Police Bhavan Kalaburagi

Police Bhavan Kalaburagi

Sunday, September 2, 2018

BIDAR DISTRICT DAILY CRIME UPDATE 02-09-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 02-09-2018

©ÃzÀgÀ £ÀUÀgÀ ¥ÉưøÀ oÁuÉ C¥ÀgÁzsÀ ¸ÀA. 84/2018, PÀ®A. 337, 304(J) L¦¹ :-
ದಿನಾಂಕ 01-09-2018 ರಂದು ಫಿರ್ಯಾದಿ ನಿಂಗನಾಥ ತಂದೆ ಗೊವಿಂದ ನಾಯಕ್ ಸಾ: ತಳಘಾಟ, ಬೀದರ ರವರ ಮಗನಾದ ವಿಶಾಲ ಇವನು ಕಾಲೇಜದಿಂದ ಮನೆಗೆ ಬರುವಾಗ ಮನೆಯ ಎದುರುಗಡೆ ರೋಡಿನ ಬದಿಯಲ್ಲಿದ್ದ ಕೆ.ಇ.ಬಿ ಕಂಬದ ಪಕ್ಕದಲ್ಲಿ ಬಂದಾಗ ಒಮ್ಮೆಲೆ ಮಗ ನೆಲಕ್ಕೆ ಬಿದ್ದು ಚೀರಿದಾಗ ಫಿರ್ಯಾದಿಯು ಮನೆಯಿಂದ ಹೊರಗಡೆ ಬಂದು ಮಗನ ಹತ್ತಿರ ಹೋಗಿ ಎಬ್ಬಿಸುವಾಗ ಫಿರ್ಯಾದಿಗೂ ಸಹ ಕರೆಂಟ ಹೊಡೆದು ಬಿದ್ದಿದ್ದು, ಆಗ ಫಿರ್ಯಾದಿಯ ಮಗಳಾದ ಅಂಜಲಿ ಮತ್ತು ಮಿಟ್ಟುರಾಮ ರವರು ನೋಡಿ ಇಬ್ಬರಿಗೂ ಅಲ್ಲಿಂದ ಎಳೆದು ಬೇರೆ ಕಡೆಗೆ ತೆಗೆದುಕೊಂಡರು, ಇದರಿದ ಫಿರ್ಯಾದಿಯ ಎರಡು ಕೈಗಳಿಗೆ ಸುಟ್ಟ ಗಾಯಗಳು ಆಗಿರುತ್ತವೆ ಮತ್ತು ಮಗನಿಗೆ ಎಡಗೈ ಮುಂಗೈ ಹತ್ತಿರ ಮತ್ತು ಎಡಗಾಲ ಪಾದದ ಹತ್ತಿರ ಗಾಯವಾಗಿರುತ್ತವೆ, ಕೂಡಲೇ ಫಿರ್ಯಾದಿಯು ನನ್ನ ಮಗನಿಗೆ ಒಂದು ವಾಹನದಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ನೋಡಿ ಸದರಿಯವನು ಮೃತಪಟ್ಟಿರುತ್ತಾನೆ ಅಂತ ತಿಳಿಸಿದ್ದು ಇರುತ್ತದೆ, ಸದರಿ ಘಟನೆ ಜೆಸ್ಕಾಂ (ಕೆ.ಇ.ಬಿ) ಇಲಾಖೆಯ ಶಾಖಾಧಿಕಾರಿ ಮತ್ತು ಲೈನ ಮ್ಯಾನ ರವರು ಫಿರ್ಯಾದಿಯ ಮನೆಯ ಎದುರಿಗೆ ಇದ್ದ ಕೆ..ಬಿ ಕಂಬ ತುಂಬಾ ಹಳೆಯದಿದ್ದು ಅಲ್ಲಲ್ಲಿ ಸಿಳಿಕೆ ಬಿಟ್ಟಿದ್ದು, ಸದರಿಯವರಿಗೆ ಸುಮಾರು ಸಲ ಕಂಬ ಬದಲಾವಣೆ ಮಾಡಿರಿ ಇದರಲ್ಲಿ ಕರೆಂಟ ಬರುತ್ತಿದೆ ಅಂತ ತಿಳಿಸಿದರು ಸಹ ಕಂಬ ಬದಲಾವಣೆ ಮಾಡದೇ, ಸರಿಯಾಗಿ ನಿರ್ವಹಣೆ ಮಾಡದೇ ನಿಷ್ಕಾಳಜಿ ವಹಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.      

No comments: