Police Bhavan Kalaburagi

Police Bhavan Kalaburagi

Wednesday, November 4, 2020

BIDAR DISTRICT DAILY CRIME UPDATE 04-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-11-2020

 

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 23/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 03-11-2020 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಶ್ರೀಪತರಾವ ಜಗದಾಳೆ ಸಾ: ಮರಖಲ್ ಗ್ರಾಮ ರವರು ತಮ್ಮೂರ ರಾಜಕುಮಾರ ತಂದೆ ಭವರಾವ ಜಗದಾಳೆ ರವರ ಜೊತೆಯಲ್ಲಿ ಮೋಹನಸಿಂಗ್ ಠಾಕೂರ ರವರ ಹೊಲ ಸರ್ವೆ ನಂ. 167 ನೇದರಲ್ಲಿ ಹೋದಾಗ ಹೊಲದಲ್ಲಿನ ಬೊರೆ ಮರದ ಕೆಳಗಡೆ ಅಂದಾಜು 65 ರಿಂದ 70 ವರ್ಷದ ಮದ್ಯದ ವಯಸ್ಸಿನ ಒಬ್ಬ ವ್ಯಕ್ತಿ ಮಲಗಿಕೊಂಡಿದ್ದು, ಫಿರ್ಯಾದಿಯು ಅವನ ಹತ್ತಿರ ಹೋಗಿ ನೋಡಲು ಸದರಿ ವ್ಯಕ್ತಿ ಮೃತಪಟ್ಟಿರುತ್ತಾನೆ, ಅವನ ಮೈಮೇಲೆ ಬಿಳಿ ಮತ್ತು ಚಾಕಲೇಟ್ ಬಣ್ಣದ ಗೇರೆಯುಳ್ಳ ಫೂಲ್ ಶರ್ಟ ಹಾಗು ಕೆಂಪು ಮತ್ತು ನಿಳಿ ಬಣ್ಣದ ಚೌಕಡ ಲುಂಗಿಯಿದ್ದು, ಅವನ ಮೈ ಮೇಲೆ ಮೇಲ್ನೊಟಕ್ಕೆ ಯಾವುದೆ ಗಾಯಗಳು ಕಂಡು ಬಂದಿರುವುದಿಲ್ಲ, ಅವನು ಅಪರಿಚಿತ ವ್ಯಕ್ತಿಯಾಗಿದ್ದು, ಸದರಿ ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ಅವನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 454, 457, 380 ಐಪಿಸಿ :-

ದಿನಾಂಕ 31-10-2020 ರಂದು 2000 ಗಂಟೆಯಿಂದ ದಿನಾಂಕ 03-11-2020 ರಂದು 0800 ಗಂಟೆಯ ಅವಧಿಯಲ್ಲಿ ಬೀದರ ವೈಷ್ಣವಿ ಕಾಲೋನಿಯಲ್ಲಿರುವ ಫಿರ್ಯಾದಿ ಕಿರಣ ತಂದೆ ಸುರೇಶ ಡೊಂಗ್ರೆ ಸಾ: ವೈಷ್ಣವಿ ಕಾಲೊನಿ ಬೀದರ ರವರ ಮನೆಯ ಬಾಗಿಲಿನ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿನ 1,35,000/- ರೂ ಮೌಲ್ಯದ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2020, ಕಲಂ. 379 ಐಪಿಸಿ :-

ದಿನಾಂಕ 16-10-2020 ರಂದು 2100 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಜೈಪಾಲ ರೆಡ್ಡಿ ತಂದೆ ಸಂಜೀವರೆಡ್ಡಿ ಸಾ: ಗಾದಗಿ, ಸದ್ಯ: ಲಾಡಗೇರಿ ಬೀದರ ರವರು ಬೀದರ ಪಾಪನಾಶ ಗೇಟ ಹತ್ತಿರ ನಿಲ್ಲಿಸಿದ ತನ್ನ  ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-38/L-9604, ಚಾಸಿಸ್ ನಂ. MBLHA10A10ALCHG28675, ಇಂಜಿನ್ ನಂ. HA10EJCHG17532, ಮಾಡಲ್: 2012, ಬಣ್ಣ: ಕಪ್ಪು ಹಾಗೂ .ಕಿ 25,000/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

Sunday, November 1, 2020

BIDAR DISTRICT DAILY CRIME UPDATE 01-11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 01-11-2020

 

ಮನ್ನಳ್ಳಿ ಪೊಲಿಸ್ ಠಾಣೆ ಅಪರಾಧ ಸಂಖ್ಯೆ 41/2020 ಕಲಂ 498(ಎ), 504 ಐಪಿಸಿ ಜೊತೆ 34 ಐಪಿಸಿ :-     

ದಿನಾಂಕ:31/10/2020 ರಂದು 15:30 ಗಂಟೆಗೆ ಫಿರ್ಯಾದಿ ಲಕ್ಷ್ಮೀ ಗಂಡ ತುಕಾರಾಮ ವಯ||20 ವರ್ಷ ಸಾ||ಕೊಳಾರ (ಕೆ) ಗ್ರಾಮದ  ನಿವಾಸಿ ಇದ್ದು, ಸದರಿಯವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ  ಫಿರ್ಯಾದಿಯ ತವರು ಮನೆ ಕೋಳಾರ್ (ಕೆ) ಇದ್ದು, ಗಂಡನ ಮನೆ ಮನ್ನಳ್ಳಿ ಗ್ರಾಮ ಇರುತ್ತದೆ. ಇವರ ಮದುವೆ ಈ ವರ್ಷ 06 ನೇ ತಿಂಗಳ 29 ನೇ ದಿನಾಂಕರಂದು ಮನ್ನಳ್ಳಿ ಗ್ರಾಮದ ತುಕಾರಾಮ ತಂದೆ ಮಾಣಿಕ ಇವರ ಜೊತೆಗೆ ಸಂಪ್ರದಾಯ ಪ್ರಕಾರ ಕೋಳಾರ (ಕೆ) ಗ್ರಾಮದಲ್ಲಿ  ಮನೆಯ ಮುಂದೆ ನಡೆದಿರುತ್ತದೆ. ಮದುವೆ ಆದ ನಂತರ ಫಿರ್ಯಾದಿ ಗಂಡ ಮತ್ತು ಗಂಡನ ಮನೆಯವರಾದ ಗೋಪಾಲ, ಮಹೇಶ, ವೆಂಕಮ್ಮಾ, ಅತ್ತೆಯಾದ ನಾಗಮ್ಮಾ , ನವೀನ್ ಇವರೆಲ್ಲರೂ ಕೂಡಿ   ಮದುವೆ ಆದ ಕೆಲವು ದಿವಸ ಸರಿಯಾಗಿ ಇಟ್ಟುಕೊಂಡು ನಂತರ ಅವರೆಲ್ಲರು ಕೂಡಿ ಫಿರ್ಯಾದಿಗೆ ಅವಾಚ್ಯವಾಗಿ ಬೈಯುವುದು ಮತ್ತು  ನೀನು ನೊಡಲು ಸರಿಯಾಗಿಲ್ಲಾ ನಿನಗೆ ಮನೆಯ ಕೆಲಸ ಮಾಡಲು ಬರುವುದಿಲ್ಲಾ ಮತ್ತು ನಾವು ಹೇಳಿದ ಮಾತು ಕೇಳುವುದಿಲ್ಲಾ ಅಂತಾ ಮಾನಸಿಕ ಕಿರುಕುಳ ಕೊಡಲು ಪ್ರಾರಂಭಿಸಿರುತ್ತಾರೆ. ಇದರ ಬಗ್ಗೆ ಫಿರ್ಯಾದಿಯು ತನ್ನ ತಾಯಿ ತಂದೆಯವರಿಗೆ ತಿಳಿಸಿದಾಗ ಅವರು ಗ್ರಾಮದ ನಾಲ್ಕೈದು ಜನರಿಗೆ ತನ್ನ ಗಂಡನ  ಮನೆಗೆ ಕರೆದುಕೊಂಡು ಬಂದು ನನ್ನ ಗಂಡ ಹಾಗೂ ನನ್ನ ಗಂಡನ ಮನೆಯವರಿಗೆ ಇವರೆಲ್ಲರಿಗೆ ತಿಳುವಳಿಕೆ ಹೇಳಿ ನನ್ನ ಮಗಳಿಗೆ ಕಿರುಕುಳ ಕೊಡಬೇಡಿರಿ ಸರಿಯಾಗಿ ಇಟ್ಟುಕೊಳ್ಳಿರಿ ಅಂತಾ ತಿಳುವಳಿಕೆ  ಹೇಳಿ ಹೋಗಿರುತ್ತಾರೆ. ಆದರೂ ಸಹ ಅವರು ಕೇಳದೆ ವಿನಾಃ ಕಾರಣ ದಿನಾಲು ನನಗೆ ಕಿರುಕುಳ ಕೊಡುವುದು ಬಿಡಲಿಲ್ಲಾ.  ದಿನಾಂಕ:27/10/2020 ರಂದು ಫಿರ್ಯಾದಿಯು ಮನೆಯಲ್ಲಿದ್ದಾಗ ಮುಂಜಾನೆ 0800 ಗಂಟೆಯ ಸುಮಾರಿಗೆ ಫೀರ್ಯಾದಿಗೆ ಗಂಡ ತುಕಾರಾಮ, ಮೈದುನನಾದ ಗೋಪಾಲ, ಮಹೇಶ , ವೆಂಕಮ್ಮಾ, ಅತ್ತೆ ನಾಗಮ್ಮಾ, ನವೀನ್ ಎಲ್ಲರೂ ಕೂಡಿ    ಅವಾಚ್ಯ ಶಬ್ದಗಳಿಂದ ಬೈಯ್ದು, ಮನೆಯಿಂದ ಹೊರಗೆ ಹಾಕಿರುತ್ತಾರೆ.  ಈ ಮೇಲೆ ನಮೂದು ಮಾಡಿದ ಜನರು ವಿನಾಃ ಕಾರಣ ಅವಾಚ್ಯ ಶಬ್ದಗಳಿಂದ ಬೈಯ್ದು ಮಾನಸಿಕ ಕಿರುಕುಳ ಕೊಟ್ಟವರ ವಿರುದ್ದ ಕಾನೂನು ಕ್ರಮ ಕೈಕೊಂಡು ನನಗೆ ನ್ಯಾಯ ಒದಗಿಸಿ ಕೊಡಬೇಕಾಗಿ ವಿನಂತಿ ಅಂತಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Saturday, October 31, 2020

BIDAR DISTRICT DAILY CRIME UPDATE 31-10-2020

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 31-10-2020

 

ಮನ್ನಾಏಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 96/2020 ಕಲಂ 279, 304() ಐಪಿಸಿ ಜೊತೆ 187 ಐಎಮ್.ವಿ. ಕಾಯ್ದೆ :-

ದಿನಾಂಕ 30-10-2020 ರಂದು 07:00 ಗಂಟೆಗೆ ಫಿರ್ಯಾದಿ ಶ್ರೀ ಭೀಮರೆಡ್ಡಿ ತಂದೆ ಶಿವಾರೆಡ್ಡಿ ಶೇರಿಕಾರ ವಯ: 31 ವರ್ಷ ಜಾತಿ: ರೆಡ್ಡಿ ಉ: ಎಲ್ & ಟಿ ಟೋಲ್ ಗೇಟದಲ್ಲಿ ಟೋಲ್ ಕಲೇಕ್ಟರ್ ಕೆಲಸ ಸಾ: ಸಲಗರ ಬಸಂತಪೂರ ತಾ: ಚಿಂಚೋಳಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ ಫಿರ್ಯಾದಿಯು ಎಲ್ & ಟಿ ಟೋಲ್ ಗೇಟದಲ್ಲಿ ಸುಮಾರು 3 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು  ದಿನಾಂಕ 30-10-2020 ರಂದು ರಾತ್ರಿ 24:00 ಗಂಟೆಯಿಂದ ಮುಂಜಾನೆ 08:00 ಗಂಟೆಯವರೆಗೆ ಫಿರ್ಯಾದಿ ಕರ್ತವ್ಯ ಅವಧಿ ಇದ್ದಿರುತ್ತದೆ. ಫಿರ್ಯಾದಿಯು  ಟೋಲ್ ಗೇಟ್ ಮೇಲೆ ಕರ್ತವ್ಯದ ಮೇಲೆ ಇದ್ದಾಗ ರಾತ್ರಿ ಸಮಯದಲ್ಲಿ ಒಬ್ಬ ಅಪರಿಚಿತ ಭಿಕ್ಷುಕನು ಟೋಲ ಪ್ಲಾಜಾ ಹತ್ತಿರ ತಿರುಗಾಡುತಿದ್ದು ಆತನು ಲೈನ್ ಮೇಲೆ ಬಂದಾಗ ಆತನು   ಕೈ ಸನ್ನೆ ಮಾಡಿ ಊಟ ಬೇಕು ಅಂತ ಕೇಳಿರುತ್ತಾನೆ.   ಆತನಿಗೆ   ಆಫೀಸನ ಕಡೆಯಿದ್ದ ಗಾರ್ಡನ ಕಡೆ ಹೋಗಲು ಕೈ ಸನ್ನೆ ಮಾಡಿ ಹೇಳಿದ್ದು ಆತನು ಆ ಕಡೆ ಹೋಗಿರುತ್ತಾನೆ. ನಂತರ ನಸುಕಿನ ಜಾವ ನಮಗೆ ನಮ್ಮ ಕಂಪನಿಯ ಕಂಟ್ರೋಲ್ ರೂಮ್ನಿಂದ ವೈರಲೆಸ್ ಮುಖಾಂತರ ಮಾಹಿತಿ ಬಂದಿದ್ದೇನೆಂದರೆ ಟೋಲ್ ಪ್ಲಾಜಾದ ವೇ ಬ್ರೀಜ್ ಮುಂದೆ ರಾ ಹೆದ್ದಾರಿ ನಂ 65 ಹೈದ್ರಾಬಾದ ಕಡೆ ಹೋಗುವ ರೋಡಿನ ಎಡಗಡೆ ರೋಡಿನ ಮೇಲೆ ಒಬ್ಬ ಅಪರಿಚಿತ ಭಿಕ್ಷುಕ ವಾಹನ ಅಪಘಾತದಿಂದ ಮೃತ ಪಟ್ಟಿರುತ್ತಾರೆ ನಸುಕಿನ ಜಾವ 05:32 ಗಂಟೆಗೆ ಹೋಗಿ ನೋಡಲು ಒಬ್ಬ ಅಪರಿಚಿತ ವ್ಯಕ್ತಿ ಅಂದಾಜು 45 ವರ್ಷ ಮೈ ಮೇಲೆ ಕೆಂಪು ಬಣ್ಣದ ಫುಲ್ ಷರ್ಟ , ಅದರ ಒಳಗೆ ಬೂದಿ ಬಣ್ಣದ ಷರ್ಟ ಹಾಗೂ ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು ಆತನಿಗೆ ಕಪ್ಪು , ಬಿಳುಪು ಗಡ್ಡ ಇದ್ದು ತಲೆಯ ಮೇಲೆ ಕಪ್ಪು ಬಿಳುಪು ಕೂದಲೂ ಇದ್ದು ಆತನ ಬಣ್ಣ ಗೋದಿ ಮೈ ಬಣ್ಣ, ಎತ್ತರ 5' 5 ಇರುತ್ತದೆ. ಸದರಿ ಅಪಘಾತವು ದಿನಾಂಕ 30-10-2020 ರಂದು 03:40 ಗಂಟೆಯಿಂದ 05:32 ಗಂಟೆಯ ಅವಧಿಯಲ್ಲಿ ಜರುಗಿರುತ್ತದೆ. ಅಂತಾ ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

  

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ  140/2020 ಕಲಂ 3 & 7 ಇ.ಸಿ. ಕಾಯ್ದೆ :-

ದಿನಾಂಕ 30-10-2020 ರಂದು 15:30 ಗಂಟೆಗೆ ಫಿರ್ಯಾದಿ ಶ್ರೀ ರಾಜೇಂದ್ರಕುಮಾರ ತಂದೆ  ಶಾಮರಾವ ಆಹಾರ ನಿರೀಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ರವರು ಠಾಣೆಯಲ್ಲಿ ಹಾಜರಗಿ  ಲಿಖಿತ ಅಜರ್ಿ ಸಾರಾಂಶವೆನಂದರೆ, ದಿನಾಂಕ: 30/10/2020 ರಂದು ಮುಂಜಾನೆ 11:00 ಗಂಟೆಯ ಸುಮಾರಿಗೆ ಫಿರ್ಯಾದಿ ಮತ್ತು ರಾಮರತನ ದೇಗಲೆ ಆಹಾರ ನೀರಿಕ್ಷಕರು ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ತಹಸೀಲ್ ಕಛೇರಿ ಹತ್ತಿರ ಮಾತಾಡುತ್ತಾ ನಿಂತಿರುವಾಗ  ಫೋನ್ ಮುಖಾಂತರ ಖಚಿತ ಭಾತ್ಮಿಯ ತಿಳಿದುಬಂದಿದ್ದೇನೆಂದರೆ, ಹುಮನಾಬಾದ ಕಡೆಯಿಂದ ನಾಲ್ಕು ಲಾರಿಗಳಲ್ಲಿ ಅನಧೀಕೃತವಾಗಿ ರ್ಯಾಶನ ಅಕ್ಕಿ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ತೆಗೆದುಕೊಂಡು ಹೊಗುತ್ತಿದ್ದಾರೆ ಎಂದು ಖಚಿತ ಭಾತ್ಮಿಯ ತಿಳಿಸಿದ ಮೇರೆಗೆ ಫಿರ್ಯಾದಿ ಮತ್ತು ್ತ ಆಹಾರ ನಿರೀಕ್ಷಕರಾದ ಶ್ರೀ ರಾಮರತನ ದೇಗಲೆ ತಹಸೀಲ್ ಕಛೇರಿ ಬಸವಕಲ್ಯಾಣ ಇಬ್ಬರು ಕೂಡಿಕೊಂಡು ಹಾಗು ಪೊಲೀಸರು ಮತ್ತು  ಇಬ್ಬರು ಪಂಚರು ಹಾಗು ಪೊಲೀಸ್ ಸಿಬ್ಬಂದಿಯವರೊಂದಿಗೆ ಬಸವಕಲ್ಯಾಣ ನಗರದ ಸಸ್ತಾಪೂರ ಬಂಗ್ಲಾ ಹತ್ತಿರ 12:20 ಗಂಟೆಗೆ ತಲುಪಿ ಲಾರಿಗಳ ದಾರಿ ಕಾಯುತ್ತಾ ನಿಂತಿರುವಾಗ ಸಮಯ 12:30 ಗಂಟೆಗೆ ಲಾರಿ ಒಂದರ ಹಿಂದೆ ಒಂದು ನಾಲ್ಕು ಲಾರಿಗಳು ಬರುವುದನ್ನು ನೋಡಿ ಪೊಲೀಸ್ರು ಮೊದಲನೆ ಲಾರಿ ಚಾಲಕನಿಗೆ ಲಾರಿ ನಿಲ್ಲಿಸಲು ಕೈ ಸನ್ನೆ ಮಾಡಿದಾಗ ಲಾರಿ ಚಾಲಕನು ನಿಲ್ಲಿಸಿದಾಗ ಲಾರಿ ಹಿಂದೆ ಇದ್ದ ಮೂರು ಲಾರಿ ಚಾಲಕರು ಕೂಡ ತಮ್ಮ ತಮ್ಮ ಲಾರಿ ನಿಲ್ಲಿಸಿರುತ್ತಾರೆ. ಮೊದಲನೆ ಲಾರಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4286 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಬಾಗೆಖಾನ @ ಬರಕತ ಭೈ ತಂದೆ ಶಕುರ ಖಾನ ವಯಸ್ಸು// 25 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4286 ನೇದ್ದರ ಚಾಲಕ ಸಾ// ಹೌಸ್.ನಂ-480 ಇತವಾಯನಂದ ಸಂಗನಾ ತಾ//ಶಯಲಾ ಜಿಲ್ಲೆ// ಜಾಲೋರ(ಆರ್.ಜೆ) ಅಂತಾ ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಅಬ್ಬಸಖಾನ ತಂದೆ ಸತಾರ ಖಾನ ವಯಸ್ಸು// 24 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4286 ನೇದ್ದರ ಕ್ಲಿನರ ಸಾ// ಚಡೇಚಾ ತಾ// ಸಿಳಂದ್ರಿ ಜಿಲ್ಲೆ// ಬಾರಮೇರ(ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯಕುಮಾರ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು & ಎರಡನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-5277 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಅರಬಖಾನ ತಂದೆ ಮುಸೆಖಾನ ವಯಸ್ಸು// 29 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-5277 ನೇದ್ದರ ಚಾಲಕ ಸಾ// ಕೇಸರಪೂರಾ ನವೋರಾ ಬೇರಾ ತಾ//ಪಚಭದ್ರಾ ಜಿಲ್ಲೆ// ಬಾರಮೇರ(ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಜೋಸಿಬಖಾನ ತಂದೆ ಅಮಲೆಖಾನ ವಯಸ್ಸು// 27 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-5277 ನೇದರ ಕ್ಲಿನರ ಸಾ//ಕೇಸರಪೂರಾ ತಾ// ಪಸಭೋದ್ರಾ ಜಿಲ್ಲೆ// ಬಾರಮೇರ (ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು, ಮೂರನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4511 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಬರಕತ ಅಲಿ ತಂದೆ ಸಾಯಾರ ಖಾನ ವಯಸ್ಸು// 25 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4511 ನೇದ್ದರ ಚಾಲಕ ಸಾ//ಮೇಕುಬಾ ಬಂದೇವಾ ತಾ// ಪೊಕ್ರಾನ ಜಿಲ್ಲೇ//ಜೈಸಲಮರ (ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಖಾಸಿಮಖಾನ ತಂದೆ ಹರಬಾಜ ಖಾನ ವಯಸ್ಸು// 22 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4511 ನೇದ್ದರ ಕ್ಲಿನರ ಸಾ// ಬಾಂದೆವಾನ ತಾ// ಪೊಕ್ರಾನ ಜಿಲ್ಲೆ//ಜೈಸಲ್ ಮಿರ ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು ನಾಲ್ಕನೆ ಲಾರಿಯನ್ನು ಪರಿಶೀಲಿಸಿ ನೋಡಲು ಮಹಿಂದ್ರ ಬ್ಲಾಜೋ ಕಂಪನಿಯ ಲಾರಿ ಇದ್ದು ಅದರ ನಂ  ಜಿ.ಜೆ-36/ಟಿ-4114 ನೇದ್ದು ಇದ್ದು ಸದರಿ ಲಾರಿಯಲ್ಲಿದ್ದ ಚಾಲಕನಿಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮತ್ತು ವಿಳಾಸ ಶಫಿಖಾನ ತಂದೆ ರಿಮುಖಾನ ವಯಸ್ಸು// 25 ವರ್ಷ ಜಾತಿ//ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4114 ನೇದ್ದರ ಚಾಲಕ ಸಾ// ಗೇಡವ ಧೋರಾ ಭುಂಕಾ ಭಗತಸಿಂಗ ತಾ// ಸೇವನಾ ಜಿ// ಬಾರಮೇರ (ಆರ್.ಜೆ) ತಿಳಿಸಿದನು ಮತ್ತು ಲಾರಿ ಕ್ಲೀನರಗೆ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಪೀರೆಖಾನ ತಂದೆ ಅಲಂಖಾನ ವಯಸ್ಸು// 30 ವರ್ಷ ಜಾತಿ// ಮುಸ್ಲಿಂ ಉ// ಲಾರಿ ನಂ ಜಿ.ಜೆ-36/ಟಿ-4114 ನೇದ್ದರ ಕ್ಲಿನರ್ ಸಾ// ಸಂಗನಾ ತಾ// ಸಾಯಿಲಾ ಜಿಲ್ಲೆ// ಜಾಲವಾರ (ಆರ್.ಜೆ) ಅಂತಾ ತಿಳಿಸಿದನು. ಸದರಿ ಚಾಲಕನಿಗೆ ಲಾರಿಯಲ್ಲಿ ಏನಿದೆ? ಎಂದು ವಿಚಾರಿಸಲು ಅಕ್ಕಿ ಚೀಲಗಳ ಲೋಡ ಇದೆ ಎಂದು ತಿಳಿಸಿದಾಗ ಅವನಿಗೆ ಲೋಡಿಗೆ ಸಂಬಂಧಿಸಿ ದಾಖಲಾತಿಗಳು ಇದ್ದರೆ ಹಾಜರು ಪಡಿಸಲು ಸೂಚಿಸಿದಾಗ ಅವನು ನನ್ನ ಹತ್ತಿರ ಯಾವುದೇ ರೀತಿ ದಾಖಲಾತಿಗಳು ಇಲ್ಲ ಎಂದು ತಿಳಿಸಿದಾಗ ಸದರಿ ಅಕ್ಕಿ ಚೀಲಗಳು ಎಲ್ಲಿ ಲೋಡ ಮಾಡಿ ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದಿ ಎಂದು ವಿಚಾರಿಸಿದಾಗ ಅವನು ಗುರಮಿಠಕಲ್ ಪಟ್ಟಣದಲ್ಲಿ ಮಣಿಕಂಠ ತಂದೆ ನರೇಂದ್ರ ರಾಠೋಡ ಮತ್ತು ವಿಜಯ ಪವಾರ ಇವರ ಹತ್ತಿರ ಲೋಡ ಮಾಡಿಕೊಂಡು ಗುಜರಾತ ರಾಜ್ಯಕ್ಕೆ ಸಾಗಾಟ ಮಾಡುತ್ತಿದ್ದೆನೆ ಎಂದು ತಿಳಿಸಿದಾಗ ಲಾರಿಯಲ್ಲಿದ್ದ ಅಕ್ಕಿಯನ್ನು ಪಂಚರೊಂದಿಗೆ ಪರಿಶೀಲಿಸಿ ನೋಡಲು ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜು ಮಾಡಿದ ಅಕ್ಕಿ ಇದ್ದು ಪ್ರತಿ ಚೀಲ 50 ಕೆ.ಜಿ ತೂಕದ ಒಟ್ಟು 600 ಪ್ಲಾಸ್ಟಿಕ್ ಚೀಲಗಳಿದ್ದು ಪ್ರತಿ ಕೆ.ಜಿ ಅಕ್ಕಿಯ ಅಂದಾಜು ಬೆಲೆ 30/-ರೂ ಇದ್ದು ಒಟ್ಟು 300 ಕ್ವಿಂಟಲ್ ಅಕ್ಕಿಯ ಅಂದಾಜು ಬೆಲೆ 9,00000/ ರೂ ಮತ್ತು ಲಾರಿಯ ಅಂದಾಜು ಬೆಲೆ 20,00000/-ರೂ ಹಿಗೆ ಒಟ್ಟು 29,00000/-ರೂ ಬೆಲೆವುಳ್ಳದ್ದು ಜಪ್ತಿ ಮಾಡಿಕೊಂಡು, ಒಟ್ಟು ಮಾಡಿದ ನಾಲ್ಕು ಲಾರಿಗಳು ಮತ್ತು ಅವುಗಳಲ್ಲಿದ್ದ ಅಕ್ಕಿ ಚೀಲಗಳು ಹಿಗೆ ಒಟ್ಟು 1 ಕೋಟಿ 16 ಲಕ್ಷ ರೂ ಬೆಲೆವುಳ್ಳ ಸ್ವತ್ತು ಹಾಜರು ಪಡಿಸುತ್ತಿದ್ದು, ಈ ಮೇಲೆ ನಮೂದಿಸಿದ 8 ಜನ ವಶಕ್ಕೆ ಪಡೆದ ಆರೋಪಿತರು ಮತ್ತು ಲೋಡ ಮಾಡಿಕೊಟ್ಟ ಆರೋಪಿತರಾದ ಮಣಿಕಂಠ ತಂದೆ ನರೇಂದ್ರ ರಾಠೋಡ ಸಾ// ಗುರಮಿಠಕಲ್ ಮತ್ತು ವಿಜಯ ಪವಾರ ಸಾ//ಉಮಗರ್ಾ ಇವರುಗಳು ಅನಧಿಕೃತವಾಗಿ ಸರಕಾರದ ವಿವಿಧ ಯೋಜನೆ ಅಡಿಯಲ್ಲಿ ಸರಬರಾಜಾಗುವ ಅಕ್ಕಿಗೆ ಹೋಲುವ ಅಕ್ಕಿ ಸಾಗಾಟ ಮಾಡುತ್ತಿದ್ದು ಇವರುಗಳ ವಿರುದ್ಧ ಕಾನೂನು ಕ್ರಮ ಕೈ ಕೊಳ್ಳಲು ವಿನಂತಿ. ಎಂಬ ಫಿಯರ್ಾದು ದೂರಿನ  ಸಾರಾಂಶದ ಮೆರೆಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.