Police Bhavan Kalaburagi

Police Bhavan Kalaburagi

Monday, September 8, 2014

Raichur District Special Press Note

: ಪತ್ರಿಕಾ ಪ್ರಕಟಣೆ :
¢£ÁAPÀ: 05-09-2014 gÀAzÀÄ ²æêÀÄw gÉÃSÁ (ºÉ¸ÀgÀÄ §zÀ¯Á¬Ä¸À¯ÁVzÉ) ¸ÁB DgÀ.ºÉZï.PÁåA¥À £ÀA. 4 FPÉಯು ತನ್ನ ಹೇಳಿಕೆಯಲ್ಲಿ  
¢£ÁAPÀ 05-09-2014 ರಂದು ಫಿರ್ಯಾದಿದಾರಳು ಈರಣ್ಣಕ್ಯಾಂಪಿನಿಂದ ಸಿಂಧನೂರಿಗೆ ಬರುವ ಸಲುವಾಗಿ ಬರ್ಮಾಕ್ಯಾಂಪಿನ ಬಸ್ ಸ್ಟ್ಯಾಂಡ ಹತ್ತಿರ ನಿಂತುಕೊಂಡಾಗ, 1-30 ಪಿ.ಎಂ. ಸುಮಾರಿಗೆ ಒಂದು ಅಟೋ ಬಂದಿದ್ದುಅದರಲ್ಲಿ  ಕುಳಿತು ಹೊರಟಾಗ ಅಟೋ ಚಾಲಕನು ಅರಗಿನಮರಕ್ಯಾಂಪ ವರೆಗೆ ಅಟೋದಲ್ಲಿ ಕರೆದುಕೊಂಡು ಹೋಗಿ  ಅರಿಗನಮರಕ್ಯಾಂಪಿನಲ್ಲಿ ಇನ್ನಿಬ್ಬರು ಅಪರಿಚಿತ ವ್ಯಕ್ತಿಗಳನ್ನು ಕರೆದುಕೊಂಡು ಅವಳನ್ನು ಅಪಹರಿಸಿಕೊಂಡು ಪೋತ್ನಾಳ ಗ್ರಾಮದಿಂದ ಮುಂದೆ ಇರುವ ರಾಯಚೂರು ರಸ್ತೆಯಲ್ಲಿರುವ ಒಂದು ಬೀಳು ಹೊಲದಲ್ಲಿ 3 ಜನರು ಅವಳನ್ನು ಚಾಕುವಿನಿಂದ ಹೆದರಿಸಿ ಕೈಯಿಂದ ಹೊಡೆದು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸಗಿರುತ್ತಾರೆ ಅಂತಾ ವಗೈರೆ ಇದ್ದುದರ ಮೇರೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ: 210/2014 ಕಲಂ.363, 506, 323, 376 ರೆ.ವಿ. 34 .ಪಿ.ಸಿ ಅಡಿಯಲ್ಲಿ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆರವರು ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು
      ಆರೋಪಿತರ ಮತ್ತು ಅಪರಾಧಕ್ಕೆ ಉಪಯೋಗಿಸಿದ  ಆಟೋ ರಿಕ್ಷಾ ಪತ್ತೆ ಕುರಿತಂತೆ ನನ್ನ ಮತ್ತು ಶ್ರೀ ಎಂವಿ ಸೂರ್ಯವಂಶಿ ಡಿಎಸ್ ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ರವರ ನೇತೃತ್ವದಲ್ಲಿ ಶ್ರೀ ಎಸ್ ಎಂ ಪಾಟೀಲ್ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರನ್ನು ಒಳಗೊಂಡ  ಒಂದು ವಿಶೇಷ ತಂಡವನ್ನು ರಚಿಸಿ ಅಪರಾಧ ಜರುಗಿದ ಕೇವಲ 48 ಗಂಟೆಗಳ ಒಳಗೆ ಆರೋಪಿತರನ್ನು  ಮತ್ತು ಅಪಹರಣಕ್ಕೆ ಉಪಯೋಗಿಸಿದ ಆಟೋ ರಿಕ್ಷಾ ನಂ: ಕೆಎ-36/-0988 ಮತ್ತು ಫಿರ್ಯಾದಿದಾರರಿಗೆ  ಹೆದರಿಸಲು ಉಪಯೋಗಿಸಿದ ಚಾಕು ಇವುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.

ಸಾಮೂಹಿಕ ಅತ್ಯಾಚಾರದಂತಹ ಮತ್ತು ಆರೋಪವೆಸಗಿದವರು ಯಾರು ಎಂದು ಗೊತ್ತಿರದ ಗಂಭೀರ ಪ್ರಕರಣದಲ್ಲಿ  ಆರೋಪಿತರಾದ  1) ತಿಲ್ಲೈನಾದನ್ ತಂದೆ ನಟರಾಜನ್ 26 ವರ್ಷ, ಜಾಃ ಶೆಟ್ಟರ, ಆಟೋ ಚಾಲಕ, ಸಾಃ ಆರ.ಹೆಚ್.ಕ್ಯಾಂಪ ನಂ. 1 ತಾ: ಸಿಂಧನೂರು   2) ಮನೋಗರನ್ ತಂದೆ ನಟೇಶನ್ 26ವರ್ಷ ಜಾಃ ಪಲ್ಲನ್, ಅಟೋಚಾಲಕ & ಕೂಲಿಕೆಲಸ ಸಾಃ ಆರ.ಹೆಚ್.ಕ್ಯಾಂಪ ನಂ. 1 ತಾ: ಸಿಂಧನೂರು 3) ಕದ್ರಿವೇಲು ತಂದೆ ಮುನಿಯಾಂಡಿ 32ವರ್ಷ, ಜಾಃ ಪಲ್ಲನ್, ಕೂಲಿಕೆಲಸ ಸಾಃ ಆರ.ಹೆಚ್.ಕ್ಯಾಂಪ ನಂ.1 ತಾ: ಸಿಂಧನೂರು ಇವರನ್ನು ಪತ್ತೆ ಹಚ್ಚಿದ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಮತ್ತು  ಶ್ರೀ ಎಸ್ ಎಂ ಪಾಟೀಲ್ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದ್ದು, ಅವರಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ.  

No comments: