Police Bhavan Kalaburagi

Police Bhavan Kalaburagi

Monday, September 1, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕೊಪ್ಪಳ ನಗರ  ಪೊಲೀಸ್ ಠಾಣೆ ಗುನ್ನೆ ನಂ. 186/2014 ಕಲಂ. 87 Karnataka Police Act.
ದಿ: 31-08-2014 ರಂದು ಮದ್ಯಾಹ್ನ 3-00 ಗಂಟೆಗೆ ನೇತ್ರಾವತಿ ಪಿ.ಎಸ್.ಐ ಅಪರಾಧ ವಿಭಾಗ ನಗರ ಠಾಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ದೂರು ಹಾಗೂ ಇಸ್ಪೀಟ ಜೂಜಾಟದ ದಾಳಿ ಪಂಚನಾಮೆ ಮತ್ತು ಮುದ್ದೇಮಾಲು ಹಾಗೂ 06 ಜನ ಆರೋಪಿತರೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು ದೂರಿನ ಸಾರಾಂಶವೇನೆಂದರೆ, ಇಂದು ಮಧ್ಯಾಹ್ನ 1-40 ಗಂಟೆಗೆ ಬಸವೇಶ್ವರ ನಗರದಲ್ಲಿರುವ ಶ್ರೀ ಗಾಳೆಮ್ಮ ದೇವಾಲಯದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು ದುಂಡಾಗಿ ಕುಳಿತುಕೊಂಡು ಇಸ್ಪೀಟ ಎಲೆಗಳ ಸಹಾಯದಿಂದಾ ಅಂದರ ಬಾಹರ ಇಸ್ಪೀಟ ಜೂಜಾಟದಲ್ಲಿ ತೊಡಗಿದ್ದಾಗ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಪಂಚರ ಸಮಕ್ಷಮ 06 ಜನ ಆರೋಪಿತರಿಂದ ಜೂಜಾಟದ ನಗದು ಹಣ 900=00,  ಮತ್ತು 52 ಇಸ್ಪೀಟ ಎಲೆಗಳು ಹಾಗೂ ಒಂದು ಜಮಖಾನವನ್ನು ಜಪ್ತಿ ಮಾಡಿಕೊಂಡು ಬಂದು ಹಾಜರಪಡಿಸಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ:186/2014. ಕಲಂ: 87 ಕೆಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಅದೆ.
2) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 82/2014 ಕಲಂ. 3 ಮತ್ತು 7 ಅವಶ್ಯಕ ವಸ್ತುಗಳ ಕಾಯ್ದೆ:.
¢£ÁAPÀ 31-08-2014 gÀAzÀÄ ¸ÀAeÉ 4-00 UÀAmÉUÉ ²æà ¸ÁUÀgÀ vÀAzÉ ²ªÀ¥ÀÄvÀæ¥Àà ¨ÉÃj ªÀÄwÛvÀgÀ zÀ°vÀ ¸ÀAWÀµÀð ¸À«ÄwAiÀÄ PÁAiÀÄðPÀvÀðgÀÄ oÁuÉUÉ mÁmÁ K¸ï ªÁºÀ£À ¸ÀA. PÉ.J. 37/6204 £ÉÃzÀÝgÉÆA¢UÉ §AzÀÄ ¸ÀzÀj ªÁºÀ£ÀzÀ°è CPÀæªÀÄ UÉÆâü ¸ÁUÁtÂPÉ ªÀiÁqÀÄwÛgÀĪÀÅzÁV ªÀiÁ»w ¤ÃrzÀÄÝ, PÁgÀt ¸ÀzÀj ªÁºÀ£ÀzÀ°è£À UÉÆâüAiÀÄ£ÀÄß ¥Àj²Ã°¹ ªÀgÀ¢ ¤ÃqÀĪÀAvÉ ªÀiÁ£Àå DºÁgÀ ¤jÃPÀëPÀgÀÄ, PÀĵÀÖV gÀªÀjUÉ AiÀiÁ¢ ªÀÄÄSÁAvÀgÀ «£ÀAw¹PÉÆArzÀÄÝ, DºÁgÀ ¤jÃPÀëPÀgÀÄ oÁuÉUÉ ºÁdgÁV ¸ÀAeÉ 6-31 UÀAmÉUÉ °TvÀ ¦üAiÀiÁð¢AiÀÄ£ÀÄß zÀÈrüÃPÀÈvÀ ¥ÀAZÀ£ÁªÉÄAiÉÆA¢UÉ ºÁdgÀÄ¥Àr¹zÀÄÝ, ¸ÁgÁA±ÀªÉãÉAzÀgÉ EAzÀÄ ¢£ÁAPÀ 31-08-2014 gÀAzÀÄ ºÁdgÁV vÀªÀÄä DªÀgÀtzÀ°ègÀĪÀ mÁmÁ K¸ï ªÁºÀ£À ¸ÀA. PÉ.J. 37/6204 £ÉÃzÀÝgÀ°ègÀĪÀ UÉÆâü aîUÀ¼À£ÀÄß ¥Àj²Ã°¸À¯ÁV UÉÆâüaî EgÀĪÀÅzÀÄ ¤d«gÀÄvÀÛzÉ.  MlÄÖ CAzÁdÄ 50 PÉ.f.AiÀÄ 20 aîUÀ¼ÀÄ EzÀÄÝ, ¸ÀPÁðgÀzÀ £ÁåAiÀÄ¨É¯É CAUÀrAiÀÄ°è «vÀgÀuÉ ªÀiÁqÀĪÀ UÉÆâü JA§ÄzÀgÀ §UÉÎ ¥Àj²Ã®£É ªÀiÁqÀ®Ä ±ÁåA¥À¯ï vÉUÉzÀÄPÉÆArzÀÄÝ EzÉ.  C®èzÉà ªÀÄÄA¢£À DzÉñÀªÁUÀĪÀªÀgÉUÉ ªÁºÀ£ÀªÀ£ÀÄß vÀªÀÄä ¸ÀÄ¥À¢ðUÉ M¦à¹zÉ. PÁgÀt CAzÁdÄ gÀÆ. 15,000-00 ¨É¯É¨Á¼ÀĪÀ UÉÆâü ºÁUÀÆ ªÁºÀ£ÀzÀ ªÉÄÃ¯É ¥ÀæPÀgÀt zÁR°¸À®Ä PÉÆÃjzÉ CAvÁ ªÀÄÄAvÁVzÀÝ ¦üAiÀiÁ𢠸ÁgÁA±ÀzÀ ªÉÄðAzÀ oÁuÁ UÀÄ£Éß £ÀA. 82/2014 PÀ®A 3 & 7 CªÀ±ÀåPÀ ªÀ¸ÀÄÛUÀ¼À PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆAqÉ£ÀÄ.
3) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 267/2014 ಕಲಂ. 279, 337, 338 ಐ.ಪಿ.ಸಿ:.
ದಿನಾಂಕ : 31-08-2014 ರಂದು  ನಾನು ಮದ್ಯಾಹ್ನ  2-30 ಗಂಟೆಯ ಸುಮಾರಿಗೆ ಕಾರಟಗಿಯ  ನವಲಿ ರೋಡಿನಲ್ಲಿರುವ  ಸುಂಕದ ಇವರ  ಪೆಟ್ರೋಲ್ ಬಂಕದಲ್ಲಿ ಫಿರ್ಯಾದಿದಾರರು ನಿಂತುಕೊಂಡಿದ್ದಾಗ್ಗೆ . ಅದೇ ವೇಳೆಗೆ  ರಾಮನಗರ ಕಡೆಯಿಂದ  ಕೃಷ್ಣಾಸಿಂಗ ತಂದಿ ಧರ್ಮಸಿಂಗ ತಾವರಗೇರಿ  ವಯಾ: 20 ವರ್ಷ ಸಾ: ರಾಮನಗರ ಕಾರಟಗಿ ಇವರು  ತನ್ನ ಮೊಟಾರ್ ಸೈಕಲ್ ನಂಬರ: ಕೆ.ಎ- 36 / ಕ್ಯೂ- 1529 ನೇದ್ದರ ಮೇಲೆ  ಜಮಾನಸಿಂಗ್ ತಂದಿ ಲಕ್ಷ್ಮಣಸಿಂಗ್  ಗೋಡಿನಾಳ ಸಾ: ರಾಮನಗರ ಇವರನ್ನು ಕೂಡ್ರಿಸಿಕೊಂಡು  ತನ್ನ ಸೈಡಿನಲ್ಲಿ ರಸ್ತೆಯ ಎಡಬದಿಗೆ ಬರುತ್ತಿದ್ದರು. ಅದೇ ವೇಳೆಗೆ ಕಾರಟಗಿ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕ ತನ್ನ ಮೊಟಾರ್ ಸೈಕಲ್ಲನ್ನು ಅತೀ ವೇಗ ಹಾಗೂ ಅಲಕ್ಷತನದಿಂದ   ರಸ್ತೆಯ ಮೇಲೆ ಎರ್ರಾ ಬಿರ್ರಿಯಾಗಿ  ಆಕಡೆ ಈಕಡೆ ಓಡಿಸಿಕೊಂಡು  ರಾಂಗ್ ಸೈಡಿಗೆ ಬಂದು  ಕೃಷ್ಣಾಸಿಂಗ್ ಇವರ ಮೊಟಾರ್ ಸೈಕಲ್ಲಿಗೆ ಟಕ್ಕರ್ ಕೊಟ್ಟು ಅಪಘಾತಪಡಿಸಿದ್ದರಿಂದ  ಅವರುಮೊಟಾರ್ ಸೈಕಲ್ ಸಮೇತ ಕೆಳಗೆ ಬಿದ್ದರು   ಅಪಘಾತವಾದ ನಂತರ ಅಲ್ಲಿಯೇ ಇದ್ದ ನಾನು ಹಾಗೂ ಇತರರು ಹೊಗಿ ನೋಡಲು  ಕೃಷ್ಣಾಸಿಂಗ್ ಇತನಿಗೆ ತಲೆಗೆ ಹಾಗೂ ಕೈ ಕಾಲುಗಳಿಗೆ ಗಂಭೀರಘಾಯ ಮತ್ತು ಮೂಳೆ ಮುರಿತವಾಗಿದ್ದು ಹಾಗೂ  ಹಿಂದೆ ಕುಳಿತಿದ್ದ ಜಮಾನಸಿಂಗ್ ಇತನ ಕೈಗಳಿಗೆ ಹಾಗೂ ಬುಜಕ್ಕೆ ರಕ್ತಘಾಯ ಮತ್ತು ಪೆಟ್ಟುಗಳಾಗಿದ್ದು ಇರುತ್ತದೆ.  ಅಪಘಾತಪಡಿಸಿದ ಮೊಟಾರ್ ಸೈಕಲ್ ನೊಡಲು ಹಿರೋ ಸ್ಪ್ಲೆಂಡರ್  + ಕಂಪನಿಯದು ಇದ್ದು ಅದರ ನಂ ಕೆ.ಎ- 37 / ಡಬ್ಲು- 6894  ಅಂತಾ  ಇದ್ದು ಚಾಲಕನ ಬಗ್ಗೆ ವಿಚಾರಿಸಲಾಗಿ  ಪಾಂಡುರಂಗ ತಂದಿ  ರಾಮಣ್ಣ ಹುಲ್ಲೂರ  ವಯಾ :40 ವರ್ಷ ಸಾ: ಕಾರಟಗಿ ಅಂತಾ ಗೊತ್ತಾಗಿದ್ದು ಅವನಿಗೂ ಕೂಡಾ ತಲೆಗೆ ಹಣೆಗೆ, ಕೈ ಕಾಲುಗಳಿಗೆ ರಕ್ತಘಯ ಹಾಗೂ ಮೂಳೆ ಮುರಿತವಾಗಿದ್ದು ಇರುತ್ತದೆ.  ಅಪಘಾತವಾದ ನಂತರ ಗಾಯಗೊಂಡ ವ್ಯಕ್ತಿಗಳನ್ನು ಇಲಾಜ ಕುರಿತು ಕಾರಟಗಿ ಸರಕಾರಿ ಅಸ್ಪತ್ರೆಗೆ ತಂದು ದಾಖಲು ಮಾಡಿ ತಮ್ಮಲ್ಲಿಗೆ ಬಂದು ಈ ಫಿರ್ಯಾದಿ ಕೊಟ್ಟಿರುತ್ತೇನೆಅಂತಾ ಮುಂತಾಗಿ ಕೊಟ್ಟ ಫಿರ್ಯಾದಿಯ ಸಾರಾಂಶದ ಮೇಲಿಂದ ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ : 267/2014 ಕಲಂ :279, , 338 ಐ.ಪಿ.ಸಿ. ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
4) ಬೇವೂರ ಪೊಲೀಸ್ ಠಾಣೆ ಗುನ್ನೆ ನಂ. 87/2014 ಕಲಂ. 279, 338 ಐ.ಪಿ.ಸಿ:.
ದಿನಾಂಕ 31.08.2014 ರಂದು 1600 ಗಂಟೆ ಸುಮಾರಿಗೆ ಆರೋಪಿತನಾದ ಸುರೇಶ ತಂದೆ ದ್ಯಾಮಣ್ಣ ಬಡಿಗೇರ ತನ್ನ ಕೆಲಸ ನಿಮಿತ್ಯ ನಿಲೋಗಲದಿಂದ ತರಲಕಟ್ಟಿಗೆ ಹೋಗುವಾಗ ನಿಲೋಗಲ್ - ತರಲಕಟ್ಟಿ ರಸ್ತೆಯ ಮೇಲೆ ತರಲಕಟ್ಟಿ ಸೀಮಾದಲ್ಲಿ ತಾನು ನಡೆಸುತ್ತಿದ್ದ ಹೊಸ ಮೋಟರ್ ಸೈಕಲ್ನ್ನು ಅತಿವೇಗವಾಗಿ ಮತ್ತು ಅಲಕ್ಷನತದಿಂದ ಓಡಿಸಿ ಮೋಟರ್ ಸೈಕಲ್ ಮೇಲೆ ನಿಯಂತ್ರಣ ಸಾಧಿಸದೇ ಸ್ಕಿಡ್ ಆಗಿ ಬಿದ್ದು ಅಪಘಾತವಾಗಿದ್ದು ಸದರಿ ಅಪಘಾತದಲ್ಲಿ ಆರೋಪಿಗೆ ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿತ್ತು ಹಾಗೂ ಒಳಪೆಟ್ಟಾಗಿದ್ದು ಇರುತ್ತದೆ.  
5) ಕುಕನೂರ ಪೊಲೀಸ್ ಠಾಣೆ ಗುನ್ನೆ ನಂ. 108/2014 ಕಲಂ. 498(ಎ), 306 ಸಹಿತ 34 ಐ.ಪಿ.ಸಿ:.

ದಿನಾಂಕ: 01/09/2014 ರಂದು 01-20 ಎಎಂಕ್ಕೆ ಪಿರ್ಯಾದಿದಾರನಾದ ಮಲ್ಲಪ್ಪ ತಂದೆ ದ್ಯಾಮಪ್ಪ ಬಾರಕೇರ ವಯ: 55 ವರ್ಷ, ಜಾತಿ:ಅಂಬಿಗೇರ ಉ: ಒಕ್ಕಲುತನ ಸಾ: ನಾಗರಾಳ ತಾ: ರೋಣ  ಠಾಣೆಗೆ ಹಾಜರಾಗಿ ಒಂದು ಲಿಖತ ದೂರನ್ನು ಹಾಜರಪಡಿಸಿದ್ದು, ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರನು ತನ್ನ ಮೃತ ಮಗಳಾದ  ಲಕ್ಕವ್ವ @ ಲಕ್ಷ್ಮವ್ವ ಈಕೆಯನ್ನು ಬಳಗೇರಿ ಗ್ರಾಮದ ಶಿವಪ್ಪ ತುಮ್ಮರಗುದ್ದಿ ಇವನಿಗೆ ಕೊಟ್ಟು ಮದುವೆ ಮಾಡಿದ್ದು, ಅವರ ಮದುವೆಯಾಗಿ 15 ವರ್ಷಗಳ ಮೇಲಾಗಿದ್ದು, ಅವರಿಗೆ 13ವರ್ಷದ ಕಾವೇರಿ ಎಂಬ ಮಗಳಿದ್ದು, ಅವಳು ಈ ವರ್ಷ 7ನೇ ತರಗತಿಯಲ್ಲಿ ಓದುತ್ತಿದ್ದಾಳೆ. ತನ್ನ ಮಗಳು ಮದುವೆಯಾದ ನಂತರ ಈಗ್ಗೆ 5 ವರ್ಷಗಳಿಂದ ಮೃತಳ ಗಂಡನಾದ ಆರೋಪಿತ ಶಿವಪ್ಪ ಹಾಗೂ ಅತ್ತೆಯಾದ ಲಲಿತವ್ವ ಇವರು ವಿನಾಕಾರಣ, ನೀನು ಸರಿಯಾಗಿ ಕೆಲಸ ಮಾಡುವುದಿಲ್ಲಾ.  ಹೇಳಿದ್ದನ್ನು ಕೇಳುವುದಿಲ್ಲಾ ಹಾಗೂ ನಿನಗೆ ಗಂಡು ಸಂತಾನವಿಲ್ಲಾ ಬಂಜೆ ಇದ್ದೀ ಅಂತಾ ಮಾನಸಿಕವಾಗಿ ಹಾಗೂ ದೈಹಿಕವಾಗಿ ಕಿರುಕುಳ ನೀಡಿ, ಹೊಡಿ-ಬಡಿ ಮಾಡಿದ್ದು, ಆ ಸಮಯದಲ್ಲಿ ಬಳಗೇರಿ ಗ್ರಾಮದ ಹಿರಿಯರು ಮತ್ತು ನಾಗರಾಳ ಗ್ರಾಮದ ಹಿರಿಯರು ಬುದ್ಧಿ ಹೇಳಿ ಸರಿಪಡಿಸಿದ್ದರೂ ಸಹ ಆರೋಪಿತರು ತನ್ನ ಮಗಳಿಗೆ ಹಿಂಸೆ ಮತ್ತು ಕಿರುಕುಳ ಕೊಡುವುದನ್ನು ಬಿಡದೇ ಮುಂದುವರೆಸಿಕೊಂಡು ಹೋಗಿದ್ದು ಅಲ್ಲದೇ,ಮೃತಳಿಗೆ ಹೊಡಿ-ಬಡಿ ಮಾಡಿ, ನೀನೇ ಎಲ್ಲಿಯಾದರೂ ಹೋಗಿ ಸಾಯಿ ಅಂತಾ ಅಂದಿದ್ದಕ್ಕೆ ಅವರ ಕಿರಿಕಿರಿಗೆ ತನ್ನ ಮಗಳು ಮೂರು ವರ್ಷ ತವರು ಮನೆಯಲ್ಲಿಯೇ ಬಂದು ಇದ್ದಳು.  ಆವಾಗಲೂ ಸಹ ಬಳಗೇರಿಯ ಮತ್ತು ತಮ್ಮೂರ ಹಿರಿಯರು ಬುದ್ಧಿವಾದ ಹೇಳಿ ಕರೆದುಕೊಂಡು ಹೋಗಿದ್ದರು. ನಂತರ, ಈಗ್ಗೆ ನಾಲ್ಕು ತಿಂಗಳ ಹಿಂದೆ ಆರೋಪಿತರು ಮೃತ ಮಗಳಿಗೆ ಬಳಗೇರಿ ಗ್ರಾಮದಲ್ಲಿ ಕೈಕಾಲು ಕಟ್ಟಿ ಹೊಡಿ-ಬಡಿ ಮಾಡಿದ್ದು, ಆ ಸಮಯದಲ್ಲಿ ತನ್ನ ಮಗಳು ಗದಗದಲ್ಲಿ ತೋರಿಸಿಕೊಂಡು ತವರು ಮನೆಗೆ ಬಂದಿದ್ದು, ಆ ಸಮಯದಲ್ಲಿ ಸಹ ಹಿರಿಯರು ಆರೋಪಿತರಿಗೆ ಬುದ್ಧಿವಾದ ಹೇಳಿ ತನ್ನ ಮಗಳಿಗೆ ಗಂಡನ ಮನೆಗೆ ಕಳುಹಿಸಿಕೊಟ್ಟಿದ್ದು ಇರುತ್ತದೆ. ಹೀಗಿರುವಾಗ ದಿನಾಂಕ:31-08-2014 ರಂದು ಸಂಜೆ 5-30 ಗಂಟೆಗೆ ಆರೋಪಿತರು ಮೃತ ಪಿರ್ಯಾದಿ ಮಗಳಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದು, ಅಲ್ಲದೇ, ಸಾಯಲು ಪ್ರೇರಣೆ ಮಾಡಿದ್ದರಿಂದ ಮೃತಳು ತನ್ನ ಗಂಡನ ಮನೆಯಲ್ಲಿ ಆರೋಪಿತರ ಕಿರಿಕಿರಿಗೆ ಯಾವುದೋ ವಿಷ ಸೇವನೆ ಮಾಡಿದ್ದು,  ಸದರಿಯವಳಿಗೆ ಚಿಕಿತ್ಸೆಗಾಗಿ ಕುಕನೂರ ಸರ್ಕಾರೀ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 8-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.  ಕಾರಣ, ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ವಗೈರೆ ಲಿಖಿತ ಪಿರ್ಯಾದಿ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

No comments: