Police Bhavan Kalaburagi

Police Bhavan Kalaburagi

Monday, August 28, 2017

Yadgir District Reported Crimes Updated on 28-08-2017


                                    Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 233/2017 ಕಲಂ: 279, 304(ಎ) ಐಪಿಸಿ ಸಂಗಡ 187 ಐ.ಎಮ್.ವಿ ಆಠ್ಟಿ್;- ಫಿರ್ಯಾದಿಗೆ 19-20 ವರ್ಷ ಪ್ರಾಯದ ಕುಮಾರಿ ಲಲೀತಾ ಅಂತಾ ಒಬ್ಬಳು ಮಗಳಿದ್ದು ಆಕೆ ಮಾನಸಿಕವಾಗಿ ಕಿನ್ನತೆ ಒಳಗಾಗಿ ಹುಚ್ಚಿಯಾಗಿರುತ್ತಾಳೆ ನಿನ್ನೆ ದಿನಾಂಕ 26.08.2017 ರಂದು ಫಿರ್ಯಾದಿ ಮತ್ತು ಅವರ ಮನೆಯವರು ಹೊಲದಲ್ಲಿ ಹೆಸರುಕಾಯಿ ಬಿಡಿಸಲು ಹೋಗಿ ಸಾಯಂಕಾಲ 4 ಕ್ಕೆ ಮಳೆ ಬಂದಿದ್ದರಿಂದ ಹೆಸರುಕಾಯಿ ತೆಗೆದುಕೊಂಡು ಮನೆಗೆ ಬಂದಿದ್ದು ಲಲೀತಾಳು ಎಂದಿನಂತೆ ತಾನೆ ಬರುತ್ತಾಳೆ ಅಂತಾ ತಿಳಿದು ಅಲ್ಲಿಯೇ ಬಿಟ್ಟು ಬಂದಿದ್ದರು. ಬೆಳಿಗ್ಗೆ ಮುಂಜಾನೆ 4 ಗಂಟೆ ಸುಮಾರಿಗೆ ಅದೇ ತಾಂಡಾದ ದೇವು ಚವ್ಹಾಣ ಫಿರ್ಯಾದಿಯ ಮಗಳು ರಸ್ತೆ ಅಪಘಾತವಾಗಿ ಮೃತಪಟ್ಟು ಬಿದ್ದ ಬಗ್ಗೆ ತಿಳಿಸಿದ್ದರಿಂದ ಫಿರ್ಯಾದಿಯ ಮನೆಯವರು ಬಂದು ನೋಡಿದ್ದು ಕುಮಾರಿ. ಲಲಿತಾ ಇವಳು ಅವಳ ಮಾನಸೀಕ ಹುಚ್ಚುತನದಿಂದ ಯಾವುದೋ ಕಾರಣಕ್ಕೋ ಸಿಂದಗಿ-ಕೊಡಂಗಲ್ ರಾಜ್ಯ ಹೆದ್ದಾರಿ ಸಂಖ್ಯೆ 16 ರ ರಸ್ತೆಯ ಮೇಲೆ ಬಂದಾಗ ಯಾವುದೋ ವಾಹನ ಮತ್ತು ಯಾರೊ ಚಾಲಕ ಯಾದಗಿರಿ ಕಡೆಯಿಂದ ಗುರುಮಟಕಲ್ ಕಡೆಗೆ ಹೋಗುತ್ತಿರಬಹುದು ಅಥವಾ ಗುರುಮಠಕಲ್ ಕಡೆಯಿಂದ ಯಾದಗಿರಿ ಕಡೆಗೆ ಹೊಗುವ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿ ನಿನ್ನೆ ರಾತ್ರಿ 9 ಗಂಟೆಯಿಂದ ಇಂದು ಬೆಳಗಿನ ಜಾವ ಸುಮಾರು 2 ಗಂಟೆಯ ಮಧ್ಯದ ಅವಧಿಯಲ್ಲಿ ರೊಡಿ ಮೇಲೆ ಹೋಗಿರುವ ನನ್ನ ಮಗಳಿಗೆ ಡಿಕ್ಕಿಪಡಿಸಿದ್ದು ಇದೆ. ಸದರಿ ಅಪಘಾತದಲ್ಲಿ ಗಾಯಗೊಂಡಿರುವ ನನ್ನ ಮಗಳು ರಸ್ತೆಯ ಮೇಲೆ ಮೃತಪಟ್ಟಿರುತ್ತಾಳೆ. ಇದನ್ನು ಹೊರತುಪಡಿಸಿ ನನ್ನ ಮಗಳ ಸಾವಿಗೆ ಬೇರಾವುದೇ ಕಾರಣಗಳು ಇಲ್ಲ. ವಾಹನವನ್ನು ದುಡುಕಿನಿಂದ ಚಲಾಯಿಸಿ ನನ್ನ ಮಗಳ ಸಾವಿಗೆ ಕಾರಣರಾದ ಯಾವುದೋ ವಾಹನದ ಚಾಲಕ ಮೇಲೆ ಕನೂನು ರೀತಿಯ ಕ್ರಮ ಜರುಗಿಸಲು ಕೋರಿದೆ. ಅಂತಾ ನೀಡಿದ ಫಿರ್ಯಾದಿಯ ಸದರಿ ಹೇಳೀಕೆ ಪಡೆದುಕೊಂಡು ವಿಷಯವನ್ನು ಸಿಪಿಐ ಗುರುಮಠಕಲ್ ಸಾಹೇಬರಿಗೆ ತಿಳಿಸಿ ಮರಳಿ 5-30 ಎ.ಎಮ್ಕ್ಕೆ ಠಾಣೆಗೆ ಬಂದು ಸದರಿ ಫಿರ್ಯಾದಿ ಹೇಳಿಯ ಸಾರಾಂಶದ ಮೆಲಿಂದ ಠಾಣಾ ಗುನ್ನೆ ನಂ: 233/2017 ಕಲಂ: 279, 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡೆನು. 

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 216/2017 ಕಲಂ 379 ಐಪಿಸಿ ;- ದಿನಾಂಕ 27/08/2017 ರಂದು ಸಾಯಂಕಾಲ 5-00 ಪಿ.ಎಂ.ಕ್ಕೆ ಓರುಂಚಾ ಗ್ರಾಮದ  ಸೀಮೆಯಲ್ಲಿ ಬರುವ ಹಳ್ಳದಲ್ಲಿ ಮರಳು ಕಳ್ಳತನ ಮಾಡಿಕೊಂಡು ಆರೋಪಿತರಾದ ಟ್ರ್ಯಾಕ್ಟರ ಮಾಲೀಕರು ಮತ್ತು ಟ್ರ್ಯಾಕ್ಟರ ಚಾಲಕರು ಎಲ್ಲರೂ ಕೂಡಿಕೊಂಡು ತಮ್ಮ ಟ್ರ್ಯಾಕ್ಟರಗಳಾದ 1)ಟ್ರ್ಯಾಕ್ಟ್ರ ಇಂಜಿನ್ ನಂ. ಖ325.1ಆ28075 ಚೆಸ್ಸಿ ನಂ 652747 ಮತ್ತು ಟ್ರ್ಯಾಲಿಗೆ ನಂಬರ ಇರುವದಿಲ್ಲ, ಮತ್ತು 2) ಟ್ರ್ಯಾಕ್ಟ್ರ್ ನಂ. ಖ325.1ಈ38008 ಚೆಸ್ಸಿ ನಂ 75/2014 ನೆದ್ದವುಗಳಲ್ಲಿ ತುಂಬಿಕೊಂಡು ಹೋಗಲು ಸಕರ್ಾರದಿಂದ ಯಾವುದೇ ಪರವಾನಿಗೆ ಪಡೆಯದೇ ಅನಧಿಕೃತವಾಗಿ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಾಗಾಣಿಕೆ ಮಾಡುತ್ತಿರುವಾಗ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ ಅವರ ಮೇಲೆ ಕ್ರಮ ಜರುಗಿಸಿ ಗುನ್ನೆ ದಾಖಲು ಮಾಡಿದ್ದು ಇರುತ್ತದೆ.
ಮಹಿಳಾ ಪೊಲೀಸ್ ಠಾಣೆ ಗುನ್ನೆ ನಂ. 22/2017 ಕಲಂ: 448, 323. 354, 324. 504, 506, 509. ಐ.ಪಿ.ಸಿ;- ದಿನಾಂಕ: 27.08.2017 ರಂದು ಬೆಳಿಗ್ಗೆ 12.15 ಪಿ.ಎಂಕ್ಕೆ ಶ್ರೀಮತಿ ರಾಣಿ ಗಂಡ ದೀಪಕ್ ಡಿಂಗ್ಯಾ ವಯಾ|| 28 ಉ|| ಕುಲಕಸಬು ಜಾತಿ|| ಭಂಗಿ ಸಾ|| ಅಂಬೇಡ್ಕರ ನಗರ ಯಾದಗಿರಿ ಈಕೆಯು ಠಾಣೆಗೆ ಹಾಜರಾಗಿ ಹೇಳಿಕೆ ಪಿರ್ಯಾಧಿಯನ್ನು ಕೊಟ್ಟಿದ್ದು ಸದರಿ ಹೇಳಿಕೆ ಸಾರಂಶವೇನೆಂದರೆ ಪಿಯರ್ಾದಿಗೆ ಆರೋಪಿತನು ಆಗಾಗ ಚುಡಾಯಿಸುವುದು ಕಣ್ಣಿನ ಸನ್ನೆ ಮಾಡಿಕರೆಯುವುದು ನಾನು ನಿನಗೆ ಇಷ್ಟಾ ಪಡುತ್ತೇನೆ ಅಂತಾ ಹಿಂಸೆ ನೀಡಿ ದಿನಾಂಕ 19/08/2017 ರಂದು ಸಂಜೆ 6-00 ಗಂಟೆಗೆ ಪಿಯರ್ಾದಿ ಮನೆಯಲ್ಲಿ ಅತಿಕ್ರಮಣ ಪ್ರವೇಶ ಮಾಡಿ ಅವಳ ಕೈಹಿಡಿದು ಜೋಗ್ಗಾಡಿ ಅವಾಚ್ಯವಾಗಿ ಬೈದು ದರದರನೆ ಹೋರಗಡೆ ಎಳೆಕೊಂಡು ಬಂದು ಅವಮಾನ ಮಾಡಿ ಪಿಯರ್ಾದಿ ಮತ್ತು ಪಿಯರ್ಾದಿ ತಾಯಿಗೆ ಹೋಡೆ ಬಡೆ ಮಾಡಿ ಪಿಯರ್ಾದಿ ತಾಯಿಗೆ ಸಿಮೆಂಟಿನ ಹೆಂಟ್ಟಿನಿಂದ ಹೋಡೆದು ಗಾಯ ಪಡಿಸಿ ಇಲ್ಲಿ ಹ್ಯಾಂಗ ಜೀವದ ಬೆದರಿಕೆ ಹಾಕಿರುತ್ತಾನೆ ಅಂತ ಕೋಟ್ಟ  ಸದರಿ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 22/2017 ಕಲಂ: 448, 323. 354, 324. 504, 506, 509. ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 356/2017.ಕಲಂ 78(3);- ದಿನಾಂಕ 27/08/2017 ರಂದು ಸಾಯಂಕಾಲ 17-00 ಗಂಟೆಗೆ ಶ್ರೀ ಅಂಬಾರಾರಯ ಕಮಾನಮನಿ ಪಿ.ಐ.ಸಾಹೇಬರು ಠಾಣೆಗೆ ಬಂದು ಒಂದು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವದರಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 27/08/2017 ರಂದು ಮದ್ಯಾಹ್ನ 15-00 ಗಂಟೆಗೆ ಠಾಣೆಯಲ್ಲಿದ್ದಾಗ ನಮ್ಮ ಠಾಣೆಯ ಹೋನ್ನಪ್ಪ ಹೆಚ್.ಸಿ 101 ರವರು ತನಗೆ ಹಂಚಿಕೆಯಾದ  ಬೀಟ್ ನಂ 42 ರ ಏರಿಯಾದಲ್ಲಿ ಬರುವ ಹೊಸ ಬಸ್ಸ ನಿಲ್ದಾಣದ ಮುಂದೆ ಇರುವ  ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ತನಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದ ಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಗಜೆಂದ್ರ ಪಿ.ಸಿ.313, ಗಣಪತಿ ಸಿ.ಪಿ.ಸಿ 294, ಶಿವನಗೌಡ ಸಿ.ಪಿ.ಸಿ 141  ಮತ್ತು ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169 ಇವರಿಗೆ ವಿಷಯ ದಾಳಿ ಕುರಿತು ಹೋಗುವ ಸಂಬಂಧ ಶಿವನಗೌಡ ಸಿ.ಪಿ.ಸಿ 141 ರವರ ಮುಖಾಂತರ ಮದ್ಯಾಹ್ನ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ ಮೇರೆಗೆ ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವನ ಮೇಲೆ ದಾಳಿ ಮಾಡಲು  ನಾನು ಪಂಚರು ಸಿಬ್ಬಂದಿಯವರು  ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 15-15  ಗಂಟೆಗೆ ಹೊರಟು ಹೊಸ ಬಸ್ಸ ನಿಲ್ದಾಣಕ್ಕೆ ಸಾಯಂಕಾಲ 15-25 ಗಂಟೆಗೆ ಹೋಗಿ ಗೊಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಹೊಸ ಬಸ್ಸ ನಿಲ್ದಾಣದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು ಸದರಿಯವನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು,  ಆಗ ನಾವು ಸದರಿಯವನು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸುತ್ತುವರೆದು ಮದ್ಯಾಹ್ನ 15-30 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ  ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ನಾಗಯ್ಯ ತಂದೆ ಸಿದ್ದಲಿಂಗಯ್ಯ ಗುರುವಿನ ವ|| 31 ಉ||  ಕೂಲಿ ಕೆಲಸ ಜಾ|| ಕುರುಬೂರ ಸಾ|| ಹಳಿಪೇಠ್ ಶಹಾಪೂರ ಅಂತ ಹೇಳಿದನು ಈತನ ಅಂಗ ಶೋಧನೆ ಮಾಡಿದಾಗ 1] ನಗದು 2710=00 ರೂಪಾಯಿ ಸಿಕ್ಕವು 2] ಒಂದು ಬಾಲ್ ಪೆನ್ 3] ಎರಡು ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಮದ್ಯಾಹ್ನ 15-30 ಗಂಟೆಯಿಂದ 16-30 ಗಂಟೆಯವರೆಗೆ  ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಮಟಕಾ ಅಂಕಿಗಳನ್ನು ಬರೆದುಕೊಂಡ ವ್ಯಕ್ತಿಯೊಂದಿಗೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 16-40 ಗಂಟೆಗೆ ಬಂದು ವರದಿ ತಯ್ಯಾರಿಸಿ 17-00 ಘಂಟೆಗೆ ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು  17-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 356/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಕ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 159/2017 ಕಲಂ 366(ಎ)  376 ಐ.ಪಿ.ಸಿ ಮತ್ತು 4, 8 ಪೋಕ್ಸೋ ಕಾಯಿದೆ 2012.;- ದಿನಾಂಕ 25/08/2017 ರಂದು 05-15  ಪಿ.ಎಂಕ್ಕೆ ಪಿಯರ್ಾದಿ ಶ್ರೀ ಶರಣಪ್ಪ ತಂದೆ ಭೀಮಣ್ಣ ಹೆಳವರ ವ|| 50 ಜಾ|| ಹೆಳವರ ಉ|| ಕೂಲಿ ಸಾ|| ನಗನೂರ ತಾ|| ಸುರಪೂರ ಇವರು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ನೀಡಿದ್ದು ಏನೆಂದರೆ ತನ್ನ ಅಪ್ರಾಪ್ತ ವಯಸ್ಸಿನ ಮಗಳಾದ ಕುಮಾರಿ ದೀಪಾ ತಂದೆ ಶರಣಪ್ಪ ಹೆಳವರ ವ|| 16 ಜಾ|| ಹೆಳವರ ಉ|| ಮನೆಗೆಲಸ ಸಾ|| ನಗನೂರ ತಾ: ಸುರಪೂರ ಇವಳಿಗೆ ದಿನಾಂಕ 20/08/2017 ರಂದು 8 ಪಿ ಎಮ್ ಕ್ಕೆ ಆರೋಪಿತರು ಜಬರದಸ್ತದಿಂದ ಟಂ ಟಂದಲ್ಲಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತ ಅಜರ್ಿಯನ್ನು ನೀಡಿದ ಮೇರೆಗೆ ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ 159/2017 ಕಲಂ ಕಲಂ 366(ಎ) ಐ.ಪಿ.ಸಿ ಮತ್ತು 8 ಪೋಕ್ಸೋ ಕಾಯಿದೆ 2012 ರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು  ಇರುತ್ತದೆ. ದಿನಾಂಕ 02-06-2017 ರಂದು 08;00 ಎ.ಎಂ. ಕ್ಕೆ ಸದರಿ ಪ್ರಕರಣದಲ್ಲಿ ಅಪಹರಣಕ್ಕೊಳಗಾದ ಕುಮಾರಿ ದೀಪಾ ತಂದೆ ಶರಣಪ್ಪ ಹೆಳವರ ವಯಸ್ಸು 16 ವರ್ಷ, ಉ|| ವಿದ್ಯಾಭ್ಯಾಸ, ಜಾತಿ:ಹಿಂದೂ ಹೆಳವರ ಸಾ: ನಗನೂರ ತಾ: ಸುರಪೂರ ಇವರು ಠಾಣೆಗೆ ಹಾಜರಾಗಿ ಕೊಟ್ಟ ಹೇಳಿಕೆ ಏನೆಂದರೆ, ನಮ್ಮೂರ ಶರಣಪ್ಪ ತಂದೆ ದೇವಿಂದ್ರಪ್ಪ ನರಸರೆಡ್ಡಿ ಈತನು ಹಾಗು ನಾನು ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದು ಈ ವಿಷಯ ನಮ್ಮ ಮನೆಯಲ್ಲಿ ಗೊತ್ತಾಗಿ ಮನೆಯಲ್ಲಿ ನಮ್ಮ ತಂದೆಯವರು ನನಗೆ ಮದುವೆ ಮಾಡಲು ತಯಾರಿ ನಡೆಸುತ್ತಿದ್ದರಿಂದ ನಾನು ನಮ್ಮೂರ ಶರಣಪ್ಪ ಈತನಿಗೆ ಈ ವಿಷಯ ತಿಳಿಸಿ ನಾವಿಬ್ಬರು ಓಡಿ ಹೋಗೋಣ ಅಂತ ತಯಾರಾಗಿ ದಿನಾಂಕ: 20/08/17 ರಂದು ರಾತ್ರಿ 7.30 ಗಂಟೆಗೆ ನಾನು ಮನೆಯಲ್ಲಿದ್ದಾಗ ನಮ್ಮೂರ ಶರಣಪ್ಪ ತಂದೆ ದೇವಿಂದ್ರಪ್ಪ ನರಸರೆಡ್ಡಿ ಈತನು ನಮ್ಮೂರ ಹಳೆ ಕೆಜಿಬಿ ಬ್ಯಾಂಕ್ ಹತ್ತಿರ ತನ್ನ ಅಟೋ ತೆಗೆದುಕೊಂಡು ಬಂದು ನಿಂತಿದ್ದು ಆಗ ನಾನು ನಮ್ಮ ಮನೆಯವರಿಗೆ ಕಾಣದಂತೆ ಹೋಗಿ ಆತನ ಆಟೋದಲ್ಲಿ ಕುಳಿತಿದ್ದು ನಂತರ ಶರಣಪ್ಪ ಈತನು ಸದರಿ ಆಟೋವನ್ನು ಚಲಾಯಿಸಿಕೊಂಡು ಸುರಪುರದವರೆಗೆ ನನ್ನನ್ನು ಕರೆದುಕೊಂಡು ಹೋಗಿ ಅಟೋವನ್ನು ಸುರಪುರ ಬಸ್ ನಿಲ್ದಾಣದ ಹಿಂದುಗಡೆ ನಿಲ್ಲಿಸಿದನು. ನಂತರ ನಾವಿಬ್ಬರು ರಾತ್ರಿ 8.30 ಗಂಟೆಗೆ ಬೆಂಗಳೂರಿಗೆ ಹೋಗುವ ಬಸ್ಗೆ ಹತ್ತಿ ಬೆಳಿಗ್ಗೆ 9 ಗಂಟೆಗೆ ಬೆಂಗಳೂರಿಗೆ ಹೋಗಿ ನಂತರ ಅಲ್ಲಿಂದ ಶರಣಪ್ಪ ಈತನ ಪರಿಚಯದ ಕೆಂಗೇರಿಯ ಒಂದು ಕಂಪನಿಗೆ ಹೋಗಿದ್ದು ಇರುತ್ತದೆ. ನಂತರ ಶರಣಪ್ಪ ಈತನು ಕಂಪನಿಯ ಕಡೆಗೆ ಒಂದು ರೂಮ ಹಿಡಿದಿದ್ದು ಆ ರೂಮಿನಲ್ಲಿ ದಿನಾಲು ರಾತ್ರಿ ನಾವಿಬ್ಬರೂ ಮಲಗಿಕೊಂಡಿದ್ದು ಶರಣಪ್ಪ ನರಸರೆಡ್ಡಿ ಈತನು ರೂಮಿನಲ್ಲಿ ಮಲಗಿಕೊಂಡಾಗ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡಲು ಬಂದಿದ್ದು ಆಗ ನಾನು ಸದ್ಯ ಬೇಡ ಮದುವೆಯಾದ ನಂತರ ಒಬ್ಬರಿಗೊಬ್ಬರು ಕೂಡೋಣ ಅಂತ ಅಂದಾಗ ಶರಣಪ್ಪ ಈತನು ನನ್ನ ಮಾತು ಕೇಳದೆ ಜೋರಾವರಿಯಿಂದ ಮುಂದೆ ನಾನೇ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಅಂತ ಹೇಳಿ ದಿನಾಂಕ: 21/08/17 ರಿಂದ 24/08/17 ರವರೆಗೆ ರೂಮಿನಲ್ಲಿಯೇ ಇದ್ದಾಗ ನನ್ನೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದು ಇರುತ್ತದೆ.  ಹೀಗಿದ್ದು ದಿನಾಂಕ 26/08/2017 ರಂದು ರಾತ್ರಿ 8 ಗಂಟೆಯ ಸುಮಾರಿಗೆ ನಾವಿಬ್ಬರೂ ರೂಮಿನಲ್ಲಿದ್ದಾಗ ಶರಣಪ್ಪ ನರಸರಡ್ಡಿ  ಈತನಿಗೆ ಯಾರೋ ಪೋನ ಮಾಡಿ ನನ್ನ ತಂದೆ ಶರಣಪ್ಪ ತಂದೆ ಭೀಮಣ್ಣ ಹೆಳವರ ಈತನು ಶರಣಪ್ಪ ತಂದೆ ದೇವೀಂದ್ರಪ್ಪ ನರಸರಡ್ಡಿ ಈತನ ಮೇಲೆ ಕಿಡ್ನಾಫ್ ಕೇಸ ಮಾಡಿದ್ದು ಅಲ್ಲದೇ ನಮ್ಮಿಬ್ಬರಿಗೂ ಮದುವೆ ಮಾಡಿಸುವದಾಗಿ ತಿಳಿಸಿದ ಮೇರೆಗೆ ನಾವಿಬ್ಬರೂ ನೇರವಾಗಿ ನಿನ್ನೆ  ದಿನಾಂಕ 27/08/2017 ರಂದು ಊರಿಗೆ ಬಂದಿದ್ದು ಆಗ ಶರಣಪ್ಪ ಈತನು ನಿನೂ ನಿನ್ನ ಮನೆಗೆ ಹೋಗು ಅಂತ ಹೇಳಿ ಎಲ್ಲಿಗೋ ಹೋದನು. ಆಗ ನಾನು ಮನೆಗೆ ಹೋದರೆ ನಮ್ಮ ತಂದೆಯವರು ಬೈಯುತ್ತಾರೆ ಅಂತ ತಿಳಿದು ನಾನು ನಮ್ಮ ದೊಡ್ಡಪ್ಪನ ಮನೆಗೆ ಹೋಗಿದ್ದು ಇರುತ್ತದೆ. ಆಗ ನಮ್ಮ ದೊಡ್ಡಪ್ಪ ಸೂಗಪ್ಪ ಇವರು ನಮ್ಮ ತಂದೆಯವರೊಂದಿಗೆ ಕೂಡಿಕೊಂಡು ನನಗೆ ಇಂದು ದಿನಾಂಕ 28/08/2017 ರಂದು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಇಲ್ಲಿ ನಾನು ನನ್ನ ತಂದೆಯಾದ ಶರಣಪ್ಪ ಹೆಳವರ ಇವರು ನಮ್ಮೂರ ಶರಣಪ್ಪ ನರಸರಡ್ಡಿ ಈತನ ಮೇಲೆ ಕೇಸ ಕೊಟ್ಟಿದ್ದು ಓದಿ ತಿಳಿದುಕೊಂಡಿದ್ದು ನಮ್ಮ ತಂದೆಯವರು ಬರೆಯಿಸಿದಂತೆ ನನಗೆ ಯಾರು ಬಲತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವದಿಲ್ಲ ನಾನು ಹಾಗೂ ಶರಣಪ್ಪ ನರಸರೆಡ್ಡಿ ಇಬ್ಬರೂ ಒಬ್ಬರಿಗೊಬ್ಬರು ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದು ನನಗೆ ಮನೆಯಲ್ಲಿ ಮದುವೆ ಮಾಡುವದಾಗಿ ಮಾತನಾಡುತ್ತಿದ್ದರಿಂದ ನಾನೇ ಶರಣಪ್ಪ ಈತನಿಗೆ ಬೆಂಗಳೂರು ಕಡೆಗೆ ಹೋಗೊಣ ಅಂತ ತಿಳಿಸಿ ದಿ: 20/08/17 ರಂದು ಸಾಯಂಕಾಲ 7.30 ಗಂಟೆಗೆ ನಮ್ಮೂರಿನಿಂದ ಹೋಗಿದ್ದು ನಮ್ಮೊಂದಿಗೆ ಯಾರೂ ಬಂದಿರುವದಿಲ್ಲ ನಮ್ಮ ತಂದೆಯವರು ವಿನಾಕಾರಣ ನಮ್ಮೂರ ವಿಜಯಕುಮಾರ ತಂದೆ ಚಿನ್ನಪ್ಪ ನರಸರಡ್ಡಿ, ಚಂದ್ರಶೇಖರ ತಂದೆ ಬಲವಂತ್ರಾಯ ಶಾಖಾ, ಗೌಡಪ್ಪ ತಂದೆ ಹಣಮಂತ ರಂಗಾ  ಇವರ ಹೆಸರು ತಪ್ಪಾಗಿ ಬರೆಯಿಸಿದ್ದು ನನಗೆ ಯಾರೂ ಬಲಾತ್ಕಾರವಾಗಿ ಅಪಹರಿಸಿಕೊಂಡು ಹೋಗಿರುವದಿಲ್ಲ ನಾನು ಹಾಗು ಶರಣಪ್ಪ ನರಸರೆಡ್ಡಿ ಇಬ್ಬರೂ ಒಬ್ಬರಿಗೊಬ್ಬರು ಪ್ರೀತಿಸಿ ಬೆಂಗಳೂರು ಕಡೆಗೆ ಹೋಗಿದ್ದು ನಿಜವಿರುತ್ತದೆ ಅಂತ ಹೇಳಿಕೆ ನಿಡಿದ್ದರಿಂದ ಪ್ರಕಣದಲ್ಲಿ ಕಲಂ 376 ಐ.ಪಿ.ಸಿ ಮತ್ತು  ಕಲಂ: 4 ಪೋಕ್ಸೋ ಆಕ್ಟ್ ಅಳವಡಿಸಿಕೊಳ್ಳಲಾಗಿದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 160/2017 ಕಲಂ: 87 ಕೆಪಿ ಆಕ್ಟ ;- ಆರೋಪಿತರು ದಿನಾಂಕ: 27/08/2017 ರಂದು 02.15 ಪಿಎಮ್ ಕ್ಕೆ  ತಳ್ಳಳ್ಳಿ ಬಿ ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರ ಬಯಲು ಜಾಗೆಯಲ್ಲಿ  ದುಂಡಾಗಿ ಕುಳಿತು ಇಸ್ಪೀಟ ಎಲೆಗಳ ಸಹಾಯದಿಂದ ಹಣ ಪಣಕ್ಕಿಟ್ಟು ಅಂದರ ಬಾಹರ ಜೂಜಾಟ ಆಡುತ್ತಿದ್ದಾಗ ಪಿರ್ಯಾದಿ ಹಾಗೂ ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ 07  ಜನ ಆರೋಪಿತರು ಹಾಗೂ 3700/- ರೂ ನಗದು ಹಣ ಮತ್ತು 52 ಇಸ್ಪೀಟ ಎಲೆಗಳನ್ನು ಜಪ್ತಿ ಪಡೆಸಿಕೊಂಡು ಕ್ರಮ ಜರುಗಿಸಿದ್ದು ಇರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 279,337,338 ಐಪಿಸಿ;- :ದಿನಾಂಕ: 27/08/2017 ರಂದು 10-45 ಪಿಎಮ್ ಕ್ಕೆ ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಯಿಂದ ಆರ್.ಟಿ.ಎ ಎಮ್.ಎಲ್.ಸಿ ಮಾಹಿತಿ ಬಂದಿದ್ದರಿಂದ ನಮ್ಮ ಠಾಣೆಯ ಶ್ರೀ ಸಣ್ಣ ಸಾಯಬಣ್ಣ ಹೆಚ್.ಸಿ 87 ರವರಿಗೆ ಆಸ್ಪತ್ರೆಗೆ ಹೋಗಿ ಎಮ್.ಎಲ್.ಸಿ ವಿಚಾರಣೆ ಮಾಡಿಕೊಂಡು ಬರುವಂತೆ ಪಿ.ಎಸ್.ಐ ರವರು ಆದೇಶಿಸಿದ ಮೇರೆಗೆ ಹೆಚ್.ಸಿ 87 ರವರು 11-30 ಪಿಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ, ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಶಿವಶಂಕರ ತಂದೆ ಸಿದ್ದಲಿಂಗಪ್ಪ ಮಾಡಗಿ, ವ:28, ಜಾ:ಹೊಲೆಯ (ಎಸ್.ಸಿ), ಉ:ಹೋಮಗಾರ್ಡ ಸಾ:ಅಂಬೇಡ್ಕರ ನಗರ ಯಾದಗಿರಿ ಇವರ ಹೇಳಿಕೆ ಫಿರ್ಯಾಧಿಯನ್ನು 11-30 ಪಿಎಮ್ ದಿಂದ ದಿನಾಂಕ: 28/08/2017 ರ 00-30 ಎಎಮ್ ದವರೆಗೆ ಪಡೆದುಕೊಂಡು 01-30 ಎಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆ ಫಿರ್ಯಾಧಿ ಹಾಜರಪಡಿಸಿದ್ದು, ಸದರಿ ಹೇಳಿಕೆ ಫಿರ್ಯಾಧಿ ಸಾರಾಂಶವೇನಂದರೆ ಇಂದು ದಿನಾಂಕ: 27/08/2017 ರಂದು ನನಗೆ ಮತ್ತು ಹುಸೇನಪ್ಪ ತಂದೆ ಭೀಮಪ್ಪ ಬೊಂಬಾಯಿ ಹಾಗೂ ನಾಗಪ್ಪ ತಂದೆ ಮರೆಪ್ಪ ಈಟೆ ಮತ್ತು ಇತರರಿಗೆ ಗಣೇಶ ಹಬ್ಬದ ಬಂದೊಬಸ್ತ ಕರ್ತವ್ಯಕ್ಕೆ ನೇಮಕ ಮಾಡಿ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ಮುಂದಿನ ಕರ್ತವ್ಯ ಕುರಿತು ವರದಿ ಮಾಡಿಕೊಳ್ಳುವಂತೆ ನಮ್ಮ ಹೋಮ ಗಾರ್ಡ ಆಫಿಸದಿಂದ ಆದೇಶಿಸಿ ಕಳುಹಿಸಿದ ಮೇರೆಗೆ ನಾವು ಇಂದು ದಿನಾಂಕ: 27/08/2017 ರಂದು ರಾತ್ರಿ 8 ಗಂಟೆಗೆ ವಡಗೇರಾ ಪೊಲೀಸ್ ಠಾಣೆಗೆ ಹೋಗಿ ವರದಿ ಮಾಡಿಕೊಂಡೆವು. ಠಾಣಾಧಿಕಾರಿಗಳು ವಡಗೇರಾ ರವರು ನಮಗೆ ಕರ್ತವ್ಯಕ್ಕೆ ತೆಗೆದುಕೊಂಡು ನನಗೆ ಬಬಲಾದ ಗ್ರಾಮದ ಗಣೇಶ ಬ/ಬ ಕ್ಕೆ, ಹುಸೇನಪ್ಪನಿಗೆ ಮನಗನಾಳ ಮತ್ತು ನಾಗಪ್ಪನಿಗೆ ಗುರುಸಣಗಿ ಗ್ರಾಮಗಳಿಗೆ ನೇಮಕ ಮಾಡಿ, ನಿಮಗೆ ಹಂಚಿಕೆ ಮಾಡಿದ ಗ್ರಾಮಗಳಿಗೆ ಹೋಗಿ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು. ಆಗ ನಾವು ನಮಗೆ ಹಂಚಿಕೆ ಮಾಡಿದ ಗ್ರಾಮಗಳಿಗೆ ಹೋದರಾಯಿತು ಅಂತಾ 3 ಜನರು ವಡಗೇರಾ ಪೊಲೀಸ್ ಠಾಣೆ ಮುಂದುಗಡೆ ರೋಡಿಗೆ ಬಂದು ನಿಂತಾಗ ವಡಗೇರಾ ಕಡೆಯಿಂದ ಒಂದು ರಿಯರ್ ಆಟೋ ನಂ. ಕೆಎ 33/4869 ನೇದ್ದು ಯಾದಗಿರಿ ಕಡೆಗೆ ಹೊರಟಿದ್ದರಿಂದ 3 ಜನರು ಅದರಲ್ಲಿ ಕುಳಿತು ಹೊರಟೆವು. ಸದರಿ ಆಟೋ ಚಾಲಕ ಕಾಮೇಶ್ವರರಾವ ತಂದೆ ಬಾಲಯ್ಯ ವಡವಟ್ಟಿ ಸಾ:ಗಾಂಧಿನಗರ ಯಾದಗಿರಿ ಈತನು ಆಟೋವನ್ನು ಚಲಾಯಿಸಿಕೊಂಡು ಹೊರಟನು. ಆಟೋದಲ್ಲಿ ನಾನು ಬಲಕ್ಕೆ ಕುಳಿತಿದ್ದು, ನನ್ನ ಪಕ್ಕ ಹುಸೇನಪ್ಪ ಮತ್ತು ಅವನ ಪಕ್ಕ ಎಡಗಡೆಗೆ ಕೊನೆಯಲ್ಲಿ ನಾಗಪ್ಪ ಹೀಗೆ 3 ಜನ ಕುಳಿತ್ತಿದ್ದೇವು. ವಡಗೇರಾ-ಯಾದಗಿರಿ ರೋಡ ಗಡ್ಡೆಸೂಗೂರು ಗೇಟ ದಾಟಿದ ನಂತರ ರೋಡಿನ ಮೇಲೆ ಹೋಗುತ್ತಿದ್ದಾಗ ರಾತ್ರಿ 9-30 ಗಂಟೆ ಸುಮಾರಿಗೆ ಗಡ್ಡೆಸೂಗೂರು ಮತ್ತು ಹುಲಕಲ ಗೇಟಗಳ ಮಧ್ಯದ ರೋಡಿನ ಮೇಲೆ ಹಳ್ಳದ ಹತ್ತಿರ ನಮ್ಮ ಎದುರುಗಡೆಯಿಂದ ಒಂದು ಆಪೆ ಟಂ ಟಂ ಆಟೋ ನಂ. ಕೆಎ 33/9584 ನೇದ್ದನ್ನು ಅದರ ಚಾಲಕನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಅಡ್ಡಾದಿಡ್ಡಿಯಾಗಿ ಚಲಾಯಿಸಿಕೊಂಡು ಬಂದವನೆ ಒಮ್ಮಲೇ ಕಟ್ಟ ಹೊಡೆದು ನಮ್ಮ ಆಟೋದ ಬಲಗಡೆ ಡಿಕ್ಕಿಪಡಿಸಿ ಮುಂದೆ ಹೋಗಿ ನಿಲ್ಲಿಸಿದನು. ಅವನ ಆಟೋ ಗುದ್ದಿದ ರಭಸಕ್ಕೆ ನನ್ನ ಬಲಗಾಲು ತೊಡೆಯಲ್ಲಿ ಮತ್ತು ಮೊಣಕಾಲಿನಲ್ಲಿ ಎಲುಬು ಮುರಿದು ಭಾರಿ ಗುಪ್ತಗಾಯ ಮತ್ತು ಮೊಣಕಾಲ ಕೆಳಗೆ ಭಾರಿ ರಕ್ತಗಾಯವಾಗಿ ಎಲುಬು ಮುರಿಯಿತು. ಹುಸೇನಪ್ಪನಿಗೆ ನೋಡಲಾಗಿ ಬಲ ಮೊಣಕಾಲಿಗೆ ಭಾರಿ ಹರಿದ ರಕ್ತಗಾಯವಾಗಿತ್ತು. ನಾಗಪ್ಪ ಮತ್ತು ನಾವು ಕುಳಿತು ಹೊರಟ ಆಟೋ ಚಾಲಕ ಕಾಮೇಶ್ವರರಾವನಿಗೆ ಯಾವುದೇ ಗಾಯಗಳಾಗಿರಲಿಲ್ಲ. ನಮಗೆ ಅಪಘಾತಪಡಿಸಿದ ಟಂ ಟಂ ಆಟೋ ಚಾಲಕನ ಹೆಸರು ವಿಳಾಸ ಕೇಳಿದಾಗ ಅವನು ತನ್ನ ಹೆಸರು ಸದ್ದಾಂ ಹುಸೇನ ತಂದೆ ಜಲಾಲಸಾಬ ನಾಯ್ಕೋಡಿ ಸಾ:ವಡಗೇರಾ ಎಂದು ಹೇಳಿದನು. ನಮ್ಮ ಜೊತೆಯಲ್ಲಿದ್ದ ನಾಗಪ್ಪನು 108 ಅಂಬ್ಯುಲೇನ್ಸಗೆ ಫೋನ ಮಾಡಿ ಕರೆಸಿ, ನಮ್ಮಿಬ್ಬರಿಗೆ ಅದರಲ್ಲಿ ಹಾಕಿಕೊಂಡು ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆ ಯಾದಗಿರಿಗೆ ತಂದು ಸೇರಿಕೆ ಮಾಡಿರುತ್ತಾರೆ. ಕಾರಣ ಟಂ ಟಂ ಆಟೋ ನಂ. ಕೆಎ 33/9584 ನೇದ್ದರ ಚಾಲಕನಾದ ಸದ್ದಾಂ ಹುಸೇನ ಈತನು ತನ್ನ ಆಟೋವನ್ನು ಅತಿವೇಗ ಮತ್ತು ನಿಸ್ಕಾಳಿಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮಲೇ ಬಲಕ್ಕೆ ಕಟ್ಟ ಹೊಡೆದು ಡಿಕ್ಕಿಪಡಿಸಿ, ನಮಗೆ ಗಾಯಗೊಳಿಸಿರುತ್ತಾನೆ. ಸದರಿ ಘಟನೆಯು ಟಂ ಟಂ ಚಾಲಕನ ನಿರ್ಲಕ್ಷತನದಿಂದ ಸಂಭವಿಸಿದ್ದು, ಸದರಿಯವನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 125/2017 ಕಲಂ: 279,337,338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 251/2017 ಕಲಂ: 304(ಎ) ಐಪಿಸಿ;- ದಿನಾಂಕ: 27/08/2017 ರಂದು 5 ಪಿ.ಎಂ.ಕ್ಕೆ ಪಿಯರ್ಾದಿದಾರರಾದ ಶ್ರೀ ಮಾನಪ್ಪ ತಂದೆ ಹಣಮಂತ ಕೊಂತಂ ವಯಾ: 55 ವರ್ಷ ಉ: ಒಕ್ಕಲುತನ ಜಾತಿ: ಪದ್ಮಶಾಲಿ ಸಾ: ಕುಂಬಾರ ಪೇಠ ಇವರು ಠಾಣೆಗೆ ಬಂದು ಒಂದು ದೂರು ಅಜರ್ಿ ನಿಡಿದ್ದು ಸಾರಾಂಶವೆನೆಂದರೆ ನನಗೆ ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳಿದ್ದು ಎಲ್ಲರಿಗೂ ಮದುವೆಯಾಗಿದ್ದು, ಗಂಡು ಮಕ್ಕಳಲ್ಲಿ ಹಿರಿಯ ಮಗನಾದ ಬೀಮಣ್ಣ ವಯಾ: 32 ವರ್ಷವಿದ್ದು ಈತನಿಗೆ ಒಬ್ಬ ಗಂಡು ಮಗನಿದ್ದು ಇಬ್ಬರು ಹೆಣ್ಣು ಮಕ್ಕಳಿರುತ್ತಾರೆ.ಹಿಗಿದ್ದು ಇಂದು ದಿನಾಂಕ: 27-08-2017 ರವಿವಾರ ವಿದ್ದು ಬೆಳಿಗ್ಗೆ ಸಮಯದಲ್ಲಿ ನಾನು ಹೆಂಡತಿಯಾದ ಸರಸ್ವತಿ ಸೊಸೆಯಾದ ರತ್ನಮ್ಮ ಎಲ್ಲರೂ ಮನೆಯಲ್ಲಿರುವಾಗ ಮಗನಾದ ಬೀಮಣ್ಣ ಈತನು ನಾನು ಕುರಿಗಳಿಗೆ ಮೇವು ಮಾಡಿಕೊಂಡು ಬರುತ್ತೆನೆ ಎಂದು ಮನೆಯಿಂದ ಹೋಗಿದ್ದನು. ಮಗನಾದ ಬೀಮಣ್ಣ ಈತನು ಬಗಳ ಸಮಯದ ಹೊರಗೆ ಮನೆಗೆ ಬರದೆ ಇರುವಾಗ ಹೆಂಡತಿಯಾದ ಸರಸ್ವತಿ ಇವಳು ಹುಡುಕಾಡಲು ಹೋಗಿ ಕವಡಿಮಟ್ಟಿ ಸೀಮಾಂತರದಲ್ಲಿರುವ ಶಿವಪ್ಪ ಏಳುರೊಟ್ಟಿ ಇವರ ಹೊಲದ ದಂಡೆಗೆ ಹಾಕಿದ ತಂತಿ ಬೇಲಿ ಹತ್ತಿರ ಮೃತಪ್ಟು ಬಿದ್ದುದ್ದನ್ನು ನೋಡಿ ಗಾಬರಿಗೊಂಡು ಬಂದು ಮನೆಯವರಿಗೆ ವಿಷಯ ತಿಳಿಸಿದಳು ನಾನು ನಮ್ಮಣ್ಣನಾದ ನಿಂಗಪ್ಪ ಅಳಿಯನಾದ ವೆಂಕಟೇಶ ತಂದೆ ರಾಮಚಂದ್ರಪ್ಪ ಶ್ರೀರಾಮ, ನಾವೆಲ್ಲರೂ ಕೂಡಿ ಹೊಲಕ್ಕೆ ಹೋಗಿ ನೋಡಲು ನನ್ನ ಮಗನಾದ ಭೀಮಣ್ಣ ಈತನು ಶಿವಪ್ಪ ಏಳುರೊಟ್ಟಿ ಇವರು ತಮ್ಮ ಹೊಲದ ಸುತ್ತಲು ಹಾಕಿದ ತಂತಿ ಬೇಲಿಗೆ ಕಾಲು ಸಿಕ್ಕಿ ಅಂಗಾತವಾಗಿ ಬಿದ್ದಿದ್ದನು. ನೋಡಲು ಬಲಗಾಲ ಮೊಳಕಾಲ ಕೆಳಗಡೆ ಮತ್ತು ಎಡಗಾಲ ಮೊಳಕಾಲ ಕೆಳಗೆ ಕರೆಂಟ ಶಾಖ ಹೊಡೆದು ಸುಟ್ಟಗಾಯ ಆಗಿ ಸ್ಥಳದಲ್ಲಿಯೆ ಮೃತ ಪಟ್ಟಿದ್ದನ್ನು ನೋಡಿದೆವು. ನಂತರ ಮೃತನಾದ ಮಗ ಬೀಮಣ್ಣ ಈತನ ಮೃತ ದೇಹವನ್ನು ಸರಕಾರಿ ಆಸ್ಪತ್ರೆ ಸುರಪೂರದ ಮರಚರಿ ಕೊಣೆಯಲ್ಲಿ ಹಾಕಿದ್ದು ಇರುತ್ತದೆ. ಈ ಘಟನೆಯು ಶಿವಪ್ಪ ಏಳುರೊಟ್ಟಿ ಇವರು ತನ್ನ ಹೊಲದ ಸುತ್ತಲಿನ ತಂತಿ ಬೇಲಿಗೆ ಮೇನ ವಯರ್ ಕರೆಂಟ ಕೊಟ್ಟರು ಜೀವ ಹಾನಿ ಆಗಬಹುದು ಎಂದು ತಿಳಿದು ಕೊಂಡಿದ್ದರು ಕೂಡ ನೀರ್ಲಕ್ಷತನದಿಂದ ಹೊಲದ ಬೇಲಿಗೆ ಕರೆಂಟ ಶಾಖ ಹಾಕಿರುವುದರಿಂದ ನಡೆದಿರುತ್ತದೆ. ಅಂತಾ ಕೊಟ್ಟ ಪಿಯರ್ಾದಿ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

No comments: