Police Bhavan Kalaburagi

Police Bhavan Kalaburagi

Monday, December 25, 2017

BIDAR DISTRICT DAILY CRIME UPDATE 25-12-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 25-12-2017

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 138/2017, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 24-12-2017 ರಂದು ಫಿರ್ಯಾದಿ ಲೊಕೇಶ ತಂದೆ ಝರೇಪ್ಪ ವಯ: 25 ವರ್ಷ, ಜಾತಿ: ಕ್ರಿಶ್ಚಿಯನ್, ಸಾ: ಲೇಬರ ಕಾಲೋನಿ ಶಾಹಗಂಜ ಬೀದರ ರವರು ಜನವಾಡ ರಸ್ತೆಯ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ಫಿರ್ಯಾದಿಯವರ ಅಜ್ಜಿಯಾದ ತೇಜಮ್ಮಾ ಗಂಡ ಲಕ್ಷ್ಮಣ ವಯ: 75 ವರ್ಷ ಇವರು ಜನವಾಡ ಸಿದ್ದಾರ್ಥ ಕಾಲೇಜ ಚೌರಸ್ಥಾ ಕಡೆಯಿಂದ ಶಾಹಗಂಜ ಕಡೆಗೆ ಹೋಗಲು ಜನವಾಡ ಡಾ|| ಬಿ.ಆರ್ ಅಂಬೇಡ್ಕರ ವೃತ್ತ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಜನವಾಡ ರಸ್ತೆಯ ಬಸ್ ನಿಲ್ದಾಣದ ಎದುರಿಗೆ ಇರುವ ಹಿಂದುಳಿದ ವರ್ಗಗಳ ವಸತಿ ನಿಲಯ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಕ್ರೂಜರ್ ಜೀಪ್ ನಂ. ಕೆಎ-38/ಎಮ್-1151 ನೇದ್ದರ ಚಾಲಕನಾದ ಆರೋಪಿಯು ತನ್ನ ಜೀಪನ್ನು ಅತೀವೇಗ ಹಾಗೂ ನಿಸ್ಕಾಳಜಿತನದಿಂದ ಹಿಂದಕ್ಕೆ (ರಿವರ್ಸ್) ಚಲಾಯಿಸಿ ಹಿಂದೆ ಬರುತ್ತಿದ್ದ ಫಿರ್ಯಾದಿಯವರ ಅಜ್ಜಿ ತೇಜಮ್ಮಾ ಇವಳಿಗೆ ಡಿಕ್ಕಿ ಮಾಡಿ ತನ್ನ ಕ್ರೂಜರ್ ಜೀಪನ್ನು ಡಾ|| ಬಿ.ಆರ್.ಅಂಬೇಡ್ಕರ ವೃತ್ತದ ಕಡೆಗೆ ಓಡಿಸಿಕೊಂಡು ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯ ಅಜ್ಜಿಗೆ ಬಲಗಾಲ ಪಾದಕ್ಕೆ ಭಾರಿ ರಕ್ತಗಾಯ ಹಾಗೂ ಎಡಗಾಲ ಪಾದಕ್ಕೆ ರಕ್ತಗಾಯವಾಗಿರುತ್ತದೆ, ಆಗ ಫಿರ್ಯಾದಿಯು ಗಾಯಗೊಂಡ ಮ್ಮ ಅಜ್ಜಿಗೆ ಚಿಕಿತ್ಸೆ ಕುರಿತು ಬೇರೊಂದು ವಾಹನದಲ್ಲಿ ಹಾಕಿಕೊಂಡು ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಹೇಳಿಕೆ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ C¥ÀgÁzsÀ ¸ÀA. 281/2017, PÀ®A. 379 L¦¹ eÉÆvÉ 102 ¹.Dgï.¦.¹ :-
ದಿನಾಂಕ 24-12-2017 ರಂದು ಭಾಲ್ಕಿಯ ಜನತಾ ಕಾಲೋನಿಯಲ್ಲಿ ಒಬ್ಬ ವ್ಯಕ್ತಿ ಮೋಟಾರ ಸೈಕಲ ಮತ್ತು ಮೋಬೈಲಗಳು ಕಳವು ಮಾಡಿಕೊಂಡು ಬಂದು ಮಾರಾಟ ಮಾಡುವ ಕುರಿತು ತನ್ನ ವಶದಲ್ಲಿ ಇಟ್ಟುಕೊಂಡಿರುತ್ತಾನೆಂದು ಮಾಣಿಕರಾವ ಎ.ಎಸ್.ಐ ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಎ.ಎಸ್.ಐ ರವರು ಕೂಡಲೆ ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಜನತಾ ಕಾಲೋನಿಯ ಸತ್ಯ ಸಾಯಿ ಪಬ್ಲೀಕ ಶಾಲೆ ಹತ್ತಿರ ಹೋಗಿ ಓಣಿಯಲ್ಲಿ ಹೋಗುವಾಗ ಆರೋಪಿ ಜಿತೇಶ ತಂದೆ ಬಾಬುರಾವ ಸಂಗಮಕರ ವಯ 23 ವರ್ಷ, ಸಾ: ಜನತಾ ಕಾಲೋನಿ ಭಾಲ್ಕಿ ಇತನು ತನ್ನ ಮನೆಯ ಮುಂದೆ ಮೂರು ಮೋಟಾರ ಸೈಕಲಗಳನ್ನು ನಿಲ್ಲಿಸಿ ಅವುಗಳನ್ನು ನೋಡುತ್ತಾ ನಿಂತಿದ್ದು, ಎ.ಎಸ್.ಐ ರವರಿಗೆ ನೋಡಿ ಓಡಿ ಹೋಗುವಾಗ ಅವನಿಗೆ ಬೆನ್ನತ್ತಿ ಹಿಡಿದು ಅವನಿಗೆ ಅವನ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲಗಳ ದಾಖಲಾತಿಗಳ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಯಾವದೆ ದಾಖಲಾತಿಗಳು ಇರುವದಿಲ್ಲಾ ಇವುಗಳು ಉದಗೀರ ಪಟ್ಟಣದಲ್ಲಿ ಕಳವು ಮಾಡಿಕೊಂಡು ಬಂದಿದ್ದು ಇರುತ್ತವೆ ಅಂತಾ ತಿಳಿಸಿದನು, ನಂತರ ಪಂಚರ ಸಮಕ್ಷಮ ಅವನಿಗೆ ಚೆಕ್ಕ ಮಾಡಲು ಅವನ ಪ್ಯಾಂಟಿನ ಜೇಬುಗಳಲ್ಲಿ 6 ಮೋಬೈಲಗಳು ಸಿಕ್ಕಿದ್ದು, ಅವುಗಳ ದಾಖಲಾತಿಗಳು ಹಾಜರ ಪಡಿಸುವಂತೆ ತಿಳಿಸಿದಾಗ ಇವುಗಳ ಬಗ್ಗೆಯು ಯಾವದೆ ದಾಖಲಾತಿಗಳು ಇರುವದಿಲ್ಲಾ ಅಲ್ಲಲ್ಲಿ ಕಳವು ಮಾಡಿಕೊಂಡು ಬಂದಿದ್ದು ಇರುತ್ತವೆ ಅಂತಾ ತಿಳಿಸಿದ್ದರಿಂದ ಸದರಿ ಮೋಟಾರ ಸೈಕಲಗಳು ಮತ್ತು ಮೊಬೈಲಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಆರೋಪಿಗೆ ವಶಕ್ಕೆ ತೆಗೆದುಕೊಂಡು ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 201/2017, ಕಲಂ. 379 ಐಪಿಸಿ :-
ದಿನಾಂಕ 14-12-2017 ರಂದು ಕಮಲನಗರ ಗ್ರಾಮದ ವಾರ್ಡ ನಂ. 1 ರ ಹತ್ತಿರ ಇರುವ ನೀರಿನ ಟ್ಯಾಂಕರ ಹತ್ತಿರ ಬೋರ ಕೆಟ್ಟಿದ್ದರಿಂದ ಮೆಕಾನಿಕ ಮೋಟಾರ ರೀಪೇರಿಗಾಗಿ ತೆಗೆದುಕೊಂಡು ಹೊಗುವಾಗ ಜಿ1 ಪೈಪಗಳು (53) ಹಾಗು ಕೇಬಲ 4 ಎಸ್‌.ಕ್ಯೂ.ಎಮ್‌.ಎಮ್‌ ಸುಮಾರು 600 ಫಿಟ ಬೋರ ಮೇಲಗಡೆ ಇಡಲಾಗಿತ್ತು, ರಾತ್ರಿ ವೇಳೆಯಲ್ಲಿ ಯಾರೋ ಸದರಿ ಸಾಮಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಫಿರ್ಯಾದಿ ವಿನೋದ ಕುಲಕರ್ಣಿ ಪಿಡಿಓ  ಗ್ರಾಮ ಪಂಚಾಯತ ಕಮಲನಗರ ರವರ ಹೇಳಿಕೆ ಸಾರಾಂಶದ ಮೇರೆಗೆ  ದಿನಾಂಕ 24-12-2017 ರಂದು ಪ್ರಕರಣ ದಾಖಲಿಸಿಕೊಡು ತನಿಖೆ ಕೈಗೊಳ್ಳಲಾಗಿದೆ.                                                                       



No comments: