Police Bhavan Kalaburagi

Police Bhavan Kalaburagi

Sunday, May 7, 2017

BIDAR DISTRICT DAILY CRIME UPDATE 07-05-2017

                                
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 07-05-2017

PÀªÀÄ®£ÀUÀgÀ ¥Éưøï oÁuÉ AiÀÄÄ.r.Dgï £ÀA. 02/2017, PÀ®A. 174 ¹.Dgï.¦.¹ :-
ಫಿರ್ಯಾದಿ ಯುವರಾಜ ತಂದೆ ಮಾಹದಪ್ಪಾ ಚಾಂಡೇಶ್ವರೆ ವಯ: 51 ವರ್ಷ, ಜಾತಿ: ಲಿಂಗಾಯತ, ಸಾ: ಡಿಗ್ಗಿ, ತಾ: ಔರಾದ(ಬಿ) ರವರ ಅಣ್ನ ಶಿವರಾಜ ತಂದೆ ಮಾದಪ್ಪಾ ಚಾಂಡೇಶ್ವರೆ ವಯ: 53 ವರ್ಷ ರವರಿ ತಮ್ಮ ಹೊಲದ ಮೇಲೆ ಹಾಗು ಗೆಳೆಯರ ಹತ್ತಿರ ಸಾಲ ತನ್ನ ನಾಲ್ಕು ಜನ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ, ಹೆಣ್ಣು ಮಕ್ಕಳ ಪೈಕಿ ಬಬಿತಾ ವಿವಳು ಎರಡು ಕಣ್ಣಿನಿಂದ ಕುರುಡಿ ಇದ್ದು ಅವಳಿಗೂ ಮದುವೆ ಮಾಡಿಕೊಟ್ಟಿರುತ್ತಾರೆ, ಅತ್ತಿಗೆ ವಚಲಾಬಾಯಿ ರವರು ಕ್ಯಾನ್ಸರ್ ಬೆನೆಯಿಂದ ಬಳಲುತ್ತಿದ್ದಾರೆ, ಅವರ ಚಿಕಿತ್ಸೆ ಕುರಿತು ಅಣ್ಣ ಪಿಕೆಪಿಎಸ್ ಬ್ಯಾಂಕ ಕಮಲನಗರ ಮತ್ತು ಅವರ ಗೆಳೆಯರ ಮತ್ತು ಬಂದು ಬಳಗದವರ ಹತ್ತಿರ ಬಹಳಷ್ಟು ಸಾಲ ತೆಗೆದು ಅತ್ತಿಗೆ ವಚಲಾಬಾಯಿರವರ ಚಿಕಿತ್ಸೆಗಾಗಿ ಮೇಲಿಂದ ಮೇಲೆ ಬೆಂಗಳೂರು ಕ್ಯಾನ್ಸರ್ ಆಸ್ಪತ್ರೆಗೆ ಕರೆದುಕೊಂಡು ಹೊಗಿ ಚಿಕಿತ್ಸೆ ಮಾಡಿಸಿದರೂ ಸಹ ಯಾವುದೆ ರೀತಿಯ ಫಲಕಾರಿಯಾಗಿರುವುದಿಲ್ಲಾ, ಇದೆ ಚಿಂತೆಯಲ್ಲಿ ಅಣ್ಣ ಯಾರಿಗೂ ಮಾತಾಡದೆ ತನ್ನಲ್ಲಿ ತಾನೆ ಚಿಂತೆ ಮಾಡುತ್ತಿದ್ದರು, ಹಿಗೀರಲು ದಿನಾಂಕ 06-05-2017 ರಂದು ರಾತ್ರಿ ಅಣ್ಣ ಊಟ ಮಾಡಿ ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿಯೇ ಮಲಗಿಕೊಂಡಿದ್ದು, ಮನೆಯಲ್ಲಿ ಎಲ್ಲರು ಮಲಗಿಕೊಂಡು ನಿದ್ದೆ ಮಾಡುವಾಗ ಮನೆಯ ಪಕ್ಕದಲ್ಲಿ ಕಟ್ಟಿದ ಒಂದು ಹೊಸ ಕೊಣೆಯ ಚಾವಣಿ ಇಲ್ಲದ ಕಟ್ಟಿಗೆ ದಂಟೆಗೆ ತಾನು ಉಟ್ಟಿದ ಲುಂಗಿ ಹರಿದು ಅಂದರಲ್ಲಿ ಕರೆಂಟ ವಾಯರ್ ಹಾಕಿ ಸುತ್ತಿ ರಾತ್ರಿ ವೇಳೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಫಿರ್ಯಾದಿಯವರ ಅಣ್ಣ ಹೊಲದ ಮೇಲೆ ಹಾಗು ಇತರೆ ಬಹಳಷ್ಟು ಸಾಲ ಆಗಿದ್ದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ, ಅವರ ಸಾವಿನಲ್ಲಿ ಯಾವುದೆ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: