಲ್ ಜಿನಮೋಶಿ , ಮತ್ತು ಹೆಚ.ಡಿ ಕುಮಾರ ಸ್ವಾಮಿ ಭಾವ ಚಿತ್ರ ಮತ್ತು  ಪಕ್ಷದ ಚಿಹ್ನೆವುಳ್ಳ  ಸ್ಟೀಕರ್‌ ಪಾಂಪ್ಲೆಟಗಳು ಯಳವಂತಗಿ (ಕೆ) ಗ್ರಾಮದ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ದೂರವಾಣಿ ಕಂಬಕ್ಕೆ ಅಂಟಿಸಿ ಸಾರ್ವಜನಿಕ ಸ್ಥಳವನ್ನು   ವಿರೂಪಗೊಳಿಸಿಚುನಾವಣೆ ನೀತಿ ಉಲ್ಲಂಘಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:222/2013 ಕಲಂ, ಕಲಂ,[3] The Karnataka Open Places (Prevention of Disfigurement ) Act 1981  ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.

No comments: