Police Bhavan Kalaburagi

Police Bhavan Kalaburagi

Tuesday, November 14, 2017

Yadgir District Reported Crimes Updated on 14-11-2014


                                           Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 273/2017 ಕಲಂ 341. 323, 504. 506. ಸಂ.34 ಐಪಿಸಿ ;- ದಿನಾಂಕ 13-11-2017 ರಂದು 6 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಹಣಮಂತ ತಂದೆ ಈರಪ್ಪಾ ಕುರುಬರ ವಯಾ:32 ಉ:ಒಕ್ಕಲುತನ ಸಾ: ಮುಂಡರಗಿ ತಾ: ಜಿ: ಯಾದಗಿರಿ ಇವರು ಠಾಣೆಗೆ ಹಾಜರಾಗಿ ತಮ್ಮ ಫಿಯರ್ಾಧಿ ಹೇಳಿಕೆ ಸಲ್ಲಿಸಿದ್ದು ಸಾರಾಂಶವೆನೆಂದರೆ ನಮ್ಮ ಮನೆಯ ಎದುರುಗಡೆ ನಮ್ಮ ಗ್ರಾಮದ  ಹಣಮಯ್ಯಾ ತಂದೆ ಹುಸೇಪ್ಪಾ ಕಲಾಲ ಇವರ ಹಿಟ್ಟಿನ ಗಿರಣಿ ಇದ್ದು ಈ ಜ್ಯಾಗೆಯ ಮುಂದೆ ಇರುವ ಖುಲ್ಲಾ ಜ್ಯಾಗೆಯ ವಿಷಯದಲ್ಲಿ ಈಗ ಸುಮಾರು ದಿವಸಗಳಿಂದ ನಮ್ಮಿಬ್ಬರಿಗೂ ಸದರಿ ಜ್ಯಾಗೆಯ ಪಾಲಿನ ವಿಷಯದಲ್ಲಿ  ತಕರಾರು ಆಗಿದ್ದು ಒಂದೆರಡು ಸಲ ಬಾಯಿ ಬಾತಿನ ಜಗಳಾ ಮಾಡಿಕೊಂಡಾಗ ನಮ್ಮೂರಿನ ಕೆಲ ಹಿರಿಯರು ನಮ್ಮಿಬ್ಬರಿಗೂ ಸಮಾಧಾನಪಡಿಸಿದ್ದರು.
       ಹೀಗಿದ್ದು ಇಂದು ದಿನಾಂಕ  13-11-2017 ರಂದು ನಾನು ಬೆಳಗ್ಗೆಯಿಂದ ಸಾಯಂಕಾಲದವರೆಗೆ ನಮ್ಮ ಗದ್ದೆಯಲ್ಲಿ ಟ್ರಿಲ್ಲರ್ ಹೊಡೆದು ಸಾಯಂಕಾಲ 5 ಗಂಟೆಗೆ ಮನೆಗೆ ನಮ್ಮ ಮನೆಯ ಹತ್ತಿರ ಬಂದು ಹಿಟ್ಟಿನ ಗಿರಣಿ ಮುಂದುಗಡೆ ಇದ್ದ ಖುಲ್ಲಾ ಜ್ಯಾಗೆಯಲ್ಲಿ ಎಂದಿನಂತೆ ಟ್ರಿಲ್ಲರ್ ನಿಲ್ಲಿಸಿದೇನು. ಆಗ ಅಲ್ಲಿಯೇ ಇದ್ದ 1) ಹಣಮಯ್ಯಾ ತಂದೆ ಹುಸೇಪ್ಪಾ ಕಲಾಲ ಹಾಗೂ ಇತನ ಅಣ್ಣನ ಮಕ್ಕಳಾದ 2) ಸಾಬಣ್ಣಾ ತಂದೆ ದೊಡ್ಡಹಣಮಂತ ಕಲಾಲ ಹಾಗೂ 3) ಹುಸೇನಪ್ಪಾ ತಂದೆ ದೊಡ್ಡ ಹಣಮಂತ ಈ ಮೂವರು ಬಂದವರೇ ನಮ್ಮ ಮನೆಯ ಹೋಗುತ್ತಿದ್ದ ನನ್ನನ್ನು ತಡೆದು ಅಡ್ಡಗಟ್ಟಿ ನಿಲ್ಲಿಸಿ  ನನಗೆ ಭೋಸಡಿ ಮಗನೇ ನಿನಗೆ ಇಲ್ಲಿ ನಿನ್ನ ಟ್ರಲ್ಲರ್ ನಿಲ್ಲಿಸಬೇಡ ಅಂತಾ ಎಷ್ಟು ಸಲ ಹೇಳಬೇಕು ರಂಡಿ ಮಗನೇ ಅಂತಾ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಜಗ್ಗಾಡ ಹತ್ತಿದರು. ಆಗ ನಾನು ಅವರಿಗೆ ನಾನು ಈ ಮೊದಲಿನಿಂದಲೂ ಇದೇ ಜ್ಯಾಗೆಯಲ್ಲಿಯೇ ನಿಲ್ಲಿಸುತ್ತಾ ಬಂದಿದ್ದೆನೆ ಮತ್ತೆಲ್ಲಿ ನಿಲ್ಲಿಸಲಿ ಅಂತಾ ಅವರಿಗೆ ಹೇಳುತ್ತಿದ್ದಾಗ ಅವರಲ್ಲಿ ಹಣಮಯ್ಯಾ ತಂದೆ ಹುಸೇಪ್ಪಾ ಕಲಾಲ ಇತನು ನನ್ನ ಕಪಾಳಕ್ಕೆ ಮತ್ತು ಕೈಯಿಂದ ಹೊಡೆದನು. ಮತ್ತು ಅವರ ಜೊತೆಗಿದ್ದ ಸಾಬಣ್ಣಾ ತಂದೆ ದೊಡ್ಡಹಣಮಂತ ಕಲಾಲ ಹಾಗೂ ಹುಸೇನಪ್ಪಾ ತಂದೆ ದೊಡ್ಡ ಹಣಮಂತ ಕಲಾಲ ಇಬ್ಬರೂ ನನಗೆ ನೆಲಕ್ಕೆ ಹಾಕಿ ಕಾಲಿನಿಂದ ಒದೆಯುತ್ತಿದ್ದಾಗ ಅಲ್ಲಿಯೇ ಇದ್ದ ನಮ್ಮಣ್ಣ ದೇವಪ್ಪಾ ತಂದೆ ಈರಪ್ಪಾ ಹಾಗೂ ನಮ್ಮ ಸಂಬಂಧಿಯಾದ ಬಸಪ್ಪಾ ತಂದೆ ಭೀಮಶೆಪ್ಪಾ ಕುರುಬರ ಇವರು ಬಂದು ನನಗೆ ಹೊಡೆಯುವುದನ್ನು ಬಿಡಿಸಿಕೊಂಡರು. ಆಗ ಅವರು ಮಗನೇ ನಿನ್ನ ಇನ್ನೂ ಬಾಲ ಇದೆ ಇನ್ನೊಮ್ಮೆ ಸಿಗು ಮಗನೇ ನಿನಗೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಭಯ ಹಾಕಿ ಅಲ್ಲಿಂದ ಹೋದರು. ಈ ಘಟನೆ ನಮ್ಮ ಮನೆಯ ಮುಂದೆ ಇಂದು ಸಾಯಂಕಾಲ 5 ಗಂಟೆಗೆ ಜರುಗಿರುತ್ತದೆ. ಈ ಬಗ್ಗೆ ನನಗೆ ತಡೆದು ಹೊಡೆಬಡಿ ಮಾಡಿ ಅವಾಚ್ಯವಾಗಿ  ಬೈದು ಜೀವದ ಭಯ ಹಾಕಿದ ಮೇಲ್ಕಂಡ 1) ಹಣಮಯ್ಯಾ ತಂದೆ ಹುಸೇಪ್ಪಾ ಕಲಾಲ ಹಾಗೂ ಇತನ ಅಣ್ಣನ ಮಕ್ಕಳಾದ 2) ಸಾಬಣ್ಣಾ ತಂದೆ ದೊಡ್ಡಹಣಮಂತ ಕಲಾಲ ಹಾಗೂ 3) ಹುಸೇನಪ್ಪಾ ತಂದೆ ದೊಡ್ಡ ಹಣಮಂತ ಈ ಮೂವರ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 273/2017 ಕಲಂ 341, 323, 504, 506 ಸಂ: 34 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 274/2017 ಕಲಂ: 323, 324, 504, 506 ಸಂ 34 ಐಪಿಸಿ;- ದಿನಾಂಕ 13/11/2017 ರಂದು ಸಾಯಂಕಾಲ 5-00 ಗಂಟೆಗೆ ಫಿರ್ಯಾದಿಯು ತನ್ನ ಹಿಟ್ಟಿನ ಗಿರಣಿ ಹತ್ತಿರ ಹೋಗುವಾಗ ಆರೋಪಿತರೆಲ್ಲರೂ ಕೂಡಿಕೊಂಡು ಬಂದು ತಮ್ಮ ಟಿಲ್ಲರಗಳನ್ನು ಫಿರ್ಯಾಧಿಯ ಹಿಟ್ಟಿನ ಗಿರಣಿ ಮುಂದೆ ಬಿಟ್ಟು ಹೋಗುವಾಗ ಫಿರ್ಯಾಧಿ ನಮ್ಮ ಹಿಟ್ಟಿನ ಗಿರಣಿ ಮುಂದೆ ಟಿಲ್ಲರ ಬಿಡಬೇಡ ಜನರಿಗೆ ತೊಂದರೆ ಆಗುತ್ತಿದ್ದೆ ಅಂತಾ ಅಂದಾಗ ಆರೋಪಿತರೆಲ್ಲರೂ ಕೂಡಿ ಹಳೇ ದ್ವೇಶದಿಂದ ಅವಾಚ್ಯವಾಗಿ ಬೈದು ಫಿರ್ಯಾಧಿ ಜೋತೆಗೆ ಜಗಳ ತೆಗೆದು ಕಲ್ಲಿನಿಂದ, ಕೈಯಿಂದ ಹೊಡೆಬಡೆ ಮಾಡಿ ಕಾಲಿನಿಂದ ಒದ್ದು ಫಿರ್ಯಾಧಿಗೆ ಜೀವದ ಭಯ ಹಾಕಿದ ಬಗ್ಗೆ ಫಿರ್ಯಾಧಿ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಆಗಿರುತ್ತದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ 87 ಕೆಪಿ ಯ್ಯಾಕ್ಟ ;- ದಿನಾಂಕ 13/11/2017 ರಂದು 6.05 ಪಿಎಮ್ ಕ್ಕೆ ಆರೋಪಿತರೆಲ್ಲರೂ ದಿಗ್ಗಿ ಸಂಗಮೇಶ್ವರ ಗುಡಿಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 2900/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 6.05 ಪಿಎಮ್ ದಿಂದ 7.05 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 7.20 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.55 ಪಿಎಮ್.ಕ್ಕೆ ಠಾಣೆ ಗುನ್ನೆ ನಂ:116/2017 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 445/2017.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್.;- ದಿನಾಂಕಃ 13-11-2017 ರಂದು 10-00 ಎ.ಎಮ್.ಕ್ಕೆ ಶ್ರೀ ಶಿವಪುತ್ರ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ರವರು ಇಬ್ಬರು ಆರೋಪಿ, ಮುದ್ದೆಮಾಲು, ಜಪ್ತಿಪಂಚನಾಮೆಯೊಂದಿಗೆ ಠಾಣೆಗೆ ಹಾಜರಾಗಿ ವರದಿ ನೀಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ 09-11-2017 ರಂದು ಬೆಳಿಗ್ಗೆ 05-00 ಗಂಟೆಗೆ ಠಾಣೆಯಲ್ಲಿ ಇದ್ದಾಗ ಬಾತ್ಮೀ ಬಂದ್ದಿದ್ದೆನೆಂದರೆ ಕೊಂಗಂಡಿ ಗ್ರಾಮದ ಹಳ್ಳದಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ಬಂದು ಕೋಂಗಂಡಿ ಗ್ರಾಮದ ಪಕ್ಕದಲ್ಲಿ ಸ್ಟಾಕ ಮಾಡಿ ಅಲ್ಲಿಂದ ಜೆಸಿಬಿ ಸಾಹಾಯದಿಂದ 2 ಟಿಪ್ಪರಗಳಲ್ಲಿ ಮರಳನ್ನು ತುಂಬುತ್ತಿದ್ದಾರೆ ಅಂತ ಖಚಿತ ಬಾತ್ಮೀ ಬಂದ ಮೇರೆಗೆ ಠಾಣೆಯ ಸಿಬ್ಬಂದಿಯವರಾದ ನರಸಿಂಗಪ್ಪ ಹೆಚ್,ಸಿ, 39 ಶರಣಪ್ಪ ಹೆಚ್.ಸಿ. 164, ಶಿವನಗೌಡ ಪಿ.ಸಿ. 141, ಯಲ್ಲಾಲಿಂಗ ಪಿ.ಸಿ.249. ರವರಿಗೆ  ಮಾಹಿತಿ ತಿಳಿಸಿ ಮಾನ್ಯ ಎ.ಎಸ್.ಪಿ.ಸಾಹೇಬರು ಸುರಪೂರ ರವರ ಮಾರ್ಗದರ್ಶನದಲ್ಲಿ ದಾಳಿ ಕುರಿತು ಹೋಗುವ ಸಂಬಂದ ಶಿವನಗೌಡ ಸಿಪಿಸಿ-141 ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಸುಬಾಷ ತಂದೆ ಯಂಕಪ್ಪ ಗುಡಕಾಯಿ ವ|| 25 ಜಾ|| ಬೇಡರ ಉ|| ಒಕ್ಕಲುತನ ಸಾ|| ಚಂದಾಪೂರ ತಾ|| ಶಹಾಪೂರ 2] ಶ್ರೀ ಯಂಕಪ್ಪ ತಂದೆ ಮರೇಪ್ಪ ಸೂಗೂರ ವ| 30 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಸಗರ (ಬಿ) ತಾ|| ಶಹಾಪೂರ ಇವರಿಗೆ 5-15 ಎ.ಎಂ.ಕ್ಕೆ ಠಾಣೆಗೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ಮಾಹಿತಿ ತಿಳಿಸಿ ದಾಳಿಯ ಕಾಲಕ್ಕೆ ಪಂಚರಾಗಲು ಕೇಳಿಕೊಂಡ ಮೇರೆಗೆ ಸದರಿವಯರು ಪಂಚರಾಗಲು ಒಪ್ಪಿಕೊಂಡಿದ್ದರಿಂದ ದಾಳಿ ಕುರಿತು ಎಲ್ಲರೂ ಕೂಡಿ ಬೇಳಿಗ್ಗೆ 5-20 ಎ.ಎಂ.ಕ್ಕೆ ಠಾಣೆಯಿಂದ ಖಾಸಗಿ ಜೀಪನ್ನೇದ್ದರಲ್ಲಿ ಹೊರಟು ಕೊಂಗಂಡಿ ಗ್ರಾಮಕ್ಕೆ ಬೆಳಿಗ್ಗೆ 5-50 ಎ.ಎಂ.ಕ್ಕೆ  ಹೋಗಿ ಜೀಪಿನಿಂದ ಇಳಿದು ನಾನು ಮತ್ತು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಮನೆಗಳು ಮತ್ತು ಜಾಲಿ ಕಂಟಿಯ ಮರೆಯಲ್ಲಿ ನಿಗಾಮಾಡುತ್ತ ನೋಡಲಾಗಿ ಮರಳು ಸ್ಟಾಕ್ ಮಾಡಿದ್ದು, 1 ಟಿಪ್ಪರದಲ್ಲಿ ಒಂದು ಜೆಸಿಬಿಯ ಸಹಾಯದಿಂದ ಮರಳನ್ನು ಲೋಡಮಾಡುತ್ತಿದ್ದು, 1 ಟಿಪ್ಪರ ಕೆಎ-33 ಎ-4544 ನ್ನೇದ್ದು ಮರಳು ಲೋಡ ಮಾಡಿಕೊಂಡು ಹೋಗಲು ರೆಡಿಯಾಗಿ ನಿಂತಿದ್ದನ್ನು ಖಚಿತ ಪಡಿಸಿಕೊಂಡು ಬೆಳಿಗ್ಗೆ 6-00 ಗಂಟೆಗೆ ಎಲ್ಲರು ಕೂಡಿ ದಾಳಿ ಮಾಡಲಾಗಿ ಎರಡು ಟಿಪ್ಪರ ಚಾಲಕರು ಸಿಕ್ಕಿದ್ದು, ಉಳಿದವರು ಓಡಿ ಹೊದರು. 2 ಟಿಪ್ಪರ ಚಾಲಕರಿಗೆ ಮರಳು ಸ್ಟಾಕ್ಮಾಡಿ ಮರಳು ಲೋಡಮಾಡಿ ಕೊಂಡು ಸಾಗಾಣಿಕೆ ಮಾಡಲು ಸರಕಾರದಿಂದ ಪರವಾನಿಗೆ ಪತ್ರ ಹಾಜರ ಪಡಿಸಲು ಕೇಳಲಾಗಿ. ಸದರಿ ಚಾಲಕರು ಯಾವದೆ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದ್ದು, ಸದರಿಯವರಿಗೆ ವಿಚಾರಿಸಲಾಗಿ ಅದರಲ್ಲಿ 1)ಮರಳು ತುಂಬಿಕೊಂಡು ಹೋಗಲು ರೆಡಿಯಾಗಿ ನಿಂತ್ತಿದ್ದ ಟಿಪ್ಪರ ನಂ.ಕೆಎ-33 ಎ-4544 , ಅ:ಕಿ: 8,00,000=00 ರೂ ಇದ್ದು, ಸದರಿ ಟಿಪ್ಪರದಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ:6000=00 ರೂ ಇರುತ್ತದೆ ಅದರ ಚಾಲಕನಿಗೆ ವಿಚಾರಿಸಲಾಗಿ ತನ್ನ ಹೆಸರು ನಿಂಗಪ್ಪ ತಂದೆ ಮಲ್ಲಪ್ಪ ಲಕ್ಕಣ್ಣನೋರ ವ|| 22 ಉ|| ಚಾಲಕ ಜಾ|| ಕುರುಬುರ ಸಾ|| ಏವೂರ ತಾ|| ಸುರಪೂರ ಅಂತ ಹಾಗೂ ನಮ್ಮ ಮಾಲೀಕನ ಹೆಸರು ಸುಬಾಶ್ಚಂದ್ರ ತಂದೆ ಪರಮಾನಂದ ಖಾನಗೌಡ ಸಾ|| ಶಹಾಪುರ ಇರುತ್ತದೆ ಅಂತಾ ತಿಳಿಸಿರುತ್ತಾನೆ. 2) ಮರಳು ತುಂಬಿಕೊಳ್ಳಲು ನಿಂತಿದ್ದ ಟಿಪ್ಪರ ಪರಿಸಿಲಿಸಿ ನೋಡಲಾಗಿ ನಂಬರ ಇರುವದಿಲ್ಲಾ ಹಳದಿ ಮತ್ತು ಬೂದಿ ಬಣ್ಣದ ಭಾರತ ಬೇಂಜ್ ಕಂಪನಿಯ ಟಿಪ್ಪರ ಇದ್ದು, ಅದರ ರಜಿಸ್ಟ್ರೇಷನ್ ನಂ. ಇರುವುದಿಲ್ಲ ಅದರ ಚೆಸ್ಸಿ ನಂ ನೋಡಲಾಗಿ ಒಇಅ2416ಃಏಊಕ049215. ಅಂತಾ ಇದ್ದು, ಅ:ಕಿ: 8,00,000=00 ರೂ ಇದ್ದು, ಸದರಿ ಟಿಪ್ಪರದಲ್ಲಿ ಅಂದಾಜು 4 ಬ್ರಾಸ್ ಮರಳು ಅ:ಕಿ:6000=00 ರೂ ಇದ್ದು ಅದರ ಚಾಲಕನಿಗೆ ವಿಚಾರಿಸಲಾಗಿ ಬಸವರಾಜ ತಂದೆ ಹಣಮಂತರಾಯ ಗೌಡೂರ ವ||30 ವರ್ಷ ಜಾ|| ಬೇಡರ ಉ|| ಚಾಲಕ ಸಾ|| ಸಾದ್ಯಾಪೂರ ತಾ|| ಶಹಾಪೂರ ಅಂತಾ ಹಾಗೂ ನಮ್ಮ ಮಾಲೀಕನ ಹೆಸರು ಸಿದ್ದಲಿಂಗಪ್ಪ ತಂದೆ ರಾಮಪ್ಪ ಕದನಳ್ಳಿ ಸಾ|| ಬಳಬಟ್ಟಿ ಇರುತ್ತದೆ ಅಂತಾ ತಿಳಿಸಿ ತಮ್ಮ ಮಾಲೀಕರು ಕೊಂಗಂಡಿಯ ಗುಡದಪ್ಪ ತಂ/ ನಿಂಗಪ್ಪ ವಾರಿ ಈತನಿಗೆ ಸಂಬಂಧಿಸಿದ ಖುಲ್ಲಾ ಜಾಗೆಯಲ್ಲಿ ಕೊಂಗಂಡಿ ಹಳ್ಳದಿಂದ ಕಳ್ಳತನ ಮಾಡಿಕೊಂಡು ಬಂದ ಮರಳನ್ನು ಸ್ಟಾಕ್ ಮಾಡಿದ್ದು, ನೀವು ಸದರ ಮರಳನ್ನು ಸ್ಟಾಕ್ ಮಾಡಿದ ಯಲ್ಲಪ್ಪ ತಂದೆ ಪೀರಪ್ಪ ಮತ್ತು ಹಣಮಂತ ತಂದೆ ಬಾಗಣ್ಣ  ಸಾ|| ಇಬ್ಬರು ಕೋಂಗಂಡಿ ಗ್ರಾಮ ಇವರಿಗೆ ಬೇಟಿಯಾಗಿ ಮರಳನ್ನು ಶಹಾಪುರದಲ್ಲಿ ಮಾರಾಟ ಮಾಡಲು ನಮ್ಮ ಟಿಪ್ಪರಗಳಲ್ಲಿ ತುಂಬಿಕೊಂಡು ಬರಲು ತಿಳಿಸಿದ್ದು, ಸದರಿ ಗುಡದಪ್ಪ, ಯಲ್ಲಪ್ಪ ಮತ್ತು ಹಣಮಂತ ಇವರು ಓಡಿ ಹೋಗಿರುತ್ತಾರೆ ಅಂತಾ ತಿಳಿಸಿದರು. ಮರಳನ್ನು ಲೋಡ ಮಾಡುತ್ತಿದ್ದ ಜೆ.ಸಿ.ಬಿಯನ್ನು ಪರಿಶೀಲಿಸಿ ನೋಡಲಾಗಿ ಅದರ ರಜಿಸ್ಟ್ರೇಷನ್ ನಂಬರ ಇರುವದಿಲ್ಲಾ ಅದು ಖಿಇಖಇಘಿ ಕಂಪನಿಯ ಬಿಳಿ ಮತ್ತು ಬೂದಿ ಬಣ್ಣದ ಜೆ.ಸಿ.ಬಿ.ಇದ್ದು ಅದರ ಮೇಲೆ ಖಅ12ಂಕಿ-12-ಆ-740-8557 ಅಂತ ನಂಬರ ಇದ್ದು, ಅದರ ಅ.ಕಿ|| 3,00,000=00 ರೂ ಇರುತ್ತದೆ. ಅದರ ಚಾಲಕನ ಹೆಸರು ಮೈಲಾರಿ ತಂ/ ಚಂದಪ್ಪ ಸಾ|| ಮಂಡಗಳ್ಳಿ ಅಂತಾ ಇರುತ್ತದೆ ಅಂತಾ ಸದರ ಟಿಪ್ಪರ ಡ್ರೈವರು ತಿಳಿಸಿರುತ್ತಾರೆ.
    ಸದರ ಮರಳು ಸ್ಟಾಕ ಮಾಡಿದ ಸ್ಥಳದಲ್ಲಿ ಅಂದಾಜು 35 ಬ್ರಾಸ್ನಷ್ಟು ಮರಳು ಇದ್ದು, ಅದರ ಅಂದಾಜು ಕಿಮ್ಮತ್ತು 52,000=00 ರೂಪಾಯಿ ಇದ್ದು, ಸದರಿಯವರು ಸರಕಾರದಿಂದ ಮರಳು ಸ್ಟಾಕ ಮಾಡಲು ಮತ್ತು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಬಂದು ಸ್ಟಾಕ್ ಮಾಡಿ ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗೆ 6-00 ಎ.ಎಮ್. ದಿಂದ 07-30 ಎ.ಎಮ್. ವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಸ್ಟಾಕ ಮಾಡಿದ ಮರಳನ್ನು ಲೋಕೋಪಯೋಗಿ ಇಲಾಖೆಯವರಿಂದ ಮಾಪನ ಮಾಡಿಸಿ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ವಿಲೇವಾರಿ ಮಾಡುವವರೆಗೆ ಸಿಬ್ಬಂದಿಯವರಿಗೆ ಬೆಂಗಾವಲು ನೇಮಿಸಿದ್ದು ಇರುತ್ತದೆ. ಜೆ.ಸಿ.ಬಿ.ಯನ್ನು ಬೇರೆ ಚಾಲಕನ ಸಹಾಯದಿಂದ ಮತ್ತು ಸದರಿ ಟಿಪ್ಪರಗಳನ್ನು ಸದರಿ ಚಾಲಕರ ಸಹಾಯ ದಿಂದ ಠಾಣೆಗೆ ಬೆಳಿಗ್ಗೆ 9-00 ಗಂಟೆಗೆ ಬಂದು. ವರದಿಯನ್ನು ತಯ್ಯಾರಿಸಿ ಜೆ.ಸಿ.ಬಿ.ಚಾಲಕ ಮತ್ತು ಸದರಿ ಟಿಪ್ಪರಗಳ ಮಾಲಿಕರ ಹಾಗು ಟಿಪ್ಪರ್ ಚಾಲಕರ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಬೆಳಿಗ್ಗೆ 10-00 ಗಂಟೆಗೆ. ಸ||ತ|| ಪಿಯರ್ಾದಿದಾರನಾಗಿ ವರದಿ  ಸಲ್ಲಿಸಿದ್ದು ಸದರಿ ವರದಿ ಸಾರಾಂಶದ ಮೇಲಿಂದ ಠಾಣೆ  ಗುನ್ನೆ ನಂ.445/2017 ಕಲಂ 379 ಐ.ಪಿ.ಸಿ ಮತ್ತು 44(1)ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 122/2016  ಕಲಂ:78 (111) ಕೆ ಪಿ ಆಕ್ಟ & 420 ಐಪಿಸಿ;- ದಿನಾಂಕ:13:11.2017 ರಂದು 3:30 ಪಿ ಎಂ ಕ್ಕೆ ಶಾಮಸುಂದರ್ ಎ.ಎಸ್.ಐ ರವರು ತಾವು ಪೂರೈಸಿದ ಅಸಲ ಮಟಕಾ ಜಪ್ತಿ ಪಂಚನಾಮೆ ಮತ್ತು ಜ್ಞಾಪನಾ ಪತ್ರ ಹಾಗು ಆರೋಪಿ ಮತ್ತು ಆರೋಪಿತನಿಂದ ಜಪ್ತಿ ಮಾಡಿದ ಮುದ್ದೇಮಾಲನ್ನು ಮುಂದಿನ ಕ್ರಮ ಜರುಗಿಸುವ ಕುರಿತು ಠಾಣೆಗೆ ಬಂದು ಹಾಜರುಪಡಿಸಿದ್ದು, ಶಾಮಸುಂದರ್ ಎ.ಎಸ್.ಐ ರವರು ಹಾಜರುಪಡಿಸಿದ ಪಂಚನಾಮೆ ಮತ್ತು ಜ್ಞಾಪನಾ ಪತ್ರ ಸಾರಾಂಶವೆನೆಂದರೆ, ಕಕ್ಕೇರಾ ಪಟ್ಟಣದ ಡಾ|| ಅಂಬೇಡಕರ್ ವೃತ್ತದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬನು ನಿಂತು ತನ್ನ ಲಾಭಕ್ಕಾಗಿ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತಾ ಜನರಿಗೆ ಮೋಸ ಮಾಡಿ ಕಲ್ಯಾಣ ಮಟಕಾ ಜೂಜಾಟ ಬರೆದುಕೊಳ್ಳೂತ್ತಿದ್ದಾನೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ ಪಂಚರನ್ನಾಗಿ ಶ್ರೀ ಚಿದಾನಂದ ತಂದೆ ಅಮರಪ್ಪ ಭೋವಿ ವಯ:35, ಉ:ಕೂಲಿ, ಜಾ:ಕಬ್ಬಲಿಗ, ಸಾ:ಕಕ್ಕೇರಾ ಮತ್ತು ಶರಣು ತಂದೆ ಹುಲಗಪ್ಪ ಹುಡೇದವರ ವಯ:22, ಉ:ಪಾನ್ಶಾಪ್, ಜಾ:ಬೇಡರ, ಸಾ:ಕಕ್ಕೇರಾ ಇವರನ್ನು 1:10 ಪಿ.ಎಮ್ ಗಂಟೆಗೆ ಉಪಠಾಣೆಗೆ ಕರೆಯಿಸಿ ಸದರಿಯವರಿಗೆ ವಿಷಯ ತಿಳಿಸಿ ಮಟಕಾ ಜೂಜಾಟ ದಾಳಿಗೆ ಬರಲು ತಿಳಿಸಿ ಸಿಬ್ಬಂದಿಯವರಾದ ಶಿವಪ್ಪ ಹೆಚ್.ಸಿ-136, ಶಂಕರಗೌಡ ಪಿಸಿ-299, ಮಹಿಬೂಬ್ ಅಲಿ ಪಿಸಿ-147 ರವರು ಕೂಡಿಕೊಂಡು 1:15 ಪಿ.ಎಂ ಗಂಟೆಗೆ ಉಪಠಾಣೆಯಿಂದ ಮೋಟಾರು ಸೈಕಲ್ಗಳ ಮೇಲೆ ದಾಳಿ ಮಾಡುವ ಕುರಿತು ಹೊರಟು. 1:20 ಗಂಟೆಗೆ ಭಾತ್ಮೀ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ಡಾ|| ಅಂಬೇಡಕರ್ ವೃತ್ತದ ಹತ್ತಿರ ಸ್ವಲ್ಪ ದೂರದಲ್ಲಿ ಮೊಟಾರು ಸೈಕಲ್ಗಳನ್ನು ನಿಲ್ಲಿಸಿ ಮರೆ ಮರೆಯಾಗಿ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಮಟಕಾ ಜೂಜಾಟ ನಡೆದಿರುವದು ಖಾತ್ರಿಯಾದ ಮೇಲೆ ನಾವೆಲ್ಲರೂ 1:30 ಗಂಟೆಗೆ ದಾಳಿ ಮಾಡಿದ್ದು, ನಮ್ಮನ್ನು ಕಂಡು ಮಟಕಾ ಬರೆಸುವವರು ಓಡಿ ಹೋಗಿದ್ದು, ಮಟಕಾ ಬರೆದುಕೊಳ್ಳುವವನಿಗೆ ಹಿಡಿದು ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಅಬ್ದುಲ್ ರೆಹಮಾನ್ ತಂದೆ ಬಾಬುಮಿಯಾ ಖಾಜಿ ವಯ:32, ಉ:ಕೂಲಿ, ಜಾ:ಮುಸ್ಲಿಂ, ಸಾ:ಕಕ್ಕೆರಾ  ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಪಂಚರ ಸಮಕ್ಷಮದಲ್ಲಿ 1 ಬಾಲ್ ಪಾಯಿಂಟ್ ಪೆನ್, ಒಂದು ಮಟಕಾ ಚೀಟಿ, 2375/- ರೂ ನಗದು ಹಣ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ 1:30 ಪಿ ಎಂ ದಿಂದ 2:30 ಪಿ ಎಂ ವರೆಗೆ ಜಪ್ತಿ ಪಂಚನಾಮೆ ಮಾಡುವ ಮೂಲಕ ಜಪ್ತಿ ಮಾಡಿ ಆರೋಪಿತನಾದ ಅಬ್ದುಲ್ ರೆಹಮಾನ್ ತಂದೆ ಬಾಬುಮಿಯಾ ಖಾಜಿ ವಯ:32, ಉ:ಕೂಲಿ, ಜಾ:ಮುಸ್ಲಿಂ, ಸಾ:ಕಕ್ಕೆರಾ ಹಾಗು ಸದರಿಯವನಿಂದ ಜಪ್ತಿ ಮಾಡಿದ ಮುದ್ದೆಮಾಲಿನೊಂದಿಗೆ 3:30 ಗಂಟೆಗೆ ಠಾಣೆಗೆ ಬಂದು ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರುಪಡಿಸಿದ್ದು ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಸೂಚಿಸಲಾಗಿದೆ. ಅಂತಾ ಇದ್ದು, ಸದರ ಪಂಚನಾಮೆ ಮತ್ತು ಜ್ಞಾಪನ ಪತ್ರದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:122/2017 ಕಲಂ:78(111) ಕೆ.ಪಿ ಆಕ್ಟ್ ಸಂಗಡ 420 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: