Police Bhavan Kalaburagi

Police Bhavan Kalaburagi

Thursday, November 16, 2017

Yadgir District Reported Crimes Updated on 16-11-2017


                                           Yadgir District Reported Crimes
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 277/2017 ಕಲಂ: 279, 304(ಎ) ಐಪಿಸಿ ಮತ್ತು 187 ಐ.ಎಮ್.ವ್ಹಿ ಎಕ್ಟ ;- ದಿನಾಂಕ 15-11-2017 ರಂದು 3-40 ಪಿ.ಎಮ ಕ್ಕೆ ಯರಗೋಳ- ಯಾಗಾಪುರ ರೋಡಿನ ಮೇಲೆ ಟಂಟಂ ಕೆಎ-33/3418 ನೇದ್ದರ ಚಾಲಕ ಸೂರ್ಯ ರಾಠೋಡ ಸಾ:ಯಾಗಾಪುರ ದೊಡ್ಡ ತಾಂಡ ಈತನು ತನ್ನ ಟಂಟಂ ನ್ನು ಯರಗೋಳದಿಂದ ಯಾಗಾಪುರದ ಕಡೆಗೆ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡು ಹೋಗುತ್ತೀರುವಾಗ ಅದೇ ವೇಳೆಗೆ ಎದುರುಗಡೆಯಿಂದ ಮೋಟಾರು ಸೈಕಲ್ ನಂ ಕೆಎ-33 ಎಸ್-1047 ನೇದ್ದರ ಸವಾರ ಶರಣಪ್ಪ ತಂದೆ ಚಂದ್ರಪ್ಪ ಸಾ:ಯರಗೋಳ ಈತನು ತನ್ನ ಮೋಟಾರು ಸೈಕಲ್ ಮೇಲೆ ಹಿಂದುಗಡೆ ಮೃತ ಯಂಕಪ್ಪ ತಂದೆ ಚನ್ನಬಸಪ್ಪ ವಯ:65 ಸಾ:ಯರಗೋಳ ಈತನನ್ನು ಕುಡಿಸಿಕೊಂಡು ಈ ತನುನ ಕೂಡಾ ಯಾಗಾಪುರ ಕಡೆಯಿಂದ ಯರಗೋಳ ಕಡೆಗೆ ಮೋಟಾರು ಸೈಕಲ್ ಅತಿವೇಗ ಮತ್ತು ಅಲಕ್ಷ್ಯತನದಿಂದ ಓಡಿಸಿಕೊಂಡುಹೋಗಿ ಯರಗೋಳ ಗ್ರಾಮದ ಪ್ರಾಥಮಿಕ <ಜಿಟಜ:///\\್ರಾಥ> ಶಾಲೆಯ ಹತ್ತಿರ ಎರಡು ವಾಹನದ ಚಾಕಲರು ತಮ್ಮ ವಾಹನಗಳ ಚಾಲನೆ ಮೇಲಿನ ನಿಯಂತ್ರಣ ಕಳೆದುಕೊಂಡು ಪರಸ್ಪರ ಮುಖಾಮುಖಿ ಡಿಕ್ಕಿ ಪಡಿಸಿದ್ದು ಈ ಅಪಘಾತದಲ್ಲಿ ಮೃತನ ತೆಲೆ ಮತ್ತು ಕಾಲಿಗೆ ಭಾರಿ ರಕ್ತಗಾಯ ಹೊಂದಿದಾಗ ಆತನಿಗೆ ಉಪಚಾರ ಕುರಿತು ಯಾದಗಿರ ಸರಕಾರಿ ಆಸ್ಪತ್ರಗೆ ತಂದಾಗ ಮೃತನು ಆಸ್ಪತ್ರೆಯ ಆವರಣದಲ್ಲಿ 4-30 ಪಿ.ಎಮ ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಪಿರ್ಯಾಧಿಯ ಸಾರಾಂಶವಿರುತ್ತದೆ.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 447/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್;- ದಿನಾಂಕ 15/11/2017 ರಂದು ಮುಂಜಾನೆ 07-45 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ನಾಗರಾಜ ಜಿ. ಪಿಐ ಶಹಾಪೂರ ಪೊಲೀಸ್ ಠಾಣೆ ರವರು, ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಹೋಗುತಿದ್ದ ಟ್ಯಾಕ್ಟರ ವಾಹನವನ್ನು ಠಾಣೆಗೆ  ತಂದು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 15/11/2017 ರಂದು  ಬೆಳಗಿನ ಜಾವ 04-00 ಗಂಟೆಗೆ ವಿಶೇಷ ಬೆಳಗಿನ ಗಸ್ತು ಕರ್ತವ್ಯ ಕುರಿತು ಠಾಣೆಯಿಂದ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ್ ನಂಬರ ಕೆಎ-33-ಜಿ-138 ನೇದ್ದರಲ್ಲಿ ಹೋಗಿ  ಕರ್ತವ್ಯ ನಿರ್ವಹಿಸುತ್ತಾ ಬೆಳಗಿನ ಜಾವ 05-45 ಗಂಟೆಗೆ ಶಹಾಪೂರ ನಗರದ ಹೊಸ ಬಸ್ ನಿಲ್ದಾಣದ ಹತ್ತಿರವಿದ್ದಾಗ ಖಚಿತಿ ಮಾಹಿತಿಯ ಮೇರೆಗೆ ಶಹಾಪೂರ ನಗರದ ಅಗ್ನಿ ಶಾಮಕ ಠಾಣೆಯ ಹತ್ತಿರ ಹೋಗಿ ಅಂದಾಜು ಒಂದು ಬ್ರಾಸನಷ್ಟು ಅಕ್ರಮವಾಗಿ ಮರಳು ಲೋಡ ಮಾಡಿಕೊಂಡು ಬರುತ್ತಿದ್ದ ಟ್ಯಾಕ್ಟರ ಇಂಜಿನ ನಂಬರ ಕೆಎ-33-ಟಿಎ-8817 ಮತ್ತು ಟ್ರಾಲಿ ನಂಬರ ಕೆಎ-33-ಟಿ-320 ನೇದ್ದು ತಾಬೆಗೆ ತೆಗೆದುಕೊಂಡು ಬಂದು ಮುಂದಿನ ಕ್ರಮ ಕೈಕೊಳ್ಳಲು ವಿನಂತಿ ಅಂತ ಇತ್ಯಾದಿ ಫಿರ್ಯಾದಿಯವರ ವರದಿಯ ಸಾರಾಂಶದ  ಮೇಲಿಂದ ಠಾಣೆ ಗುನ್ನೆ ನಂಬರ 447/2017 ಕಲಂ 379 ಐ.ಪಿ.ಸಿ ಮತ್ತು 44[1] ಕೆ.ಎಮ್.ಎಮ್.ಸಿ.ಆರ್ ಅಡಿಯಲ್ಲಿ ಪ್ರಕರಣ ದಾಖಲಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 170/2017 ಕಲಂ 324,308,448,427,504,506 ಐಪಿಸಿ;- ದಿನಾಂಕ:10/11/2017 ರಂದು ಸಂಜೆ 6 ಗಂಟೆ ಸುಮಾರಿಗೆ ಪಿಯರ್ಾದಿ ತನ್ನ ಮನೆಯಲ್ಲಿದ್ದಾಗ ಆರೋಪಿತನು ಹೋಗಿ ಕ್ಯಾಂಪಿನಲ್ಲಿದ್ದಿಯಾ ಮನೆ ಬಾಡಿಗೆ ಕೊಡು ಅಂತಾ ಕೇಳಿದಾಗ ಪಿಯರ್ಾದಿ ಸಂಬಂಧಪಟ್ಟವರಿಗೆ ಕೊಡುತ್ತೇನೆ ಅಂತಾ ಅಂದಾಗ ಆರೋಪಿತನು ಬೈದು ಹೋದ್ದು, ನಂತರ ದಿನಾಂಕ:14/11/2017 ರಂದು ರಾತ್ರಿ 11 ಗಂಟೆ ಸುಮಾರಿಗೆ ಪಿಯರ್ಾದಿ ತನ್ನ ಮನೆಯಲ್ಲಿದ್ದಾಗ ಆರೋಪಿತನು ಪಿಯರ್ಾದಿ ಮನೆಯಲ್ಲಿ ಆಕ್ರಮ ಪ್ರವೇಶ ಮಾಡಿ ಹೊಡೆದ ಬಾಟಲಿಯಿಂದ ಮಾನವನಿಗೆ ಹೊಡೆದರೆ ಮಾನವ ಜೀವಕ್ಕೆ ಹಾನಿಯಾಗುತ್ತದೆ ಅಂತಾ ಗೊತ್ತಿದ್ದು ಬಾಟಲಿಯಿಮಧ ಫಿಯರ್ಾದಿ ತೆಲೆಯ ಬಲಬಾಗಕ್ಕೆರ ಹಾಗೂ ಹಿಂಭಾಗಕ್ಕೆ ಹೊಡೆದು ರಕ್ತಗಾಯ ಪಡಿಸಿ ಪಿಯರ್ಾದಿಯ ಮನೆಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿ ಅ.ಕಿ 5000/- ರೂ ಗಳ ಕಿಮ್ಮತ್ತಿನ ಬಟ್ಟೆಗಳನ್ನು ನಾಶಮಾಡಿ ಪಿಯರ್ಾದಿಗೆ  ಜೀವದ ಬೆದರಿಕೆ ಹಾಕಿದ್ದಾರೆ ಅಂತಾ ವಗಯೃಎ ಪಿಯರ್ಾದಿ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 165/2017 ಕಲಂ. 87 ಕೆ.ಪಿ.ಕಾಯ್ದೆ;- ದಿನಾಂಕ: 15/11/2017 ರಂದು 6 ಪಿಎಮ್ ಕ್ಕೆ ಪಿ.ಎಸ್.ಐ ವಡಗೇರಾ ಠಾಣೆ ರವರು ಠಾಣೆಗೆ ಹಾಜರಾಗಿ ಉಳ್ಳೆಸೂಗೂರು ಸೀಮಾಂತರದ ಮಹಾದೇವಯ್ಯ ಹಿರೆಮಠ ಇವರ ಹೊಲದಲ್ಲಿ ಕೆಲವರು ದುಂಡಾಗಿ ಕುಳಿತು ಅಂದರ ಬಾಹರ ಎಂಬ ಇಸ್ಪೇಟ್ ಜೂಜಾಟ ಆಡುತ್ತಿದ್ದಾಗ ನಾವು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಆರೋಪಿತರಾದ 1) ಸಿದ್ದಲಿಂಗರೆಡ್ಡಿ ತಂದೆ ಮಲ್ಲಣ್ಣಗೌಡ ಪೊಲೀಸ್ ಪಾಟಿಲ್, ವ:30, ಜಾ:ಲಿಂಗಾಯತ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ 1545=00 ರೂ. ನಗದು ಹಣ, 2) ಗಿರೇಪ್ಪ ತಂದೆ ಸುಬ್ಬಣ್ಣ ರಾಠೋಡ, ವ:35, ಜಾ:ಲಮ್ಮಾಣಿ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ ನಗದು ಹಣ 1430=00 ರೂ., 3) ಶಶಿಕಾಂತ ತಂದೆ ಮಹಾದೇವಯ್ಯ ಹಿರೆಮಠ, ವ:44, ಜಾ:ಜಂಗಮ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ಇವನ ಹತ್ತಿರ ನಗದು ಹಣ 1250=00 ರೂ. 4) ಅಂಬ್ರೇಶ ತಂದೆ ಮುದುಕಪ್ಪ ಉಪ್ಪಾರ, ವ:35, ಜಾ:ಉಪ್ಪಾರ, ಉ:ಒಕ್ಕಲುತನ ಸಾ:ಉಳ್ಳೆಸೂಗುರು ಇವನ ಹತ್ತಿರ ನಗದು ಹಣ 1170=00 ರೂ., 5) ಮಹ್ಮದ ತಂದೆ ಮಹಿಬೂಬ ಅಲಿ ಪಿಂಜಾರ, ವ:34, ಜಾ:ಮುಸ್ಲಿಂ, ಉ:ಕೂಲಿ ಸಾ:ಉಳ್ಳೆಸೂಗುರು ಇವನ ಹತ್ತಿರ ನಗದು ಹಣ 1315=00 ರೂ. ಮತ್ತು ಎಲ್ಲರ ಮಧ್ಯ ಸ್ಥಳದಲ್ಲಿ ಬಿದ್ದಿದ್ದ ನಗದು ಹಣ 1160=00 ಹೀಗೆ ಒಟ್ಟು ನಗದು ಹಣ 7870=00 ರೂ.ಗಳು ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆರೋಪಿತರು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಜಪ್ತಿ ಪಂಚನಾಮೆಯೊಂದಿಗೆ ನಿಮಗೆ ಹಾಜರಪಡಿಸುತ್ತಿದ್ದು, ಸದರಿ ಅಪರಾಧವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ನ್ಯಾಯಾಲಯದ ಅನುಮತಿ ಪಡೆದುಕೊಂಡು ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಕೊಟ್ಟ ವರದಿ ಮತ್ತು ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಅನುಮತಿ ಕೊಟ್ಟ ಪತ್ರವನ್ನು ಇಂದು ದಿನಾಂಕ: 16/11/2017 ರಂದು 9-30 ಎಮ್ ಕ್ಕೆ ಕೋರ್ಟ ಹೆಚ್.ಸಿ 57 ರವರು ಹಾಜರಪಡಿಸಿದ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 165/2017 ಕಲಂ: 87 ಕೆ.ಪಿ ಎಕ್ಟ್ 1963 ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
 

No comments: