Police Bhavan Kalaburagi

Police Bhavan Kalaburagi

Wednesday, January 7, 2015

BELLARY DISTRICT PRESS NOTE ON 06/01/2015

                                                                                                                 ಜಿಲ್ಲಾ ಪೊಲೀಸ್ ಕಾರ್ಯಲಯ
                                                                                                             ಬಳ್ಳಾರಿ, ದಿನಾಂಕ: 06-01-2015
ಪತ್ರಿಕಾ ಪ್ರಕಟಣೆ
1) ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆ ಸರಹದ್ದಿನ ಉಕ್ಕಡಕೇರಿಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಕೊಡಲಿಯಿಂದ ಕಡಿದು ಕೊಲೆ.
     
         ದಿನಾಂಕ: 05-01-2015 ರಂದು ರಾತ್ರಿ 7-15 ಗಂಟೆಗೆ ಫಿರ್ಯಾದಿದಾರರಾದ ಶ್ರೀ. ಸಣ್ಣಕ್ಕಿ ಚಿತ್ತವಾಡಿಗೆಪ್ಪ ತೆಂದೆ ಲೇಟ್ ಸಣ್ಣಕ್ಕಿ ಕಾಟಪ್ಪ, 58 ವರ್ಷ, ವಾಲ್ಮೀಕಿ ಜನಾಂಗ, ವಾ: ಉಕ್ಕಡಕೇರಿ, 34 ನೇ ವಾರ್ಡ ಹೊಸಪೇಟೆ ರವರು ಠಾಣೆಯಲ್ಲಿ ಹಾಜರಾಗಿ ತಮ್ಮ ಸಂಬಂಧಿಕನಾದ ಸಣ್ಣಕ್ಕಿ ಭೀಮಪ್ಪ, 42 ವರ್ಷ, ಉಕ್ಕಡಕೇರಿ, ಗರಡಿ ಮನೆ ಹತ್ತಿರ, ಹೊಸಪೇಟೆ ಈತನನ್ನು ಜಂಬುನಾಥ ರಸ್ತೆಯ ತಾಯಮ್ಮ ಗುಡಿ ಮುಂದಿನ ಮೆಟ್ಟಲುಗಳ ಮೇಲೆ ಸಂಜೆ ಸುಮಾರು 6-15 ಗಂಟೆ ಸಮಯದಲ್ಲಿ ಕುಳಿತಿದ್ದಾಗ ಹುಚ್ಚ ಕಾಳಿಂಗ, ವಿಳಾಸ ಗೊತ್ತಿಲ್ಲ ಈತನು ಯಾವುದೋ ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಬೇಕೆಂಬ ಉದ್ದೇಶದಿಂದ ಕೊಡಲಿಯಿಂದ ತಲೆಯ ಎಡಭಾಗಕ್ಕೆ ಎಡಕಿವಿಯ ಹತ್ತಿರ, ಎಡ ಗಲ್ಲದ ಹತ್ತಿರ ಬಲವಾಗಿ ಕಡಿಚು ಭಾರಿ ರಕ್ತಗಾಯ ಮಾಡಿ ಕೊಲೆ ಮಾಡಿ ಓಡಿ ಹೋಗಿರುತ್ತಾನೆ. ಕಾರಣ ಸಣ್ಣಕ್ಕಿ ಭೀಮಪ್ಪ ಈತನನ್ನು ಕೊಲೆ ಮಾಡಿದ ಹುಚ್ಚ ಕಾಳಿಂಗನ ವಿರುದ್ಧ ಕ್ರಮ ಜರುಗಿಸಲು ಕೊಟ್ಟ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2) ಸಂಡೂರು ಪಟ್ಟಣದಿಂದ 22 ವರ್ಷದ ಮಹಿಳೆ ಮತ್ತು 09 ತಿಂಗಳ ಮಗು ಕಾಣೆಯಾದ ಬಗ್ಗೆ.
       ಫಿರ್ಯಾದಿದಾರರಾದ ಶ್ರೀ. ಎಂ.ಮೆಹಬೂಬ್ ಬಾಷ @ ಬಾಷ ತಂದೆ ಲೇಟ್ ಬುಡೇನ್ ಸಾಬ್ ವಯಸ್ಸು 41 ವರ್ಷ ಮುಸ್ಲಿಂ ಜಾತಿ, ಲಾರಿ ಮಾಲೀಕ ವಿಶಾಲ್ ಟಾಕೀಸ್ ಎದುರುಗಡೆ, ಹಂಚನಾಳ್, 13 ನೇ ವಾರ್ಡ, ಸಂಡೂರು (ತಾ) ಇವರು ದೂರು ಕೊಟ್ಟಿದ್ದೇನೆಂದರೆ ದಿನಾಂಕ 4/1/2015 ರಂದು ಸಂಜೆ 4-30 ಗಂಟೆಗೆ ಯಶವಂತನಗರದಿಂದ ತನ್ನ ಗಂಡನ ಮನೆಯಿಂದ [1] ಶ್ರೀಮತಿ. ಎಂ.ರೇಷ್ಮ ಗಂಡ ಶಫಿಯುಲ್ಲಾ ವಯಸ್ಸು 22 ವರ್ಷ, ಮನೆ ಕೆಲಸ, ಮುಸ್ಲಿಂ ಜಾತಿ, ವಾಸಃ-ಯಶವಂತನಗರ ಸಂಡೂರು (ತಾ) ಹಾಗು  [2] ಪರಾನ್ ತಂದೆ ಶಫಿಯುಲ್ಲಾ, ವಯಸ್ಸು 09 ತಿಂಗಳು,  ಮುಸ್ಲಿಂ, ವಾಸಃ- ಯಶವಂತನಗರ ಸಂಡೂರು (ತಾ) ಇವರನ್ನು ಹುಡುಕಿ ಪತ್ತೆ ಹಚ್ಚಬೇಕೆಂದು ರೇಷ್ಮ ಈಕೆಯು ತನ್ನ 9 ತಿಂಗಳ ಗಂಡು ಮಗು ಪರಾನ್‍ನೊಂದಿಗೆ ಎಲ್ಲೋ ಹೋಗಿದ್ದಾಳೆಂದು,  ಕಾಣೆಯಾದ ರೇಷ್ಮಳ ಚಹರೆ ಗುರುತುಗಳು [1] ಸಾಧಾರಣ ದಪ್ಪ ಮೈಕಟ್ಟು .[2] ಬಿಳಿ ಮೈಬಣ್ಣ [3] ದುಂಡು ಮುಖ. [4] ಎತ್ತರ 5.4.[5] ಕಪ್ಪು ಬುರುಕಿ ಧರಿಸಿರುತ್ತಾಳೆ.[6] ಹಿಂದಿ, ಕನ್ನಡ ಬಾಷೆ ಮಾತಾನಾಡುತ್ತಾಳೆ. ಕಾಣೆಯಾದ ಗಂಡು ಮಗು ಪರಾನ್ ಚಹರೆ ಗುರುತುಗಳು [1] ಸಾದಾರಣ ಮೈಕಟ್ಟು. [2] ಎಣ್ಣೆ ಗೆಂಪು ಬಣ್ಣ. [3] ದುಂಡು ಮುಖ, ಇರುತ್ತದೆಂದು ಕೊಟ್ಟ ದೂರಿನ ಮೇರೆಗೆ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
                                                                                                          ಪೊಲೀಸ್ ಸೂಪರಿಂಟೆಂಡೆಂಟ್,                                                                                                                                         ಬಳ್ಳಾರಿ.                                                                                                                
ಇವರಿಗೆ,
ಎಲ್ಲಾ ಪತ್ರಿಕಾ ವರದಿಗಾರರಿಗೆ
ಹೆಚ್ಚಿನ ಮಾಹಿತಿಗಾಗಿ ಶ್ರೀ. ಮಹಮ್ಮದ್ ಗಯಾಸ್, ಎ.ಎಸ್.ಐ ಮೊಬೈಲ್ ನಂ. 9845484100 ಹಾಗು             ಜಿ. ಸುಬ್ರಮಣ್ಯಂ, ಹೆಚ್.ಸಿ-175, ಮೋಬೈಲ್ ಸಂ: 9448202005 ರವರನ್ನು ಸಂಪರ್ಕಿಸಲು ವಿನಂತಿ.

                      

No comments: