Police Bhavan Kalaburagi

Police Bhavan Kalaburagi

Tuesday, October 22, 2013

Gulbarga District Reported Crimes

ಎ.ಟಿ.ಎಮ್. ನಲ್ಲಿ ಕಳವು ಪ್ರಕರಣ :
ಸ್ಟೇಷನ ಬಜಾರ ಠಾಣೆ : ಶ್ರೀ ಮೇಲಗಿರಾಚಾರ್ಯ ತಂದೆ ಹೈಗ್ರವಚಾರ್ಯ ಸಾ|| ಪ್ಲಾಟ ನಂ.107 ಶಕ್ತಿನಗರ ಗುಲಬರ್ಗಾ  ರವರು ದಿನಾಂಕ. 04.11.2012 ರಂದು  ನಾನು ಎ.ಟಿ.ಎಂ ಎಸ್.ಬಿ.ಐ ಜೇವರ್ಗಿ ಕಾಲೂನಿಯಿಂದ ಹಣ ತಗೆದುಕೊಳ್ಳಲು ಹೋದಾಗ ಎ.ಟಿ.ಎಂ ಕೀ ಬೋರ್ಡ ಸರಿಯಾಗ ಕೆಲಸ ನಿರ್ವಹಿಸುತ್ತಿರಲಿಲ್ಲ ಆಗ ನಾನು ಪ್ರಯತ್ನಿಸಿದರು ಹಣ ಬರಲಿಲ್ಲ ನಾನು ಹೋದ ನಂತರ ಯಾರೋ ನನ್ನ ಅಕೌಂಟನಲ್ಲಿಯ 34,000/- ರೂ ಹಣ ಡ್ರಾ ಮಾಡಿಕೋಂಡು ಹೋಗಿರುತ್ತಾರೆ ಅಂತಾ ನೀಡಿದ ದೂರು ಸಾರಾಂಶದ ಮೇಲಿಂದ ಸ್ಟೇಷನ ಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದರೋಡೆಕೊರರ ಬಂಧನ:
ರೋಜಾ ಠಾಣೆ : ದಿನಾಂಕ 21-10-2013 ರಂದು ರಾತ್ರಿ ವೇಳೆಯಲ್ಲಿ ರೋಜಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೆಸಿಟಿ ಇಂಜಿನೀಯರಿಂಗ ಕಾಲೇಜು ಹತ್ತಿರ ರಿಂಗ ರೋಡಿಗೆ ದರೋಡೆಗೆ ಸಿದ್ದತೆ ಮಾಡಿಕೊಂಡು ಕುಳಿತಿದ್ದ 1) ಸತೀಶ @ ಮಾರ್ಕೇಟ ಸತೀಶ @ ಸಂಗಮ ಸತೀಶ ತಂದೆ ವೆಂಕಟಸ್ವಾಮಿ ಸ್ವಾಮಿ ರೆಡ್ಡಿ ಸಾ: ಯಾಕುಬ ಮನಿಯಾರ ಚಾಳ ಪೋಸ್ಟ ಆಫೀಸ ಹತ್ತಿರ ಗುಲಬರ್ಗಾ 2) ರಶೀದ @ ಶೇಖರಸೀದ ತಂದೆ ಶೇಖ ಬಸೀರ ಅಹ್ಮದ ಸಾ: ಸಾಹೇಬ ಸ್ಕೂಲ ಹತ್ತಿರ ಇಸ್ಲಾಮಾಬಾದ ಗುಲಬರ್ಗಾ 3) ನಾಗರಾಜ @ ಸ್ಮಾಟ ನಾಗ ತಂದೆ ವೆಂಕಟೇಶ ಯಾದವ ಸಾ : ಬಂಬು ಬಜಾರ ಗಂಜ ಗುಲಬರ್ಗಾ 4) ವಿಶಾಲ ತಂದೆ ರಾಜಸಿಂಗ ಟಾಕ್ ಸಾ: ಮೇಹತ್ತಾರ ಗಲ್ಲಿ ಗಾಜೀಪೂರ ಗುಲಬರ್ಗಾ 5) ಸಾಗರ ತಂದೆ ಬಲರಾಜ ಲಾಹೋಟಿ ಸಾ : ಮೇತ್ತಾರ ಗಲ್ಲಿ ಗುಲಬರ್ಗಾ 6) ಸಾಗರ ತಂದೆ ರಾಜು ರಿಡ್ಲಾನ ಸಾ: ಮೇಹತ್ತಾರ ಗಲ್ಲಿ ಗಾಜೀಪೂರ ಗುಲಬರ್ಗಾ 7) ಸಾಜೀದ ತಂದೆ ಸೈಯ್ಯದ ಹುಸೇನ ಸಾ: ಮಹ್ಮದಿ ಮಜೀದ ಹತ್ತಿರ ಎಮ್.ಎಸ್.ಕೆ. ಮಿಲ್ ಗುಲಬರ್ಗಾ 8) ಮೊಸಿನ ತಂದೆ ಅಮಿರ ಪಾಷಾ ಸಾ: ಸಂತ್ರಾಸ ವಾಡಿ ನೀಚೆ ಗಲ್ಲಿ ಗುಲಬರ್ಗಾ ಇವರನ್ನು ಶ್ರೀ ಅಮೀತ್ ಸಿಂಗ್ ಐ.ಪಿ.ಎಸ್. ಜಿಲ್ಲಾ ಪೊಲೀಸ ಅಧೀಕ್ಷಕರು ಶ್ರೀ ಕಾಶೀನಾಥ ತಳಕೇರಿ ಅಪರ ಪೊಲೀಸ ಅಧೀಕ್ಷಕರು ಗುಲಬರ್ಗಾ ಹಾಗು ಶ್ರೀ ಸವಿಶಂಕರ ನಾಯಕ ಡಿ.ಎಸ್.ಪಿ.  ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ರೌಡಿ ನಿಗ್ರಹ ದಳದ ಅಧೀಕಾರಿಯಾದ ವಿನಾಯಕ ಪಿ.ಎಸ್.ಐ. ಬ್ರಹ್ಮಪೂರ ಠಾಣೆ ಮತ್ತು ಹೇಮಂತ ಕುಮಾರ ಪಿ.ಎಸ್.ಐ ರಾಘವೇಂದ್ರ ನಗರ ಠಾಣೆ ಹಾಗು ನಾರಾಯಣಪ್ಪಾ ಪಿ.ಐ. ರೋಜಾ ಠಾಣೆ ಮತ್ತು ರೌಡಿ ನಿಗ್ರಹ ದಳದ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ. ಶಿವಕುಮಾರ ಹೆಚ್.ಸಿ. ಶಿವಪ್ಪಾ ಕಮಾಂಡೋ ಎಚ್.ಸಿ ದೇವಿಂದ್ರಪ್ಪಾ ಪಿಸಿ ರಾಮುಪವಾರ ಪಿಸಿ ರಫಿಯೋದ್ದಿನ ಪಿಸಿ ಶಿವಪ್ರಕಾಶ ಪಿಸಿ ಸುಭಾಷ ಪಿಸಿ ಚನ್ನಪ್ಪ ಸಾಹುಕಾರ ಪಿಸಿ ರವರರೆಲ್ಲರು ಕುಡಿಕೊಂಡು ದಾಳಿ ಮಾಡಿ ಮೇಲ್ಕಂಡ ದರೋಡೆಕೊರರನ್ನು ಬಂಧೀಸುವಲ್ಲಿ ಯಶಸ್ವಿಯಾಗಿದ್ದು ಈ ಬಗ್ಗೆ ರೋಜಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬಂದಿತ ಆರೋಪಿತರೆಲ್ಲರು ಕುಖ್ಯಾತ ರೌಡಿಗಳಿದ್ದು ಗುಲಬರ್ಗಾದ ನಗರ ಹಾಗು ಇತರೆ ಪೊಲೀಸ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಕ್ರಿಮಿನಲ್ ಅಪರಾಧ ಹಿನ್ನೆಲೆಯುಳ್ಳವರಾಗಿರುತ್ತಾರೆ ಸದರಿ ದರೋಡೆಕೊರರಿಂದ ದರೋಡೆ ಕೃತ್ಯಕ್ಕೆ ಉಪಯೋಗಿಸಲು ತಂದಿದ್ದ ತಲವಾರಗಳು ಚಾಕುಗಳನ್ನು ಖಾರದ ಪುಡಿ ಮತ್ತು ಹಗ್ಗ ಹಾಗು ಮುಖಕ್ಕೆ ಕಟ್ಟಿಕೊಳ್ಳುವ ಕರಿ ಬಟ್ಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಟಕಾ ಜುಜಾಟ ನಿರತ ವ್ಯಕ್ತಿಯ ಬಂಧನ :
ಮಾಹಾಗಾಂವ ಠಾಣೆ :ದಿನಾಂಕ 21-10-13 ರಂದು ಪಿ,ಎಮ್,ಕ್ಕೆ ಹರಸೂರ ಗ್ರಾಮದ ಬಸ್ಸನಿಲ್ದಾಣದ ಹತ್ತಿರದ ಕಟ್ಟೆಯ ಮೇಲೆ ಸಾರ್ವಜನಿಕ ರಸ್ತೆಯ ಮೇಲೆ  ಒಬ್ಬ ವ್ಯಕ್ತಿ  ಕುಳಿತುಕೊಂಡು ಮಟಕಾ ಜುಜಾಟಕ್ಕೆ ಸಂಬಂದಿಸಿದ ಅಂಕಿ ಸಂಖ್ಯೆಯ ಚೀಟಿಗಳನ್ನು ಹೋಗಿ ಬರುವ ಸರ್ವಜನಿಕರಿಂದ ಹಣ ಪಡೆದುಕೊಂಡು 1 ರೂ ಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಮೋಸ ವಂಚನೆ ಮಾಡುತ್ತಿದ್ದಾನೆ ಅಂತಾ ಖಚೀತ ಮಾಹಿತಿ ಬಂದಿದ್ದರಿಂದ ತಾನು ಇಬ್ಬರೂ ಪಂಚರು ಸಮಕ್ಷಮದಲ್ಲಿ ಪಿ,ಐ ಡಿ,ಸಿ,,ಬಿ, ರವರ ಮಾರ್ಗದರ್ಶನದಲ್ಲಿ ನಮ್ಮ ಠಾಣೆಯ ಸಿಬ್ಬಂದಿಯವರಾದ ಫೈಜುಲ್ಲಾ ಖಾನ ಎ,ಎಸ್,ಐ ಶಿವರಾಯ ಪಿ,ಸಿ, 946, ಡಿ,ಸಿ,ಐ ಘಟಕ ಗುಲಬರ್ಗಾದ ಅಧೀಕಾರಿ ಎ,ಎಸ್,ಐ ದತ್ತಾತ್ರೆಯ ಶಿವಯೋಗಿ ಹೆಚ್,ಸಿ, 220,ಪ್ರಕಾಶ ಹೆಚ್,ಸಿ, 370, ಮಹಾದೇವ ಹೆಚ್,ಸಿ, 11 ಮಲ್ಲಣ್ಣ ಹೆಚ್,ಸಿ, 98, ರವರೊಂದಿಗೆ  ಠಾಣೆಯಿಂದ ಹೋರಟು 8.15 ಪಿ,ಎಮ್,ಕ್ಕೆ ಹರಸೂರ ಗ್ರಾಮದ ಹೋರವಲಯದಲ್ಲಿ ಜೀಪ ನಿಲ್ಲಿಸಿ ನಡೆಯುತ್ತಾ ಸದರ  ಸ್ಥಳಕ್ಕೆ 8.30 ಪಿ,ಎಮ್,ಕ್ಕೆ ತಲುಪಿ ಒಂದು ಶಾಲೆಯ ಗೋಡೆಯ ಮರೆಯಲ್ಲಿ ನಿಂತ್ತು ನೋಡಲಾಗಿ ಅಲ್ಲಿ ಒಬ್ಬ ವ್ಯಕ್ತಿ ಬಸ್ಸ ನಿಲ್ದಾಣದ ಪಕ್ಕದ ಕಟ್ಟೆಯ ಮೇಲೆ ಕುಳಿತು ಹೋಗಿ ಬರುವ ಸಾರ್ವಜನಿಗೆ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳುತ್ತಾ ಮಟಕಾ ಜೂಜಾಟಕ್ಕೆ ಸಂಬಂದಿಸಿದ ಅಂಕಿ ಸಂಖ್ಯೆ ಯುಳ್ಳ ಚೀಟಿ ಬರೆದುಕೊಡುತ್ತಿದ್ದ ಹಣ ಸಂಗ್ರಹ ಮಾಡುತ್ತಾ ಸಾರ್ವಜನಿಕರಿಗೆ ಮೋಸ ವಂಚನೆ ಮಾಡುತ್ತಿದ್ದನ್ನು ಕಂಡು ಪಂಚರ ಸಮಕ್ಷಮ ಆ ವ್ಯಕ್ತಿಯ ಮೇಲೆ ದಾಳಿ ಮಾಡಿ ಹಿಡಿದು ಆತನ  ಹೆಸರು ವಿಚಾರಿಸಿ ಅಂಗ ಶೋದನೆ ಮಾಡಲಾಗಿ ಆತ ತನ್ನ ಹೆಸರು ಅಂಬಾದಾಸ ತಂ ಬಾಬುರಾವ ಕಂಭಾರ ವ||28 ಜಾ|| ಕಂಭಾರ /ಗಿಸ್ಸಾಡಿ ಸಾ|| ಹರಸೂರ ಅಂತಾ ಹೆಳಿದ್ದು ಅಂಗ ಶೋಧನೆ ಮಾಡಲಾಗಿ ಆತನ  ಹತ್ತಿರ 12,000=00 ರೂ ನಗದು ಹಣ ಒಂದು ಕಪ್ಪು ಬೂದಿ ಬಣ್ಣದ ಇಂಟೆಕ್ಸ ಕಂಪನಿಯ ಮೊಬಾಯಿಲ ಹ್ಯಾಂಡ ಸಟ್ಟ ಅ||ಕಿ|| 300=00 ರೂ 12 ಮಟಕಾ ಅಂಕಿಸಂಖ್ಯೆ ಬರೆದ ಚೀಟಿ, ಹಾಗೂ ಒಂದು ಬಾಲಪೆನ್ನ ದೊರೆತ್ತಿದ್ದು ಸದರಿ ಮುದ್ದೆ ಮಾಲು ಹಾಗೂ ಅರೋಪಿತನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. 

No comments: