Police Bhavan Kalaburagi

Police Bhavan Kalaburagi

Tuesday, February 6, 2018

Yadgir District Reported Crimes Updated on 06-02-2018


                                     Yadgir District Reported Crimes
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 22/2018 ಕಲಂ 323 448 354(ಎ) (1) (2), 504 506 ಐ.ಪಿ.ಸಿ ಮತ್ತು  3(1) (ಖ) (ಖ) (ಘ) ಖಅ/ಖಖಿ ಕಂ.ಂಅಖಿ-1989;- ದಿ:31/01/2018 ರಂದು ರಾತ್ರಿ 19.30 ಗಂಟೆ ಸುಮಾರಿಗೆ ಫಿರ್ಯಾಧಿ ಲಿಖಿತ ದೂರಿನ ಸಾರಾಂಶವೇನೆಂದರೆ  ದಿನಾಂಕ:31/01/2018 ರಂದು  ಬೆಳಿಗ್ಗೆ 10 ಗಂಟೆಯ ಸುಮಾರಿಗೆ ನಾನು ನನ್ನ ಮಾವನಾದ ಚಂದಪ್ಪ ತಂ.ಬಸಪ್ಪ ಹಾಗೂ ಅತ್ತೆಯಾದ ಮಾಳಮ್ಮಾ ಗಂ ಚಂದಪ್ಪ ಇವರು ಮನೆಯಲಿದ್ದಾಗ, ಆಗ ನನ್ನ ಗಂಡನಾದ ಯಲ್ಲಪ್ಪ ಇವರು ತಿಂಥಣಿ ಜಾತ್ರೆಗೆ ಹೋಗಿ ಬರುವದಾಗಿ ಎಲ್ಲರಿಗೆ ಹೇಳಿ ಹೋಗಿದ್ದನು, ನಾನು ನಮ್ಮ ಮನೆಯಲ್ಲಿದ್ದೇನು. ನನ್ನ ಅತ್ತೆ ಮಾವ ಇನ್ನೊಂದು ಮನೆಯಲ್ಲಿ ಇದ್ದರು, ನಾನು ಕೂಲಿಕೆಲಸಕ್ಕೆಂದು ಬೋಯಪ್ಪ ದೊರಿ ಇವರ ಹೊಲಕ್ಕೆ ಹೋಗಿ ಸಂಜೆ ಮನೆಗೆ ಬಂದು ರಾತ್ರಿ 9 ಗಂಟೆಯ ಸುಮಾರಿಗೆ ಊಟಮಾಡಿ ಮಲಗಿಕೊಂಡೆನು. ನನ್ನ ಅತ್ತೆ ಮಾವ ಇಬ್ಬರೂ ನಮ್ಮ ಮನೆಗೆ ಹೊಂದಿಕೊಂಡಿರುವ ಇನ್ನೊಂದು ಮನೆಯಲ್ಲಿ ಮಲಗಿಕೊಂಡಿದ್ದರು, ರಾತ್ರಿ 11 ಗಂಟೆಯ ಸುಮಾರಿಗೆ ಮನೆಯೊಳಗಿನ ಕೊಣೆಯಲ್ಲಿ ನನ್ನ ತಂಗಿಯಾದ ಜೆಟ್ಟೆಮ್ಮಾ ಹಾಗೂ ನನ್ನ ಸಣ್ಣ ಮಕ್ಕಳೊಂದಿಗೆ ಮಲಗಿಕೊಂಡಾಗ ನನಗೆ ನಿದ್ದಿ ಹತ್ತಿದ ಸಮಯದಲ್ಲಿ ನನ್ನ ಅತ್ತೆಯಾದ ಮಾಳಮ್ಮಾ ಇವರು ಮನೆಯ ಬಾಗಿಲು ಬಾರಿಸಿ ಎದ್ದೇಳು ಮನೆಯೋಳಗೆ ಯಾರೋ ಬಂದಾರ  ಅಂತಾ ಕೂಗಿದಾಗ ನಾನು ಒಮ್ಮಲೇ ಗಾಬರಿಗೊಂಡು ಎದ್ದು ಲೈಟಿನ ಬೆಳಕಿನಲ್ಲಿ ನೋಡಲು ನಮ್ಮೂರ ಬಸವರಾಜ ತಂ.ಸಂಗಣ್ಣ ಗುಂಡಕನಾಳ ಈತನು ಕಟ್ಟಿಗೆಯ ಮಚ್ಚದ ಕೆಳಗಡೆ ಡೊಕ್ಕು ಬಡಿದುಕೊಂಡಿದ್ದನ್ನು ನೋಡಿ ಇಲ್ಲಿ ರಾತ್ರಿವೇಳೆ ಯಾಕೋ ಬಂದಿಯೋ ಆಟೇ ಅಂತಾ ಬೈಯುತ್ತಿದ್ದಾಗ ನನ್ನ ಅತ್ತೆ ಮಾವ ಇಬ್ಬರೂ ಅವನಿಗೆ ಹಿಡಿಯುವಷ್ಟರಲ್ಲಿ ಅವನು  ನನ್ನ ಎದೆಯ ಮೇಲೆ ಕೈಇಟ್ಟು ಜಂಪರ ಹಿಡಿದು ಜಗ್ಗಿ ದಬ್ಬಿಕೊಟ್ಟು ಇವತ್ತು ನಿಮ್ಮ ಅತ್ತೆ ಮಾವ ಬಂದರಂತಹ ಉಳಿದುಕೊಂಡಿದಿ ಇನ್ನೊಂದು ಸಲಸಿಕ್ಕರೇ ನಿನಗೆ ಅತ್ಯಾಚಾರ ಮಾಡುವ ತನಕ ಬಿಡುವದಿಲ್ಲಾ. ಅಂತಾ ಜೀವದ ಬೆದರಿಕೆ ಹಾಕಿ ಹೋಗಿರುತ್ತಾನೆ, ಈ ವಿಷಯದ ಬಗ್ಗೆ ನನ್ನ ಗಂಡನು ತಿಂಥಣಿ ಜಾತ್ರೆಯಿಂದ ಮನೆಗೆ ಬಂದ ಮೇಲೆ ವಿಷಯ ತಿಳಿಸಿ ನನ್ನ ಅತ್ತೆ ಮಾವ ಎಲ್ಲರೂ ಮಯರ್ಾದಿಗೆ ಅಂಜಿ ಮನೆಯಲ್ಲಿ ವಿಚಾರಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇವೆ ಅಂತಾ ಇತ್ಯಾದಿ ದೂರಿನ ಮೇಲಿಂದಾ ಕ್ರಮ ಜರುಗಿಸಿದ್ದು ಇದೆ.
           
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 25/2018 ಕಲಂ: 166,338 ಸಂಗಡ 34 ಐಪಿಸಿ;- ದಿನಾಂಕ: 13/02/2017 ರಂದು 5.30 ಪಿಎಮ್ ಸುಮಾರಿಗೆ ಪಿರ್ಯಾದಿದಾರನು ತೆಗ್ಗಿಹಳ್ಳಿ ಗ್ರಾಮದ ಸರಕಾರಿ ಶಾಲೆಯ ಮೈದಾನದಲ್ಲಿ  ಕ್ರಿಕೆಟ್ ಆಡುತ್ತಿದ್ದಾಗ ಚೆಂಡು ಸದರಿ ಶಾಲಾ ಆವರಣದ ಹತ್ತಿರ ಇರುವ ವಿದ್ಯುತ್ ಟ್ರಾನ್ಸ್‌ಫಾರ್ಮರ ಹತ್ಇರ ಹೋದಾಗ ಪಿರ್ಯಾದಿದಾರನು ಸದರಿ ಬಾಲ್ ತರಲು ಹೋಗಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಎರಡೂ ಕೈಗಳು ಸುಟ್ಟು ಗಾಯಗಳಾಗಿದ್ದು ಆರೊಪಿತರು ಸದರಿ ವಿದ್ಯುತ್ ಪರಿವರ್ತಕಕ್ಕೆ ಯಾವುದೇ ರೀತಿಯ ಮುಂಜಾಗ್ರತಾ ಕ್ರಮ ಕುರಿತು ತಡೆಗೋಡೆ ಇನ್ನಿತರ ಬೇಲಿ ಹಾಕದೇ ಇರುವದರಿಂದ ಸದರಿಯವರ ನಿಷ್ಕಾಳಜಿತನದಿಂದಲೇ ಈ ಅವಘಡ ಸಂಭವಿಸಿದ್ದು, ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತ ಮಾನ್ಯ ನ್ಯಾಯಾಲಯದಿಂದ ವಸೂಲಾದ ಖಾಸಗಿ ಪಿರ್ಯಾದಿ ನಂ 01/2018 ನೇದ್ದರ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 25/2018 ಕಲಂ: 166, 338 ಸಂ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಕೊಂಡೆನು
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ:273, 284 ಐಪಿಸಿ ಮತ್ತು 32, 34 ಕೆ.ಇ ಆಕ್ಟ್;- ದಿನಾಂಕ: 05/02/2018 ರಂದು ಸಾಯಂಕಾಲ 4:10 ಪಿ ಎಂ ಕ್ಕೆ ಪಿ ಎಸ್ ಐ ಸಾಹೇಬರು ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಅದರ ಸಾರಾಂಶವೆನೆಂದರೆ ಇಂದು ದಿನಾಂಕ:05/02/2018 ರಂದು ಬೈಲಕುಂಟಿ ಸೀಮಾಂತರದ ಬಸಲಿಂಗಪ್ಪ ಕೆಳಗಿನಮನಿ ರವರ ಹೊಲದ ಪೂರ್ವದಲ್ಲಿ ಇರುವ ಸ್ಮಾಶಾನದಲ್ಲಿ ಬೇಳೆದ ಜಾಲಿಗಿಡದ ಕಂಟಿಯ ಮರೆಯಲ್ಲಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಢುತ್ತಿರುವ ಬಗ್ಗೆ ಭಾತ್ಮೀ ಬಂದಿದ್ದು, ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರಾದ ಪಿಸಿ-299 ಶಂಕರಗೌಡ ಪಿಸಿ-319 ವಿಶ್ವನಾಥ ಹಾಗು ಪಂಚರಾದ ವೆಂಕಟೇಶ ತಂದೆ ದ್ಯಾಮಣ್ಣ ಲಕ್ಕುಂಡಿ ಹಾಗೂ ಸಂಗಯ್ಯ ತಂದೆ ಬಸಯ್ಯ  ಹಿರೇಮಠ ರವರೊಂದಿಗೆ  ಠಾಣೆಯ ಸರಕಾರಿ ಜೀಪ ನಂ ಕೆ ಎ 32- ಜಿ-475 ನೇದ್ದರಲ್ಲಿ ಸ್ಥಳಕ್ಕೆಹೋಗಿ 2:40 ಪಿ ಎಂ ಕ್ಕೆ ದಾಳಿಮಾಡಿದ್ದು ಅನಧಿಕೃತವಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವನು ಪಿ ಎಸ್ ಐ ಸಾಹೇಬರು ಹಾಗೂ ಸಿಬ್ಬಂದಿಯವರುನ್ನು ನೋಡಿ ಓಡಿ ಹೋಗಿದ್ದು ಸರಾಯಿ ಕುಡಿಯಲು ಬಂದ 1) ಆದಪ್ಪ ತಂದೆ ಬಸಣ್ಣ ಸುಂಕಲ್ಲ 2) ಅಯ್ಯಪ್ಪ ತಂದೆ ಶಿವಪ್ಪ ಹಾಲಬಾವಿ ರವರು ಸ್ಥಳದಲ್ಲಿ ಇದ್ದು ಸ್ಥಳದಲ್ಲಿ ಇದ್ದ ಅಯ್ಯಪ್ಪ ಈತನಿಗೆ ಓಡಿ ಹೋದ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವನ ಹೆಸರು  ವಿಚಾರಿಸಲಾಗಿ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವುವನ ಹೆಸರು ಮೋತಿಲಾಲಲ ತಂದೆ ರಾಮಜಿ ರಾಠೋಡ ವ: 55 ವರ್ಷ ಉ: ಕೂಲಿ ಕೆಲಸ ಜಾ: ಹಿಂದು ಲಂಬಾಣಿ ಸಾ: ಬೊಮ್ಮನಗುಡ್ಡತಾಂಡಾ ಅಂತಾ ತಿಳಿಸಿದ್ದು  ಸದರಿ ಸ್ಥಳ ಪರಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಒಂದು ಅಂದಾಜು 10 ಲೀಟರ್ ಅಳತೆಯ ಬಿಳಿಯ ಬಣ್ಣದ ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 6 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು 600/- ರೂ  ಆಗುತ್ತಿದ್ದು ಹಾಗೂ ಕ್ಯಾನಿನ ಪಕದಲ್ಲಿ ಒಂದು ಸ್ಟಿಲನ ಗ್ಲಾಸ ಇದ್ದು ಸದರಿಯವಗಳನ್ನು ಇಂದು ದಿನಾಂಕ 05/02/2018 ರಂದು 2:40 ಪಿ ಎಂ ದಿಂದ 3:40 ಪಿ ಎಂದ ವರೆಗೆ ಪಂಚರ ಸಮಕ್ಷಮದಲ್ಲಿ ಜಪ್ತಿ ಪಂಚಾನಾಮೆ ಮಾಡುವ ಮೂಲಕ ಜಪ್ತುಪಡಿಸಿಕೊಂಡು ಮರಳಿ 4:10 ಪಿ ಎಂ ಕ್ಕೆ ಮರಳಿ ಠಾಣೆಗೆ ಬಂದು ಕಳ್ಳ ಭಟ್ಟಿ ಸಾರಾಯಿ ದಾಳಿ ಪಂಚನಾಮೆ ಮತ್ತು ಮುದ್ದೆಮಾಲನ್ನು ನಿಮ್ಮ ಮುಂದೆ ಹಾಜರುಪಡಿಸಿದ್ದು, ಸದರಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಆದಾರದ ಮೇಲೆ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ. ಅಂತಾ ಇದ್ದು ಪಿ.ಎಸ್.ಐ ಸಾಹೆಬರ ಜಪ್ತಿ ಪಂಚನಾಮೆ ಹಾಗು ಜ್ಞಾಪನಾ ಪತ್ರದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:10/2018 ಕಲಂ:273, 284 ಐಪಿಸಿ ಮತ್ತು 32, 34 ಕೆ.ಇ ಆಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
                                                                    
ಸೈದಾಪುರ ಪೊಲೀಸ್ ಠಾಣೆ ಗುನ್ನೆ ನಂ. 04/2018 ಕಲಂ: 336.338.304(ಎ) ಐ ಪಿ ಸಿ ;- ದಿನಾಂಕ 21-01-2018 ರಂದು 1-55 ಪಿ ಎಂ ಕ್ಕೆ ಅಜರ್ಿದಾರನಾದ ಶ್ರೀ ಕರೆಪ್ಪ ತಂದೆ ಮಹಾದೇವಪ್ಪ ತಿಪ್ಪಣ್ಣೋರ ವಯಾ|| 35 ವರ್ಷ ಜಾ|| ಕುರಬುರ ಉ|| ಒಕ್ಕಲುತನ ಸಾ|| ಗೌಡಗೇರಾ ತಾ|| ಜಿಲ್ಲಾ|| ಯಾದಗಿರಿ ಇವರು ಠಾಣೆಗೆ ಬಂದು ಒಂದು ಗಣಕ ಯಂತ್ರದಲ್ಲಿ ಟೈಪ ಮಾಡಿಸಿದ ಅಜರ್ಿಯನ್ನು ತಂದು ಹಾಜರ ಮಾಡಿದ್ದು. ಅದರ ಸಾರಾಂಶವೇನಂದರೆ. .ನಮ್ಮ ತಂದೆ ತಾಯಿಗೆ ನಾಲ್ಕು ಜನ ಅಣ್ಣ ತಮ್ಮಂದಿರರು ಇದ್ದು. 1) ನಾನು ಕರೆಪ್ಪ. 2) ನರಸಪ್ಪ. 3) ದೊಡ್ಡ ಯಲ್ಲಪ್ಪ. 4) ಸಣ್ಣ ಯಲ್ಲಪ್ಪ. ಅಂತಾ ಇರುತ್ತೇವೆ. ನಾವು ಬೇರೆ ಬೇರೆಯಾಗಿರುತ್ತೇವೆ. ನಮ್ಮ ತಮ್ಮನಾದ ದೊಡ್ಡ ಯಲ್ಲಪ್ಪ ವಯಾ|| 32 ವರ್ಷ ಇತನು ಆಡುಗಳನ್ನು ಕಾಯುತ್ತಾ ತನ್ನ ಹೆಂಡತಿ ಮಕ್ಕಳೊಂದಿಗೆ ಇದ್ದು ಉಪಜೀವನ ಸಾಗಿಸುತ್ತಾನೆ.
    ದಿನಾಂಕ 20-01-2018 ರಂದು 10-30 ಎ ಎ ಂ ಕ್ಕೆ ನಾನು ಊರ ಹತ್ತಿರ ಗದ್ದೆಯಲ್ಲಿ ಇದ್ದೆ ಆಗ ನಮ್ಮ ಸಣ್ಣಪ್ಪನಾದ ಸಾಬಗೌಡ ಹತ್ತಿಕುಣಿ ಇತನು ಪೋನ ಮಾಡಿ ತಿಳಿಸಿದ್ದೇನಂದರೆ. ನಿಮ್ಮ ತಮ್ಮನ ಮೇಲೆ ಗಿಡ ಬಿದ್ದಿದೆ ಅರ್ಜಂಟ್ ಬಾ ಅಂತಾ ತಿಳಿಸಿದ ನಾನು ತಕ್ಷಣ ಅಲ್ಲಿಗೆ ಅಂದರೆ ಸಿದ್ದಪ್ಪ ತಂದೆ ಈರಪ್ಪ ಕುರಬ ಇವರ ಹೊಲದ ಹತ್ತಿರ ಹೋಗಿ ನೋಡಲು ನನ್ನ ತಮ್ಮ ದೊಡ್ಡ ಯಲ್ಲಪ್ಪ ಮಾತನಾಡುತ್ತಿರಲಿಲ್ಲಾ. ಆತನಿಗೆ ತಲೆಯ ಮೇಲೆ ರಕ್ತಗಾಯವಾಗಿದೆ. ಮತ್ತು ಎರಡು ಬುಜಗಳಿಗೆ ಗುಪ್ತಗಾಯಗಳು ಆಗಿದ್ದು. ಕಿವಿಯಿಂದ ರಕ್ತಬರುತ್ತಿದ್ದು. ಆಗ ಅಲ್ಲೆ ಇದ್ದ. ನಮ್ಮ ತಂದೆ ಮಹಾದೇವಪ್ಪ ಹಾಗೂ ಪಕ್ಕದ ಹೊಲದವರಾದ ನಿಂಗಪ್ಪ. ಸಕ್ರೆಪ್ಪ. ಶಿವಪ್ಪ. ಇವರಿಗೆ ವಿಚಾರಿಸಲು.  ದಿನಾಂಕ 20-01-2018 ರಂದು ಬೆಳೆಗ್ಗೆ 10 ಗಂಟೆಯ ಸುಮಾರಿಗೆ ಚಾಮನಾಳ ಗ್ರಾಮದ ಶ್ರೀಶೈಲ್ ಇವರು ನಮ್ಮುರ ಸಿದ್ದಪ್ಪ ಇವರ ಗಿಡವನ್ನು ಖರೀದಿ ಮಾಡಿ ಕೂಲಿಕಾರರಿಂದ ಕೊಯಿಸುತ್ತಿದ್ದ. ಆಗ ದೊಡ್ಡಯಲ್ಲಪ್ಪ ಇತನು ತನ್ನ ಆಡುಗಳು ಮೇಯಲು ಗಿಡದ ಕೆಳಗೆ ಹೋಗಿದ್ದಾಗ. ಆಡುಗಳನ್ನು ಹೊಡೆದುಕೊಂಡು ಬರಲು ದೊಡ್ಡ ಯಲ್ಲಪ್ಪ ಹೋದಾಗ ಕೊಯಿಸುತ್ತಿದ್ದ ಗಿಡದ ಟೊಂಗೆ. ದೊಡ್ಡ ಯಲ್ಲಪ್ಪನ ಮೇಲೆ ಬಿದ್ದಿದೆ.ಆದ್ದರಿಂದ ಗಾಯವಾಗಿದೆ. ಅಂತಾ ತಿಳಿಸಿದರು.
    ಅಗ ನಾವು ಎಲ್ಲಾರು ಕೂಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ನನ್ನ ತಮ್ಮನಿಗೆ ಉಪಚಾರಕ್ಕಾಗಿ ಸೈದಾಪೂರಕ್ಕೆ ಬಂದು ಅಲ್ಲಿಂದ ಖಾಸಗಿ ವಾಹನದಲ್ಲೆ ರಾಯಚೂರಕ್ಕೆ ಹೋಗಿ ನಿನ್ನೆ ಅರ್.ವಿ. ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದೆ. ಅಲ್ಲಿಂದ ಹೆಚ್ಚಿನ ಉಪಚಾರಕ್ಕಾಗಿ ಹೈದ್ರಾಬಾದಕ್ಕೆ ಕರೆದುಕೊಂಡು ಹೋಗಲು ತಿಳಿಸಿದ್ದು. ನನ್ನ ತಮ್ಮನ ಹೆಂಡತಿ ಬನ್ನಮ್ಮಳಿಗೆ ಏನು ತೋಚದ ಕಾರಣ ನಾನು ತಡವಾಗಿ ಠಾಣೆಗೆ ಬಂದಿದ್ದು ಇದೆ. ಈ ಘಟನೆಗೆ ಕಾರಣವೇನಂದರೆ. ಗಿಡ ಖರೀದಿ ಮಾಡಿ ಕೊಯಿಸುವಾದ ಅಲ್ಲಿಗೆ ಜನರು ಯಾರು ಬರದಂತೆ ಮುಂಜಾಗ್ರತೆ ಕ್ರಮವನ್ನು ತೆಗೆದುಕೊಳ್ಳದೆ. ಶ್ರೀಶೈಲ ಇವರು ನಿರ್ಲಕ್ಷ ವಹಿಸಿದ್ದರಿಂದ ಕೊಯಿತ್ತಿರುವ ಗಿಡದ ಟೊಂಗೆ ದೊಡ್ಡಯಲ್ಲಪ್ಪನ ಮೇಲೆ ಬಿದ್ದು ಗಾಯವಾಗಿದ್ದು. ಶ್ರೀಶೈಲ ಸಾ|| ಚಾಮನಾಳ ಇವರ ಮೇಲೆ ಸೂಕ್ತ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಈ ಅಜರ್ಿಯ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 04/2018 ಕಲಂ 336.338 ಐ ಪಿ ಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ದಿನಾಂಕ 05-02-2018 ರಂದು ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ದೊಡ್ಡ ಯಲ್ಲಪ್ಪ ತಂದೆ ಮಹಾದೇವಪ್ಪ ತಿಪ್ಪಣ್ಣೋರ ಉಪಚಾರ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ 1:45 ಎ,ಎಮ್ ಕ್ಕೆ ಮೃತ ಪಟ್ಟಿರುತ್ತಾನೆ. ಆದರಿಂದ್ದ ಈ ಪ್ರಕರಣದಲ್ಲಿ ಕಲಂ 304(ಎ) ಐ,ಪಿ,ಸಿ ಅಳವಡಿಸಿಕೊಳ್ಳಲಾಗಿದೆ.

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 07/2018 ಕಲಂ:273, 284 ಐಪಿಸಿ ಮತ್ತು 32, 34 ಕೆ.ಇ ಆಕ್ಟ್;- ದಿನಾಂಕ: 06/02/2018 ರಂದು ಸಾಯಂಕಾಲ 02:30 ಪಿ ಎಂ ಕ್ಕೆ ಪಿ ಎಸ್ ಐ ಸಾಹೇಬರು ತಾವು ಪೂರೈಸಿದ ಜಪ್ತಿ ಪಂಚನಾಮೆ ಹಾಗು ಮುದ್ದೆಮಾಲಿನೊಂದಿಗೆ ಠಾಣೆಗೆ ಹಾಜರಾಗಿ ಜ್ಞಾಪನಾ ಪತ್ರ ನೀಡಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು, ಅದರ ಸಾರಾಂಶವೆನೆಂದರೆ ದಿನಾಂಕ:06/02/2018 ರಂದು ಬೆಳ್ಳಿಗುಂಡ ತಾಂಡಾದ ಧರ್ಮಣ್ಣ ತಂದೆ ಟೋಪಣ್ಣ ಪವ್ಹಾರ ಇವರ ಹೊಲದ ಹತ್ತಿರ ರಸ್ತೆಯ ಪಕ್ಕದ ಸ್ಥಳದಲ್ಲಿ ಕಳ್ಳ ಭಟ್ಟಿ ಸರಾಯಿ ಮಾರಾಟ ಮಾಢುತ್ತಿರುವ ಬಗ್ಗೆ ಭಾತ್ಮೀ ಬಂದ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರನ್ನು ಕರೆದುಕೊಂಡು ಠಾಣೆಯಿಂದ ಸರಕಾರಿ ಜೀಪ್ ನಂ ಕೆ.ಎ-33 ಜಿ.0094 ನೇದ್ದರಲ್ಲಿ 12:15 ಪಿ.ಎಮ್ಕ್ಕೆ ಹೋಗಿ ನಾವುಗಳು ಬೆಳ್ಳಿಗುಂಡ ತಾಂಡಾಕ್ಕೆ 12;45 ಪಿ.ಎಮ್.ಕ್ಕೆ ಹೋಗಿ ಸ್ವಲ್ಪ ದೂರದಲ್ಲಿ ವಾಹನವನ್ನು ನಿಲ್ಲಿಸಿ ನಡೆದುಕೊಂಡು ಹೋಗಿ ಆರೋಪಿತನು ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಂಡು 01:00 ಪಿಎಮ್ಕ್ಕೆ ದಾಳಿ ಕುರಿತು ಕಳ್ಳಬಟ್ಟಿ ಮಾರಾಟಾ ಮಾಡುವವನ ಹತ್ತಿರ ಹೋಗುತ್ತಿರುವಾಗ ಸಮವಸ್ತ್ರದಲ್ಲಿದ್ದ ನಮಗೆ ನೋಡಿ ಕಳ್ಳಭಟ್ಟಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿತನು ಸ್ಥಳದಲ್ಲಿಯೇ ಕಳ್ಳಬಟ್ಟಿ ಸರಾಯಿ ಬಿಟ್ಟು ಒಡು ಹೋಗಿದ್ದು ಸರಾಯಿ ಕುಡಿಯಲು ಬಂದವರಿಗೆ ಹೆಸರು ವಿಚಾರಿಸಲಾಗಿ ಅವರು ಓಡಿ ಹೋದ ಕಳ್ಳಬಟ್ಟಿ ಸಾರಾಯಿ ಮಾರಾಟ ಮಾಡುವವನು ಇದ್ದು ಇವನು ನಮಗೆ ಒಂದು ಸ್ಟೀಲ್ ಗ್ಲಾಸ್ಗೆ 20/- ರೂ ಅಂತೆ ಸರಾಯಿ ಮಾರಾಟ ಮಾಡುತ್ತಿದ್ದ ಅಂತಾ ತಿಳಿಸಿದ್ದು ಸ್ಥಳದ ಪರೀಶೀಲನೆ ಮಾಡಲಾಗಿ ಸದರಿ ಸ್ಥಳದಲ್ಲಿ ಅಂದಾಜು 05 ಲೀಟರ್ ಅಳತೆಯ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಕ್ಯಾನ್ ಇದ್ದು, ಅದರಲ್ಲಿ ಅಂದಾಜು 4 ಲೀಟರ್ ದಷ್ಟು ಕಳ್ಳ ಭಟ್ಟಿ ಸಾರಾಯಿ ಇದ್ದು, ಅದರ ಅಂದಾಜು 400/- ರೂ  ಆಗುತ್ತಿದ್ದು ಹಾಗೂ ಕ್ಯಾನಿನ ಪಕ್ಕದಲ್ಲಿ ಒಂದು ಸ್ಟಿಲನ ಗ್ಲಾಸ ಇದ್ದು ಪಿಎಸ್ಐ ಸಾಹೇಬರು ಕಳ್ಳಭಟ್ಟಿ ಸಾರಾಯಿ ಇದ್ದ ಕ್ಯಾನನ್ನು ಮತ್ತು ಒಂದು ಸ್ಟೀಲ್ನ ಗ್ಲಾಸನ್ನು ವಶಕ್ಕೆ ತೆಗೆದುಕೊಂಡರು. ವಶಕ್ಕೆ ತೆಗೆದುಕೊಂಡ 04ಲೀಟರದಷ್ಡಿರುವ ಕಳ್ಲಬಟ್ಟಿ ಸರಾಯಿ ಇರುವ ಪ್ಲಾಸ್ಟಿಕ್ ಕ್ಯಾನದಿಂದ ರಸಾಯಿನಿಕ ಪರಿಕ್ಷೆ ಕುರಿತು ಎಪ್ಎಸ್ಎಲ್ಗೆ ಕಳುಹಿಸಲು 180ಎಮ್.ಎಲ್. ಕಳ್ಳಬಟ್ಟಿ ಸರಾಯಿಯನ್ನು ಪ್ರತ್ಯೇಕವಾಗಿ ತೆಗೆದುಕೊಂಡು ಅದನ್ನು 180ಎಮ್ಎಲ್.ದ ಖಾಲಿ ಗಾಜಿನ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಕಳ್ಳಬಟ್ಟಿ ಸರಾಯಿಯನ್ನು ತುಂಬಿ ಪ್ಯಾಕಮಾಡಿದ್ದು  ಸದರಿ ಆರೋಪಿತನು ಮಾನವನು ಸೇವಿಸಿದರೆ ಜೀವಕ್ಕೆ ಹಾನಿಯುಂಟಾಗುವ ಕಳ್ಳಬಟ್ಟಿ ಸರಾಯಿಯನ್ನು ಅನಧಿಕೃತವಾಗಿ ಸಾರ್ವಜನಿಕರಿಗೆ ಕುಡಿಯಲು ಮಾರಾಟ ಮಾಡುತ್ತಿದ್ದು ಇರುತ್ತದೆ. ಜಪ್ತಿ ಪಂಚನಾಮೆಯನ್ನು ದಿನಾಂಕ:06/02/2018 ರಂದು 01:00 ಪಿ.ಎಮ್ ದಿಂದ 02:00 ಪಿ.ಎಮ್ ವರೆಗೆ ಕೈಕೊಂಡಿದ್ದು ಇರುತ್ತದೆ ಅಂತಾ ಜಪ್ತಿ ಪಂಚನಾಮೆಯ ಸಾರಾಂಶ ಇರುತ್ತದೆ.
 

No comments: