Police Bhavan Kalaburagi

Police Bhavan Kalaburagi

Monday, June 22, 2015

BIDAR DISTRICT DAILY CRIME UPDATE 22-06-2015


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-06-2015

zsÀ£ÀÆßgÀ ¥Éưøï oÁuÉ UÀÄ£Éß £ÀA. 168/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 21-06-2015 ಶಿವರಾಜ ತಂದೆ ಗಣಪತಿ ಕುಂಬಾರ ಇವನು ತಮ್ಮ ಹೊಲದಲ್ಲಿ ಬೇಳೆದಿರುವ ಅಲ್ಲಾ (ಹಸಿ ಸುಂಟಿ) ನೇದನ್ನು ಮಾರಾಟಕ್ಕಾಗಿ ಹುಮನಾಬಾದಕ್ಕೆ ತೆಗೆದುಕೊಂಡು ಹೊಗಿದ್ದು, ಹುಮನಾಬಾದ ಮಾರ್ಕೆಟದಲ್ಲಿ ಅಲ್ಲಾ (ಹಸಿ ಸುಂಟಿ) ಮಾರಾಟ ಮಾಡಿ ರಾತ್ರಿ ತನ್ನ ಮೋಟಾರ ಸೈಕಲ ನಂ. ಎಪಿ-21/ಕೆ-8193 ನೇದರ ಮೇಲೆ ಕುಳಿತು ಹುಮನಾಬಾದಿಂದ ಮರಳಿ ತಮ್ಮ ಗ್ರಾಮ ಸಿಕೇಂದ್ರಾಪೂರಕ್ಕೆ ಬರುತ್ತಿರುವಾಗ ರಾತ್ರಿ ಬೀದರ ಹುಮನಾಬಾದ ರೋಡ ಹಾಲಹಳ್ಳಿ ಕ್ರಾಸ ಹತ್ತಿರ ಯಾವುದೋ ಒಂದು ವಾಹನ ಚಾಲಕನಾದ ಆರೋಪಿಯು ತನ್ನ ವಾಹನವನ್ನು ಅತಿ ವೇಗದಿಂದ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ಶಿವರಾಜ ಇತನ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿ ತನ್ನ ವಾಹನವನ್ನು ನಿಲ್ಲಿಸಲಾರದೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಅಪಘಾತದಿಂದಾಗಿ ಮೋಟಾರ ಸೈಕಲ್ ಸವಾರ ಶಿವರಾಜ ಇತನಿಗೆ ತಲೆಯ ಹಿಂದುಗಡೆ ಭಾರಿ ರಕ್ತಗಾಯ, ಏಡಗೈ ಮೊಳಕೈ ಕೆಳಗೆ ಮತ್ತು ಬಲಗಡೆ ಹೊಟ್ಟೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಇರುತ್ತದೆ ಅಂತ ದಿನಾಂಕ 22-06-2015 ರಂದು ಫಿರ್ಯಾದಿ ಗೋರಖ ತಂದೆ ಗಣಪತಿ ಕುಂಬಾರ ಸಾ: ಸಿಕೇಂದ್ರಾಪೂರ ತಾ: ಬೀದರ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: