Police Bhavan Kalaburagi

Police Bhavan Kalaburagi

Tuesday, May 9, 2017

BIDAR DISTRICT DAILY CRIME UPDATE 09-05-2017

                                                                   
ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 09-05-2017

 ಚಿಟಗುಪ್ಪಾ ಪೊಲೀಸ್ ಠಾಣೆ ಗುನ್ನೆ ನಂ. 75/17 ಕಲಂ 78(3) ಕೆ.ಪಿ. ಕಾಯ್ದೆ :-

ದಿನಾಂಕ 08/05/2017 ರಂದು ಸಾಯಂಕಾಲ 1600 ಗಂಟೆಗೆ   ವೀರಶೆಟ್ಟಿ ಎ.ಎಸ್.ಐ ರವರು ಠಾಣೆಯಲ್ಲಿದ್ದಾಗ ಒಂದು ಖಚಿತ ಭಾತ್ಮಿ ಬಂದಿದ್ದೆನೆಂದರೆ ಚಿಟಗುಪ್ಪಾ ಪಟ್ಟಣದ ಸರದಾರ ವೃತ್ತದ ಹತ್ತಿರ ಸಾರ್ವಜನಿಕರ ಸ್ಥಳದದಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಗೆ ಕರೆದು ಅವರಿಗೆ ಒಂದು ರೂಪಾಯಿ ನೀಡಿರಿ ಮಟಕದ ನಂಬರ ಹತ್ತಿದರೆ ಒಂದು ರೂಪಾಯಿಗೆ 80 ರೂಪಾಯಿ ನೀಡುತ್ತೇನೆ ಅಂತ ಹೇಳಿ ಸರ್ವಜನಿಕರಿಂದ ಹಣ ಪಡೆದು ವಂಚನೆ ಮಾಡಿ ಅವರಿಗೆ ಮಟಕಾ ಚಿಟಿ ಬರೆದುಕೋಡುತ್ತಿದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ ದಾಳಿ ಮಾಡಿ ಮಕಬೂಲ ತಂದೆ ಫತ್ರುಸಾಬ ಕೂಲಿ ವಯ 48 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕೂಲಿ ಕೆಲಸ ಸಾ|| ಫಕಿರ ತಕ್ಕಿಯಾ ಗಲ್ಲಿ ಇತನಿಗೆ ದಸ್ತಗಿರಿ ಮಾಡಿ ಅವನ ಹತ್ತಿರ ಒಂದು ಪೇನ, ಮೂರು ಮಟಕಾ ಚಿಟಗಳು ಮತ್ತು ನಗದು ಹಣ 1970/- ರೂ. ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಧನ್ನೂರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 09/17 ಕಲಂ 174 ಸಿಆರ್.ಪಿ.ಸಿ :-

ದಿನಾಂಕ:08/05/2017 ರಂದು 1645 ಗಂಟೆಗೆ ಬೀದರ ಸರಕಾರಿ ಆಸ್ಪತ್ರೆಯಿಂದ ಎಮ್.ಎಲ್.ಸಿ ಮಾಹಿತಿ ಬಂದ ಮೇರೆಗೆ   ಆಸ್ಪತ್ರೆಗೆ ಭೇಡಿ ನೀಡಿ  ಸಿಡಿಲು ಬಡಿದು ಮೃತ ಎಮ್.ಡಿ ಇರ್ಫಾನ ತಂದೆ ಎಮ್.ಡಿ ಮೈನೊದ್ದಿನ ವಯ:19 ವರ್ಷ ಜಾ:ಮುಸ್ಲಿಮ ಉ:ಕೂಲಿ ಸಾ:ಮಳಚಾಪೂರ ತಾ:ಭಾಲ್ಕಿ ಈತನ ಶವವನ್ನು ಪರಿಶಿಲಿಸಿ ಹಾಜರಿದ್ದ ಶ್ರೀಮತಿ ಬಿಪಾಷಾ ಗಂಡ ಎಮ್.ಡಿ ಮೈನೊದ್ದಿನ ಜ್ಯಾಂತೆ ಸಾ:ಮಳಚಾಪೂರ ರವರು  ಲಿಖಿತ ದೂರು ಅರ್ಜಿ ಸಲ್ಲಿಸಿದ್ದನ್ನು ಪಡೆದುಕೊಂಡಿದ್ದು ಸಾರಾಂಶವೆನೆಂದರೆ :  ಫಿರ್ಯಾದಿ ಗಂಡ ಮೈನೊದ್ದಿನ ಮಳಚಾಪೂರ ಗ್ರಾಮದ ವೈಜಿನಾಥ ತಂದೆ ಗುಂಡೆರಾವ ಧನ್ನೂರೆ ರವರ ಹೊಲವನ್ನು ಪಾಲಕ್ಕಾಗಿ ಮಾಡಿಕೊಂಡಿದ್ದು ಇರುತ್ತದೆ. ಹೀಗಿರುವಲ್ಲಿ ದಿನಾಂಕ:08/05/2017 ರಂದು 1530 ಗಂಟೆಗೆ ಫೀರ್ಯಾದಿ ಮತ್ತು ಅವರ ಗಂಡ ಮೈನೊದ್ದಿನ ಹಾಗೂ  4ನೇ ಮಗ ಎಮ್.ಡಿ ಇರ್ಫಾನ ವಯ:19 ವರ್ಷ ರವರು ಕುಡಿ ಹೋಲದಲ್ಲಿ ಕೆಲಸ ಮಾಡುತ್ತಿರುವಾಗ ಗಾಳಿ, ಧೂಳಿ ಪ್ರಾರಂಭವಾಗಿ ಮಳೆ ಬರುತ್ತಿರುವಾಗ ಒಮ್ಮೇಲೆ  ಇವರ ಮಗನ ಎದೆಯ ಮೇಲೆ ಸಿಡಿಲು ಬಡೆದು ಎದೆಯ ಮಧ್ಯಭಾಗದಿಂದ ಕೇಳ ಹೊಟ್ಟೆಯ ವರೆಗೆ ಉದ್ದನೆಯ ಸುಟ್ಟಗಾಯವಾಗಿದ್ದು ,  ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ಒಂದು ಖಾಸಗಿ ಆಟೋದಲ್ಲಿ ತರುತ್ತಿರುವಾಗ ದಾರಿ ಮಧ್ಯೆ ಗುರುನಾನಕ ಗೇಟ ಬೀದರ ಹತ್ತಿರ ಫಿರ್ಯಾದಿ ಮಗ ಅಂದಾಜು 1605 ಗಂಟೆಗೆ ಮೃತ ಪಟ್ಟಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.   

ಹೋಕ್ರಾಣಾ ಪೊಲೀಸ್ ಠಾಣೆ ಗುನ್ನೆ ನಂ. 49/2017 ಕಲಂ 147, 148, 341, 323, 324, 504, 307 ಜೊತೆ 149  ಐಪಿಸಿ ;-

ದಿನಾಂಕ 08-05-2017 ರಂದು ಫಿರ್ಯಾದಿ ಮಲ್ಲಿಕಾರ್ಜುನ ತಂದೆ ಗುರುಪಾದಪ್ಪಾ ರವರು ಧಾಬಕಾ ಗ್ರಾಮದಲ್ಲಿ ರಾಜಕುಮಾರ ಔರಾದೆ ರವರ ಹೊಲಕ್ಕೆ ಹೋಗಿ ಕೊಡಲಿ ಕಾವು ಮಾಡಿಕೊಂಡು ತಮ್ಮ ಹೊಲದ ಮುಖಾಂತರ ಮನೆಗ ಬರುತ್ತಿರುವಾಗ   ಗ್ರಾಮದ 1] ಮಾರುತಿ ತಂದೆ ಗ್ಯಾನೋಬಾ ಸಿಂಧೆ 2] ಪಪ್ಪು ತಂದೆ ಮಾರುತಿ ಸಿಂಧೆ 3] ವೈಜಿನಾಥ ತಂದೆ ಮಾರುತಿ ಸಿಂಧೆ 4] ನವನಾಥ ತಂದೆ ಮಾರುತಿ ಸಿಂಧೆ 5] ಮರುಬಾಯಿ ಗಂಡ ಮಾರುತಿ ಸಿಂಧೆ 6] ರಂಜನಾ ಗಂಡ ನವನಾಥ ಸಿಂಧೆ ಮತ್ತು 7] ಹೇಮಾ ಗಂಡ ಪಪ್ಪು ಸಿಂಧೆ ರವರೆಲ್ಲರೂ 1630 ಗಂಟೆ ಸುಮಾರಿಗೆ ತಮ್ಮ ಕೈಗಳಲ್ಲಿ ಬಡಿಗೆ ಕತ್ತಿ ಹಿಡಿದುಕೊಂಡು ಅಕ್ರಮಕೂಟ ರಚಿಸಿಕೊಂಡು ಫಿರ್ಯಾದಿ ಎದುರಿಗೆ ಬಂದು   ಮುಂದೆ ಹೋಗದಂತೆ ಅಕ್ರಮವಾಗಿ ತಡೆದು ಇವರಲ್ಲಿ ಮಾರುತಿ ಸಿಂಧೆ ಮತ್ತು ಪಪ್ಪು ಸಿಂಧೆ ಇಬ್ಬರೂ ಸೇರಿ ನಮ್ಮ ಹೊಲದ ಕಡೆಗೆ ಏಕೆ ಬರುತ್ತಿದ್ದಿ ಭೋಸಡಿ ಮಗನೆ ಅಂತಾ ಬೈಯುವಾಗ ಫಿರ್ಯಾದಿಯು ಅವರಿಗೆ ನಿಮ್ಮ ಹೊಲ ಎಲ್ಲಿದೇ ಇದು ನಮ್ಮ ಹೊಲ ಇದೆ ಅಂತಾ ಅಂದಾಗ ಮಾರುತಿ ಇತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಬಡಿಗೆಯಿಂದ  ತಲೆಯ ಹಿಂಬದಿಯಲ್ಲಿ ಹೊಡೆದು ರಕ್ತಗಾಯಪಡಿಸಿದನು. ಪಪ್ಪು ಸಿಂಧೆ ಇತನು ತನ್ನ ಕೈಯಲ್ಲಿದ್ದ ಕಮ್ಮ ಕತ್ತಿಯಿಂದ ನನ್ನ ಎಡಗೈ ಮೋಳಕೈ ಮೇಲೆ, ಮೋಳಕೈ ಹತ್ತಿರ ಹೊಡೆದು ಭಾರಿ ರಕ್ತಗಾಯಪಡಿಸಿದನು. ಮತ್ತು ವೈಜಿನಾಥ ಸಿಂಧೆ ಇತನು ಮಾರುತಿ ಸಿಂಧೆ ಇವರ ಕೈಯಲ್ಲಿದ್ದ ಬಡಿಗೆಯನ್ನು ಕಸಿದುಕೊಂಡು ಎರಡು ಮೋಳಕಾಲು ಮೇಲೆ ಹೊಡೆದು ಕಂದುಗಟ್ಟಿದ ಗಾಯಪಡಿಸಿರುತ್ತಾನೆ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

ಹೋಕ್ರಾಣಾ ಪೊಲೀಸ್ ಠಾಣೆ ಗುನ್ನೆ ನಂ. 50/17 ಕಲ 323, 504, 354 ಐಪಿಸಿ ಮತ್ತು 3(1) (10) ಎಸ್.ಸಿ/ಎಸ್.ಟಿ. ಕಾಯ್ದೆ  1989 :-

ದಿನಾಂಕ 08-05-2017 ರಂದು 1630  ಗಂಟೆ ಸುಮಾರಿಗೆ ಫಿರ್ಯಾದಿ ಮಾರುತಿ ತಂದೆ ಗ್ಯಾನೊಬಾ ಸಿಂಧೆ ಸಾ: ಧಾಬಕಾ ರವರ ನೀಡಿದ ದೂರಿನ ಸಾರಾಂಶವೆನೆಂದರೆ ಇವರ ಮಗ ಪಪ್ಪು, ವೈಜಿನಾಥ,  ಹೆಂಡತಿ ಮರುಬಾಯಿ,  ಸೋಸೆ ರಂಜನಾ ಸಿಂಧೆ ಮತ್ತು ಹೇಮಾ ಸಿಂಧೆ ರವರು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ಬಂದು '' ಏ ಮಾದೀಗ ಭೋಸಡಿ ಮಕ್ಕಳೆ ನಮ್ಮ ಹೋಲದಲ್ಲಿ ಏಕೇ ಕೆಲಸ ಮಾಡುತ್ತಿದೀರಿ ಅಂತಾ ಬೈಯುತ್ತಿರುವಾಗ ಫಿರ್ಯಾದಿಯು ಆತನಿಗೆ ''10 ವರ್ಷಗಳ ಹಿಂದೆ ನಮ್ಮ ಹತ್ತಿರ 2 ಲಕ್ಷ 10 ಸಾವಿರ  ರೂಪಾಯಿ ತೆಗೆದುಕೊಂಡು ನಮಗೆ ಹೊಲ ಮಾರಾಟ ಮಾಡಿ ಸದರಿ ಹೊಲ ನಮ್ಮ ಹೆಸರಿಗೆ ಮಾಡಕೊಡದೇ ಸತಾಯಿಸುತ್ತಾ ಬಂದು ಇವಾಗ  ಸದರಿ ಜಮಿನು ನಮಗೆ ಸಾಗುವಳಿ ಮಾಡಕೊಳ್ಳಲು ಕೊಟ್ಟಿದ್ದು ಇರುತ್ತದೆ. ಅಂತಾ ಅಂದಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ಸುಮಾರು 10 ವರ್ಷಗಳ ಹಿಂದಿನಿಂದ ನಮ್ಮ ಹೊಲವನ್ನು ಸಾಗುವಳಿ ಮಾಡಲಿ ಕೋಟ್ಟಿದ್ದು ನಮ್ಮ ಹೊಲ 3 ಎಕರೆ 3 ಗುಂಟೆ ಜಮೀನು ನೀವು ಸಾಗುವಳಿ ಮಾಡುತ್ತಾ ಬಂದಿರುತ್ತೀರಿ ನಿಮಗೆ ನಾನು ಯಾವಾಗ ಮಾರಾಟ ಮಾಡಿರುತ್ತೇನೆ ಅಂತಾ ಅವಾಚ್ಯವಾಗಿ ಬೈದು ತನ್ನ ಬಲಗೈಯಿಂದ ನನ್ನ ಬೆನ್ನಲ್ಲಿ ಹೊಡೆದು ಗುಪ್ತಗಾಯ ಪಡಿಸಿದನು. ನನ್ನಹೆಂಡತಿ ಬಿಡಸಿಲು ಬಂದಾಗ ಅವಳಿಗೆ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ತನ್ನ ಬಲಯಗೈಯಿಂದ ನನ್ನ ಹೆಂಡತಿ ಮರುಬಾಯಿ ಇವಳ ಎಡಗಡೆ ಎದೆಯಲ್ಲಿ, ಎಡಗಡೆ ರೊಂಡಿಗೆ, ಎಡಗಡೆ ಫಕಳಿಯಲ್ಲಿ ಹೊಡೆದು ಗುಪ್ತಗಾಶಯಪಡಿಸಿದನು. ಆವಾಗ ನನ್ನನ ಸೊಸೆ ಹೇಬಾಯಿ ಮತ್ತು ರಂಜನಾಬಾಯಿ ಇಬ್ಬರೂ ಜಗಳವನ್ನು ನೋಡಿ ಮಧ್ಯದಲ್ಲಿ ಬಂದಾಗ ಮಲ್ಲಿಕಾರ್ಜುನ ಸೂಲಪಲ್ಲೆ ಇತನು ನಮ್ಮ ಎಲ್ಲರಿಗೂ ಸಹ ಕೈಯಿಂದೆ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿರುತ್ತಾನೆ ಅಂತಾ ಫಿರ್ಯಾದಿ ರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: