Police Bhavan Kalaburagi

Police Bhavan Kalaburagi

Saturday, February 17, 2018

Yadgir District Reported Crimes Updated on 17-02-2018


                                              Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 30/2018 ಕಲಂ. 193 ಐಪಿಸಿ;- ದಿನಾಂಕ.16/02/2018 ರಂದು 12-30 ಪಿಎಂಕ್ಕೆ ಶ್ರೀ ಅನಂತರೆಡ್ಡಿ ಪಿಸಿ 168 ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆಯನ್ನು ತಂದು ಹಾಜರಪಡಿಸಿದ್ದು ಸದರಿ  ಸದರಿ ಜ್ಞಾಪನಾ ಪತ್ರದ ಸಾರಾಂಶವೆನೆಂದರೆ, ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ.303/2015 (ಸ್ಪೇಷಲ್ ಕೇಸ್ ನಂ.34/2016) ನೇದ್ದರಲ್ಲಿ ಸಿಡಬ್ಲ್ಯೂ-11 ರವರು ದಿನಾಂಕ.23/12/2017 ರಂದು ಮಾನ್ಯ ಜಿಲ್ಲಾ & ಸತ್ರ ನ್ಯಾಯಾಲಯ ಯಾದಗಿರಯಲ್ಲಿ ಸುಳ್ಳು ಸಾಕ್ಷಿ ನುಡಿದಿದ್ದಾರೆ ಈ ಬಗ್ಗೆ ವಿಚಾರಣೆ ಕೈಕೊಂಡು ಕ್ರಮ ಕೈಕೊಳ್ಳವಂತೆ ಮಾನ್ಯ ನ್ಯಾಯಾಲಯವು ಆಧೇಶಿಸಿದ್ದು ಇರುತ್ತದೆ. ಅದರಂತೆ ಮಾನ್ಯ ನ್ಯಾಯಾಲಯದಿಂದ ಈ ಮೇಲ್ಕಂಡ ಗುನ್ನೆಯಲ್ಲಿ ಸಿಡ್ಬ್ಲೂ-11 ಶ್ರೀ ನಂದಗಿರಿ ಯೋಜನಾ ನಿದರ್ೇಶಕರು ಜಿಲ್ಲಾ ಪಂಚಾಯತ ಯಾದಗಿರಿ ಇವರು ದಿನಾಂಕ.23/12/2017 ರಂದು ಮಾನ್ಯ ನ್ಯಾಯಾಲಯದಲ್ಲಿ ಸಾಕ್ಷಿ ನೀಡಿದ ಪ್ರತಿ ಹಾಗೂ ತನಿಖಾ ಕಾಲದಲ್ಲಿ ಅವರು ನೀಡಿದ ಹೇಳಿಕೆ ಪ್ರತಿ ಹಾಗೂ ಅಂದಿನ ಆರ್ಡರ ಶೀಟಗಳನ್ನು ಪಡೆದುಕೊಂಡು ಪರೀಶಿಲನೆ ಮಾಡಲಾಗಿ ತನಿಖಾ ಕಾಲದಲ್ಲಿ ನೀಡಿದ ಹೇಳಿಕೆಗೆ ಅನುಗುಣವಾಗಿ ನುಡಿಯದೇ ಸುಳ್ಳು ಸಾಕ್ಷಿ ನುಡಿದಿದ್ದು ಸಾಭಿತಾಗಿರುತ್ತದೆ. ಕಾರಣ ಮಾನ್ಯ ನ್ಯಾಯಾಲಯದ ಆದೇಶದಂತೆ ಸದರಿ ಸಿಡಬ್ಲೂ-11 ಶ್ರೀ ನಂದಗಿರಿ ಯೋಜನಾ ನಿದರ್ೇಶಕರು ಜಿಲ್ಲಾ ಪಂಚಾಯತ ಯಾದಗಿರಿ ಇವರ ವಿರುದ್ದ ಕಾನೂನು ರಿತ್ಯ ಕ್ರಮ ಕೈಕೊಂಡು, ಪ್ರಥಮ ವರ್ತಮಾನ ವರದಿಯ ಪ್ರತಿಯೊಂದಿಗೆ ಪಾಲನಾ ವರದಿಯನ್ನು 2 ದಿನಗಳಲ್ಲಿ ಸಲ್ಲಿಸುವಂತೆ ಮಾನ್ಯ ಡಿ.ಎಸ್.ಪಿ ಸಾಹೇಬರು ಯಾದಗಿರಿ ರವರ ಕಾರ್ಯಲಯದಿಂದ ಜ್ಞಾಪನಾ ಪತ್ರವನ್ನು ವಸೂಲಾಗಿದ್ದು ಜ್ಞಾಪನಾ ಪತ್ರದ ಸಾರಾಂಶದ ಮೆಲಿಂದ ಠಾಣೆ ಗುನ್ನೆ ನಂ.30/2018 ಕಲಂ.193 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
           
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 31/2018 ಕಲಂ 379 ಐಪಿಸಿ.ದಿನಾಂಕ.16/02/2018 ರಂದು 5-15 ಪಿಎಂಕ್ಕೆ ಮಾನ್ಯ ಸಿಪಿಐ ಸಾಹೆಬರು ಯಾದಗಿರಿ ವೃತ್ತ ರವರು ಠಾಣೆಗೆ ಒಂದು ಮುದ್ದೆ ಮಾಲನ್ನು ಹಾಜರಪಡಿಸಿದ್ದು ಒಂದು ಜ್ಞಾಪನಾ ಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ: 16/02/2018 ರಂದು ಸಾಯಂಕಾಲ 4-00 ಗಂಟೆಗೆ ನಾನು ವೃತ್ತ ಕಛೇರಿಯಲ್ಲಿದ್ದಾಗ ಯಾದಗಿರಿ ನಗರದ ರಾಚೋಟಿ ವೀರಣ್ಣ ಗುಡ್ಡ ಹತ್ತಿರ ಇರುವ ಹಳ್ಳದಿಂದ ಯಾರೋ ಟ್ರ್ಯಾಕ್ಟರಗಳಲ್ಲಿ ಅಕ್ರಮವಾಗಿ ಮರಳನ್ನು ತುಂಬಿಕೊಂಡು   ಗಂಗಾನಗರ ಕಡೆಯಿಂದ ಯಾದಗಿರಿ ಕಡೆಗೆ ಬರುತ್ತಿದ್ದಾರೆ ಅಂತಾ ಖಚಿತ ಮಾಹಿತಿ ಮೇರೆಗೆ ಯಾದಗಿರಿ ನಗರ ಪೊಲೀಸ್ ಠಾಣೆಯ  ಸೈಯದಲಿ ಹೆಚ್.ಸಿ. 191, ಸಂಜಿವ ಕುಮಾರ ಹೆಚ್.ಸಿ. 173 ರವರನ್ನು  ಬರಮಾಡಿಕೊಂಡು ವಿಷಯ ತಿಳಿಸಿ  4-15 ಪಿಎಂಕ್ಕೆ ನಮ್ಮ ಸರಕಾರಿ ವಾಹನ ನಂ.ಕೆಎ-33-ಜಿ-0161 ನೇದ್ದರಲ್ಲಿ ನಮ್ಮ ವೃತ್ತ  ಹೋರಟು  ಹತ್ತಿಕುಣಿ ಕ್ರಾಸದಲ್ಲಿ ಹೋಗುತ್ತಿರುವಾಗ ನಮ್ಮ ಎದುರುಗಡೆಯಿಂದ  ಒಂದು ಟ್ರ್ಯಾಕ್ಟರಗಳಲ್ಲಿ ಮರಳು ತುಂಬಿಕೊಂಡು ಬರುತ್ತಿದ್ದು ಕೂಡಲೇ ನಾವು ಅದಕ್ಕೆ ಕೈ ಮಾಡಿ 4-30 ಪಿಎಂಕ್ಕೆ ನಿಲ್ಲಿಸುತ್ತಿರುವಾಗ ಟ್ರ್ಯಾಕ್ಟರ ಚಾಲಕನು ನಮ್ಮ ನೋಡಿ ಓಡಿ ಹೋಗಿದ್ದು  ಟ್ರ್ಯಾಕ್ಟರದಲ್ಲಿ  ಮರಳು ತುಂಬಿದ್ದು ಇರುತ್ತದೆ. ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರನ್ನು ಬಿಟ್ಟು ಓಡಿ ಹೊಗಿದ್ದರಿಂದ ಯಾವದೆ ಪರವಾನಿಗೆ ಇಲ್ಲದೆ ಟ್ರ್ಯಾಕಟರದಲ್ಲಿ ಅಕ್ರಮವಾಗಿ ಮರಳನ್ನು ಕದ್ದು ಕಳ್ಳತನಿಂದ ಸಾಗಿಸುತ್ತಿದ್ದು ಕಂಡು ಬಂತು, ಟ್ರ್ಯಾಕ್ಟರನ್ನು ಪರಿಸಿಲಿಸಲಾಗಿ ಟ್ರ್ಯಾಕ್ಟರ ಇಂಜಿನ್ ನಂ. ಕೆಎ-33-9117 ಇದ್ದು ಟ್ರಾಲಿ ನಂ.ಕೆಎ-33-9118 ಇದ್ದು ಸದರಿ ಟ್ರ್ಯಾಕ್ಟರ ಚಾಲಕರು ಮತ್ತು ಮಾಲಿಕರು ಕೂಡಿಕೊಂಡು ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕದ್ದು ಕಳ್ಳತನದಿಂದ ಸಾಗಿಸುತ್ತಿದ್ದು ಖಾತ್ರಿಯಾಯಿತು. ನಂತರ ಸಿಬ್ಬಂದಿಯವರ ಸಹಾಯದಿಂದ  ಮರಳು ತುಂಬಿದ ಟ್ರ್ಯಾಕ್ಟರನ್ನು ತೆಗದುಕೊಂಡು ಯಾದಗಿರಿ ನಗರ ಠಾಣೆಗೆ 5-00 ಪಿಎಂಕ್ಕೆ ತಂದು ಟ್ರ್ಯಾಕ್ಟರನ್ನು ಠಾಣೆ ಮುಂದೆ ನಿಲ್ಲಿಸಿ, ಯಾದಗಿರಿ ನಗರ ಠಾಣೆಯ ಎಸ್.ಎಚ್.ಓ ರವರಿಗೆ ಆಕ್ರಮವಾಗಿ ಮರಳು ತುಂಬಿದ ಟ್ರ್ಯಾಕ್ಟರನ್ನು ಒಪ್ಪಿಸಿ,  ಜ್ಞಾಪನಾ ಪತ್ರವನ್ನು ಗಣಕಯಂತ್ರದಲ್ಲಿ ತಯ್ಯಾರಿಸಿ ಠಾಣೆಯಲ್ಲಿ ಪ್ರಿಂಟ ತೆಗೆದು ನಾನು ಸಹಿ ಮಾಡಿ ಸದರಿ ಫಿರ್ಯಾಧಿಯನ್ನು 5-15 ಪಿಎಂಕ್ಕೆ ಸರಕಾರಿ ತಫರ್ೆಯಾಗಿ ಮುಂದಿನ ಕ್ರಮಕ್ಕಾಗಿ ಠಾಣಾಧಿಕಾರಿ ಯಾದಗಿರಿ ನಗರ ಠಾಣೆ ರವರಿಗೆ ಜ್ಞಾಪನಾ ನೀಡಿದ್ದು  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.31/2018 ಕಲಂ. 379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 24/2018 ಕಲಂ: 143,147,148,504,341,324,307 ಸಂ 149 ಐಪಿಸಿ;- ದಿನಾಂಕ: 16/02/2018 ರಂದು 1-15 ಪಿಎಮ್ ಕ್ಕೆ ಸಮುದಾಯ ಆರೋಗ್ಯ ಕೇಂದ್ರ ವಡಗೇರಾ ರವರಿಂದ ಎಮ್.ಎಲ್.ಸಿ ಮಾಹಿತಿ ಫೋನ ಮೂಲಕ ಬಂದ ಮೇರೆಗೆ ಎಮ್.ಎಲ್.ಸಿ ವಿಚಾರಣೆ ಕುರಿತು ನಾನು 1-30 ಪಿಎಮ್ ಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ್ದು, ಆಸ್ಪತ್ರೆಯಲ್ಲಿದ್ದ ಗಾಯಾಳು ಶ್ರೀ ಮೌಲಾನಾ ಮಹಿಬೂಬ ಆಲಂ ತಂದೆ ಮಹ್ಮದ ಖಾಜಾ ನಾಯಕ ವ:64, ಜಾ:ಮುಸ್ಲಿಂ, ಉ:ರಜಾ ಜಾಮಾ ಮಸ್ಜೀದ ಪೇಶ ಇಮಾಮ ಸಾ:ತುಮಕೂರ ಇವರಿಗೆ ವಿಚಾರಿಸಿದಾಗ ತಾನು ಲಿಖಿತ ಫಿರ್ಯಾಧಿ ಸಲ್ಲಿಸುವುದಾಗಿ ಹೇಳಿ ಕನ್ನಡದಲ್ಲಿ ಟೈಪ ಮಾಡಿಸಿದ ದೂರು ಅಜರ್ಿ ಸಲ್ಲಿಸಿದ್ದು, ಸದರಿ ದೂರು ಅಜರ್ಿ ಸಾರಾಂಶವೇನಂದರೆ ನಾನು ನಮ್ಮೂರಿನ ರಜಾ ಜಾಮಾ ಮಸ್ಜಿದ ಮುಖ್ಯಗುರುಗಳು ಪೇಶ ಇಮಾಮ ಎಂದು ಸದರಿ ಗ್ರಾಮದ ಇಸ್ಲಾಮಿಕ ಧರ್ಮದ ಪ್ರಕಾರ ಎಲ್ಲಾ ಕಾರ್ಯಕ್ರಮಗಳನ್ನು ಕೈಕೊಂಡು ಇಮಾವತ ಕಾರ್ಯ ನಿರ್ವಹಿಸುತ್ತಿದ್ದೇನೆ. ಸದರಿ ಮಸೀದಿ ಮತ್ತು ಸಂಬಂಧಪಟ್ಟ ಆಸ್ತಿಗಳು ಫೈಜಾನೆ ಎ ಇಮಾಮ ಅಹ್ಮದ ರಜಾ ನೂರಿ ಟ್ರಸ್ಟ್ ತುಮಕೂರಿಗೆ ಸಂಬಂಧಪಟ್ಟಿದ್ದು ಇರುತ್ತದೆ. ಆದರೆ ಗ್ರಾಮದಲ್ಲಿಯ ಸೈಯದ ಬಾಷಾ ತಂದೆ ಮಹಿಮೂದ ಮುಲ್ಲಾ ಹಾಗೂ ಸಂಗಡಿಗರು ಜಾಮಾ ಮಸೀದಿಯಲ್ಲಿ ತಮಗೂ ಮುಲ್ಲಾಗಿರಿ ಮಾಡುವುದು ಪಾಲುದಾರಿಕೆ ಇದೆ ನಮಗೆ ಕೊಡು ಎಂದು ಆಗಾಗ ನಮ್ಮೊಂದಿಗೆ ತಂಟೆ ತಕರಾರು ಮಾಡುತ್ತಾ ಬರುತ್ತಿದ್ದು, ಸಿವಿಲ್ ಕೋರ್ಟನಲ್ಲಿ ದಾವೆ ನಡೆದು ಕೋರ್ಟ ಡಿಕ್ರಿಯು ನಮ್ಮಂತೆ ಆಗಿರುತ್ತದೆ. ಅದಕ್ಕೆ ಹತಾಶರಾದ ಅವರು ಇತ್ತಿಚ್ಚೆಗೆ ಗ್ರಾಮದಲ್ಲಿ ಎರಡು ಗುಂಪುಗಳನ್ನು ಮಾಡಿ ತಮ್ಮ ಬೆಂಬಲಿಗರೊಂದಿಗೆ ತಾವು ಪ್ರತ್ಯೆಕವಾಗಿ ಪೀರಲ ದೇವರು ಕೂಡಿಸುವ ಅಸರಖಾನಾದಲ್ಲಿ ಮಸೀದಿ ಮಾಡಿಕೊಂಡಿರುತ್ತಾರೆ. ಆದರೂ ಕೂಡಾ ಮತ್ತೆ ಅವರು ಇದೆ ಮಸೀದಿಯಲ್ಲಿ ನಮಾಜ ಮಾಡುತ್ತೇವೆ ಎಂದು ಆಗಾಗ ತಕರಾರು ಮಾಡಿ ನಮ್ಮೊಂದಿಗೆ ಜಗಳ ಮಾಡಿರುತ್ತಾರೆ. ಈ ಸಂಬಂಧ ವಡಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ. ಅವರು ಈಗಾಗಲೇ ಬೇರೆ ಮಸೀದಿ ಮಾಡಿಕೊಂಡಿದಾಗ್ಯೂ ಕೂಡಾ ನಮ್ಮ ಮಸೀದಿಗೆ ಬಂದು ನಮಾಜ ಮಾಡುತ್ತೇವೆಂದು ಜಗಳಕ್ಕೆ ಬರುತ್ತಿರುತ್ತಾರೆ. ಹೀಗಿದ್ದು ಇಂದು ದಿನಾಂಕ: 16/02/2018 ರಂದು ಮದ್ಯಾಹ್ನ 12-15 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗ ಗುಲಾಮ ಅಬ್ದುಲ್ ಖದೀರ ಮತ್ತು ಊರಿನವರಾದ ಇಸ್ಮಾಯಿಲ ತಂದೆ ಕಾಸಿಂ ಅಲಿ, ಸಣ್ಣ ರಹಿಂ ತಂದೆ ಮೊಹ್ಮದ ಹುಸೇನ ಖುರೇಷಿ ಮತ್ತು ಇತರರು ರಜಾ ಜಾಮಾ ಮಸೀದಿಗೆ ನಮಾಜ ಮಾಡಲು ಹೋಗುತ್ತಿದ್ದಾಗ ಸದರಿ ಮಸೀದಿಯ ಎದುರುಗಡೆ 1) ಸೈಯದ ಬಾಷಾ ತಂದೆ ಮಹಿಮೂದ ಮುಲ್ಲಾ, 2) ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ, 3) ಯೂಸುಫ ತಂದೆ ಬಾಷುಮಿಯಾ ಮುಲ್ಲಾ, 4) ಅಲ್ತಾಫ ತಂದೆ ಇಮಾಮಸಾಬ ದಿನ್ಯಾ ಮುಲ್ಲಾ, 5) ಹುಸೇನ ತಂದೆ ಮೊಹ್ಮದಸಾಬ ಆವಂಟಿಗೆ, 6) ಇಬ್ರಾಹಿಂ ತಂದೆ ಹುಸೇನಸಾಬ ದಾದೆಭಾಯಿ, 7) ಕಮಾಲಸಾಬ ತಂದೆ ಜಲಾಲಸಾಬ ಮುಲ್ಲಾ, 8) ಅಬ್ದುಲ ರಹಿಂ ತಂದೆ ಜಲಾಲಸಾಬ ಮುಲ್ಲಾ, 9) ದಾವಲಸಾಬ ತಂದೆ ಇಮಾಮಸಾಬ ಮಲ್ಡಿ, 10) ಸಲಿಂ ತಂದೆ ಮೌಲನಸಾಬ ಮಲ್ಡಿ, 11) ಬಂದಿಸಾಬ ತಂದೆ ಬುರಾನಸಾಬ ಕೋರಬಾ, 12) ಜಲಾಲ ತಂದೆ ಹುಸೇನಸಾಬ ಮ್ಯಾಗಳಮನಿ, 13) ಮೈನುದ್ದಿನ ತಂದೆ ಮಹಿಮೂದ ಮುಲ್ಲಾ, 14) ಆಸಿಫ ತಂದೆ ಇಬ್ರಾಹಿಂ ಮುಲ್ಲಾ, 15) ಉಸ್ಮಾನ ತಂದೆ ಕಾಸಿಂ ಅಲಿ ವಂಡರ ಮತ್ತು ಇತರರು ಸೇರಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕಟ್ಟಿಗೆಗಳನ್ನು ಹಿಡಿದುಕೊಂಡು ಬಂದವರೆ ನಮಗೆ ತಡೆದು ನಿಲ್ಲಿಸಿ, ನನಗೆ ಏ ಭೊಸಡಿಕಾ ಹಮಾರೆಕೋ ಮಸೀದಿ ಮೇ ನಮಾಜ ಕರನೆ ಆನೆ ನಹಿಂ ದೇರಾ ಇಸಕೋ ಆಜ ಖಲಾಸ ಕರಿಂಗೆ ಎಂದು ಜಗಳ ತೆಗೆದವರೆ ನನಗೆ ಸೈಯದ ಬಾಷಾ, ಹುಸೇನ, ಕಮಾಲಸಾಬ ಮತ್ತು ಅಬ್ದುಲ ರಹಿಂ ಇವರು ಗಟ್ಟಿಯಾಗಿ ಹಿಡಿದುಕೊಂಡಾಗ ಇಬ್ರಾಹಿಂ ತಂದೆ ಹುಸೇನಸಾಬ ಮುಲ್ಲಾ ಈತನು ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಟ್ಟಿಗೆಯಿಂದ ನನ್ನ ಎಡಗಡೆ ತೆಲೆಗೆ ಹೊಡೆದು ಒಳಪೆಟ್ಟು ಮಾಡಿದನು. ಯೂಸುಫನು ಮಷಿನದಲ್ಲಿ ಕೊಯ್ದ ಕಟ್ಟಿಗೆಯಿಂದ ಕೊಲೆ ಮಾಡುವ ಉದ್ದೇಶದಿಂದ ನನ್ನ ತೆಲೆಗೆ ಹೊಡೆಯಲು ಬಂದಾಗ ನಾನು ತಪ್ಪಿಸಿಕೊಂಡು ಬಲಗೈ ಅಡ್ಡ ಒಯ್ದಾಗ ಆ ಏಟು ಬಲಗೈ ಮೊಣಕೈಗೆ ಬಿದ್ದು ರಕ್ತಗಾಯವಾಯಿತು. ಇಲ್ಲದಿದ್ದರೆ ಆ ಏಟು ತೆಲೆಗೆ ಬಿದ್ದರೆ ಸತ್ತೆ ಹೋಗುತ್ತಿದ್ದೆ. ಅಲ್ತಾಫನು ಅದೇ ಕಟ್ಟಿಗೆಯಿಂದ ಎಡಗಡೆ ಟೊಂಕಕ್ಕೆ ಹೊಡೆದು ಒಳಪೆಟ್ಟು ಮಾಡಿದನು. ಸೈಯದ ಬಾಷಾನು ಕಾಲಿನಿಂದ ಒದ್ದನು. ಜಗಳ ಬಿಡಿಸಲು ಬಂದ ನನ್ನ ಮಗ ಗುಲಾಮ ಅಬ್ದುಲ ಖದೀರನಿಗೆ ಆಸೀಫ ತಂದೆ ಇಬ್ರಾಹಿಂ ಮುಲ್ಲಾ ಈತನು ಕಟ್ಟಿಗೆಯಿಂದ ಕೊಲೆ ಮಾಡುವ ಉದ್ದೇಶದಿಂದ ತೆಲೆಗೆ ಹೊಡೆದು ರಕ್ತಗಾಯ ಮಾಡಿದನು. ದಾವಲಸಾಬ, ಸಲಿಂ, ಬಂದಿಸಾಬ, ಜಲಾಲ, ಮೈನುದ್ದಿನ, ಉಸ್ಮಾನ ಮತ್ತು ಇತರರೂ ಸೇರಿ ನನಗೆ ಮತ್ತು ನನ್ನ ಮಗನಿಗೆ ಮನಸ್ಸಿಗೆ ಬಂದಂತೆ ಕೈಯಿಂದ, ಕಟ್ಟಿಗೆಯಿಂದ ಹೊಡೆದಿರುತ್ತಾರೆ. ಆಗ ಜಗಳವನ್ನು ಅಲ್ಲಿಯೇ ಇದ್ದ ಇಸ್ಮಾಯಿಲ ತಂದೆ ಕಾಸಿಂ ಅಲಿ ಖುರೇಷಿ, ಸಣ್ಣ ರಹಿಂ ತಂದೆ ಮೊಹ್ಮದ ಹುಸೇನ ಖುರೇಷಿ, ನಜೀರ ತಂದೆ ಬಾಷುಮಿಯಾ ಖುರೇಷಿ ಮತ್ತು ರಾಜಾ ತಂದೆ ಮಹಿಬೂಬಸಾಬ ಖುರೇಷಿ ಹಾಗೂ ಇತರರು ಬಿಡಿಸಿರುತ್ತಾರೆ. ಇಲ್ಲದಿದ್ದರೆ ನಮಗೆ ಹೊಡೆದು ಕೊಲೆ ಮಾಡೆ ಬಿಡುತ್ತಿದ್ದರು. ಕಾರಣ ತಾವು ಬೇರೆ ಮಸೀದಿ ಮಾಡಿಕೊಂಡಿದ್ದರು, ವಿನಾಕಾರಣ ಮತ್ತೆ ನಮ್ಮ ಮಸೀದಿಗೆ ನಮಾಜ ಮಾಡಲು ಬರುತ್ತೇವೆ ಎಂದು ಜಗಳ ತೆಗೆದು ಅಕ್ರಮಕೂಟ ಕಟ್ಟಿಕೊಂಡು ಬಂದು ನಮಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆಬಡೆ ಮಾಡಿ, ಕೊಲೆ ಮಾಡಲು ಪ್ರಯತ್ನಿಸಿದ ಮೇಲ್ಕಂಡವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿನಂತಿ ಎಂದು ಕೊಟ್ಟ ದೂರು ಅಜರ್ಿಯನ್ನು 3-30 ಪಿ.ಎಮ್ ಕ್ಕೆ ಸ್ವಿಕೃತ ಮಾಡಿಕೊಂಡು 3-45 ಪಿಎಮ್ ಕ್ಕೆ ಮರಳಿ ಠಾಣೆಗೆ ಬಂದು ಸದರಿ ದೂರು ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 24/2018 ಕಲಂ: 143,147,148,504,341,324,307 ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 37/18 ಕಲಂ: 143, 147, 148, 448, 323, 324, 354, 504, 506, ಸಂ 149 ಐಪಿಸಿ;-ಶ್ರೀಮತಿ ಶರಣಮ್ಮ ಗಂಡ ಬಸಣ್ಣ ಹಳ್ಳೆಬುಕ್ಕರ ವಯಾ|| 48 ವರ್ಷ ಜಾ|| ಕಬ್ಬಲಿಗ ಉ|| ಹೊಲಮನೆಗೆಲಸ ಸಾ|| ಹೆಗ್ಗಣದೊಡ್ಡಿ ಇವರು ಆಸ್ಪತ್ರೆಯಲ್ಲಿ ಕೊಟ್ಟ ಹೇಳಿಕೆ ಪಿರ್ಯಾದಿ ಸಾರಾಂಶವೇನೆಂದರೆ, ಮನೆಯ ಜಾಗದ ವಿಷಯದಲ್ಲಿ ನಮಗೂ ಹಾಗೂ ನಮ್ಮ ದೂರದ ಸಂಬಂದಿಯಾದ ಹಣಮಂತ ತಂದೆ ಸಿದ್ದಪ್ಪ ಕಕ್ಕಸಗೇರಿ ಇವರ ಮದ್ಯ ತಕರಾರು ನಡೆದು ಸದರಿಯವರು ನನ್ನ ಮೇಲೆ ಹಗೆತನ ಸಾಧಿಸುತ್ತಿದ್ದರು. ಹೀಗಿದ್ದು ದಿ: 14/02/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ನಾನು ನಮ್ಮ ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತಾಗ ನಮ್ಮೂರ ನಮ್ಮ ಜನಾಂಗದವರೆ ಆದ 1) ಹಣಮಂತ ತಂದೆ ಸಿದ್ದಪ್ಪ ಕಕ್ಕಸಗೇರಿ 2) ಭೀಮಣ್ಣ ತಂದೆ ಸಿದ್ದಪ್ಪ ಕಕ್ಕಸಗೇರಿ 3) ನಿಜಪ್ಪ ತಂದೆ ಸಿದ್ದಪ್ಪ ಕಕ್ಕಸಗೇರಿ 4) ರಾಮು ತಂದೆ ನಿಜಪ್ಪ ಕಕ್ಕಸಗೇರಿ 5) ನಿಂಗಮ್ಮ ಗಂಡ ಹಣಮಂತ ಕಕ್ಕಸಗೇರಿ 6) ಯಂಕಮ್ಮ ಗಂಡ ನಿಜಪ್ಪ ಕಕ್ಕಸಗೇರಿ 7) ಮಾನಮ್ಮ ಗಂಡ ಭೀಮಣ್ಣ ಕಕ್ಕಸಗೇರಿ ಸಾ|| ಎಲ್ಲರೂ ಹೆಗ್ಗಣದೊಡ್ಡಿ ಇವರು ಗುಂಪುಕಟ್ಟಿಕೊಂಡು ಅಕ್ರಮವಾಗಿ ನಮ್ಮ ಮನೆಯೊಳಗೆ ಪ್ರವೇಶ ಮಾಡಿ ಏನಲೇ ಸೂಳಿ ಶಾಣಿ ಅಂತ ಅವಾಚ್ಯವಾಗಿ ಬೈಯುತ್ತಾ ಎಲ್ಲರೂ ನನಗೆ ನೆಲಕ್ಕೆ ಕೆಡವಿ ಕೈಯಿಂದ ಹೊಡೆದು ಕಾಲಿನಿಂದ ಒದ್ದು ತಲೆಯಲ್ಲಿನ ಕೂದಲು ಜಗ್ಗಾಡಿ ಮಾನಭಂಗ ಮಾಡಲು ಪ್ರಯತ್ನಿಸಿದ್ದು ಅಲ್ಲದೆ ಅವರಲ್ಲಿಯ ಹಣಮಂತ ಈತನು ಅಲ್ಲಿಯೇ ಬಿದ್ದ ಕಬ್ಬಿಣದ ರಾಡಿನಿಂದ ತಲೆಗೆ ಹೊಡೆದು ರಕ್ತಗಾಯಪಡೆಸಿದ್ದು, ಅಲ್ಲದೆ ಎದೆಗೂ ಸಹ ರಾಡಿನಿಂದ ಹೊಡೆದು ಗುಪ್ತಗಾಯಪಡೆಸಿರುತ್ತಾರೆ. ಆಗ ನಾನು ಕೆಳಗೆ ಬಿದ್ದು ಚೀರಾಡಲಿಕ್ಕೆ ಹತ್ತಿದಾಗ ನನ್ನ ಚೀರಾಡುವ ಶಬ್ದ ಕೇಳಿ ಹೊರಗಡೆಯಿಂದ ನನ್ನ ಮಕ್ಕಳಾದ ಪಕೀರಪ್ಪ ತಂದೆ ಬಸಣ್ಣ, ನಾಗರಾಜ ತಂದೆ ಬಸಣ್ಣ ಇವರು ಬಿಡಿಸಿಕೊಳ್ಳಲು ಬಂದಾಗ ಎಲ್ಲರೂ ಸದರಿ ನನ್ನ ಎರಡೂ ಮಕ್ಕಳಿಗೆ ಕೈಯಿಂದ ಹೊಡೆಬಡೆ ಮಾಡಿದ್ದಲ್ಲದೆ ಅವರಲ್ಲಿಯ ಭೀಮಣ್ಣ ಈತನು ಅಲ್ಲಿಯೇ ಮನೆಯಲ್ಲಿದ್ದ ಚಾಕುವಿನಿಂದ ಬಲಗೈ ಬೆರಳಿಗೆ ಹೊಡೆದು ರಕ್ತಗಾಯ ಪಡಿಸಿದನು. ಮಗ ಪಕೀರಪ್ಪ ಇವನಿಗೆ ನಿಜಪ್ಪ ಈತನು ಕಟ್ಟಿಗೆಯಿಂದ ಬಲಗಾಲ ಹಿಮ್ಮಡಿಗೆ ಹೊಡೆದು ಗುಪ್ತಗಾಯಪಡಿಸಿ ಜೀವದ ಬೆದರಿಕೆ ಹಾಕಿ ಹೋದರು ಅಂತ ಇದ್ದ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಕೆಂಭಾವಿ ಠಾಣೆ ಗುನ್ನೆ ನಂ 37/18 ಕಲಂ: 143, 147, 148, 448, 323, 324, 354, 504, 506, ಸಂ 149 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು. 

 

No comments: