Police Bhavan Kalaburagi

Police Bhavan Kalaburagi

Wednesday, June 22, 2016

BIDAR DISTRICT DAILY CRIME UPDATE 22-06-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-06-2016

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 69/2016, PÀ®A 323, 354, 504, 506 eÉÆvÉ 34 L¦¹ ªÀÄvÀÄÛ 3(1) (10) J¸ï.¹/J¸ï.n PÁAiÉÄÝ 1989 :-
ಹುಮನಾಬಾದ ತಾಲೂಕಿನ ಸಿತಾಳಗೇರಾ ಗ್ರಾಮದ ಸರ್ವೆ ನಂ. 94 ರಲ್ಲಿ 7 ಜನ ದಲಿತರಿಗೆ ಸರಕಾರಿ ಭೂಮಿ ಮಂಜೂರು ಮಾಡಿ ಭೂಮಿಗೆ ಸಂಬಂಧಪಟ್ಟ ಪಹಣೆ ಪತ್ರಿಕೆ, ಮೋಟೇಷನ ಈ ಎಲ್ಲಾ ದಾಖಲಾತಿಗಳನ್ನು ಹೊಂದಿ ದಿನಾಂಕ 17-06-2016 ರಂದು ನಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ಹೋದಾಗ ಆರೋಪಿತರಾದ 1) ಹುಮನಾಬಾದ ವಲಯ ಅರಣ್ಯ ಅಧೀಕಾರಿಯಾದ ರಾಜೇಂದ್ರ ಮತ್ತು 2) ಉಪ ವಲಯ ಅರಣ್ಯ ಅಧೀಕಾರಿಯಾದ ಗೋಪಿನಾಥ ಹಾಗೂ ಸಿಬ್ಬಂದಿಗಳು ಸೇರಿ ನಮ್ಮ ಮೇಲೆ ದೌರ್ಜನ್ಯ ಮಾಡಿ ಮತ್ತು ನಾವುಗಳಾದ ಹೆಣ್ಣು ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈದಿರುವದಲ್ಲದೆ, ದೈಹಿಕವಾಗಿ ಹಲ್ಲೆ ಮಾಡಿರುತ್ತಾರೆ, ಈ ಅಧೀಕಾರಿಗಳು  ಹೊಲೆಯ ಮಾದಿಗರಿಗೆ ಸೊಕ್ಕು ಹೆಚ್ಚಾಗಿದೆ ನಿಮ್ಮನ್ನು ಒಬ್ಬೊಬ್ಬರಿಗೆ  ಮುಗಿಸುತ್ತೇವೆ ಎಂದು ಜಾತಿ ನಿಂದನೆ ಮಾಡಿದ್ದಲ್ಲದೆ ಜೇವದ ಬೆದರಿಕೆ ಹಾಕಿರುತ್ತಾರೆಂದು  ದಿನಾಂಕ 21-06-2016 ರಂದು ಫಿರ್ಯಾದಿ ಮಹಾದೇವಿ ಗಂಡ ಶರಣಪ್ಪಾ ಸಾ: ಸಿತಾಳಗೇರಾ ರವರು ನೀಡಿದ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 70/2016, PÀ®A 353, 504, 506 eÉÆvÉ 149 L¦¹ ªÀÄvÀÄÛ PÀ®A 33 CgÀtå PÁAiÉÄÝ 1963 CrAiÀÄ°è :-
ದಿನಾಂಕ 20-06-2016 ರಂದು ಮುಂಜಾನೆ ಸಮಯದಲ್ಲಿ ಆರೋಪಿತರಾದ 1) ಅಂಕುಶ ಗೋಖ್ಲೆ ಜಿಲ್ಲಾ ಅಧ್ಯಕ್ಷರು ಬಹುಜನ ಸಮಾಜ ಪಾರ್ಟಿ ಬೀದರ, ಸಾ: ಹುಮನಾಬಾದ, 2) ಶರಣಪ್ಪಾ ತಂದೆ ಪೀರಪ್ಪಾ ನಿಟ್ಟೂರೆ, 3) ಚಂದ್ರಕಾಂತ ತಂದೆ ಪೀರಪ್ಪಾ ನಿಟ್ಟೂರೆ, 4) ರಘುನಾಥ ತಂದೆ ಶಂಕರ ನಿಟ್ಟೂರೆ, 5) ಶಿವಲಿಂಗ್ ತಂದೆ ಗುಂಡಪ್ಪಾ, 6) ಅರ್ಜುನ ತಂದೆ ಗುಂಡಪ್ಪಾ ಮುದನಾಳ, 7) ದಶರಥ ತಂದೆ ಗುಂಡಪ್ಪಾ ಮುದ್ದನಾಳ, 8) ರೇವಣಪ್ಪಾ ತಂದೆ ತುಕಾರಾಮ ಚಿಟ್ಟಾ, 9) ವಿಜಯಕುಮಾರ ತಂದೆ ಕೃಷ್ಣಾಪ್ಪಾ ಮಾಳಗೆ, 10) ದಯಾನಂದ ತಂದೆ ಶರಣಪ್ಪಾ ನಿಟ್ಟೂರೆ, 11) ತುಕಾರಾಮ ತಂದೆ ಹಣಮಂತ, 12) ಮಲ್ಲಿಕಾರ್ಜುನ ತಂದೆ ತುಕಾರಾಮ, 13) ಯಲ್ಲಪ್ಪಾ ತಂದೆ ವೆಂಕಟ, 14) ಭೀಮಶಾ ತಂದೆ ರಾಮಣ್ಣಾ, 15) ಪ್ರಕಾಶ ತಂದೆ ಭೀಮಣ್ಣಾ ಇವರೆಲ್ಲರೂ ಸಾ: ಸಿತಾಳಗೇರಾ  ಹಾಗೂ 16) ಭೀಮಶಾ ತಂದೆ ವಿಠಲ ಸಾ: ಮರಖಲ, 17] ಪ್ರಶಾಂತ ತಂದೆ ವಿಠಲ ಸಾ: ಮರಖಲ, 18) ಇಸ್ಮಾಯಿಲ್ ಸಾ: ಮಂಗಳಗಿ, 19) ಸಿದ್ದಪ್ಪಾ ತಂದೆ ನರಸಪ್ಪಾ ಸಾ: ಹಳ್ಳಿಖೇಡ (ಬಿ) ಎಲ್ಲರೂ ಸೇರಿಕೊಂಡು ಸಿತಾಳಗೇರಾ ಗ್ರಾಮದ ಅರಣ್ಯ ಸರ್ವೆ ನಂ. 94 ರ ಅರಣ್ಯ ನೇಡು ತೋಪಿನ ವಿಸ್ತೀರ್ಣವನ್ನು ಒತ್ತುವರಿ ಮಾಡಿ ಈ ಸ್ಥಳದಲ್ಲಿ ಬೆಳೆಸಲಾದ ಸುಮಾರು 25 ಸಾವಿರ ಸಸಿಗಳನ್ನು ನಾಶ ಮಾಡಿರುತ್ತಾರೆ. ಅಲ್ಲದೆ ಸಿತಾಳಗೇರಾ ಸರ್ವೆ ನಂ. 94 ರ ಭೂಮಿಯ ವಿಚಾರದಲ್ಲಿ ಈ ಮೇಲ್ಕಾಣಿಸಿದ ಕೆಲವೊಂದು ಆರೋಪಿತರು ಮಾನ್ಯ ಪ್ರಥಾನ ಸಿವಿಲ್ ನ್ಯಾಯಾಲಯ ಹುಮನಾಬಾದನಲ್ಲಿ ದಾವೆ ಹೂಡಿ ನ್ಯಾಯಾಲಯದಲ್ಲಿ ವಿಚಾರಣೆ ಚಾಲ್ತಿ ಇದ್ದರೂ ಸಹ ಸರಕಾರಿ ಕಾನೂನು ಹಾಗೂ ನ್ಯಾಯಾಲಯದ ದಾವೆಯ ವಿಚಾರಣೆ ಹಂತವನ್ನು ಸಹ ಉಲ್ಲಂಘಿಸಿರುತ್ತಾರೆ ಮತ್ತು ಸಿತಾಳಗೇರ ಗ್ರಾಮದ ಅರಣ್ಯ ಸರ್ವ ನಂ. 94 ರ ವಿಸ್ತೀರ್ಣದ ಸರಕರಿ ನೇಡು ತೋಪನು ಇಲಾಖೆಯ ಸಿಬ್ಬಂದಿಯವರು ರಕ್ಷಿಸಲು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಅವರ ಕೈಯಲ್ಲಿ ಕೋಯಿತಿ ಮತ್ತು ಕೊಡ್ಲೆಗಳನ್ನು ಹಿಡಿದ ಸಿಬ್ಬಂದಿಗಳಿಗೆ ಒಂದು ವೇಳೆ ಈ ಜಾಗಕ್ಕೆ ಬಂದರೆ ಕೊಲ್ಲೂವದಾಗಿ ಜೀವದ ಬೇದರಿಕೆ ಹಾಕಿದಲ್ಲದೆ ನಿಮ್ಮಗಳ ಮೆಲೆ ದಲಿತ ದೌರ್ಜುನ್ಯ ಕಾಯ್ದೆ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣದವನ್ನು ದಾಖಲಿಸಿ ಜೇಲಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಾ ಸಸಿಗಳನ್ನು ನಾಶ ಮಾಡಿರುತ್ತಾರೆಂದು ಫಿರ್ಯಾದಿ ಕೆ.ಗೋಪಿನಾಥ ಉಪ ವಲಯ ಅರಣ್ಯಾಧಿಕಾರಿ ಬೇನಚಿಂಚೋಳಿ ಶಾಖೆ ಹುಮನಾಬಾದ ವಲಯ ರವರು ನೀಡದ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: