Police Bhavan Kalaburagi

Police Bhavan Kalaburagi

Thursday, January 9, 2020

BIDAR DISTRICT DAILY CRIME UPDATE 09-01-2020


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 09-01-2020

ಮುಡಬಿ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಜಗದೇವಿ ಗಂಡ ರಮೇಶ ರಾಠೋಡ ಸಾ: ಕಲಖೊರಾ ತಾಂಡಾ ರವರ ಮಗಳಾದ ಮೃತ ಅಶ್ವಿನಿ ತಂದೆ ರಮೇಶ ರಾಠೋಡ ವಯ: 18 ವರ್ಷ, ಜಾತಿ: ಲಮಾಣಿ, ಸಾ: ಕಲಖೊರಾ ತಾಂಡಾ ಇಕೆಯು ಕಮಲಾಪೂರದಲ್ಲಿ ಪಿ.ಯುಸಿ ಓದುತ್ತಿದ್ದು, ಅವಳು ಸಿಡುಕಿನ ಸ್ವಭಾವದವಳಿದ್ದು ನನಗೆ ಯಾರೂ ಜೀವ ಮಾಡಲ್ಲ ಬರಿ ಕೆಲಸ ಹೆಳುತ್ತಿರಿ ಇದರಿಂದ ನನಗೆ ಬೇಸರ ಆಗಿದೆ ನನಗೆ ಸಾಕಾಗಿದೆ ಸುಮ್ಮನೆ ನಾನು ಸಾಯಬೇಕು ಅಂತಾ ನೇಣು ಹಾಕಿಕೊಳ್ಳಲು ಹೋಗುತ್ತಿದ್ದಾಗ ಮನೆಯಲ್ಲಿ ಫಿರ್ಯಾದಿ ಹಾಗೂ ಫಿರ್ಯಾದಿಯವರ ದೊಡ್ಡ ಮಗಳು ಐಶ್ವರ್ಯ ಇಬ್ಬರು ಸಮಾಧಾನ ಮಾಡಿ ಅವಳ ಸಿಟ್ಟು ಕಡಿಮೆ ಮಾಡುತ್ತಿದ್ದರು, ಹೀಗಿರುವಲ್ಲಿ ದಿನಾಂಕ 07-01-2020 ರಂದು ಅಶ್ವಿನಿ ಇವಳಿಗೆ ನಿಮ್ಮಕ್ಕಾ ಐಶ್ವರ್ಯ ಬಟ್ಟೆ ಹೊಲೆಯುತ್ತಿದ್ದಾಳೆ ನೀನು ರೋಟ್ಟಿ ಮಾಡು ಅಂತಾ ಹೇಳಿದಕ್ಕೆ ನೀವು ಯಾವಾಗಲು ನನಗೆ ಕೆಲಸ ಹೇಳುತ್ತೀರಿ ನಾನು ರೋಟ್ಟಿ ಮಾಡುವುದಿಲ್ಲಾ ಅಂತಾ ಮನೆಯೋಳಗೆ ಹೊಗಿ ಬಾಗಿಲು ಮುಚ್ಚಿಕೊಂಡು ಒಳಗಿಂದ ಕೊಂಡಿ ಹಾಕಿಕೊಂಡಾಗ ಫಿರ್ಯಾದಿಯು ಬಾಗಿಲು ತೆರೆಯಲು ಹೊರಗಿಂದ ಕೂಗಿಕೊಂಡರೂ ಬಾಗಿಲು ತೆರೆದಿರುವುದಿಲ್ಲಾ, ಅವಳು ಮನೆಯೋಳಗಿ ಹೊಗಿ ತನ್ನ ಓಡನಿಯಿಂದ ತಗಡದ ಕೇಳಗೆ ಇರುವ ಕಬ್ಬಿಣದ ಪೈಪಿಗೆ ನೇಣು ಹಾಕಿಕೊಂಡಿದ್ದು, ಅದನ್ನು ನೋಡಿ ಅವಳಿಗೆ ಅಂಬುಲೇನ್ಸ್ನಲ್ಲಿ ಕಲಬುರ್ಗಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆಗೆದುಕೊಂಡು ಹೋಗಿ ದಾಖಲು ಮಾಡಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು, ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 08-01-2020 ರಂದು ಮೃತ್ತಪಟ್ಟಿರುತ್ತಾಳೆ, ಅವಳ ಸಾವಿನಲ್ಲಿ ಯಾವುದೇ ಸಂಶಯ ಆಗಲಿ ಇನ್ಯಾರ ಮೇಲೆ ದೂರಾಗಲಿ ಇರುವದಿಲ್ಲ ಅಂತಾ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 07-01-2020 ರಂದು ಫಿರ್ಯಾದಿ ಜೈಶ್ರೀ ಗಂಡ ವೈಜಿನಾಥ ವಡೆಯರ್ ಸಾ: ಹೆಡಗಾಪುರ ಗ್ರಾಮ ರವರ ಮಗಳಾದ ಸುಲೋಚನಾ ಗಂಡ ಚಂದರ ವಯ: 20 ವರ್ಷ ಇವಳು ನ್ನ ತಂದೆಗೆ ಚಹಾ ಮಾಡಿಕೊಡಲು ಸೀಮೆಎಣ್ಣೆಯ ಸ್ಟೌಗೆ ಬೆಂಕಿ ಹಚ್ಚಿದಾಗ ಆಕಸ್ಮಿಕವಾಗಿ ಸ್ಟೌದಲ್ಲಿನ ಎಣ್ಣೆ ಉರಿ ಸಮೇತ ಮಗಳ ಮೈಮೇಲೆ ಸಿಡಿದು ಅವಳ ಮೈಗೆ ಬೆಂಕಿ ಹತ್ತಿ ಭಾರಿ ಗಾಯಗೊಂಡಿದ್ದರಿಂದ ಅವಳಿಗೆ ಚಿಕಿತ್ಸೆ ಕುರಿತು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಚಿಕಿತ್ಸೆ ಕಾಲಕ್ಕೆ ಮೃತಪಟ್ಟಿರುತ್ತಾಳೆ, ಅವಳ ಸಾವಿನಲ್ಲಿ ಯಾರ ಮೇಲೆ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 08-01-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 03/2020, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-01-2020 ರಂದು ಫಿರ್ಯಾದಿ ರೇಣುಕಾ ಗಂಡ ವಿಜಯಕುಮಾರ ಕಾಸಲೆ ಸಾ: ಮುಧೋಳ(ಬಿ) ಗ್ರಾಮ ರವರು ತನ್ನ ಗಂಡ ಹಾಗು ಅತ್ತೆ ಇತರರು ಕೂಡಿಕೊಂಡು ತಮ್ಮೂರ ಶೀವಾರದಲ್ಲಿ ಸಾವಿತ್ರಾಬಾಯಿ ಗಂಡ ರಾಜೇಂದ್ರ ರಾಠೋಡ ಇವರ ಹೊಲದಲ್ಲಿ ತೋಗರಿ ಬೆಳೆ ರಾಶಿ ಮಾಡಲು ಹೋಗಿ ತೋಗರಿ ಕಟ್ ಮಾಡುತ್ತಿರುವಾಗ ಆಕಸ್ಮಿಕವಾಗಿ ಗಂಡನ ಎಡಗಾಲು ಹಿಂಬದಿ ಹತ್ತಿರ ಹಾವು ಕಚ್ಚಿದ್ದರಿಂದ ಅವರಿಗೆ ಔರಾದ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲು ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂ. 06/2020, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 08-01-2020 ರಂದು ಬಸವಕಲ್ಯಾಣ ನಗರದ ಖಾನಾಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಗೆ ಕಾನೂನು ಬಾಹಿರವಾಗಿ ಒಂದು ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ನಸಿಬಿನ ಮಟಕಾ ಚೀಟಿ ಬರೆದುಕೊಳ್ಳುತ್ತಿದ್ದಾನೆಂದು ಸುನೀಲ್ ಕುಮಾರ ಪಿ.ಎಸ. [ಕಾ&ಸು] ಬಸವಕಲ್ಯಾಣ ನಗರ ಪೊಲೀಸ್ ಠಾಣೆ ರವರಿಗೆ ಕರೆ ಮುಖಾಂತರ ಖಚಿತ ಬಾತ್ಮಿ ಬಂದ ಬಂದ ಮೇರೆಗೆ ಫಿರ್ಯಾದಿಯವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಖಾನಾಪೂರ ಕ್ರಾಸ್ ಹತ್ತಿರ ಹೊಗಿ ಮರೆಯಾಗಿ ನಿಂತು ನೋಡಲು ಬಾತ್ಮಿಯಂತೆ ಸದರಿ ಖಾನಾಪೂರ ಕ್ರಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಎಂ.ಡಿ ಇಲಾಹಿ ತಂದೆ ಫಕೀರಾಬ ಮಸೂಲ್ದಾರ  ವಯ: 23 ವರ್ಷ, ಜಾತಿ: ಮುಸ್ಲಿಂ, ಸಾ: ಖಡಿಝಂಡಾ ಆಶ್ರಯ ಕಾಲೋನಿ ಬಸವಕಲ್ಯಾಣ ಇತನು ನಿಂತುಕೊಂಡು ಸಾರ್ವಜನಿಕರಿಗೆ 1 ರೂಪಾಯಿಗೆ 80/- ರೂಪಾಯಿ ಎಂದು ಕೂಗಿ ಹೇಳಿ ಸಾರ್ವಜನಿಕರಿಂದ ಹಣ ಪಡೆದು ಮಟಕಾ ಚೀಟಿ ಬರೆದು ಕೊಳ್ಳುವುದನ್ನು ನೋಡಿ ಎಲ್ಲರು ಒಮ್ಮೆಲೆ ದಾಳಿ ಮಾಡಿ ಹಿಡಿದುಕೊಂಡು ಅವನ ಅಂಗ ಶೋಧನೆ ಮಾಡಲು ಅವನ ಹತ್ತಿರ ನಗದು ಹಣ 640/- ರೂ. ಮತ್ತು 02 ಮಟಕಾ ಚೀಟಿಗಳು ಹಾಗು ಒಂದು ಬಾಲ್ ಪೆನ್ ಸಿಕ್ಕಿದ್ದು ನೇದ್ದವುಗಳನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಸಂತಪುರ ಪೊಲೀಸ್ ಠಾಣೆ ಅಪರಾಧ ಸಂ. 01/2020, ಕಲಂ. 457, 380 ಐಪಿಸಿ :-
ದಿನಾಂಕ 07-01-2020 ರಂದು 2300 ಗಂಟೆಯಿಂದ ದಿನಾಂಕ 08-01-2020 ರಂದು 0300 ಗಂಟೆ ಅವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಚಂದ್ರಶೇಖರ ತಂದೆ ರಮೇಶ ತುಗಾವೆ ವಯ: 28 ವರ್ಷ, ಜಾತಿ: ವೀರಶೈವ ಲಿಂಗಾಯತ, ಸಾ: ಜಿರ್ಗಾ (ಬಿ) ರವರ ಮನೆಯಲ್ಲಿ ದೇವರ ಮನೆಯ ಕಿಲಿ ಓಡೆದು ಮನೆಯೋಳಗೆ ಪ್ರವೇಶ ಮಾಡಿ ದೇವರ ಮನೆಯಲ್ಲಿನ ಪ್ಲಾಸ್ಟಿಕ್ ಬ್ಯಾರಲನಲ್ಲಿಟ್ಟಿದ್ದ 10,000/- ರೂ. ನಗದು ಹಣ ಹಾಗು 3 ಗ್ರಾಂ. ಬಂಗರದ ಕಿವಿ ಓಲೆಗಳು .ಕಿ 12,000/- ರೂ., ಹೀಗೆ ಒಟ್ಟು 22,000/- ರೂ. ನೇದನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: