Police Bhavan Kalaburagi

Police Bhavan Kalaburagi

Tuesday, November 28, 2017

Yadgir District Reported Crimes Updated on 28-11-2017


                                                 Yadgir District Reported Crimes
ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 338/2017 ಕಲಂ: 279, 338 ಐಪಿಸಿ ;- ದಿನಾಂಕಃ 27/11/2017 ರಂದು 2-40 ಪಿ.ಎಮ್ ಕ್ಕೆ ಸಕರ್ಾರಿ ಆಸ್ಪತ್ರೆ ಸುರಪೂರದಿಂದ ಎಮ್.ಎಲ್.ಸಿ ತಿಳಿಸಿದ ಮೇರೆಗೆ ಆಸ್ಪತ್ರೆಗೆ ಭೇಟಿನೀಡಿ ರಸ್ತೆ ಅಪಘಾತದಲ್ಲಿ ಗಾಯ ಹೊಂದಿ ಉಪಚಾರ ಪಡೆಯುತ್ತಿದ್ದ ಗಾಯಾಳು ರಾಜೇಂದ್ರ ತಂದೆ ಯಶವಂತ ಸುರವಸೆ ಸಾಃ ನಿರಗುಡಿ ಹಾ.ವಃ ರಂಗಂಪೇಟ ಸುರಪೂರ ಇವರ ಹೇಳಿಕೆ ಫಿಯರ್ಾದಿ ಪಡೆದುಕೊಂಡಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕಃ 27/11/2017 ರಂದು ಮುಂಜಾನೆ ನಾನು ನನ್ನ ಮೋಟರ ಸೈಕಲ್ ನಂಬರ ಕೆ.ಎ 33 ಕ್ಯೂ 5426 ನೇದ್ದರ ಮೇಲೆ ಜಾಲಿಬೆಂಚಿ ಗ್ರಾಮಕ್ಕೆ ಹೋಗಿ ಶಾಲೆಯಲ್ಲಿ ನನ್ನ ಕರ್ತವ್ಯ ನಿರ್ವಹಿಸಿ ಮದ್ಯಾಹ್ನ ಸುರಪೂರ ತಾಲೂಕಾ ಪಂಚಾಯತ ಕಾಯರ್ಾಲಯಕ್ಕೆ ಆಫೀಸ ಕೆಲಸದ ನಿಮಿತ್ಯ ಹೋಗುವದಕ್ಕಾಗಿ ಮರಳಿ ಜಾಲಿಬೆಂಚಿ ಗ್ರಾಮದಿಂದ ವಾಗಣಗೇರಾ, ತಳವಾರಗೇರಾ  ಮಾರ್ಗವಾಗಿ ಸುರಪೂರಕ್ಕೆ ಬರುತ್ತಿದ್ದಾಗ 1-50 ಪಿ.ಎಮ್ ಸುಮಾರಿಗೆ ತಳವಾರಗೇರಾ ಸಿಮಾಂತರದಲ್ಲಿ ಬರುವ ಬಸವಣ್ಣ ದೇವರ ಗುಡಿಯ ಸಮೀಪ ಎದರುನಿಂದ ಒಬ್ಬ ಟಿಪ್ಪರ ನಂಬರ ಕೆ.ಎ 33 ಎ 2181 ನೇದ್ದರ ಚಾಲಕನು ತನ್ನ ಟಿಪ್ಪರ ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವನೇ ಒಮ್ಮೆಲೆ ಬಲಕ್ಕೆ ಕಟ್ ಮಾಡಿ ರಸ್ತೆಯ ಎಡಭಾಗದಲ್ಲಿ ನಿಧಾನವಾಗಿ ಹೊರಟಿದ್ದ ನನ್ನ ಮೋಟರ ಸೈಕಲಗೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟರ ಸೈಕಲ್ ಸಮೇತ ಡಾಂಬರ ರಸ್ತೆಯ ಮೇಲೆ ಬಿದ್ದ ಪರಿಣಾಮ ನನ್ನ ಬಲಗಡೆ ಹಣೆಯ ಮೇಲೆ ತಲೆಯಲ್ಲಿ ಭಾರಿ ರಕ್ತಗಾಯವಾಗಿದ್ದು, ಬಲಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿ, ಬಲಮೊಣಕಾಲಿಗೆ ತರಚಿದ ಗಾಯವಾಗಿರುತ್ತದೆ. ಆಗ ನನ್ನ ಹಿಂದುಗಡೆ ತನ್ನ ಮೋಟರ ಸೈಕಲ್ ಮೇಲೆ ಬಂದ ಶರಣಪ್ಪ ಪಾಕರೆಡ್ಡಿ ಹಾಗು ಅಪಘಾತ ಪಡಿಸಿದ ಟಿಪ್ಪರ ಚಾಲಕ ನಾಗಪ್ಪ ಪೂಜಾರಿ ಇಬ್ಬರೂ ನನಗೆ ಎಬ್ಬಿಸಿ ರಸ್ತೆಯ ಪಕ್ಕ ಮಲಗಿಸಿ ಬಳಿಕ ಶರಣಪ್ಪ ಪಾಕರೆಡ್ಡಿ ಇವರು ನನಗೆ ತನ್ನ ಮೋಟರ ಸೈಕಲ್ ಮೇಲೆ ಕೂಡಿಸಿಕೊಂಡು ಸುರಪೂರ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿರುತ್ತಾರೆ ಅಂತಾ ವಗೈರೆ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 338/2017 ಕಲಂಃ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 237/2017 ಕಲಂ 454, 380 ಐಪಿಸಿ ;- ಸಂದೀಪ ತಂದೆ ಶಾಮಸುಂದರ ವ್ಯಾಸ ವಯಾ 31 ವರ್ಷ, ಜಾ|| ಬ್ರಾಹ್ಮಣ ಉ|| ಡಿಸ್ ಕೇಬಲ್ ಆಪರೇಟರ್ ಹಾಗೂ ಬಾಲಾಜಿ ಗುಡಿಯ ಕಮಿಟಿಯ ಸದಸ್ಯ ಸಾ|| ಬಾಲಾಜಿ ಗುಡಿ ಹತ್ತಿರ ಯಾದಗಿರಿ ಇದ್ದು, ಈ ಮೂಲಕ ದೂರು ನೀಡುವುದೇನೆಂದರೆ, ನಾನು ಯಾದಗಿರಿ ನಗರದಲ್ಲಿ ಇರುವ ಬಾಲಾಜಿ ಟೆಂಪಲ್ದ ಸದಸ್ಯನಿದ್ದು, ನಮ್ಮ ಚಿಕ್ಕಪ್ಪನಾದ ಶ್ರೀನಿವಾಸ ವ್ಯಾಸ ತಂದೆ ರಾಮಜೀವನಜಿ ವ್ಯಾಸ ರವರು ನಮ್ಮ ಗುಡಿ ಸಮಿತಿಯ ಅಧ್ಯಕ್ಷರಿರುತ್ತಾರೆ. ನಾನು ಬಾಲಾಜಿ ಗುಡಿಯ ಆಗು ಹೋಗುಗಳನ್ನು ನೋಡಿಕೊಂಡು ಹೋಗುತ್ತೇನೆ. ಶಿವಂ ಇವರು ಸುಮಾರು 2 ವರ್ಷಗಳಿಂದ ಗುಡಿಯ ಪೂಜಾರಿಯಾಗಿ ಕೆಲಸ ಮಾಡಿಕೊಂಡು ಇರುತ್ತಾರೆ. ಅವರು ದಿನಾಲು ಬಾಲಾಜಿ ಗುಡಿಯನ್ನು ಬೆಳಿಗ್ಗೆ 6-00 ಗಂಟೆಗೆ ತೆಗೆದು ಪೂಜೆ ಪುನಸ್ಕಾರ ಮುಗಿಸಿದ ನಂತರ ಮಧ್ಯಾಹ್ನದ ಹೊತ್ತಿಗೆ ಗೇಟ್ ಕೀಲಿ ಹಾಕಿ ನಂತರ ಸಾಯಂಕಾಲ 4-30 ಗಂಟೆಯ ಸುಮಾರಿಗೆ ಮತ್ತೆ ಗುಡಿಯ ಗೇಟನ್ನು ತೆಗೆದು ರಾತ್ರಿ 09-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿ ಮುಚ್ಚುತ್ತಾ ಬರುತ್ತಿರುತ್ತಾರೆ. ಹೀಗಿದ್ದು, ದಿನಾಂಕ 23/11/2017 ರಂದು ಸಾಯಂಕಾಲ 05-00 ಗಂಟೆಯ ಸುಮಾರಿಗೆ ನಾನು ಮನೆಯಲ್ಲಿ ಇದ್ದಾಗ ನಮ್ಮ ಗುಡಿಯ ಪೂಜಾರಿಯಾದ ಶಿವಂ ಇವರು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ಇಂದು ಬೆಳಿಗ್ಗೆ 06-00 ಗಂಟೆಗೆ ನಾನು ಪ್ರತಿ ನಿತ್ಯದಂತೆ ಗುಡಿಯ ಗೇಟ್ ತೆಗೆದು ಪೂಜೆ ಪುನಸ್ಕಾರ ಮಾಡಿ ಮಧ್ಯಾಹ್ನ 12-00 ಗಂಟೆಗೆ ಗುಡಿಯ ಗೇಟ್ ಕೀಲಿ ಹಾಕಿಕೊಂಡು ಊಟಕ್ಕೆ ಹೋದೆನು. ನಂತರ ಮರಳಿ ಸಾಯಂಕಾಲ 04-30 ಗಂಟೆಯ ಸುಮಾರಿಗೆ ಗುಡಿಯ ಗೇಟ್ ತೆಗೆದು ಒಳಗೆ ಹೋಗಿ ನೋಡಿದಾಗ ಗುಡಿಯ ಮುಂದೆ ಇದ್ದ ಹುಂಡಿಗೆ (ಗಲ್ಲೆ) ಹಾಕಿದ ಕೀಲಿ ಹುಂಡಿಯ ಮೇಲೆ ಇದ್ದದ್ದನ್ನು ನೋಡಿ ಹುಂಡಿಯ ಮೇಲೆ ಕೀಲಿ ಯಾಕೆ ಇದೆ ಅಂತಾ ನೋಡಿದಾಗ ಹುಂಡಿಯ ಬಾಗಿಲು ತೆಗೆದಿದ್ದು, ಹುಂಡಿಯಲ್ಲಿ ಇದ್ದ ಹಣ ಕಳ್ಳತನವಾದದ್ದು ಕಂಡು ಬಂದಿದ್ದು, ಯಾರೋ ಅಪರಿಚಿತ ಕಳ್ಳರು ಗುಡಿಯ ಒಳಗೆ ಪ್ರವೇಶ ಮಾಡಿ ಹುಂಡಿಗೆ ಹಾಕಿದ ಕೀಲಿ ಮುರಿದು ಅದರಲ್ಲಿ ಇದ್ದ ಅಂದಾಜು 200=00 ರಿಂದ 300=00  ರೂ|| ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದರು. ಆಗ ನಾನು ಮತ್ತು ನಮ್ಮ ಅಣ್ಣ ತಮ್ಮಕ್ಕಿಯ ಗೌತಮ ತಂದೆ ಕೈಲಾಸ ಚಂದ್ರ, ಮತ್ತು ನಮ್ಮ ಚಿಕ್ಕಪ್ಪ ಶ್ರೀನಿವಾಸ ವ್ಯಾಸ ಎಲ್ಲರು ಬಂದು ನೋಡಲು ಗುಡಿಯ ಹುಂಡಿ ಕೀಲಿ ಮುರಿದು ಕಳ್ಳತನವಾಗಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 237/2017 ಕಲಂ 454, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 279, 338, 304 (ಎ) ಐಪಿಸಿ;- ದಿನಾಂಕ 27/11/2017 ರಂದು ಬೆಳಿಗ್ಗೆ 11 ಗಂಟೆಗೆ ಫಿಯರ್ಾದಿಯವರು ತಮ್ಮದೊಂದು ಹೇಳಿಕೆ ನೀಡಿದ್ದರ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 61/2017 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ  ಕೈಕೊಂಡಿದ್ದು  ಇರುತ್ತದೆ. ಫಿಯರ್ಾದಿಯವರು ಮರಳಿ ಇಂದು ದಿನಾಂಕ 27/11/2017 ರಂದು 2-15 ಪಿ.ಎಂ.ಕ್ಕೆ ಠಾಣೆಗೆ ಬಂದು ತಮ್ಮದೊಂದು ಪುರವಣಿ ಹೇಳಿಕೆ ನೀಡಿದ್ದೇನೆಂದರೆ ತನ್ನ ಗಂಡನಿಗೆ ಇಂದು ಬೆಳಿಗ್ಗೆ ಹೆಚ್ಚಿನ ಉಪಚಾರಕ್ಕಾಗಿ ಬೆಂಗಳೂರಿನಿಂದ ವೈದ್ಯರ ಸಲಹೆಯ ಮೇರೆಗೆ ಹೈದ್ರಾಬಾದಕ್ಕೆ ಕರೆದುಕೊಂಡು ಹೋಗುವಾಗ ಯಾದಗಿರಿಗೆ ಬಂದು ಹಣವನ್ನು ಹೊಂದಿಸಿಕೊಂಡು ಹೈದ್ರಾಬಾದಕ್ಕೆ ಹೋಗುವಾಗ ಮಾರ್ಗ ಮದ್ಯೆ ಮುಂಡರಗಿ ಹತ್ತಿರ ತನ್ನ ಗಂಡನು ಅಪಘಾತದಲ್ಲಾದ ಗಾಯದ ಬಾದೆಯಿಂದ ಮೃತಪಟ್ಟಿದ್ದು  ಇರುತ್ತದೆ ಅಂತಾ ಪುರವಣಿ ಹೇಳಿಕೆ ಮೇಲಿಂದ ಪ್ರಕರಣದಲ್ಲಿ ಕಲಂ 304(ಎ) ಐಪಿಸಿ ಅಳವಡಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ ಅಂತಾ ಮಾನ್ಯರವರಲ್ಲಿ ವಿನಂತಿ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 366 (ಎ) ಐಪಿಸಿ ;- ದಿನಾಂಕ: 27/11/2017 ರಂದು 6-30 ಪಿಎಮ್ ಕ್ಕೆ ಶ್ರೀ ದೇವಿಂದ್ರಪ್ಪ ತಂದೆ ಶಿರಸಪ್ಪ ವಿಶ್ವಕರ್ಮ, ವ:45, ಜಾ:ವಿಶ್ವಕರ್ಮ, ಉ:ಒಕ್ಕಲುತನ ಸಾ:ಉಳ್ಳೆಸೂಗೂರು ತಾ:ಶಹಾಪೂರ ಇವರು ಪೊಲೀಸ್ ಠಾಣೆಗೆ ಹಾಜರಾಗಿ ಲಿಖಿತ ಫಿರ್ಯಾಧಿ ಸಲ್ಲಿಸಿದ್ದೇನಂದರೆ ನನಗೆ 1) ಭವಾನಿ ವ:15, 2) ರೇಖಾ ವ:12, 3) ಪೂಣರ್ಿಮಾ ವ:9, 4) ಮೋನಿಕಾ ವ:6 ಹೀಗೆ 4 ಜನ ಹೆಣ್ಣುಮಕ್ಕಳಿರುತ್ತಾರೆ. ಹಿರಿಮಗಳಾದ ಭವಾನಿಯು ಜ್ಞಾನಾಮೃತ ಹಿರಿಯ ಪ್ರಾಥಮಿಕ ಶಾಲೆ ಉಳ್ಳೆಸೂಗೂರುದಲ್ಲಿ 9 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಲು ನಮ್ಮ ಮನೆಯಿಂದ ಶಾಲೆಗೆ ಹೋಗಿ ಬರುವುದು ಮಾಡುತ್ತಿರುತ್ತಾಳೆ. ನಮ್ಮೂರಿನ ರವಿ ತಂದೆ ಅಮರಪ್ಪ ಕುಂಬಾರ ಈತನು ಆಗಾಗ ನನ್ನ ಮಗಳಿಗೆ ಚುಡಾಯಿಸುವುದು, ನಗೆ ಚಾಟಿಗೆ ಮಾಡುವುದು ಮಾಡುತ್ತಿದ್ದನು. ನಮ್ಮ ಮನೆ ಮುಂದೆ ಮೋಹರಂ ಹಬ್ಬದ ಮಸಿದಿ ಗುಡಿ ಕಟ್ಟೆ ಇದ್ದು, ಆಗಾಗ ಅಲ್ಲಿ ಬಂದು ಕುಳಿತುಕೊಂಡು ನನ್ನ ಮಗಳಿಗೆ ಚುಡಾಯಿಸುವುದು ಮಾಡುತ್ತಿದ್ದನು. ಆಗ ನಾನು ಅವನಿಗೆ ಈ ರೀತಿ ಮಾಡುವುದು ಸರಿ ಅಲ್ಲಾ ಅಂತಾ ಒಂದೆಟು ಹೊಡೆದು ಬುದ್ದಿ ಮಾತು ಹೇಳಿ ಕಳುಹಿಸಿದ್ದೇನು. ಹೀಗಿದ್ದು ದಿನಾಂಕ: 21/11/2017 ರಂದು ನಮ್ಮ ಮಗಳು ಕು:ಭವಾನಿ ಎಂದಿನಂತೆ ಶಾಲೆಗೆ ಹೋಗಿ ಸಾಯಂಕಾಲ ಮರಳಿ ಬಂದು ಮನೆಯಲ್ಲಿದ್ದಳು. ನನ್ನ ಹೆಂಡತಿ ದೇವಿಂದ್ರಮ್ಮ ಚೆಟಿಗೇರಾ ಗ್ರಾಮಕ್ಕೆ ದೇವರ ಕಾರ್ಯಕ್ರಮಕ್ಕೆ ಹೋಗಿದ್ದಳು. ಸಾಯಂಕಾಲ 7 ಗಂಟೆ ಸುಮಾರಿಗೆ ನನ್ನ ಮಗಳು ಮನೆಯಲ್ಲಿದ್ದಳು. ನಾನು ನಮ್ಮ ಎತ್ತಿನ ಮನೆ ಕಡೆ ಹೋಗಿ ಸ್ವಲ್ಪ ಹೊತ್ತು ಆದ ನಂತರ ಮನೆಗೆ ಬಂದಾಗ ಭವಾನಿ ಮನೆಯಲ್ಲಿ ಇರಲಿಲ್ಲ. ಆಗ ನಾನು ಹೊರಗಡೆ ಎಲ್ಲಿಯಾದರು ಹೋಗಿರಬಹದು ಎಂದು ತಿಳಿದು ಸ್ವಲ್ಪ ಹೊತ್ತು ಸುಮ್ಮನಿದ್ದೇನು. ಬಹಳ ಹೊತ್ತಾದರು ನನ್ನ ಮಗಳು ಮನೆಗೆ ಬರಲಿಲ್ಲ. ಆಗ ನಾನು ನಮ್ಮ ಮನೆ ಆಜು ಬಾಜು, ಊರಲ್ಲಿಯ ಬೀಗರ ಮನೆಗಳಲ್ಲಿ ಮತ್ತು ಊರಿನ ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ಬಂದರು. ನನ್ನ ಮಗಳು ಸಿಗಲಿಲ್ಲ. ಆಗ ನನಗೆ ರವಿ ತಂದೆ ಅಮರಪ್ಪ ಕುಂಬಾರ ಈತನ ಮೇಲೆ ಅನುಮಾನ ಬಂದು ಅವರ ಮನೆಗೆ ಹೋಗಿ ವಿಚಾರಿಸಿದರೆ ಅವನು ಕೂಡಾ ಮನೆಯಲ್ಲಿ ಇರಲಿಲ್ಲ. ನನ್ನ ಮಗಳು ಹೋಗಿರುವ ವಿಷಯವನ್ನು ನನ್ನ ಹೆಂಡತಿಗೆ ಫೋನ ಮೂಲಕ ತಿಳಿಸಿ ಭವಾನಿ ಅಲ್ಲಿ ಬಂದಿದ್ದಾಳೇನು ನೋಡು ಎಂದು ಹೇಳಿದೆನು ಮತ್ತು ನಡೆದ ಸಂಗತಿಯನ್ನು ನಮ್ಮ ಅಳಿಯ ಮನೋಹರ ತಂದೆ ಶಿವಣ್ಣ ಮತ್ತು ನಮ್ಮೂರ ಮಲ್ಲಿಕಾಜರ್ುನ ತಂದೆ ಅಯ್ಯಣ್ಣ ಇವರಿಗೆ ತಿಳಿಸಿ, ನಾವು 3 ಜನ ಕೂಡಿ ನನ್ನ ಮಗಳಿಗೆ ನಮ್ಮ ಸಂಬಂಧಿಕರ ಗ್ರಾಮಗಳಾದ ರೋಟ್ನಡಗಿ, ನಾಯ್ಕಲ್, ಬಸವಂತಪೂರ ಮುಂತಾದ ಕಡೆ ಹುಡುಕಾಡಿ ಬಂದರು ಎಲ್ಲಿಯು ಸಿಗಲಿಲ್ಲ. ನನ್ನ ಮಗಳ ಜನ್ಮ ದಿನಾಂಕ: 02/02/2002 ಇರುತ್ತದೆ. ಚಹರೆಪಟ್ಟಿ ಈ ಕೆಳಗಿನಂತೆ ಇರುತ್ತದೆ. ಎತ್ತರ 4'-6, ಸಾಧಾರಣ ಮೈಕಟ್ಟು, ಗೋಧಿ ಬಣ್ಣ, ದುಂಡು ಮುಖ, ಬಲಗಡೆ ಮೂಗಿನ ಮೇಲೆ ಕಪ್ಪು ಚುಕ್ಕೆ ಇರುತ್ತದೆ. ಕಾರಣ ಅಪ್ರಾಪ್ತ ವಯಸ್ಕಳಾದ ನನ್ನ ಮಗಳು ಭವಾನಿ ಇವಳಿಗೆ ನಮ್ಮೂರ ರವಿ ತಂದೆ ಅಮರಪ್ಪ ಕುಂಬಾರ ಈತನು ಪುಸಲಾಯಿಸಿ, ಅಪಹರಿಸಿಕೊಂಡು ಹೋಗಿರುತ್ತಾನೆ ಎಂದು ಅವನ ಮೇಲೆ ನಮಗೆ ಬಲವಾದ ಅನುಮಾನ ಇದ್ದು, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಿ, ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ವಿನಂತಿ ಅಂತಾ ಕೊಟ್ಟ ದೂರು ಅಜರ್ಿ ಇರುತ್ತದೆ. ನಮ್ಮ ಮಗಳಿಗೆ ಎಲ್ಲಾ ಕಡೆ ಹುಡುಕಾಡಿ ಬಂದು ದೂರು ಕೊಡಲು ತಡವಾಗಿರುತ್ತದೆ ಎಂದು ಕೊಟ್ಟ ಲಿಖಿತ ಫಿರ್ಯಾಧಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 171/2017 ಕಲಂ: 366(ಎ) ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 173-2017 ಕಲಂ 3 & 7 ಇಸಿ ಯಾಕ್ಟ ;- 26/11/2017 ರಂದು ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಯಾವುದೇ ದಾಖಲೆಯಿಲ್ಲದೇ ಸೀಮೆ ಎಣ್ಣಿಯನ್ನು ಸಾಗಾಣಿಕೆ ಮಾಡುತ್ತಿದ್ದಾಗ ಮಾಹಿತಿ ಬಂದ ಮೇರೆಗೆ ಪಿಯರ್ಾದಿ ಸಂಗಡ ಪಂಚರಿಗೆ ಬರಮಾಡಿಕೊಂಡು ದಾಳಿ ಮಾಡಿ ಹಿಡಿದಿದ್ದು ಅಂತಾ ಇತ್ಯಾದಿ ಸಾರಾಂಶದ ಮೇಲಿಂದಾ  ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.     
 

No comments: