Police Bhavan Kalaburagi

Police Bhavan Kalaburagi

Friday, July 7, 2017

Kalaburagi District Reported Crimes

ಅಪಘಾತ ಪ್ರಕರಣಗಳು :
ಫರತಾಬಾದ ಠಾಣೆ : ಶ್ರೀ ಅಬ್ದುಲ ಕರೀಮ ತಂದೆ ಚಾಂದ ಪಾಶಾ ಸಾ: ಕೊಳಸಾ ಪೈಲ ಶಹಾಬಾದ ನಗರ ತಾ: ಚಿತ್ತಾಪೂರ ಇವರು ದಿನಾಂಕ: 06/07/2017 ರಂದು ಮದ್ಯಾಹ್ನ ಮನೆಯಲ್ಲಿದ್ದಾಗ ಅಲ್ಲಿಯೇ ನಮ್ಮ ಮನೆಯ ಪಕ್ಕದಲ್ಲಿ ವಾಸವಾಗಿರುವ ನನ್ನ ಅಕ್ಕಳಾದ ಶಬಾನಾಬೇಗಂ ಇವಳ  ಮಗನಾದ ಸರಪರಾಜನು ಪಿರೋಜಾಬಾದ ಗ್ರಾಮದ ಖಲೀಪತ ರಹೇಮಾನ ದರ್ಗಾದ ಉರಸಗೆ ಹೋಗುತ್ತೇನೆ ನನಗೆ ಹಣ ಬೇಕು ಅಂತಾ ಹೇಳಿ ನಮ್ಮ ಅಕ್ಕನ ಕಡೆಯಿಂದ ಹಣ  ತೆಗೆದುಕೊಂಡು ತನ್ನ ಗೆಳೆಯನಾದ ದಶರಥ ಇವನ ಮೋಟಾರ ಸೈಕಲ ಮೇಲೆ ನನ್ನ ಅಳಿಯ ಸರಫರಾಜ ಹಾಗೂ ಸಾಗರ ಇವರು ಹಿಂದೆ ಕುಳಿತುಕೊಂಡು ಹೋದರು. ನಂತರ ರಾತ್ರಿ 9 ಗಂಟೆಯ ಸುಮಾರಿಗೆ ಯಾರೋ ನಮ್ಮ ಅಳಿಯ ಸರ್ಪರಾಜ ಈತನ ಮೋಬೈಲದಿಂದ ನನಗೆ ಕರೆ ಮಾಡಿ ಈ ಮೋಬೈಲದವರು ಜೇವರ್ಗಿ - ಕಲಬುರಗಿ ಮುಖ್ಯ ರಸ್ತೆಯಿಂದ ಶಾಹಾಬಾದ ಕ್ರಾಸದಿಂದ  ಅಂದಾಜು 1 ಕಿಮಿ ದೂರದಲ್ಲಿ ಶಹಾಬಾದ ಕಡೆಗೆ ಬರುವ ರಸ್ತೆ ಮೇಲೆ ನಿಂತಿರುವ ಲಾರಿಯ ಹಿಂದೆ ಮೋಟಾರ ಸೈಕಲ ಡಿಕ್ಕಿ ಪಡಿಸಿ ಲಾರಿಯ ಕೆಳಗೆ ಮೂರು ಜನರು ಮೋಟಾರ ಸೈಕಲದೊಂದಿಗೆ ಸಿಕ್ಕಿಬಿದ್ದು ಬಾರಿ ರಕ್ತಗಾಯ ಹಾಗೂ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ತಿಳಿಸಿದ್ದರಿಂದ ಗಾಬರಗೊಂಡು ನಾನು ಹಾಗೂ ನನ್ನ ಜೊತೆಯಲ್ಲಿ, ನನ್ನ ದೊಡ್ಡ ಅಕ್ಕಳ ಗಂಡನಾದ ಹಾಜಿಕರೀಮ ಹಾಗೂ ಅವರ ಮಗನಾದ ಮಹ್ಮದ ಆಸೀಪ ಇವರೊಂದಿಗೆ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಅಳಿಯ ಸರ್ಪರಾಜ ಅವನ ಗೆಳೆಯನಾದ ದಶರಥ ಹಾಗೂ ಸಾಗರ ಒಬ್ಬರ ಮೇಲೆ ಒಬ್ಬರು ಲಾರಿಯ ಕೆಳೆಗೆ ಬಿದ್ದು ಮೃತಪಟ್ಟಿದ್ದರು. ಅವರನ್ನು ಲಾರಿ ಕೆಳಗಿನಿಂದ ಒಬ್ಬರನ್ನು ಹೊರೆಗೆ ತೆಗೆದು ರಸ್ತೆಯ ಮೇಲೆ  ಹಾಕಿದ ನಂತರ ನನ್ನ ಅಳಿಯನಾದ ಸರ್ಪರಾಜ ಈತನಿಗೆ ನೋಡಲಾಗಿ ತಲೆಗೆ ಭಾರಿ ಗುಪ್ತ ಗಾಯವಾಗಿ ತಲೆಯಿಂದ ಮಿದುಳು ಹೊರಕ್ಕೆ ಬಂದಿದ್ದು ಮುಖಕ್ಕೆ ಗುಪ್ತಗಾಯವಾಗಿ ಹಾಗೂ ಕಿವಿಯಿಂದ ಮೂಗಿನಿಂದ ರಕ್ತ ಬಂದು ಮುಖಕ್ಕೆ ಮೈಕೈಗೆ ಅಲ್ಲಲ್ಲಿ ರಕ್ತಗಾಯವಾಗಿ ಗಾಯಗಳಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅದರಂತೆ ದಶರಥನನ್ನು ನೋಡಲಾಗಿ ಈತನಿಗೂ ತಲೆಗೆ ಭಾರಿ ರಕ್ತಗಾಯವಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖ ಚಪ್ಪಟೆಯಾಗಿ ಅಲಲ್ಲಿ ರಕ್ತಗಾಯ ವಾಗಿದ್ದು ಹಾಗೂ ಸಾಗರನಿಗೆ ನೋಡಲಾಗಿ ಸಾಗರನ ಒಂದು ಕಣ್ಣೀನ ಗುಡ್ಡಿ ಹೊರಗೆ ಬಂದು ತಲೆಗೆ ಪೆಟ್ಟಾಗಿ ತಲೆಯಿಂದ ಮಿದುಳು ಹೊರಗೆ ಬಂದು ಮುಖಕ್ಕೆ ಚಪ್ಪಟೆಯಾಗಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಸದರಿ ಮೂರು ಜನರು ಕುಳಿತುಕೊಂಡು ಬಂದು ಅಪಘಾತವಾದ ಮೋಟಾರ ಸೈಕಲ ನಂಬರ ನೋಡಲಾಗಿ ಕೆಎ-32 ಇಕೆ-6887 ನೇದ್ದು ಇರುತ್ತದೆ. ರಸ್ತೆಯ ಮೇಲೆ ಯಾವುದೇ ಮುಂಜಾಗ್ರತೆ ಇಲ್ಲದೆ ನಿಲ್ಲಿಸಿದ ಲಾರಿ ನಂಬರ ನೋಡಲಾಗಿ ಕೆಎ 01 ಎಸಿ-9177 ನೇದ್ದು ಇರುತ್ತದೆ. ಸದರಿ ಲಾರಿಯ ಚಾಲಕನು ರಸ್ತೆಯ ಮೇಲೆ ತನ್ನ ವಾಹನವನ್ನು ರೋಡಿನ ಮೇಲೆರಾತ್ರಿ ರಾತ್ರಿ ಹೊತ್ತಿನಲ್ಲಿ ಪಾರ್ಕಿಂಗ ಲೈಟ ಹಾಕದೆ ಯಾವುದೇ ಮುಂಜಾ ಗ್ರತಾ ಕ್ರಮವಹಿಸದೆ ಲಾರಿಯನ್ನು ನಿಲ್ಲಿಸಿದ್ದರಿಂದ ದಶರಥ ಈತನು ತನ್ನ ಮೊಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತ ನದಿಂದ ನಡೆಯಿಸಿ ಕತ್ತಲ್ಲಲಿ ಲಾರಿಯ ಹಿಂದೆ ಜೋರಾಗಿ ಡಿಕಿ ಪಡೆಯಿಸಿದ್ದರಿಂದ ಮೋಟಾರ ಸೈಕಲ ಮೇಲಿದ್ದ ಎಲ್ಲರೂ ಲಾರಿ ಕೆಳಗೆ ಸಿಕ್ಕು ಬಾರಿ ಗುಪ್ತಗಾಯ ಹಾಗೂ ರಕ್ತಗಾಯ ಹೊಂದಿ ಸ್ಥಳದಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳಖೇಡ ಠಾಣೆ : ಶ್ರೀ ಯಲ್ಲಾಲಿಂಗ ತಂದೆ ನಾಗಪ್ಪ ಹಳ್ಳಿ ಸಾ: ಮುಗನೂರ ಗ್ರಾಮ, ಇವರ  ದೊಡ್ಡಪ್ಪನ ಮಗನಾದ ಸಿದ್ದಪ್ಪ ತಂದೆ ಬಸವರಾಜ ನಮ್ಮೂರಿನ ಸಕ್ಕರಿ ನಾಗೇಮದ್ರಪ್ಪ ಸಾಹುಕಾರ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡಿದ್ದು ಸಿದ್ದಪ್ಪನ ಹೆಂಡತಿಯ ತವರು ಮನೆ ಕುಕ್ಕುಂದಾ ಗ್ರಾಮ ಇದ್ದು ಅವನ ಹೆಂಡತಿ ಹೆರಿಗೆಗಾಗಿ ಹೋಗಿದ್ದು ದಿನಾಂಕ 05-07-2017 ರಂದು ರಾತ್ರಿ ನಾನು ನನ್ನ ಮನೆಯಲ್ಲಿ ಇದ್ದಾಗ ನಮ್ಮ ಅಣ್ಣನಾದ ಸಿದ್ದಪ್ಪ ಇತನು ಮನೆಗೆ ಬಂದು ನನ್ನ ಮೋಟಾರ ಸೈಕಲ ಮೇಲೆ ಕುಕ್ಕುಂದಾ ಗ್ರಾಮಕ್ಕೆ ಹೋಗಿ ರಾತ್ರಿ  ಊಟಕ್ಕೆ ಬುತ್ತಿಕಟ್ಟಿಕೊಂಡು ಬರೋಣ ನೀನು ಹಿಂದೆ ಬುತ್ತಿ ಹಿಡಿದುಕೊಂಡು ಕುಳಿತುಕೊಳ್ಳುವಂತೆ ನನ್ನ ಜೊತಿ ನಡಿ ಅಂತಾ ಕರೆದಿದ್ದರಿಂದ ನಾನು ಮತ್ತು ಸಿದ್ದಪ್ಪ ಕೂಡಿ ಆತನ ಹತ್ತಿರ ಇದ್ದ ಮೋಟಾರ ಸೈಕಲ ನಂ KA-32.EN-2154 ನೇದ್ದರ ಮೇಲೆ ಕುಳಿತು ಕುಕ್ಕುಂದಾ ಗ್ರಾಮಕ್ಕೆ ಹೋಗಿ ಬುತ್ತಿ ಕಟ್ಟಿಸಿಕೊಂಡು ನಾವು ಇಬ್ಬರು ಅದೆ ಮೋಟಾರ ಸೈಕಲ ಮೇಲೆ ಕುಳಿತು ಮರಳಿ ಕುಕ್ಕುಂದಾ ಗ್ರಾಮದಿಂದ ಮುಗನೂರ ಕಡೆಗೆ ಹೋಗುತ್ತಿದ್ದಾಗ ನಾನು ಬುತ್ತಿ ಹಿಡಿದುಕೊಂಡು ಮೋಟಾರ ಸೈಕಲ ಮೇಲೆ ಹಿಂದುಗಡೆ ಕುಳಿತಿದ್ದೆನು ನಮ್ಮ ಅಣ್ಣ ಸಿದ್ದಪ್ಪ ಈತನು ಮೋಟಾರ ಸೈಕಲ ರಸ್ತೆಯ ಎಡಬದಿಯಿಂದ ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಯಡಗಾ ಗ್ರಾಮ ದಾಟಿ ಶಿವಶರಣಪ್ಪ ತಾಡಪಳ್ಳಿ ಇವರ ಹೊಲದ ಹತ್ತಿರ ನಿನ್ನೆ ರಾತ್ರಿ 08-45 ಗಂಟೆಯ ಸುಮಾರಿಗೆ ಹೋಗುತ್ತಿದ್ದಾಗ ಸೇಡಂ ಕಡೆಯಿಂದ ಅಂದರೆ ಎದರುಗಡೆಯಿಂದ ಒಂದು ಟಂ-ಟಂ ಚಾಲಕ ತನ್ನ ವಶದಲ್ಲಿದ್ದ ಟಂ-ಟಂ ನ್ನು ಅತೀವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ನಮ್ಮ ಮೋಟಾರ ಸೈಕಲಗೆ ಎದುರುಗಡೆಯಿಂದ ಜೋರಾಗಿ ಡಿಕ್ಕಿ ಪಡಿಸಿ ಅಫಗಾತ ಪಡಿಸಿದನು ಆಗ ನಾವು ಇಬ್ಬರು ಕೆಳಗೆ ಬಿದ್ದಾಗ ನನ್ನ ಬಲಗಾಲಿಗೆ ಭಾರಿಗಾಯವಾಗಿ ಮೊಣಕಾಲಿನ ಕೆಳಗೆ ಕಾಲು ಮುರಿದಿರುತ್ತದೆ ಮತ್ತು ನಮ್ಮ ಅಣ್ಣ ಸಿದ್ದಪ್ಪ ಇತನಿಗೆ ನೋಡಲಾಗಿ ಆತನ ಬಲಗಾಲಿಗೆ ಭಾರಿರಕ್ತಗಾಯ ವಾಗಿ ಕಾಲು ಮುರಿದಿದ್ದು ಎರಡು ಕಾಲುಗಳ ಮದ್ಯ ಭಾರಿ ಗಾಯವಾಗಿ ಮರ್ಮಾಂಗದ ಹತ್ತಿರ ಮತ್ತು ಇತರೆ ಕಡೆ ಭಾರಿ ರಕ್ತಗಾಯವಾಗಿದ್ದು ರೋಡಿನ ಮೇಲೆ ಹೋಗಿ ಬರುವ ವಾಹನಗಳ ಬೆಳಕಿನಲ್ಲಿ ನೋಡಿರುತ್ತೆನೆ ಅಲ್ಲಿಯೇ ಇದ್ದ ಟಂ-ಟಂ ನಂಬರ ನೋಡಲಾಗಿ  KA-32,C-0672 ಅಂತಾ ಇದ್ದು ಅಲ್ಲಿಯೇ ನಿಂತಿದ್ದ ಅದರ ಚಾಲಕನಿಗೆ ಹೆಸರು  ಕೇಳಿದಾಗ ಆತ  ತನ್ನ ಹೆಸರು ಸೂರ್ಯಕಾಂತ ತಂದೆ ಕಾಶಪ್ಪ ಹೊಸಮನಿ, ಸಾ: ಯಡಗಾ ಗ್ರಾಮ ಅಂತಾ ತಿಳಿಸಿದನು ನಂತರ ನಾನು ನಮ್ಮ ತಂದೆಗೆ ಫೋನ ಮಾಡಿ ಅಫಗಾತದ ಬಗ್ಗೆ ತಿಳಿಸಿದಾಗ ಅವರು ಬಂದು 108 ಅಂಬುಲನ್ಸಗೆ ಫೋನ ಮಾಡಿದರು ಜನರು ಜಮಾ ಆಗುವುದನ್ನು ನೋಡಿ ಟಂ-ಟಂ ಚಾಲಕ ತನ್ನ ವಾಹನ ಅಲ್ಲಿಯೇ ಬಿಟ್ಟುಓಡಿ ಹೋದನು ನಂತರ ನಮಗೆ 108 ಅಂಬುಲೆನ್ಸದಲ್ಲಿ  ಉಪಚಾರ ಕುರಿತು ಕಲಬುರಗಿಗೆ ಬರುತ್ತಿದ್ದಾಗ ನಮ್ಮ ಅಣ್ಣನಿಗೆ ಆದ ಭಾರಿ ಗಾಯಗಳಿಂದ ಆತ ದಾರಿ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವೀಚಕ್ರ ವಾಹನ ಕಳವು ಪ್ರಕರಣ :
ಆಳಂದ ಠಾಣೆ : ಶ್ರೀ ಸೈಬಣ್ಣಾ ತಂದೆ ಮಹಾದೇವಪ್ಪಾ ಭೂಸಣಗಿ  ಸಾ: ಸುಲ್ತಾನಪೂರ ಗಲ್ಲಿ ಆಳಂದ ರವರು ಠಾಣೆ ರವರು ದಿನಾಂಕ : 12/05/2017 ರಂದು 09:00 ಪಿ.ಎಂ. ದಿಂದ 09:30 ಪಿ.ಎಂ.ದ ಮಧ್ಯದ ಅವಧಿಯಲ್ಲಿ ಉಮರ್ಗಾ ರೋಡಿಗೆ ಇರುವ ಕುಮಾರ ಹೋಟೆಲ ಎದುರುಗಡೆ ನಿಲ್ಲಿಸಿದ ನನ್ನ ಹಿರೋ ಹೊಂಡಾ Splender ಪ್ಲಸ್ ಮೋಟರ ಸೈಕಲ ನಂ:KA:32 Q-866 ಚೆಸ್ಸಿ ನಂ: 03K16F04183 ಇಂಜಿನ್ ನಂ:03K15E05016 ಅ.ಕೀ.20,000/-ರೂ ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟ್ರಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 06/07/2017 ರಂದು ಗೋಳಾ (ಕೆ) ಸಿಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ ಶಹಾಬಾದ  ಠಾಣೆ ಹಾಗು ಸಿನಬ್ಬಂದಿ ಮತ್ತು ಪಂಚರೊಂದಿಗೆ ಕಾಗಿಣಾ ನದಿಯ ಪಂಪಹೌಸ ಹತ್ತಿರ ಹೊದಾಗ ನದಿ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ನಿಲ್ಲಿಸಿ ಓಡಿ ಹೋದನು. ಸದರಿಯವನಿಗೆ ನೋಡಿದಲ್ಲಿ ಗುರ್ತಿಸುತ್ತೇನೆ.  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಕೆಂಪು ಬಣ್ಣದ ಮಶಿ ಫರಗುಷನ ಟ್ರಾಕ್ಟರ ಇದ್ದು ಅದರ ನಂಬರ ನೋಡಲು ಕೆ.ಎ 32 ಟಿ.ಬಿ 1104 ಟ್ಯಾಲಿ ನಂಬರ ಕೆ.ಎ. 32 ಟಿ 2143   ಅ.ಕಿ 2 ಲಕ್ಷ ರೂ ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿಮಾಡಿಕೊಂಡು ಮರಳು ತುಂಬಿದ ಟ್ರಾಕ್ಟರನೊಂದಿಗೆ  ಮರಳಿ ಶಾಹಾಬಾದ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.  

No comments: