Police Bhavan Kalaburagi

Police Bhavan Kalaburagi

Friday, June 22, 2018

Yadgir District Reported Crimes Updated on 22-06-2018


                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ ;- 127/2018 ಕಲಂ 457, 380 ಐಪಿಸಿ;- ದಿನಾಂಕ 20/06/2018 ರಂದು ನನ್ನ ಮಗನಾದ ನತಾನೀಲ ಈತನ ಹುಟ್ಟುಹಬ್ಬ ವಿದ್ದಕಾರಣ, ನಾನು ಮತ್ತು ನನ್ನ ಹೆಂಡತಿ ಬಾಲಮಣಿ ಚಂಚಲಕುಮಾರ ಇಬ್ಬರು ಕೂಡಿ ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಇದ್ದ ನಮ್ಮ ಮನೆಯೆ ಬೀಗ ಹಾಕಿಕೊಂಡು, ದಿನಾಂಕ 19/06/2018 ರಂದು ಮಧ್ಯಾಹ್ನ 03-00 ಗಂಟೆಗೆ ಕಲಬುರಗಿಗೆ ಹೋಗಿ ಅಲ್ಲೆ ಇದ್ದೆವು. ಇಂದು ದಿನಾಂಕ 21/06/2018 ರಂದು ಬೆಳಿಗ್ಗೆ ನಾನು ನನ್ನ ಹೆಂಡತಿ ಇಬ್ಬರು ಕಲಬುರಗಿಯಿಂದ ಯಾದಗಿರಿಗೆ ಬರೋಣ ಅಂತಾ ಬಸ್ನಲ್ಲಿ ಬರುತ್ತಿರುವಾಗ ಇಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ಯಾದಗಿರಿಯ ನಮ್ಮ ಮನೆಯಲ್ಲಿ ಬಾಡಿಗೆ ಇದ್ದ ಸಿಮಿಯೋನ ತಂದೆ ಸುಂದರಪ್ಪ ಸಾ|| ಠಾಣಗುಂದಿ ಈತನು ಪೋನ್ ಮಾಡಿ ವಿಷಯ ತಿಳಿಸಿದ್ದೇನೆಂದರೆ, ನಿನ್ನೆ ರಾತ್ರಿ 10-30 ಗಂಟೆಯ ವರೆಗೆ ನಾನು ಊಟ ಮಾಡಿ ಮನೆ ಮುಂದೆ ತಿರುಗಾಡಿದ್ದು, ಆಗ ನಿಮ್ಮ ಮನೆ ಬೀಗ ಇದ್ದು, ಇಂದು ಬೆಳಿಗ್ಗೆ 08-00 ಗಂಟೆಯ ಸುಮಾರಿಗೆ ನೋಡಿದಾಗ ನಿಮ್ಮ ಮನೆಯ ಬಾಗಿಲು ತೆರೆದಿದ್ದು, ಮನೆಯ ಬೀಗದ ಕೊಂಡಿ ಮುರಿದಿರುತ್ತದೆ. ಮನೆ ಕಳ್ಳತನ ವಾದಂತೆ ಕಂಡು ಬರುತ್ತಿದ್ದು, ಕೂಡಲೆ ನೀವು ಬೇಗ ಬನ್ನಿ ಅಂತಾ ತಿಳಿಸಿದನು. ನಂತರ ನಾನು ಹಾಗೂ ನನ್ನ ಹೆಂಡತಿ ಇಬ್ಬರು ಕೂಡಿ ಇಂದು ಬೆಳಿಗ್ಗೆ 08-45 ಗಂಟೆಯ ಸುಮಾರಿಗೆ ನಮ್ಮ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಬಾಗಿಲ ಕೀಲಿ ಮುರಿದಿತ್ತು. ಇಬ್ಬರು ಕೂಡಿ ಒಳಗೆ ಹೋಗಿ ನೋಡಲಾಗಿ ಮನೆಯ ಎಲ್ಲಾ ಕೋಣೆಗಳಲ್ಲಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹಾಗೂ ಬೆಡ್ ರೂಮದಲ್ಲಿ ಮತ್ತು ಅದಕ್ಕೆ ಹೊಂದಿಕೊಂಡಿದ್ದ ಮತ್ತೊಂದು ರೂಮಿನಲ್ಲಿಯ ಅಲಮರಿಯ ಬಾಗಿಲು ತೆರೆದಿದ್ದವು. ನೋಡಲಾಗಿ ಅಲಮರಿಯಲ್ಲಿದ್ದ 1) ಒಂದು 25. ಗ್ರಾಂ ಬಂಗಾರದ ಲಾಕೇಟ್, ಅ.ಕಿ 62,500/ ರೂ||, 2) ಒಂದು 10.ಗ್ರಾಂ ಬಂಗಾರ ಸುತ್ತುಂಗರ, ಅ.ಕಿ 25,000/ ರೂ||, 3) ಒಂದು 5.ಗ್ರಾಂ ಬಂಗಾರದ ಸುತ್ತುಂಗರ, ಅ.ಕಿ 12,500/ ರೂ||, 4) ಸುಮಾರು 5 ಗ್ರಾಂ. ಬಂಗಾರ 2 ಜೊತೆ ಕಿವಿಯೋಲೆ, ಅ.ಕಿ 12,500/ ರೂ||, 5) ಒಂದು 15 ಗ್ರಾಂ ಬಂಗಾರದ ಅವಲಕ್ಕಿ ಚೈನ್, ಅ.ಕಿ 37,500/ ರೂ|| ಹೀಗೆ 1,50,000=00 ರೂ|| ಕಿಮ್ಮತ್ತಿನ ಬಂಗಾರದ ಆಭರಣಗಳು ಕಾಣಲಿಲ್ಲಿ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ನಂತರ ನಾನು ಕಳ್ಳತನವಾದ ವಿಷಯವನ್ನು ನಮ್ಮ ಗೆಳೆಯರಾದ 1) ವಿಜಯ ರತ್ನಕುಮಾರ ತಂದೆ ಸೈಮಾನ, ಹಾಗೂ 2) ಇಮ್ಯಾನವೆಲ್ ಸಿ. ತಂದೆ ರತ್ನಾಕರ ಬೆಳ್ಳಿ ಇವರಿಗೆ ತಿಳಿಸಿದಾಗ, ಅವರು ಕೂಡ ಮನೆಗೆ ಬಂದು ನೋಡಿರುತ್ತಾರೆ.
          ಕಾರಣ ದಿನಾಂಕ 20/06/2018 ರಂದು ರಾತ್ರಿ 10-30 ಗಂಟೆಯಿಂದ ದಿನಾಂಕ 21/06/2018 ರ ಬೆಳಿಗ್ಗೆ 08-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯ ಬೀಗ ಮುರಿದು ಮನೆ ಒಳಗೆ ಪ್ರವೇಶ ಮಾಡಿ ಮನೆಯ ಅಲಮರಿಯಲ್ಲಿ ಇದ್ದ ಸುಮಾರು 1,50,000=00 ರೂ|| ಕಿಮ್ಮತ್ತಿನ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಮಾನ್ಯರವರು ಮನೆಯಲ್ಲಿ ಕಳ್ಳತನವಾದ ಆಭರಣಗಳನ್ನು ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 127/2018 ಕಲಂ 457, 380 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 156/18 ಕಲಂ 78 (3) ಕೆ.ಪಿ ಎಕ್ಟ;- ದಿನಾಂಕ 21-06-2018 ರಂದು 3-30 ಪಿ.ಎಮ್ ಕ್ಕೆ ಶ್ರೀ ಘಾಳೆಪ್ಪಾ ಪೇನಾಗ್ ಪಿ.ಐ ಘಟಕ ಯಾದಗಿರಿ ರವರು ಒಬ್ಬ ಆರೋಪಿ ಮುದ್ದೆಮಾಲನ್ನು ಜಪ್ತಿಪಂಚನಾಮೆ ಸಮೇತ ಹಾಜರುಪಡಿಸಿದ್ದು ಅದರ ಸಾರಾಂಶವೆನೆಂದರೆ ಇಂದು ದಿನಾಂಕ 21-06-2018 ರಂದು ಹತ್ತಿಕುಣಿ ಗ್ರಾಮದಲ್ಲಿ ಬಸ್ ನಿಲ್ದಾಣ ಹತ್ತಿರ ಯಾರೋ ಕೆಲವರು ಮಟಕಾ ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಮಾಹಿತಿ ಪಡೆದುಕೊಂಡು ಕೂಡಲೇ ಸಿಬ್ಬಂದಿಯವರಾದ ಶ್ರೀ ಶಫಿಯೊದ್ದಿನ್  ಹೆಚ್.ಸಿ-97  ಶ್ರೀ ಶ್ರೀಮಂತ ಹೆಚ್.ಸಿ- 141, ಶ್ರೀ ಹರಿನಾಥರೆಡ್ಡಿ ಪಿಸಿ-267 ಮತ್ತು ಶ್ರೀ ರಾಮಲಿಂಗ ಎಪಿಸಿ-112 ಮತ್ತು ಜೊತೆಗೆ ಇಬ್ಬರು ಪಂಚರಾದ ಶ್ರೀ ನಿಂಗಪ್ಪಾ ತಂದೆ ಸಾಬಣ್ಣಾ ದೊಡ್ಡಸಾಬಣ್ಣಾನೋರ ವಯಾ:335 ಜಾ: ಹರಿಜನ ಉ: ಕೂಲಿ ಸಾ: ಅಂಬೇಡ್ಕರ ನಗರ ಯಾದಗಿರಿ ಶ್ರೀ ದೇವಪ್ಪಾ ತಂದೆ ಶಿವಪ್ಪಾ ಸಿದ್ದಿ ವಯಾ:30 ಉ: ಕೂಲಿ ಜಾ: ಹರಿಜನ ಸಾ: ಇಂದಿರಾ ನಗರ ಯಾದಗಿರಿ ಇವರನ್ನು ಕರೆದುಕೊಂಡು ಹತ್ತಿಕುಣಿ ಕ್ರಾಸಿನಿಂದ  1-30 ಪಿ.ಎಮ್ ಕ್ಕೆ ಸಕರ್ಾರಿ ಜೀಪಿನಲ್ಲಿ ಠಾಣೆಯಿಂದ ಹೊರಟು ಹತ್ತಿಕುಣಿ ಗ್ರಾಮ ತಲುಪಿ ಗ್ರಾಮದ ಬಸ ನಿಲ್ದಾಣದ ಹತ್ತಿರ ಸ್ವಲ್ಪ ದೂರದಲ್ಲಿ ನಿಂತು ನೋಡಲಾಗಿ ಹೊಟೇಲ್  ಹತ್ತಿರ ಖುಲ್ಲಾ ಜ್ಯಾಗೆಯಲ್ಲಿ ಒಬ್ಬನು ಕೈಯ್ಯಲ್ಲಿ ಪೆನ್ನು ಮತ್ತು ಪೇಪರ ಹಿಡಿದುಕೊಂಡು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಂದ 80 ರೂಪಾಯಿ ಗೆದ್ದು ಮಜಾ ಮಾಡಿರಿ ಅಂತಾ ಚೀರಾಡುತ್ತಾ ಸಾರ್ವಜನಿಕರಿಗೆ ಮಟಕಾ ಜೂಜಾಟ ಆಡಲು ಪ್ರೇರೆಪಣೆ ಮಾಡುತ್ತಾ  ಮಟಕಾ ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತಪಡಿಸಿಕೊಂಡು ಕೂಡಲೇ ಸಿಬ್ಬಂಧಿಯವರ ಸಹಾಯದಿಂದ ಆ ವ್ಯಕ್ತಿಗೆ ಹಿಡಿದು ಆತನ ಹೆಸರು ವಿಳಾಸ ವಿಚಾರಿಸಿದಾಗ ಅವನು ತನ್ನ ಹೆಸರು  ಬಸವರಾಜ ತಂದೆ ಸಾಯಿಬಣ್ಣಾ ಕರಣಗಿ ವಯಾ:32 ವರ್ಷ ಜಾ: ಕಬ್ಬಲಿಗ ಉ: ಹೊಟೇಲ್ ಕೆಲಸ ಸಾ: ಹತ್ತಿಕುಣಿ ಅಂತಾ ಹೇಳಿದನು. ಆಗ ಪಿ.ಐ ಸಾಹೇಬರು ಸದರಿಯವನ ಅಂಗ ಜಡತಿ ಮಾಡಲಾಗಿ  ಇತನ ಹತ್ತಿರ ಜೂಜಾಟಕ್ಕೆ ಉಪಜೋಗಿಸಿದ 1) 1650/-ರೂ ನಗದು ಹಣ 2) ಎರಡು ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿಗಳು ಮತ್ತು 3) ಒಂದು ಬಾಲಪೆನ್ನು ಇವೆಲ್ಲವುಗಳು ದೊರೆತವು ಸದರಿ ಪಂಚನಾಮೆಯನ್ನು ಇಂದು ದಿನಾಂಕ 21-06-2018 ರಂದು 2 ಪಿ.ಎಮ್ ದಿಂದ 3 ಪಿ.ಎಮ್ ದವರೆಗೆ ಮಾಡಿ ಮುಗಿಸಿ ಮುಂದಿನ ಕ್ರಮಕ್ಕಾಗಿ ಠಾಣೆಗೆ ತಂದು ಹಾಜರುಪಡಿಸಿದ್ದು ಜಪ್ತಿಪಂಚನಾಮೆ ಆಧಾರದ ಮೇಲಿಂದ ಠಾಣೆ ಗುನ್ನೆ ನಂ: 156/2018 ಕಲಂ 78 (3) ಕೆ.ಪಿ ಎಕ್ಟ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;-. 155/18 ಕಲಂ 279  ಐಪಿಸಿ;-ದಿನಾಂಕ 21-06-2018 ರಂದು 1-30 ಪಿ.ಎಮ್ ಕ್ಕೆ ಫಿರ್ಯಾಧಿದಾರರಾದ ಶ್ರೀ ಬಸವರಾಜ ತಂದೆ ಅಂಬ್ರಪ್ಪಾ ವಯಾ:22 ಉ: ಲಾರಿ ಕ್ಲೀನರ್ ಜಾ: ಲಿಂಗಾಯತ ಸಾ: ರೋಲಾಬಂಡಾ ತಾ: ಲಿಂಗಸೂಗೂರ ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆ ಫಿರ್ಯಾಧಿಯನ್ನು ಸಲ್ಲಿಸಿದ್ದು ಸಾರಾಂಶವೆನೆಂದರೆ ನಾನು ಈಗ ಸುಮಾರು 6-7 ತಿಂಗಳಿಂದ ಲಾರಿ ನಂ: ಕೆ.ಎ-16/ಸಿ-8575 ನೆದ್ದರ ಮೇಲೆ ಕ್ಲೀನರ ಅಂತಾ ಮತ್ತು ಮತ್ತು ನಮ್ಮೂರ ಪಕ್ಕದ ಹಳ್ಳಿಯಾದ ಕದ್ದಾಣಿ ಗ್ರಾಮದ ಹಣಮಂತ ತಂದೆ ಭಾಗಪ್ಪಾ ಜಾಲಹಳ್ಳಿ ಎಂಬುವವ ಅದೇ ಲಾರಿಯ ಚಾಲಕ ಅಂತಾ ಕೆಲಸ ಮಾಡುತ್ತಾನೆ.
       ಹೀಗಿದ್ದು ನಮ್ಮ ಲಾರಿಯ ಮ್ಯಾನೇಜರರಾದ ಕನಕರಾಜ ಇವರು ಹೇಳಿದ ಪ್ರಕಾರ ಇಂದು ದಿನಾಂಕ 21-06-2018 ರಂದು ಬೆಳಗ್ಗೆ 5-30 ಗಂಟೆ ಸುಮಾರಿಗೆ ಚಿತಾಪೂರದಲ್ಲಿ ನಮ್ಮ ಲಾರಿ ನಂ: ಕೆ.ಎ-16/ಸಿ-8575 ನೆದ್ದರಲ್ಲಿ ಸಮೇಂಟ ಲೋಡ ಮಾಡಿಕೊಂಡು ಅಲ್ಲಿಂದ ನಾಲವಾರ ಯರಗೋಳ ಮಾರ್ಗವಾಗಿ ಹಿರಿಯೂರಿಗೆ ಹೊರಟಿದ್ದೆವು. ಯರಗೋಳ ಗ್ರಾಮ ದಾಟಿದ ಕೂಡಲೇ ನಮ್ಮ ಲಾರಿ ಚಾಲಕನಾದ ಹಣಮಂತ ತಂದೆ ಭಾಗಪ್ಪಾ ಜಾಲಹಳ್ಳಿ ಇತನು ಲಾರಿಯನ್ನು ಅತೀವೇಗವಾಗಿ ಓಡಿಸಹತ್ತಿದನು. ಆಗ ನಾನು ಆತನಿಗೆ ಸಾವಕಾಶವಾಗಿ ಓಡಿಸು ಲಾರಿಯಲ್ಲಿ ಸಿಮೇಂಟ ಲೋಡ ಇದೆ ಆದ್ದರಿಂದ ಈಗ ಅಂತದ್ದೇನು ಅವಸರವಿಲ್ಲಾ ಅಂತಾ ಹೇಳಿದೇನು. ಆಗ ಹಣಮಂತ ತಂದೆ ಭಾಗಪ್ಪಾ ಜಾಲಹಳ್ಳಿ ಇತನು ನಾನು ಹೇಳಿದ ಮಾತನ್ನು ಲೆಕ್ಕಿಸದೇ ಅದೇ ವೇಗದಲ್ಲಿ ಬಂದು ಯರಗೋಳ ಗ್ರಾಮ ದಾಟಿದ ನಂತರ  ಗುಲಗಂಜಿ ತಾಂಡಾದ ಕ್ರಾಸ ಹತ್ತಿರ ಪೂನ್ಯಾ ತಂದೆ ಸೋಮ್ಲಾ ರಾಠೋಡ ಇವರ ಹೋಲದ ಹತ್ತಿರ  ಚಾಲಕನು ತನ್ನ ಲಾರಿಯ ಮೇಲಿನ ಸಂಪೂರ್ಣ ನಿಯಂತ್ರಣ ಕಳೆದುಕೊಂಡು ಲಾರಿಯನ್ನು ರೋಡಿನ ಎಡಬಡಿಯಲ್ಲಿ ತೆಗೆದುಕೊಂಡು ಹೋಗಿ ಅಪಘಾತ ಮಾಡಿದನು. ಆಗ ಸಮಯ ಬೆಳಗಿನ ಜಾವ 7 ಗಂಟೆಯಾಗಿತ್ತು. ಈ ಅಫಘಾತದಲ್ಲಿ ನನಗೆ ಮತ್ತು ಚಾಲಕನಿಗೆ ಯಾವುದೇ ಗಾಯಗಳಾಗಲಿಲ್ಲಾ. ಲಾರಿಯಲ್ಲಿ ಸಿಮೇಂಟ ಲೋಡ ಇದ್ದ ಕಾರಣ ಅದರ ಮುಂಭಾಗ ಪೂತರ್ಿ ಜಖಂ ಆಗಿತ್ತು. ಈ ಘಟನೆಯ ಬಗ್ಗೆ ನಮ್ಮ ಮ್ಯಾನೇಜರರಾದ ಕನಕರಾಜ ಇವರಿಗೆ ಫೋನ ಮುಖಾಂತರ ಮಾಹಿತಿ ತಿಳಿಸಿದಾಗ ಅವರು ಫೊಲಿಸ್ ಠಾಣೆಗೆ ಹೋಗಿ ಕೇಸು ಮಾಡಬೇಕು ಅಂತಾ ತಿಳಿಸಿದ ನಂತರ ತಡವಾಗಿ ಪೋಲಿಸ್ ಠಾಣಗೆ ಬಂದು  ಫಿರ್ಯಾಧಿ ಸಲ್ಲಿಸುತ್ತಿದ್ದು ಈ ಅಪಘಾತಕ್ಕೆ ಕಾರಣನಾದ ಲಾರಿ ನಂ: ಕೆ.ಎ-16/ಸಿ-8575 ಹಣಮಂತ ತಂದೆ ಭಾಗಪ್ಪಾ ಜಾಲಹಳ್ಳಿ ಇತನ ವಿರುದ್ದ ಕಾನೂನು ಪ್ರಕಾರ ಕ್ರಮ ಕೈಗಳ್ಳಬೇಕು ಅಂತಾ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 155/2018 ಕಲಂ279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 234/2018 ಕಲಂ 279, 337, 338, 304(ಎ) ಐಪಿಸಿ;-ದಿನಾಂಕ 21.06.2018 ರಂದು ಬೆಳಿಗ್ಗೆ 8.00 ಗಂಟೆ ಸುಮಾರಿಗೆ ಪಿರ್ಯಾಧಿ ಹಾಗೂ ಇತರರು ಕೂಡಿಕೊಂಡು ಸೇಡಂ ತಾಲ್ಲೂಕಿ ಭೂತಪೂರ ಗ್ರಾಮದಲ್ಲಿ ಮನೆ ಚೆತ್ ಹಾಕಲು ಬೇಕಾಗುವ ಉಪಕರಣಗಳನ್ನು ಟೆಂಪೂ ವಾಹನ ನಂ. ಎಂ.ಹೆಚ್-02-ಟಿ-3918 ನೆದ್ದರಲ್ಲಿ ಹಾಕಿ ಎಲ್ಲರೂ ಕುಳಿತುಕೊಂಡು ತಮ್ಮೂರಿನಿಂದ ಬಿಟ್ಟು ಭೂತಪೂರ ಗ್ರಾಮಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ವಾಹನದ ಚಾಲಕನು ವೇಗವಾಗಿ ನಡೆಯಿಸಿಕೊಂಡು ಹೋಗಿ ಇಳಿಜಾರಿನ ರಸ್ತೆಯ ಮೇಲೆ ವಾಹನವನ್ನು ನಿಯಂತ್ರಿಸದೆ ರಸ್ತೆಯ ಪಕ್ಕದಲ್ಲಿರುವ ಕಲ್ಲುವಟ್ಟಿಗೆ (ಪೂಲ್) ಹತ್ತಿರ ದೇವರಳ್ಳಿ-ಸಿದ್ದಾಪೂರ ರೋಡಿನ ಮೇಲೆ ಸಿದ್ದಾಪೂರ ಸೀಮಾಂತರದಲ್ಲಿ ಸಮಯ ಬೆಳಿಗ್ಗೆ 8.30 ಗಂಟೆ ಸುಮಾರಿಗೆ ಅಪಘಾತಕ್ಕಿಡು ಮಾಡಿದನು. ಸದರಿ ಅಪಘಾತದಲ್ಲಿ ಪಿರ್ಯಾಧಿಗೆ ಮತ್ತು ಇತರರಿಗೆ ಹಾಗೂ ಆರೋಪಿ ಚಾಲಕನಿಗೆ ಸಾಧಾ ಮತ್ತು ಗಂಭಿರ ಸ್ವರೂಪದ ಗಾಯಗಳು ಆಗಿ ಸಾಬಣ್ಣ @ ಸಾಯಿಬಣ್ಣ ಮತ್ತು ನಾಗಮ್ಮ ಇವರು ಸ್ಥಳದಲ್ಲಿಯೇ ಮೃತ ಪಟ್ಟ ಬಗ್ಗೆ ಅಪರಾಧ.  

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 235/2018 ಕಲಂ 379 ಐಪಿಸಿ ;- ದಿನಾಂಕ 21.06.2018 ರಂದು ರಾತ್ರಿ 9-50 ಗಂಟೆಗೆ 1] ಟ್ರ್ಯಾಕ್ಟರ ನಂ: ಕೆಎ-33-ಟಿಎ-6231 ಮತ್ತು ಟ್ರ್ಯಾಲಿ ನಂಬರ್ ಎಪಿ-21-ಡಿ-3470 ಮತ್ತು  2]ಟ್ರ್ಯಾಕ್ಟರ ನಂ: ಕೆಎ-32-ಟಿಎ-8724 ಮತ್ತು ಟ್ರ್ಯಾಲಿ ನಂ: ಎಪಿ-27-ಹೆಚ್-8034 ನೇದ್ದವುಗಳ ಚಾಲಕರು ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ ಸದರಿ ಟ್ರ್ಯಾಕ್ಟರಗಳ ಚಾಲಕ ಓಡಿ ಹೋಗಿದ್ದು ಅವರು ಸ್ಥಳದಲ್ಲಿ ಬಿಟ್ಟು ಓಡಿ ಹೋದ ಎರಡು ಮರಳು ತುಂಬಿದ ಟ್ರ್ಯಾಕ್ಟರಗಳನ್ನು  ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 235/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 333/2018 ಕಲಂ 78[3] ಕೆ.ಪಿ ಆಕ್ಟ;- ದಿನಾಂಕ 21/06/2018 ರಂದು ಸಾಯಂಕಾಲ 17-00 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ವೆಂಕಣ್ಣ ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ, ಇವರು ಒಬ್ಬ ವ್ಯಕ್ತಿಯೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ ಹಾಗೂ ಮುದ್ದೆಮಾಲು ಹಾಜರ ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 21/06/2018 ರಂದು ಮದ್ಯಾಹ್ನ 14-30 ಗಂಟೆಗೆ ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಗ್ಯಾರೇಜ್ ಲೈನ್ದಲ್ಲಿರುವ ಭವಾನಿ ಚಿತ್ರ ಮಂದಿರ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ, ಫಿರ್ಯಾದಿಯವರು, ತಮ್ಮ ಜೊತೆಯಲಿ ಸಿಬ್ಬಂದಿಯವರು ಹಾಗೂ ಪಂಚರನ್ನು ಕರೆದುಕೊಂಡು ಠಾಣೆಯ ಸರಕಾರಿ ಜೀಪ್ ನಂ ಕೆಎ-33-ಜಿ-138 ನೇದ್ದರಲ್ಲಿ ಠಾಣೆಯಿಂದ ಮದ್ಯಾಹ್ನ 15-00 ಗಂಟೆಗೆ ಹೋಗಿ ಶಹಾಪೂರ ನಗರದ ಭವಾನಿ ಚಿತ್ರ ಮಂದಿರ ಹತ್ತಿರ ಮಟಕಾ ಅಂಕಿ ಬರೆದುಕೊಳ್ಳುತಿದ್ದ ವ್ಯಕ್ತಿ ಸಿದ್ದಪ್ಪ ತಂದೆ ಬಸಣ್ಣ ಹೊಸಮನಿ ಸಾಃ ಸಲಾದಪೂರ ಈತನ ಮೇಲೆ ಮದ್ಯಾಹ್ನ 15-15 ಗಂಟೆಗೆ ದಾಳಿ ಮಾಡಿ ಹಿಡಿದು ಸದರಿ ಆರೋಪಿತನಿಂದ ಪಂಚರ ಸಮಕ್ಷಮದಲ್ಲಿ ಅಂಗಶೋಧನೆ ಮಾಡಿದಾಗ ನಗದು ಹಣ 700-00 ರೂಪಾಯಿ ಮತ್ತು ಒಂದು ಬಾಲ್ ಪೆನ್, ಎರಡು ಮಟಕಾ ಚೀಟಿಗಳು ಮದ್ಯಾಹ್ನ 15-30 ಗಂಟೆಯಿಂದ ಸಾಯಂಕಾಲ 16-30 ಗಂಟೆಯವರೆಗೆ ಜಪ್ತಿ ಪಂಚನಾಮೆ ಮೂಲಕ ಜಪ್ತ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದ್ದು, ಸದರಿ ವರದಿ ಸಾರಾಂಶವು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪತ್ರ ವ್ಯವಹಾರ ಮಾಡಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 17-45 ಗಂಟೆಗೆ  ಠಾಣೆ ಗುನ್ನೆ ನಂಬರ 333/2018 ಕಲಂ 78[3] ಕೆ.ಪಿ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಸುರಪೂರ ಪೊಲೀಸ್ ಠಾಣೆ ಗುನ್ನೆ ನಂ. 275/2018 ಕಲಂ: 379 ಐಪಿಸಿ;- ದಿನಾಂಕ:21-06-2018 ರಂದು 2 ಪಿ.ಎಂ.ಕ್ಕೆ ಶ್ರೀ ರಂಗಪ್ಪ ತಂದೆ ಪಿಡ್ಡಪ್ಪ ಗಂಟಿ ಸಾ:ದೇವತ್ಕಲ್ಲ ತಾ:ಸುರಪುರ ಇವರು ಠಾಣೆಗೆ ಬಂದು ಹೇಳಿಕೆ ನಿಡಿದ್ದು ಸಾರಾಂಶವೆನೆಂದರೆ ಹಿಗಿದ್ದು ಇಂದು ದಿನಾಂಕ:21-06-2018 ರಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ನಾನು ನಮ್ಮೂರಿನಿಂದ ಸುರಪುರಕ್ಕೆ ಕವಳಿ ಪಟ್ಟಿ ಹಣ ತಗೆದುಕೊಂಡು ಹೋಗಲು ಸುರಪುರದ ಕನರ್ಾಟಕ ಬ್ಯಾಂಕಿಗೆ 10-30 ಗಂಟೆಗೆ ಬಂದು ಬ್ಯಾಂಕಿನಿಂದ 50 ಸಾವಿರ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಒಂದು ಬಟ್ಟೆ ಕೈಚಿಲದಲ್ಲಿ ರೂಪಾಯಿಗಳನ್ನು ಇಟ್ಟುಕೊಂಡು ಕಾಯಿಪಲ್ಲೆ ಬಜಾರಕ್ಕೆ ಹೋಗಿ ಕಾಯಿಪಲ್ಲೆ ಸಂತಿ ಮಾಡಿಕೊಂಡು ಕಾಯಿಪಲ್ಲೆಯನ್ನು ಒಂದು ಪ್ಲಾಸ್ಟೀಕ ಕ್ಯಾರಿ ಬ್ಯಾಗಿನಲ್ಲಿ ಹಾಕಿಕೊಂಡು ಅದೆ ಕ್ಯಾರಿಬ್ಯಾಗಿನಲ್ಲಿ ರೂಪಾಯಿಯ ಬಟ್ಟೆ ಚೀಲನ್ನು ಇಟ್ಟುಕೊಂಡು ಕೈಯಲ್ಲಿ  ಹಿಡಿದುಕೊಂಡು 11-15 ಗಂಟೆ ಸುಮಾರಿಗೆ ಬಸ್ಸಸ್ಟಾಂಡ ಕಡೆಗೆ ಗಾಂಧಿ ಚೌಕದ ಬೇಕರಿ ಹತ್ತಿರ ಹೋಗುತ್ತಿರುವಾಗ ನನ್ನ ಹೆಡಕಿನ ಮೇಲೆ ಒಮ್ಮಿಂದೊಮ್ಮೆಲೆ ಏನೊ ಬಿದ್ದಂತಾಗಿ ಹೆಡಕು ತಿಂಡಿಕೊಡುವಾಗ ನಾನು ಹೆಡಕು ತುರಿಸಿಕೊಳ್ಳುವಾಗ ನನ್ನ ಬಗಲಲ್ಲಿದ್ದ ಒಬ್ಬ ಅಪರಿಚಿತ ವ್ಯಕ್ತಿಗೆ ನಾನು ಏನೊ ಬಿತ್ತೆನು ನೋಡು ಅಂತಾ ಅಂದಾಗ ಅವನು ಏನೊ ಮ್ಯಾಲಿನಿಂದ ಬಿತ್ತು ತೊಳಕೊಳಕತ್ತಿ ಬಾ ಅಂತಾ ಅಲ್ಲೆ  ಮುಂದೆ ಇರುವ ಇಸ್ತ್ರಿ ಅಂಗಡಿಯವನ ಹತ್ತಿರ ಹೋಗಿ ಒಂದು ಗ್ಲಾಸಿನಲ್ಲಿ ನೀರು ಕೊಟ್ಟಾಗ ನಾನು ನನ್ನ ಕೈಯಲ್ಲಿಯ ಕಾಯಿಪಲ್ಲೆ ಬ್ಯಾಗನ್ನು ಅಲ್ಲೆ ನಿಂತಿದ್ದ ಒಂದು ಒತ್ತು ಬಂಡಿಯ ಮೇಲೆ ಇಟ್ಟು ಹೆಡಕು ತೊಳೆದುಕೊಳ್ಳುವಾಗ ನೀರು ಕೊಟ್ಟ ಅಪರಿಚಿತ ವ್ಯಕ್ತಿಯು ಅಲ್ಲೆ ಕೆಳಗಡೆ ರೊಕ್ಕ ಬಿದ್ದಾವ ನೋಡು ಅಂತಾ ಹೇಳಿದಾಗ ನಾನು ಆ ಕಡೆ ನೋಡುವಷ್ಟರಲ್ಲಿ ಒತ್ತು ಬಂಡಿಯ ಮೇಲೆ ಕಾಯಿಪಲ್ಲೆ ಕ್ಯಾರಿಬ್ಯಾಗಿನಲ್ಲಿಟ್ಟಿದ್ದ ರೂಪಾಯಿಯ ಬಟ್ಟೆ ಕೈಚಿಲನ್ನು ತಗೆದುಕೊಂಡು ಅಲ್ಲೆ ನಿಂತಿದ್ದ ಒಂದು ಕಪ್ಪು ಬಣ್ಣದ  ಮೋಟಾರ ಸೈಕಲ್ ಹಿಂದುಗಡೆ ಕುಳಿತು ಹೊರಟು ಹೋಗಿದ್ದು ಇರುತ್ತದೆ. ನಾನು ಓಡಿ ಹೋದರು ಅವರು ಸಿಗಲಿಲ್ಲ ಸದರಿ ಆ ವ್ಯಕ್ತಿಗಳನ್ನು ನೋಡಿದರೆ ನಾನು ಗುರುತಿಸುತ್ತೆನೆ. 50 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿಕೊಂಡು ಹೋದ ಅಪರಿಚಿತ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ ಅಂತಾ ಹೇಳಿ ಟೈಪ ಮಾಡಿಸಿದ್ದು ನಿಜವಿರುತ್ತದೆ

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 331/2018.ಕಲಂಃ 379.ಐ.ಪಿ.ಸಿ. 44(1) ಕೆ.ಎಂ.ಎಂ.ಸಿ.ಆರ್. ;- ದಿನಾಂಕ 21/06/2018 ರಂದು ಬೆಳಿಗ್ಗಿನಜಾವ 4-30 ಗಂಟೆಗೆ ಸ|| ತ|| ಪಿಯರ್ಾದಿ ಶ್ರೀ ಮಹ್ಮದ್ ಸಿರಾಜ ಸಿ.ಪಿ.ಐ. ಶಹಾಪೂರ ವೃತ್ತ ಐ/ಸಿ ಪಿ.ಐ. ಶಹಾಪೂರ ಪೊಲೀಸ್ ಠಾಣೆ. ಇವರು ಠಾಣೆಗೆ ಹಾಜರಾಗಿ ಒಂದು ಮರಳು ತುಂಬಿದ ಟಿಪ್ಪರ್, ಜಪ್ತಿ ಪಂಚನಾಮೆ, ಹಾಜರಪಡಿಸಿ ವರದಿ ಸಲ್ಲಿಸಿದ ಸಾರಾಂಶ ವೆನೆಂದರೆ ದಿನಾಂಕ 20-06-2018 ರಂದು ರಾತ್ರಿ 11-00 ಗಂಟೆಗೆ ಎನ್.ಆರ್.ಸಿ. ಕರ್ತವ್ಯ ಕುರಿತು ನಾನು ಮತ್ತು ಸಿಬ್ಬಂದಿಯವರಾದ ಶಿವನಗೌಡ ಪಿ.ಸಿ.141 ಶಹಾಪೂರ ಠಾಣೆ, ಜೀಪಚಾಲಕ ಮಲ್ಕಾರಿ ಎ.ಪಿ.ಸಿ.45 ಎಲ್ಲರು ಕೂಡಿ ಜೀಪ ನಂ ಕೆಎ-33ಜಿ-0153 ನೇದ್ದರಲ್ಲಿ ಹೋರಟು ಎನ್.ಆರ್.ಸಿ. ಕರ್ತವ್ಯ ಮಾಡುತ್ತ ಶಹಾಪೂರದ ಕನ್ಯಾಕೊಳ್ಳರ ಅಗಸಿ ಹತ್ತಿರ ದಿನಾಂಕ 21/06/2018 ರಂದು ಬೆಳಿಗ್ಗಿನಜಾವ 1-30 ಗಂಟೆಗೆ ಇದ್ದಾಗ ಬಾತ್ಮೀ ಬಂದಿದ್ದೆನೆಂದರೆ ದೇವದುರ್ಗಕಡೆಯಿಂದ ಒಂದು ಟಿಪ್ಪರದಲ್ಲಿ ಕಳ್ಳತನದಿಂದ ಮರಳು ಲೋಡಮಾಡಿಕೊಂಡು ಶಹಾಪೂರ ಕಡೆಗೆ ಬರುತ್ತಿದೆ ಅಂತ ಬಾತ್ಮೀ ಬಂದಮೇರೆಗೆ ಜೀಪನಲ್ಲಿ ಇದ್ದ ಸಿಬ್ಬಂದಿಗೆ ತಿಳಿಸಿ ಇಬ್ಬರು ಪಂಚರಾದ 1] ಶಂಕ್ರೇಪ್ಪ ತಂದೆ ಸಿದ್ದಣ್ಣ ಗೋಸಿ ವ|| 42 ಜಾ|| ಕುರುಬುರ ಉ|| ಒಕ್ಕಲುತನ ಸಾ|| ಹುಲಕಲ್ 2] ಕಿರಣ ತಂದೆ ವಿನೋದ ಬೋಸ್ಲೇ ವ|| 24 ಜಾ|| ಮರಾಠ ಉ|| ಚಾಲಕ ಸಾ|| ಯು,ಕೆ,ಪಿ, ಕ್ಯಾಂಪ ಭೀ,ಗುಡಿ ಇವರನ್ನು ಪಂಚರಂತ ಬರಮಾಡಿಕೊಂಡು ಬಾತ್ಮೀ ವಿಷಯ ತಿಳಿಸಿ ದಾಳಿ ಕಾಲಕ್ಕೆ ನಮ್ಮ ಜೋತೆಯಲ್ಲಿ ಬಂದು ಪಂಚರಾಗಿ ಪಂಚನಾಮೇಯನ್ನು ಪರೆಯಿಸಿಕೊಡಲು ಕೆಳಿಕೊಂಡ ಮೇರೆಗೆ ಒಪ್ಪಿಕೊಂಡರು ಎಲ್ಲರು ಕೂಡಿ ದಾಳಿಕುರಿತು ಹತ್ತಿಗುಡೂರದ ಮಾಗನೂರ ಪೆಟ್ರೋಲ್ ಪಂಪ ಹತ್ತಿರ ಬೆಳಿಗ್ಗಿನಜಾವ 2-00 ಗಂಟೆಗೆ ಹೋಗಿ ನಿಂತು ದೇವದುರ್ಗ ಕಡೆಯಿಂದ ಬರುವ ವಾಹನಗಳನ್ನು ನಿಗಾ ಮಾಡುತ್ತ ನಿಂತಾಗ 2-20 ಗಂಟೆಗೆ ದೇವದುಗರ್ಾ ಕ್ರಾಸ ಕಡೆಯಿಂದ ಒಂದು ಮರಳು ತುಂಬಿದ ಟಿಪ್ಪರ ರೋಡಿನ ಮೇಲೆ ಬರುತ್ತಿರುವದನ್ನು ನೋಡಿ ಅದನ್ನು ನಾನು ಮತ್ತು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮದಲ್ಲಿ ಕೈಮಾಡಿ ನಿಲ್ಲಿಸಿ ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಪರವಾನಗಿ ಪತ್ರ ತೆಗೆದು ಕೊಂಡು ಬರಲು ಹೇಳಿದಾಗ ಟಿಪ್ಪರ ಚಾಲಕನು ಯಾವದೆ ಕಾಗದ ಪತ್ರ ಇರುವದಿಲ್ಲಾ ಅಂತ ತಿಳಿಸಿದನು. ಸದರಿಯವನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲಾಗಿ ಅದರ ಚಾಲಕನು ಟಿಪ್ಪರ ಚಾಲಕ ಮತ್ತು ಮಾಲಿಕ ನಾನೆ ಇರುತ್ತೆನೆ ತನ್ನ ಹೆಸರು ಸಿದ್ದಲಿಂಗಪ್ಪ ತಂದೆ ರಾಯಪ್ಪ ಕದನಳ್ಳಿ ವ|| 45 ಜಾ|| ಕುರುಬುರ ಉ|| ಒಕ್ಕಲುತನ ಸಾ|| ಬಳಬಟ್ಟಿ ಅಂತ ತಿಳಿಸಿ ನನ್ನ ಟಿಪ್ಪರನ್ನು ತೆಗೆದು ಕೊಂಡು ಹೋಗಿ ಕೃಷ್ಣನದಿಯಲ್ಲಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಶಹಾಪೂರಕ್ಕೆ ತಂದು ಮಾರಾಟ ಮಾಡಲು ಹೋರಟಿರುತ್ತೆನೆ ಅಂತ ತಿಳಿಸಿದನು. ಸದರಿ ಟಿಪ್ಪರನ್ನು ಪಂಚರ ಸಮಕ್ಷಮ ಪರಿಸಿಲಿಸಿ ನೋಡಲಾಗಿ ಹರಿಸಿಣ ಮತ್ತು ಬೂದಿ ಬಣ್ಣದ ಭಾರತ ಬೇಂಜ್ ಟಿಪ್ಪರ ನಂಬರ ಕೆಎ-32ಡಿ-0515 ನ್ನೇದ್ದರ ಟಿಪ್ಪರ. ಅ:ಕಿ: 300000=00 ರೂ ಸದರಿ ಟಿಪ್ಪರದಲ್ಲಿ ಅಂದಾಜು 4 ಬ್ರಾಸ್ ಮರಳು ಇದ್ದು ಅದರ ಅ:ಕಿ:6000=00 ರೂ ಇರುತ್ತದೆ. ಸದರಿ ಟಿಪ್ಪರ ಚಾಲಕನು ಸರಕಾರದಿಂದ ಮರಳು ಸಾಗಾಣಿಕೆ ಪರವಾನಗಿ ಪತ್ರ ಇಲ್ಲದೆ ಮರಳನ್ನು ಕಳತನದಿಂದ ಅಕ್ರಮವಾಗಿ ತುಂಬಿಕೋಂಡು ಸಾಗಾಣಿಕೆ ಮಾಡುತ್ತಿರುವ ಬಗ್ಗೆ ಖಚಿತ ಪಟ್ಟಿದ್ದರಿಂದ ಪಂಚರ ಸಮಕ್ಷಮ ಬೆಳಿಗ್ಗಿನಜಾವ 2-30 ಎ.ಎಮ್. ದಿಂದ 3-30 ಎ.ಎಮ್. ವರೆಗೆ ಜೀಪಿನ ಲೈಟಿನ ಬೆಳಕಿನಲ್ಲಿ ಜಪ್ತಿ ಪಮಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಸದರಿ ಟಿಪ್ಪರ ಚಾಲಕನಿಗೆ ತನ್ನ ಟಿಪ್ಪರನ್ನು ಠಾಣೆಗೆ ತೆಗೆದು ಕೊಂಡು ಹೋಗಲು ತಿಳಿಸಿದ್ದರಿಂದ ಟಿಪ್ಪರನ್ನು ಚಲಾಯಿಸಿಕೊಂಡು ಸ್ವಲ್ಪ ಮುಂದೆ ತೆಗೆದು ಕೊಂಡು ಹೋಗಿ ಟಿಪ್ಪರನ್ನು ನಿದಾನವಾಗಿ ಚಲಾಯಿಸಿದ ಹಾಗೆ ಮಾಡಿ ಟಿಪ್ಪರನ್ನು ನಿಲ್ಲಿಸಿ ಓಡಿಹೋದನು ಬೆನ್ನುಹತ್ತಿ ಹಿಡಿಯಲು ಪ್ರಯತ್ನಿಸಿದರು ಸಿಕ್ಕಿರುವದಿಲ್ಲಾ ನಂತರ ಬೆರೆಚಾಲಕನ ಸಹಾಯದಿಂದ ಠಾಣೆಗೆ ಬೆಳಿಗ್ಗೆ 4-00 ಎ.ಎಮ್.ಕ್ಕೆ ಬಂದು. ವರದಿಯನ್ನು ತಯ್ಯಾರಿಸಿ ಸದರಿ ಟಿಪ್ಪರ್ ಮಾಲಿಕನೆ ಚಾಲಕನಿದ್ದು ಸದರಿಯವನ ವಿರುದ್ದ ಮುಂದಿನ ಕ್ರಮ ಕೈಕೋಳ್ಳಲು ಬೆಳಿಗ್ಗೆ 4-30 ಎ.ಎಂ.ಕ್ಕೆ ಸ||ತ|| ಪಿಯರ್ಾದಿದಾರನಾಗಿ ವರದಿ  ಸಲ್ಲಿಸಿದ್ದು. ಸದರಿ ವರದಿಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 331/2018 ಕಲಂ 379. ಐ.ಪಿ.ಸಿ. ಮತ್ತು 44(1) ಕೆ.ಎಂ.ಎಂ.ಸಿ.ಆರ್ ನ್ನೆದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ.    332/2018.ಕಲಂ 323.326.504.506.ಐ.ಪಿ.ಸಿ.;- ದಿನಾಂಕ 21/06/2018 ರಂದು ಬೆಳಿಗ್ಗೆ 11-20 ಗಂಟೆಗೆ ಎಂ,ಎಲ್,ಸಿ, ಇದೆ ಅಂತ ಪೋನ ಮೂಲಕ ಮಾಹಿತಿ ತಿಳಿಸಿದ್ದರಿಂದ ಮಲ್ಲಣ್ಣ ಹೆಚ್,ಸಿ,79. ರವರು ಸಂಗಡ ಶರಣಪ್ಪ ಹೆಚ್,ಸಿ, 164 ರವರೊಂದಿಗೆ ಆಸ್ಪತ್ರೆಗೆ ಬೆಟಿನಿಡಿ ಉಪಚಾರ ಪಡೆಯುತ್ತಿದ್ದ ಗಾಯಾಳು ನಿಂಗಪ್ಪ ತಂದೆ ಮಲ್ಲಪ್ಪ ಬಡಿಗೇರ ವ|| 50 ಜಾ|| ಕುರುಬುರ ಉ|| ಕೂಲಿಕೆಲಸ ಸಾ|| ಶಾರದಳ್ಳಿ ಹೇಳಿಕೆಯನ್ನು 11-45 ರಿಂದ 12-45 ಗಂಟೆಯ ವರೆಗೆ ಹೇಳಿಕೆಯನ್ನು ಪಡೆದು ಕೊಂಡು ಠಾಣೆಗೆ 13-00 ಗಂಟೆಗೆ ಹಾಜರಾಗಿ ಪಿಯರ್ಾದಿ ಹೇಳಿಕೆ ಹಾಜರ ಪಡಿಸಿದ್ದು ಸದರಿ ಹೇಳಿಕೆಯ ಸಾರಾಂಶದ ವೆನೆಂದರೆ. ಹೀಗಿದ್ದು ನಮ್ಮ ಅಣ್ಣತಮಕಿಯ ಮಾಳಪ್ಪ ಮನೆಯ ಬಳಕೆಗೆ ಕಟಿಗಿ ಕಡಿಯಲು ನಾನು ಸುಮಾರು ಒಂದು ವಾರದ ಹಿಂದೆ ಮೂರುದಿನ ಕೂಲಿಗಾಗಿ ಕಟಿಗಿ ಕಡಿದಿದ್ದು ಇರುತ್ತದೆ, ದಿನಾಂಕ 19/06/2018 ರಂದು ಸಾಯಂಕಾಲ 5-00 ಗಂಟೆಯ ಸುಮಾರಿಗೆ ನಮ್ಮೂರಿನ ದ್ಯಾವಮ್ಮನ ಗುಡಿಯ ಹತ್ತಿರ ಮಾಳಪ್ಪ ತಂದೆ ನಿಂಗಪ್ಪ ಈತನು ನಿಂತ್ತಿದ್ದನು. ಆಗ ನಾನು ಮಾಳಪ್ಪನ ಹತ್ತಿರ ಹೋಗಿ ನಾನು ನಿಮ್ಮ ಮನೆಗೆ ಕೂಲಿಗಾಗಿ ಕಟಿಗಿಕಡಿದಿದ್ದು ಅದರ ರೂಪಾಯಿ ಕೊಡಲು ಕೆಳಿದಾಗ ಲೇ ಬೋಸಡಿ ಮಗನಾ ನಾ ಯಾವದು ರೂಪಾಯಿ ಕೊಡಬೇಕು ಸೂಳಿಮಗೆನ ನಿನು ನನ್ನೊಂದಿಗೆ ಯಾವಾಗಲು ತಕರಾರು ಮಾಡುತ್ತಿ ಅಂತ ಅಂದವನೆ ಕೈಯಿಂದ ನನ್ನ ಕಪಾಳಕ್ಕೆ ಮುಖಕ್ಕೆ ಮನಬಂದಂತೆ ಹೊಡೆದನು. ಅಲ್ಲೆ ಬಿದ್ದಿದ್ದ ಒಂದು ಡೊಳ್ಳುಬಾರಿಸುವ ಬಡಿಗೆಯಿಂದ ನನಗೆ ಮುಖಕ್ಕೆ, ಎರಡು ಕಣ್ಣಿಗೆ, ತಲೆಗೆ ಮನಬಂದತೆ ಹೋಡೆದಿದ್ದರಿಂದ ಎಡಗಡೆ ಕಣ್ಣಿಗೆ ತಿವ್ರಸ್ವರೂಪದ ಗುಪ್ತಗಾಯ, ಬಲಗಡೆ ಕಣ್ಣಿಗೆ, ಮೂಗಿಗೆ, ಮೂಖಕ್ಕೆ, ತಲೆಗೆ ಹಣೆಗೆ ಗುಪ್ತಗಾಯವಾಗಿದ್ದು ಮೂಗಿನಿಂದ ರಕ್ತ ಬಂದಿರುತ್ತದೆ, ಮಾಳಪ್ಪನು ನನಗೆ ನೆಲಕ್ಕೆ ಹಾಕಿ ತನ್ನ ಕಾಲಿನಿಂದ ಸೊಂಟಕ್ಕೆ ಒದ್ದು ಗುಪ್ತಗಾಯ ಮಾಡಿದನು, ನನಗೆ ಎಳೆದಾಡಿದ್ದರಿಂದ ಎಡಮೊಳಕಾಲಿಗೆ ತರಚಿದ ಗಾಯವಾಗಿದ್ದು ಇರುತ್ತದೆ. ದ್ಯಾವಮ್ಮನ ಗುಡಿಯ ಹತ್ತಿರ ನಿಂತಿದ್ದ ಹಣಮಂತ ತಂದೆ ಭೀಮಣ್ಣ, ತಮ್ಮಣ್ಣಗೌಡ ತಂದೆ ನಾಗಣ್ಣಗೌಡ ಇವರು ಸದರಿ ಜಗಳವನ್ನು ನೋಡಿ ಬಂದು ಜಗಳ ಬಿಡಿಸಿಕೊಂಡರು ಆಗ ಮಾಳಪ್ಪನು ಇವತ್ತು ಉಳಿದು ಕೊಂಡಿದ್ದಿ ಸೂಳಿಮಗನೆ ಇನ್ನೊಂದು ಸಲ ನನ್ನ ತಂಟೆಗೆ ಬಂದರೆ ನಿನ್ನ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದನು ಸದರಿ ಘಟನೆಯು ದಿನಾಂಕ 19-06-2018 ರಂದು ಸಾಯಂಕಾಲ 5-00 ಗಂಟೆಗೆ ನಮ್ಮೂರ ದ್ಯಾವಮ್ಮನ ಗುಡಿಯ ಹತ್ತಿರ ಜರುಗಿರುತ್ತದೆ. ಆದಿನ ಮುಕ್ಕನಾಳ ಗ್ರಾಮದಲ್ಲಿ ನಮ್ಮ ಸಂಬದಿಕರೊಬ್ಬರು ಮೃತಪಟ್ಟಿದ್ದರಿಂದ ನನ್ನ ಹೆಂಡತಿ ಬಸಮ್ಮ ಇವಳು ಶವ ಸಂಸ್ಕಾರ ಕುರಿತು ಹೋಗಿ ಮರುದಿನ ಮನೆಗೆ ಬಂದಾಗ ಮೇಲೆ ನಡೆದ ಘಟನೆಯ ಬಗ್ಗೆ ಹೇಳಿದ್ದು ನಾನು ನನ್ನ ಹೆಂಡತಿ ನಮ್ಮ ಸಮಾಜದ ಹಿರಿಯರ ಜೊತೆ ವಿಚಾರ ಮಾಡಿ ಮತ್ತು ಈ ದಿನ ನನ್ನ ಮುಖ ನೋವಾಗುತ್ತಿದ್ದರಿಂದ ಉಪಚಾರ ಕುರಿತು ನನ್ನ ಹೆಂಡತಿ ಮತ್ತು ನನ್ನ ತಂಗಿ ಅಕ್ಕಮ್ಮ ಇಬ್ಬರು ಕೂಡಿ ನನಗೆ ಒಂದು ಖಾಸಗಿ ವಾಹನದಲ್ಲಿ ಕರೆದು ಕೊಂಡು ಬಂದು ಶಹಾಪೂರದ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತಾರೆ. ಕಾರಣ ನನಗೆ ಅವಾಚ್ಯ ಶಬ್ದಗಳಿಂದ ಬೈದು. ನನಗೆ ಹೋಡೆ ಬಡೆ ಮಾಡಿ ತಿವ್ರಸ್ವರೂಪದ ಗುಪ್ತಗಾಯ ಮಾಡಿ ಜೀವದ ಬೆದರಿಕೆ ಹಾಕಿದವನ ಮೇಲೆ ಕಾನೂನು ಕ್ರಮ ಜರುಗಿಸಲು ಮಾನ್ಯರಲ್ಲಿ ವಿನಂತಿ. ಅಂತ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 332/2018 ಕಲಂ 323.326.504.506. ಐ.ಪಿ.ಸಿ.ನ್ನೇದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು.
 

No comments: