Police Bhavan Kalaburagi

Police Bhavan Kalaburagi

Monday, July 29, 2013

GULBARGA DIST REPORTED CRIMES

ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  
ಮೈನುದ್ದೀನ ತಂದೆ ಮಹಿಬೂಬಸಾಬ ಸಂಧಿಮನಿ ಸಾ:ನಾಗೂರ ಹಾ:ವ:ರಾಮನಗರ ಗುಲಬರ್ಗಾ ಮತ್ತು ಶರಣು ಕೂಡಿ ಇಬ್ಬರು ಮೋಟಾರ ಸೈಕಲ ಮೇಲೆ ಅವರ ಅಣ್ಣ ಮೋಬಿನ ಇನ್ನೊಂದು ಮೋಟಾರ ಸೈಕಲ ಮೇಲೆ ಕುಳಿತುಕೊಂಡು ಶಹಾಬಾದನಿಂದ ಗುಲಬರ್ಗಾಕ್ಕೆ ಹೋಗುತ್ತಿರುವಾಗ ಮೋಬಿನನು ಮೋಟಾರ ಸೈಕಲ ಮೇಲೆ ಮುಂದೆ ಹೋಗುತ್ತಿದ್ದು ನಾವು ಹಿಂದೆ ಹೋಗುತ್ತಿರುವಾಗ ಮೋಬಿನನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಸುತ್ತಾ ದೇವನ ತೆಗನೂರ ಗ್ರಾಮದ ಬಸಸ್ಟಾಂಡ ಹತ್ತಿರ ಇರುವ ರೋಡ ಬ್ರೇಕ ಹತ್ತಿರ ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸ್ಕಿಡ್ಡಾಗಿ ಬಿದ್ದುಮೊಬಿನನ ಬಲಕಪಾಳಿಗೆ ತರಚಿದ ರಕ್ತಗಾಯ ಹಣೆಯ ಮಧ್ಯ ಭಾಗದಲ್ಲಿ ಭಾರಿ ರಕ್ತಗಾಯ & ತಲೆ ಬಲಭಾಗಕ್ಕೆ ಭಾರಿ  ಗಾಯವಾದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಶಹಾಬಾದ ನಗರ ಪೊಲೀಸ ಠಾಣೆ
ಅಪಘಾತ ಪ್ರಕರಣ  

ಜಗದೀಶ@ಜಗನ್ನಾಥ ಮತ್ತು ಪ್ರದೀಪ ಕುಮಾರ ತಂದೆ ಬಸಪ್ಪಾ ಕೂಡಿ ಹೀರೊ ಹೊಂಡಾ ಮೋಟಾರ ಸೈಕಲ ನಂ.ಕೆಎ-32, ಇಎ-7914 ನೇದ್ದರ ಮೇಲೆ ಹೊನಗುಂಟಾ-ಶಹಾಬಾದ ರಸ್ತೆಯ ಮರಗಮ್ಮಾ ಗುಡಿಯ ಹತ್ತಿರ ಹೋಗುತ್ತಿರುವಾಗ ಪ್ರದೀಪ ಕುಮಾರನು ಮೋಟಾರ ಸೈಕಲನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಾ ಹೋಗಿ ರಸ್ತೆ ಪಕ್ಕದ  ಲೈಟಿನ ಕಂಬಕ್ಕೆ ಡಿಕ್ಕಿ ಹೊಡೆದರಿಂದ ಹಿಂದೆ ಕುಳಿತ ಜಗದೀಶನಿಗೆ ಹಣೆಯ ಮಧ್ಯದಲ್ಲಿ ಭಾರಿ ರಕ್ತಗಾಯವಾಗಿದ್ದು ಮಾತನಾಡುವ ಸ್ಥಿತಿಯಲಿ ಇರುವದಿಲ್ಲಾ. ಕಾರಣ ಮೋ/ಸೈ ಸವಾರನಾದ ಪ್ರದೀಪ ಕುಮಾರನ ಮೇಲೆ ಸೂಕ್ತ ಕಾನೂನುಕ್ರಮ ಜರುಗಿಸುವಂತೆ ಜಗದೀಶ@ಜಗನ್ನಾಥನ ತಂದೆ  ಸುಬ್ಬಣ್ಣಾ ತಂದೆ ಮಲ್ಲಣ್ಣಾ ಸಾ:ಹೊನಗುಂಟಾ  ಇವ್ರುಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಪ್ರಕ್ರಣದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

No comments: