Police Bhavan Kalaburagi

Police Bhavan Kalaburagi

Thursday, June 11, 2015

Kalaburagi District Reported Crimes

ಮಟಕಾ ಜೂಜಾಜಟದಲ್ಲಿ ನಿರತ ವ್ಯಕ್ತಿಯ ಬಂಧನ :
ಸ್ಟೇಷನ ಬಜಾರ ಠಾಣೆ : ದಿನಾಂಕ 10-06-2015 ರಂದು ಸ್ಟೇಷನ ಏರಿಯಾದ ಒನವೇ ರೋಡನಲ್ಲಿ ವಿಠಲ ಮಂದಿರ ಹತ್ತೀರ ರಸ್ತೆಯ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಬ್ಬರೂ ಮಟಕಾ ಜೂಜಾಟ ಬರೆದುಕೊಳ್ಳತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಎಸ್.ಎಸ್ ದೊಡ್ಡಮನಿ ಪಿ.ಎಸ್.ಐ (ಕಾಸು) ಸ್ಟೇಷನ ಬಜಾರ ಪೊಲೀಸ್ ಠಾಣೆ ಕಲಬುರಗಿ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ವಿಠಲ ಮಂದಿರ ಹತ್ತೀರ ಹೋಗಿ ಮರೆಯಲ್ಲಿ ನಿಂತು ನೋಡಲು ಅಲ್ಲಿ ಇಬ್ಬರೂ ಹೋಗಿ ಬರುವ ಸಾರ್ವಜನಿಕರಿಂದ 1/- ರೂ ಗೆ 80/-ರೂ ಕೊಡುವುದಾಗಿ ಹೇಳಿ ಅಂಕಿ ಸಂಖ್ಯೆ ಮಟಕಾ ಚೀಟಿ ಬರೆದುಕೊಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು ಒಮ್ಮೆಲೆ ಸುತ್ತುವರೆದು ಹಿಡಿಯುತ್ತಿದ್ದಾಗ ಅವರಲ್ಲಿ ಒಬ್ಬನು ಓಡಿ ಹೋಗಿದ್ದು ಇನ್ನೊಬ್ಬನ ವಿಚಾರಿಸಲು ಆತನು ತನ್ನ ಹೆಸರು ಈಶ್ವರ ತಂದೆ ಲಿಂಗಪ್ಪಾ ಪೂಜಾರಿ ಸಾಃ ಮನೆ ನಂ.1-534 ವಿಠಲ ಮಂದಿರ ಹತ್ತೀರ ಸ್ಟೇಷನ ಏರಿಯಾ ಕಲಬುರಗಿ ಅಂತಾ ಹೇಳಿದನು. ಸದರಿಯವನ ಹತ್ತಿರ ನಗದು ಹಣ 4520/- ರೂ ಮತ್ತು ಒಂದು ಬಾಲ ಪೆನ್ನು ಹಾಗು ಒಂದು ಮಟಕಾ ಬರೆದ ಚೀಟಿ ಜಪ್ತಿ ಮಾಡಿಕೊಂಡು. ನಂತರ ಓಡಿ ಹೋದವನ ಹೆಸರು ಈಶ್ವರ ಟೇಲರ ಅನ್ನಪೂರ್ಣ ಕ್ರಾಸ ಹತ್ತಿರ ಕಲಬುರಗಿ ಅಂತಾ ತಿಳಿಸಿದ್ದು ಸದರಿಯವನೊಂದಿಗೆ ಸ್ಟೇಷನ  ಬಜಾರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹಲ್ಲೆ ಪ್ರಕರಣ :

ರಾಘವೇಂದ್ರ ನಗರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ದಿ|| ಗುರುಲಿಂಗಯ್ಯ ಗುಡಿ ಸಾಃ ಲಾಲಗೆರಿ ಬ್ರಹ್ಮಪೂರ ಕಲಬುರಗಿ ಇವರು ಕಲಬುರಗಿ ನಗರದ ಜಿಲ್ಲಾಧಿಕಾರಿ ಕಾರ್ಯಲಯದಲ್ಲಿ ಎಫ.ಡಿ.ಎ ಅಂತಾ ಕೆಲಸ ಮಾಡುತ್ತಿದ್ದು ನನಗೆ ಕುಮಾರಿ ಭವಾನಿ ಎಂಬ 14 ವರ್ಷದ ಮಗಳು ಇರುತ್ತಾಳೆ ನನ್ನ ಗಂಡ ಗುರುಲಿಂಗಯ್ಯ ರವರು ಯಾವುದೊ ಕಾಯಿಲೆಯಿಂದ 2015ನೇ ಸಾಲಿನಲ್ಲಿ ಮೃತಪಟ್ಟಿರುತ್ತಾನೆ ನಾನು ಬಾಡಿಗೆಯಿಂದ ಇದ್ದ ಮನೆಯಲ್ಲಿ ರಮೇಶ ಚಿಚಕೊಡಿ ಇವರು ಕೂಡ ಅದೇ ಮನೆಯಲ್ಲಿ ಬಾಡಿಗೆಯಿಂದ ಇದ್ದರು ಆಗ ರಮೇಶ ಇತನು ಪರಿಚಯವಾಗಿದ್ದು ಇರುತ್ತದೆ ಅಲ್ಲಿಂದ ನಾನು ಬೇರೆ ಕಡೆ ಮನೆ ಬಾಡಿಗೆ ಪಡೆದುಕೊಂಡು ನನ್ನ ಮಗಳೊಂದಿಗೆ ವಾಸವಿದ್ದು ರಮೇಶ ಇವನು ದಿನಾಲು ನಮ್ಮ ಮನೆಗೆ ಬಂದು ಹೊಗುತ್ತಿದ್ದನು ಅವನು ನನ್ನ ಜೊತೆಯಲ್ಲಿ ಇದ್ದು ನನಗೆ ಪ್ರತಿಯಿಂದ ನೋಡಿಕೊಳ್ಳುತ್ತಿದ್ದನು ನಾನು ಯಾವಗಲು ಬೇರೆ ಯಾರನ್ನು ಮದುವೆ ಆಗುವದಿಲ್ಲ ನಿನ್ನ ಜೊತೆಯಲ್ಲಿಯೇ ಇರುತ್ತೆನೆ ಅಂತಾ ಹೇಳಿ ಇಲ್ಲಿಯವರೆಗೆ ನನ್ನ ಜೊತೆಯಲ್ಲಿ ಇದ್ದನು ನಾನು ಕೂಡ ಅವನಿಗೆ ನಂಬಿ ಅವನು ಜೊತೆಯಲ್ಲಿ ಸ್ನೇಹ ದಿಂದ ವರ್ತಿಸುತ್ತಿದ್ದೆ ದಿಃ 31/05/15 ರಂದು ರಮೇಶ ಇತನು ನಮ್ಮ ಮನೆಗೆ ಬಂದು ನಾನು ಮತ್ತು ನನ್ನ ತಾಯಿ ಒತ್ತಾಯ ದಿಂದ ದಿಃ 12/06/15 ರಂದು ಮದುವೆ ಮಾಡಿಕೊಳ್ಳುತ್ತಿದ್ದೆನೆ ಅಂತಾ ತಿಳಿಸಿದಾಗ ನಾನು ಅವನಿಗೆ ಹೇಳಿದ್ದೆನೆಂದರೆ ನೀನು ಯಾರನ್ನು ಮದುವೆ ಮಾಡಿಕೊಳ್ಳುವದಿಲ್ಲವೆಂದು ನನ್ನ ಜೊತೆಯಲ್ಲಿ ಪ್ರಿತಿಸಿಕೊಂಡು ಇರುತ್ತಿದ್ದಿ ಈಗ ಬೇರೆ ಕಡೆ ಏಕೆ ಮದುವೆ ಮಾಡಿಕೊಳ್ಳುತ್ತಿರಿವೆ ಎಂದು ನಾನು ಹೇಳಿದ್ದು ದಿಃ 09/06/15 ರಂದು ಮಧ್ಯಾಹ್ನ 01-00 ಗಂಟೆ ಸುಮಾರಿಗೆ ರಮೇಶ ನಮ್ಮ ಮನೆಗೆ ಬಂದಿದ್ದು ಅವನ ಮದುವೆ ಸಂಬಂಧ ನಾವಿಬ್ಬರು ತಕರಾರು ಮಾಡುತ್ತಿದ್ದು ಆಗ ರಮೇಶ ತಾಯಿ ಲಲೀತಾಬಾಯಿ ಇತನ ಅಣ್ಣ ಯೋಗೇಶ ಬಂದು ನನಗೆ ಯಳೆದಾಡಿ ಅವಾಚ್ಯವಾಗಿ ಬೈದು ಬೆನ್ನಿನ ಮೇಲೆ ಹೊಟ್ಟೆಯ ಮೇಲೆ ಹೊಡೆಬಡೆ ಮಾಡಿರುತ್ತಾರೆ ರಮೇಶ ಕೂಡ ನನಗೆ ಕಾಲಿನಿಂದ ಹೊಟ್ಟೆಗೆ ವದ್ದು ನನ್ನ ಎಡಗೈ ತೊರಬೆರಳನ್ನು ಒತ್ತಿ ಹಿಡಿದು ತಿರುವಿಸಿ ಗುಪ್ತಗಾಯ ಮಾಡಿರುತ್ತಾನೆ ರಮೇಶ ಇತನು ನನ್ನ ಜೊತೆ ಪ್ರೀತಿಸಿಕೊಂಡು ಈಗ ನನ್ನ ಮರ್ಯದೆ ಹಾಳು ಮಾಡುತ್ತಿದ್ದಾನೆ ಅಲ್ಲದೆ ಇಂದು ದಿಃ 10/06/15 ರಂದು ಬೆಳಗ್ಗೆ 07-00 ಗಂಟೆ ಸುಮಾರಿಗೆ ಒಬ್ಬ ಸಣ್ಣ ಹುಡುಗ ನಮ್ಮ ಮನೆಗೆ ಬಂದು ರಮೇಶ ಅಣ್ಣ ನಿಮಗೆ ಅವರ ಮನೆಗೆ ಕರೆದಿದ್ದಾನೆ ಎಂದು ಹೇಳಿ ಹೊದನು ಆಗ ನಾನು ಏನಾದರು ಕೆಲಸ ಇರಬಹುದು ಅಂತಾ 08-00 ಗಂಟೆಗೆ ಅವರ ಮನೆಗೆ ಹೋಗಿದ್ದು ಅಲ್ಲಿ ರಮೇಶ ಇವನ ತಾಯಿ ಲಲಿತಾಬಾಯಿ ಅವರ ಅಣ್ಣ ಯೇಗೇಶ ಇವರು ಒಮ್ಮಲೆ ಅವಾಚ್ಯ ಶಬ್ದಗಳಿಂದ ಬೈಯುತ್ತ ಲಲಿತಾಬಾಯಿ ಕೈಯಿಂದ ಕಾಲಿನಿಂದ ಒಂದು ಬೀದರ ಬಡಿಗೆಯಿಂದ ನನ್ನ ಬೆನ್ನಿನ ಮೇಲೆ ಎರಡು ಕಾಲಿನ ಮೇಲೆ ಎರಡು ಕೈ ಮೇಲೆ ಹೊಡೆದು ಗುಪ್ತಗಾಯ ಮಾಡಿರುತ್ತಾನೆ ಯೋಗೇಶ ಇವನು ಅವಾಚ್ಯ ಶಬ್ದಗಳಿಂದ ಬೈದು ನನ್ನ ಓಡನಿಯನ್ನು ಜಗ್ಗಡಿ ಅಲ್ಲಿದೆ ಕೂದಲು ಹಿಡಿದು ಯಳೆದಾಡಿರುತ್ತಾನೆ ಮತ್ತು ಲಲಿತಾಬಾಯಿ ಗುಪ್ತ ಜಾಗದೆ ಮೇಲೆ ಕಾಲಿನಿಂದ ವದ್ದಿರುತ್ತಾಳೆ ನನ್ನ ಕೊರಳಲ್ಲಿದ್ದ 20 ಗ್ರಾಂ ಬಂಗಾರದ ಚೈನ್ ಲಲಿತಾಯಿ ಇವಳು ತೆಗೆದುಕೊಂಡು ಅವಳ ಕೊರಳಲ್ಲಿ ಹಾಕಿಕೊಂಡಿರುತ್ತಾಳೆ ನನ್ನ ಬ್ಯಾಗನಲ್ಲಿ ಇದ್ದ ಫೋಟುಗಳು ಮತ್ತು ಇತರೆ ಕಾಗದ ಪತ್ರಗಳು ತೆಗೆದುಕೊಂಡಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: