Police Bhavan Kalaburagi

Police Bhavan Kalaburagi

Wednesday, December 13, 2017

Yadgir District Reported Crimes Updated on 13-12-2017


                                    Yadgir District Reported Crimes
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 292/2017 ಕಲಂ: 323, 324, 504, 506 ಸಂ. 34 ಐಪಿಸಿ;-ದಿನಾಂಕ 11/12/2017 ರಂದು ರಾತ್ರಿ 9.30 ಪಿ.ಎಂ ಕ್ಕೆ ಪಿರ್ಯಾಧಿಯು ಊಟ ಮಾಡಿಕೊಂಡು ಗ್ರಾಮದ ಹನುಮಾನ ದೇವರ ಗುಡಿ ಹತ್ತಿರ ಆರೋಪಿತರೊಂದಿಗೆ ಮಾತಾಡುತ್ತ ಕುಳಿತಾಗ ರಾತ್ರಿ 10.10 ಪಿ.ಎಂ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದು ಸದರಿ ಜಗಳದಲ್ಲಿ ಆರೋಪಿ ಲಿಂಗಾರೆಡ್ಡಿ ಈತನು ತನ್ನ ಕೈಲ್ಲಿದ್ದ ಸ್ಟೀಲ್ ಬ್ಯಾಟರಿಯಿಂದ ಪಿರ್ಯಾಧಿ ಹಣೆಗೆ ಜೋರಾಗಿ ಹೊಡೆದು ರಕ್ತಗಾಯಪಡಿಸಿದ್ದು ಅಲ್ಲದೆ ಇನ್ನುಳಿದ ಆರೋಪಿ ಶಂಕರರೆಡ್ಡಿ ಕೈಯಿಂದ ಹೊಡೆದಿದ್ದು ಭೀಮರೆಡ್ಡಿ ಈತನು ಈ ಸೂಳಿ ಮಗನಿಗೆ ಸೊಕ್ಕು ಬಹಳ ಇದೆ ಜೀವ ಸಹಿತ ಬಿಡಬ್ಯಾಡ್ರಿ ಅಂತಾ ಜೀವದ ಬೆದರಿಕೆ ಹಾಕಿದ ಬಗ್ಗೆ ಅಪರಾಧ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 293/2017 ಕಲಂ: 323, 324, 506 ಐಪಿಸಿ;- ದಿನಾಂಕ: 12-12-2017 ರಂದು ರಾತ್ರಿ 2-45 ಗಂಟೆಗೆ ಸರ್ಕಾರಿ ಆಸ್ಪತ್ರೆ ಗುರುಮಠಕಲದಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆಗೆ ಸದರಿ ಆಸ್ಪತ್ರೆಗೆ ಭೇಟಿ ನೀಡಿ  ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಕೃಷ್ಣ ಮೂರ್ತಿ  ತಂದೆ ಶರಣಪ್ಪ ಚವ್ಹಾಣ ಸಾ: ನಜರಾಪೂರ ತಾಂಡಾ ಈತನ ಹೇಳಿಕೆ ಪಡೆದು ತಂದಿದ್ದು ಸದರಿ ಹೇಳಿಕೆ ಸಾರಾಂಶವೇನೆಂದರೆ, ಫಿರ್ಯಾದಿ ದಿನಾಂಕ. 11.12.2017 ರಂದು ರಾತ್ರಿ ವೇಳೆ ಊಟ ಮಾಡಿ ತನ್ನ ಮುಂದಿನ ಅಂಗಳದಲ್ಲಿ ಮಲಗಿಕೊಂಡಾಗ ಮನೆ ಹತ್ತಿರ ನಾಯಿ ಬೊಗಳುತ್ತಿದ್ದಾಗ ಫಿರ್ಯಾದಿ ಎದ್ದು ನೋಡುವಷ್ಟರಲ್ಲಿ ಅದೆ ತಾಂಡಾದ ಶಂಕರ ತಂದೆ ದಶರಥ ಚವ್ಹಾಣ ಈತನು ಹಿಡಿಗಾತ್ರದ ಕಲ್ಲಿನಿಂದ ಫಿರ್ಯಾದಿಯ ಬಲಗೈ ಮಣಿಕಟ್ಟಿಗೆ ಹೊಡೆದಿರುತ್ತಾನೆ.ಮತ್ತೊಂದು ಕಲ್ಲಿನಿಂದ ಟೊಂಕಕ್ಕೆ ಹೊಡೆದಿರುತ್ತಾನೆ. ಸದರಿಯವನಿಗೆ ಏಕೆ ಹೊಡೆಯುತ್ತಿರುವೆ ಅಂತ ಕೇಳಿದ್ದಕ್ಕೆ ಸದರಿಯವನು ಚೋದು ಸೂಳೆ ಮಗನೆ ಸುಮ್ಮನೆ ಮಲಗು ಇಲ್ಲಂದ್ರ ಖಲಾಸ ಮಾಡುತ್ತೇನೆ ಅಂತ ಫಿರ್ಯಾದಿಗೆ ಜೀವದ ಬೆದರಿಕೆ ಹಾಕಿರುತ್ತಾನೆ. ರಾತ್ರಿ ವೇಳೆ ಇದ್ದದ್ದರಿಂದ ಸದರಿಯವನನ್ನು ಬ್ಯಾಟರಿ ಬೆಳಕಿನಲ್ಲಿ ನೋಡಿ ಗುರ್ತಿಸಿದ್ದು ಅದೆ. ಸದರಿ ಘಟನೆ ದಿನಾಂಕ. 11.12.2017 ರಂದು  ರಾತ್ರಿ 10.35 ಸುಮಾರಿಗೆ ಜರುಗಿದ್ದು ಅದೆ. ಸದರಿ ಜಗಳವನ್ನು ನೋಡಿ ಮನೆಯಲ್ಲಿದ್ದ ಫಿರ್ಯಾದಿಯ ತಾಯಿ ದೇವಮ್ಮ, ಅಕ್ಕ ಲಕ್ಮೀ  ಪಕ್ಕದ ಮನೆಯವರಾದ ಸರಸ್ವತಿ ತಂದೆ ದೇವಿಂದ್ರಪ್ಪ ಇವರು ಬಿಡಿಸಿರುತ್ತಾರೆ.ನಂತರ 108 ಅಂಬುಲೆನ್ಸಗೆ ಫೋನ್ ಮಾಡಿ ಕರೆಯಿಸಿಕೊಂಡು ನಂತರ ಸರಕಾರಿ ಆಸ್ಪತ್ರೆ ಗುರುಮಟಕಲಗೆ ಬಂದು ಸೇರಿಕೆ ಆಗಿದ್ದು ಇರುತ್ತದೆ.ಕಾರಣ  ಕಲ್ಲಿನಿಂದ  ಹೊಡೆದು ರಕ್ತಗಾಯ ಗುಪ್ತಗಾಯ ಪಡಿಸಿ ಜೀವದ ಬೆದರಿಕೆ ಹಾಕಿದ ಶಂಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ಫಿರ್ಯಾದಿ ಸಾರಾಂಶ ಇರುತ್ತದೆ.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. ಂ293/2017 ಕಲಂ: 279, 338 ಐಪಿಸಿ;-ದಿನಾಂಕ 12/12/2017 ರಂದು 6-30 ಪಿ.ಎಮ್ ಕ್ಕೆ ಯಾದಗಿರಿ ಸಕರ್ಾರಿ ಆಸ್ಪತ್ರೆಯಿಂದ ಫೋನ ಮುಖಾಂತರ ಎಮ್.ಎಲ್.ಸಿ ವಸೂಲಾಗಿದ್ದರಿಂದ ಆಸ್ಪತ್ರೆಗೆ ಬೇಟಿ ಕೊಟ್ಟಾಗ ಆಸ್ಪತ್ರೆಯಲ್ಲಿ ವಾಹನ ಅಫಗಾತದಲ್ಲಿ ಗಾಯಹೊಂದಿ ಉಪಚಾರ ಪಡೆಯುತ್ತಿದ್ದ ಸಣ್ಣ ದುರ್ಗಪ್ಪಾ ತಂದೆ ವೆಂಕಪ್ಪಾ ತೆಲಗರ ವಯಾ: 20 ಉ: ಒಕ್ಕಲುತನ ಜಾ: ಕಬ್ಬಲಿಗೇರ ಸಾ: ಗಂಗಾನಗರ ಯಾದಗಿರಿ ಇತನ ಅಣ್ಣನಾದ ಶ್ರೀ  ದೊಡ್ಡ ದುರ್ಗಪ್ಪಾ ತಂದೆ ವೆಂಕಪ್ಪಾ ತೆಲಗರ ವಯಾ: 28 ಸಾ: ಗಂಗಾನಗರ ಯಾದಗರಿ ಇವರು ಹೇಳಿಕೆ ಫಿರ್ಯಾಧೀ ನೀಡಿದ್ದೆನೆಂದರೆ ನನಗೆ ಸಣ್ಣ ದುರ್ಗಪ್ಪಾ ಅಂತಾ ತಮ್ಮನಿದ್ದು ಆತನ ಮದುವೆ ಸಮಯದಲ್ಲಿ ಆತನ ಬೀಗರು ಒಂದು ಸ್ಪ್ಲೆಂಡರ್ ಪ್ಲಸ್ ಕಂಪನಿಯ ಮೋಟಾರ ಸೈಕಲ್ ಉಡುಗೊರೆಯಾಗಿ ಕೊಟ್ಟಿದ್ದು ಅದಕ್ಕೆ ಇನ್ನೂ ನೊಂದಣಿ ಮಾಡಿಸಿಕೊಂಡಿರುವುದಿಲ್ಲಾ ಅದರ ಚೆಸ್ಸಿ ನಂ: ಒಃಐಊಂಖ08ಉಊಊಆ13306  ಅಂತಾ ಇರುತ್ತದೆ  ಹೀಗಿದ್ದು ಇಂದು ದಿನಾಂಕ 12-12-2017 ರಂದು ನಮ್ಮ ಸಂಬಂಧಿಕರು ಠಾಣಗುಂದಿ ಹತ್ತಿರವಿದ್ದ ದೇವಿಯ ದೇವರು ಮಾಡುವವರಿದ್ದ ಕಾರಣ ನನ್ನ ತಮ್ಮನಾದ ಸಣ್ಣ ದುರ್ಗಪ್ಪಾ ಹಾಗೂ ನಮ್ಮ ಸಂಬಂಧಿಯಾದ  ಮಹೇಶ ತಂದೆ ಮಲ್ಲಪ್ಪಾ ಸೂಗೂರ ಇಬ್ಬರೂ ಕೂಡಿ ದೇವರು ಮಾಡುವ ಕಾರ್ಯಕ್ರಮಕ್ಕೆ ಹೋಗಿ ಬರುವುದಾಗಿ ಹೇಳಿ ನನ್ನ ತಮ್ಮನದೇ ಮೋಟಾರ ಸೈಕಲ್ ಚೆಸ್ಸಿ ನಂ: ಒಃಐಊಂಖ08ಉಊಊಆ13306  ಮೇಲೆ ಹೋದರು. ಇಂದು ಸಾಯಂಕಾಲ 4-50 ಗಂಟೆ ಸುಮಾರಿಗೆ ನನ್ನ ತಮ್ಮನ ಜೋತೆ ಹೋದ ಮಹೇಶ ತಂದೆ ಮಲ್ಲಪ್ಪಾ ಸೂಗೂರ ಇತನು ನನಗೆ ಪೋನ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ಸಣ್ಣದುರ್ಗಪ್ಪಾ ಇಬ್ಬರೂ ದೇವರ ಕಾರ್ಯಕ್ರಮ ಮುಗಿಸಿ ಅಲ್ಲಿಂದ ಮರಳಿ ಯಾದಗಿರಿ ಕಡೆಗೆ ಬರುತ್ತಿರುವಾಗ ಸಣ್ಣ ದುರ್ಗಪ್ಪನೇ ಮೋಟಾರ ಸೈಕಲ್ ನಡೆಸುತ್ತಿದ್ದನು. ಠಾಣಾಗುಂದಿ ದಾಟಿದ ಕೂಡಲೇ ಸಣ್ಣ ದುರ್ಗಪ್ಪನು ಮೋಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಒಡಿಸಲು ಪಾರಂಭಿಸಿದನು. ಆಗ ನಾನು ಅವನಿಗೆ ಸಾವಕಾಶವಾಗಿ ಒಡಿಸು ಈ ರಸ್ತೆ ಸರಿಯಾಗಿಲ್ಲಾ ಅಂತಾ ಎಷ್ಟೇ ಕೇಳಿಕೊಂಡರೂ ಕೂಡಾ ಸಣ್ಣ ದುರ್ಗಪ್ಪನು ನನ್ನ ಮಾತನ್ನು ಲೆಕ್ಕಿಸದೇ ಅದೇ ವೇಗದಲ್ಲಿ ಓಡಿಸಿಕೊಂಡು ಬಂದು ತನ್ನ ಚಾಲನೆಯ ಮೇಲಿನ ನಿಯಂತ್ರಣ ಕಳೆದುಕೊಂಡು ಠಾಣಗುಂದಿ ದಾಟಿದ ನಂತರ ಬರುವ ಬ್ರಿಡ್ಜಿನ ಹತ್ತಿರ ಮೋಟಾರ ಸ್ಕೀಡ್ ಆಗಿ ಅಫಘಾತವಾಗಿ ಕೆಳಗೆ ಬಿದ್ದಿತು. ಆಗ ಸಮಯ ಸಾಯಂಕಾಲ 4-30 ಗಂಟೆ ಆಗಿರಬಹುದು. ಈ ಅಫಘಾತದಲ್ಲಿ ಸಣ್ಣ ದುರ್ಗಪ್ಪ ಇತನಿಗೆ ಎಡಗಡೆ ಹಣೆಯ ಮೇಲೆ ಭಾರಿ ರಕ್ತಗಾಯ ಹಾಗೂ ಎಡಗಡೆ ಕಣ್ಣಿನ ಕೆಳಗಡೆ ಕಪಾಳದ ಮೇಲೆ  ತರಚಿದ ಗಾಯವಾಗಿದೆ ಮತ್ತು ನನಗೆ  ಬಲಗಡೆ ಕುತ್ತಿಗೆಗೆ ಮುಳ್ಳು ತರಚಿವೆ ಅಂತಾ ಹೇಳಿ ಈಗ ಸಣ್ಣ ದುರ್ಗಪ್ಪ ಇತನಿಗೆ ಉಪಚಾರ ಕುರಿತು ಅದೇ ಮೋಟಾರ ಸೈಕಲ್ ಮೇಲೆ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುತ್ತಿದ್ದೆನೆ ಅಂತಾ ಹೇಳಿದನು. ನಾನು ಸಸ್ವಲ್ಪ ಸಮಯದ ನಂತರ ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ಹೋದಾಗ ಮಹೇಶನು ನನ್ನ ತಮ್ಮ ಸಣ್ಣ ದುರ್ಗಪ್ಪನಿಗೆ ಆಸ್ಪತ್ರೆಗೆ ಕರೆದುಕೊಂಡು ಬಂದನು ಆತನಿಗೆ ಮೇಲೆ ತಿಳಿಸಿದಂತೆ ಎಡಗಡೆ ಹಣೆಗೆ ಹಾಗೂ ಎಡಗಡೆ ಕಣ್ಣಿನ ಕೆಳಗಡೆ ಗಾಯಗಳಾಗಿದ್ದವು. ಸದರಿ ಘಟನೆ ನನ್ನ ತಮ್ಮ ಸಣ್ಣ ದುರ್ಗಪ್ಪಾ ತಂದೆ ಯಂಕಪ್ಪಾ ತೆಲಗರ ಇತನ ಅಲಕ್ಷ್ಯತನದಿಂದ ಜರುಗಿದ್ದು ಆದ್ದರಿಂದ ಆತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು ಅಂತಾ ತಮ್ಮ ಸಂಬಂಧಿಕರೊಂದಿಗೆ ವಿಚಾರಣೆ ಮಾಡಿ ತಡವಾಗಿ ಸಲ್ಲಿಸಿದ ಫಿರ್ಯಾಧಿಯನ್ನು ಪಡೆದುಕೊಂಡು 8-30 ಪಿ.ಎಮ್ ಕ್ಕೆ ಮರಳಿ ಠಾಣೆಗೆ ಬಂದು ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 293/2017 ಕಲಂ 279, 338 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
 

No comments: