Police Bhavan Kalaburagi

Police Bhavan Kalaburagi

Friday, November 6, 2020

BIDAR DISTRICT DAILY CRIME UPDATE 06-11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 06-11-2020


ಗಾಂಧಿಗಂಜ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 166/2020 ಕಲಂ 317 ಐಪಿಸಿ :-

ದಿನಾಂಕ: 05/11/2020 ರಂದು 1800 ಗಂಟೆಗೆ ಫಿರ್ಯಾದಿ ಶ್ರೀ ಶ್ರೀನಿವಾಸ, ಅಧೀಕ್ಷಕರು, ಸರ್ಕಾರಿ ಬಾಲಕರ ಬಾಲ ಮಂದಿರ ಮೈಲೂರ ಬೀದರ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆನೆಂದರೆ ದಿನಾಂಕ 18/03/2020 ರಂದು ರಾತ್ರಿ 11.30 ಗಂಟೆ ಸುಮಾರಿಗೆ ವಿದ್ಯಾನಗರ ಬೀದರದಲ್ಲಿ ಸುಮಾರ 6 ವರ್ಷದ ಬಾಲಕನ್ನು ಇರುವ ಬಗ್ಗೆ ದೂರವಾಣಿ ಮುಖಾಂತರ ಬಂದ ಕರೆಯನ್ವಯ ಸ್ಥಳಕ್ಕೆ ಹೋಗಿ ಮಗುವನ್ನು ರಕ್ಷಿಸಿ, ಬಾಲಕನನ್ನು ಮುಂದಿನ ಪಾಲನೆ ಮತ್ತು ಪೋಷಣೆಗಾಗಿ ಮಕ್ಕಳ ಸಹಾಯವಾಗಿ 1098ಕ್ಕೆ ಕರೆ ಮಾಡಿ ಬಾಲಕನನ್ನು ಮಕ್ಕಳ ಸಹಾಯವಾಣಿ ಬೀದರ ರವರ ವಶಕೆ ನೀಡಲಾಗಿದೆ. ನಂತರ ಮಗುವಿಗೆ  ಪಾಲನೆ ಪೋಷಣೆ ಕುರಿತು ಬಾಲಕರ ಬಾಲಮಂದಿರಕ್ಕೆ ಒಪ್ಪಿಸಿರುತ್ತಾರೆ. ಮಗು ಹಿಂದಿ ಭಾಷೆ ಮಾತಾಡುತ್ತಿದ್ದು, ಮಗುವಿಗೆ ವಿಚಾರಿಸಿದ್ದಾಗ ತನ್ನ ಹೆಸರು ಮೋಹನ ತಂದೆ ರಾಜೇಶ ಅಂತ ತಿಳಿಸುತ್ತಿದ್ದು, ಮಗುವಿಗೆ ತನ್ನ ವಿಳಾಸದ ಬಗ್ಗೆ ಯಾವುದೇ ಅರಿವು ಇಲ್ಲದಂತೆ ಕಂಡು ಬಂದಿರುತ್ತದೆ. ನಂತರ ಮಗುವಿನ ತಂದೆ-ತಾಯಿ ಪತ್ತೆ ಕುರಿತು ಪ್ರಯತ್ನ ಮಾಡಿದ್ದು ಪತ್ತೆಯಾಗಿರುವುದಿಲ್ಲ. ಕು. ಮೋಹನ ಈತನಿಗೆ ಅವನ ಪಾಲನೆ ಪೋಷಣೆ ತೊರೆಯುವ ಉದ್ದೇಶದಿಂದ ಅವನ ತಂದೆ ರಾಜೇಶ ಹಾಗೂ ಅವನ ತಾಯಿ ಇವರು ಬಿಟ್ಟು ಹೋಗಿದಂತೆ ಕಂಡು ಬಂದಿರುತ್ತದೆ. ಮಗು ಪತ್ತೆಯಾಗಿದ್ದಾಗಿನಿಂದ ಇಲ್ಲಿಯ ವರೆಗೆ ಮಗುವಿನ ತಂದೆ ತಾಯಿಯವರ ಪತ್ತೆ ಕುರಿತು ಪ್ರಯತ್ನಿಸಿ ಪತ್ತೆಯಾಗದೇ ಇದ್ದ ಕಾರಣ ಈಗ ದೂರು ನೀಡುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಜರೂಗಿಸಿ ಎಫ.ಐ.ಆರ್ ದಾಖಲಿಸಲು ವಿನಂತಿ ಇರುತ್ತದೆ ಅಂತ ಕೊಟ್ಟ ಫಿರ್ಯಾದಿ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

Thursday, November 5, 2020

BIDAR DISTRICT DAILY CRIME UPDATE 05--11-2020

 

ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ : 05-11-2020

ಚಿಟಗುಪ್ಪಾ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 153/2020 ಕಲಂ ಮನುಷ್ಯಕಾಣೆ :-

 ದಿನಾಂಕ: 04/11/2020 ರಂದು 1500 ಗಂಟೆಗೆ ಫಿರ್ಯಾದಿ ರೇಷ್ಮಾ ಗಂಡ ಗುಂಡಪ್ಪಾ ಬಾವಿಕಟ್ಟಿ ವಯ: 27 ಸಾ/ ರಾಂಪೂರ ತಾ/ ಚಿಟಗುಪ್ಪಾ ರವರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದರ ಸಾರಾಂಶವೆನೆಂದರೆ ಫಿರ್ಯಾದಿಗೆ ಅಪ್ಪು ವರ್ಷ : 02 ವರ್ಷ, & ಆರ್ಯನ ವಯ: 04 ತಿಂಗಳು ಎಂಬ ಎರಡು ಗಂಡು ಮಕ್ಕಳಿರುತ್ತವೆ. ಫೀರ್ಯಾದಿಯ ಪತಿಯು ಪ್ಲಾಸ್ಟರ ಕೆಲಸ ಮಾಡಿಕೊಂಡಿರುತ್ತಾರೆ.  ಇವರ ಪತಿಗೆ ಸುಮಾರು 2 ವರ್ಷಗಳಿಂದ ಆಗಾಗ ಆರಾಮ ಇಲ್ಲದ ಕಾರಣ   ಅದನ್ನೆ ಮನಸ್ಸಿನಲ್ಲಿಟ್ಟುಕೊಂಡು ಕೋರಗುತ್ತಿದ್ದರು. ಹೀಗಿರುವಾಗ ದಿನಾಂಕ:01/11/2020 ರಂದು ರಾತ್ರಿ  ಇವರ ಪತಿಯು ಕೆಲಸದಿಂದ ಬಂದ ನಂತರ ಇಬ್ಬರೂ ಊಟ ಮಾಡಿ ರಾತ್ರಿ 2200 ಗಂಟೆ ಸುಮಾರಿಗೆ ಮಲಗಿದ್ದು, ಬೆಳಿಗ್ಗೆ 02-03 ಗಂಟೆ ಸುಮಾರಿಗೆ ಇವರ ಚಿಕ್ಕ ಮಗು ಎದ್ದು ಅಳುತ್ತಿದ್ದು ನಾನು ಸಮಾಧಾನ ಪಡಸಿ ಮಲಗಿರುತ್ತೇನೆ. ಬೆಳಿಗ್ಗೆ 05.00 ಗಂಟೆಗೆ ಫಿರ್ಯಾದಿಯು ಎದ್ದು ನೋಡಲು ಇವರ ಪತಿಯು ಹಾಸಿಗೆಯಿಂದ ಎದ್ದು ಹೋಗಿದ್ದು ನೈಸರ್ಗಿಕ ಕ್ರಿಯೆಗೆ ಹೋಗಿರಬೇಕೆಂದು ತಿಳಿದು ಬೆಳಗಾದ ನಂತರ ನಮ್ಮ ಅತ್ತೆ ಕಮಳಾಬಾಗೆ ವಿಚಾರಿಸಲು ಅವರೂ ಸಹ ನೋಡಿಲ್ಲವೆಂದು ತಿಳಿಸಿದರು. ಮಧ್ಯಾನವಾಗಿ ಸಾಯಂಕಾಲವಾದರೂ  ಇವರ ಪತಿಯು ಮನಗೆ ಮರಳಿ ಬರದಿದ್ದಾಗ ನನ್ನ ಗಂಡನಿಗೆ ನಮ್ಮ ಭಾವಂದಿರಾದ ಚಂದ್ರಕಾಂತ ಹಾಗು ಸುರೇಶ ರವರು ನನ್ನ ಗಂಡನಿಗೆ ರಾಮಪೂರ ಹಾಗು ನನ್ನ ಗಂಡ ಕೆಲಸ ಮಾಡುವ ವಳಕಿಂಡಿಗೆಗೆ, ನಾದನಿಯ ಊರಾದ ಹಸರಗುಂಡಗಿಯಲ್ಲಿ ಹುಡಿಕಾಡಿದರೂ ಸಿಕ್ಕಿರುವುದಿಲ್ಲ. ಇವರ ಪತಿ ಗುಂಡಪ್ಪ ರವರು ದಿನಾಂಕ:03/11/2020 ರಂದು ನಸುಕಿನ ಜಾವ 03.00 .ಎಮ್. ಗಂಟೆಯಿಂದ 05.00 .ಎಮ್. ಗಂಟೆ ಅವಧಿಯಲ್ಲಿ ಮನೆಯಲ್ಲಿ ಯಾರಿಗೂ ಹೇಳದೇ ಕೇಳದೇ ಮನೆಯಿಂದ ಹೋದವರು ಮರಳಿ ಬರದೇ ಕಾಣೆಯಾಗಿರುತ್ತಾರೆ. ಹೆಸರು : ಗುಂಡಪ್ಪಾ, ತಂದೆ : ಪ್ರಭು ಭಾವಿಕಟ್ಟಿ, ಲಿಂಗ : ಗಂಡು, ವಯಸ್ಸು : 27 ವರ್ಷ, ಎತ್ತರ : 5’ 2’’, ಚಹರೆ ಪಟ್ಟಿ : ಸಾಧಾರಣ ಮೈಕಟ್ಟು & ಗೋಧಿ ವರ್ಣ, ಧರಿಸಿದ ಬಟ್ಟೆಗಳು : ಕೆಂಪುಬಣ್ಣದ ಟೀ-ಶರ್ಟ ಹಾಗು ಕಪ್ಪು ಪ್ಯಾಂಟ, ಭಾಷೆ : ಕನ್ನಡ, ಹಿಂದಿ ಹಾಗು ಮರಾಠಿ  ಕಾಣೆಯಾದ ನನ್ನ ಗಂಡನ್ನು ಹುಡುಕಾಡಿ ಠಾಣೆಗೆ ಬರಲು ತಡವಾಗಿರುತ್ತದೆ. ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ದೂರಿನ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮೆಹಕರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 11/2020 ಕಲಂ 174 (ಸಿ) ಸಿಆರ್.ಪಿ.ಸಿ. :-

 

ದಿನಾಂಕ: 04-11-2020 ರಂದು 1000 ಗಂಟೆಗೆ ಶ್ರೀ ನಿಖಿಲ್ ತಂದೆ ಬಾಬುರಾವ ಪರಶೆಟ್ಟಿ 20 ವರ್ಷ   ಸಾ: ಶಿವಣಿ ಇವರು ಠಾಣೆಗೆ ಹಾಜರಾಗಿ ಲಿಖಿತ ದೂರು ಸಲ್ಲಿಸಿದರ ಸಾರಾಂಶವೆನೆಂದರೆ, ಇವರು ಇಬ್ಬರು ಸಹೊದರರಿದ್ದು ಇವರ ತಾಯಿ ಸುನೀತಾ ಮತ್ತು  ತಂಗಿ ನಿಕಿತಾ ಇವರು ಫಿರ್ಯಾದಿ ಅಜ್ಜನಾದ ನೀಲಕಂಡ ನಾಗಶಂಕರ ಇವರ ಗ್ರಾಮವಾದ ಕಾಸರ ತೂಗಾಂವ ಗ್ರಾಮದ ಅವರ ಮನೆಯಲ್ಲಿ ವಾಸವಾಗಿರುತ್ತಾರೆ. ಫಿರ್ಯಾದಿ ಮತ್ತು ಇವರ ಅಣ್ಣ ಶಿವಕುಮಾರ ತಂದೆಯ ಜೊತೆಯಲ್ಲಿ ಶಿವಣಿ ಗ್ರಾಮದಲ್ಲಿ ವಾಸವಾಗಿರುತ್ತಾರೆ ಇವರ ತಾಯಿ ಸುನೀತಾ ಇವರು 2015 ನೇ ಸಾಲಿನಲ್ಲಿ  ತಂದೆಗೆ ಬಿಟ್ಟು ಕಾಸರತೂಗಾಂವ ಗ್ರಾಮಕ್ಕೆ ಹೋಗಿ  ಅಜ್ಜನ ಹತ್ತಿರ ಅಲ್ಲಿಯೇ ಉಳಿದಿರುತ್ತಾರೆ ಹೀಗಿರಲು ದಿನಾಂಕ:02-11-2020 ರಂದು 1000 ಗಂಟೆಗೆ ಫಿರ್ಯಾದಿ ತಂದೆ ಬಾಬುರಾವ ಇವರು ಫಿರ್ಯಾದಿಯ ತಾಯಿಯ ಹತ್ತಿರ ಕಾಸರತೂಗಾಂವ ಗ್ರಾಮಕ್ಕೆ ಹೋಗಿ ಬರುತ್ತೇನೆಂದು   ಹೇಳಿ ಕಾಸರತೂಗಾಂವ ಗ್ರಾಮಕ್ಕೆ ಹೋಗಿರುತ್ತಾರೆ.  ಇವರ ತಂಗಿ ನಿಕಿತಾ ಇವಳು ನನಗೆ ಫೋನ ಮಾಡಿ ತಂದೆ ಕಾಸರತೂಗಾಂವ ಗ್ರಾಮಕ್ಕೆ ಬಂದಿರುತ್ತಾರೆ ಅಂತ ತಿಳಿಸಿರುತ್ತಾಳೆ ನಂತರ ಸಾಯಂಕಾಲ 5:00 ಗಂಟೆಗೆ ತಂದೆಯವರು ಮನೆಯಿಂದ ಬಿಟ್ಟಿರುತ್ತಾರೆ ಅಂತ ತಿಳಿಸಿರುತ್ತಾಳೆ ಆದರೆ ಇವರ ತಂದೆ ಶಿವಣಿ ಗ್ರಾಮಕ್ಕೆ ಬಂದಿರುವುದಿಲ್ಲ ಕಾಸರತೂಗಾಂವ ಗ್ರಾಮದ ನಮ್ಮ ತಾಯಿಯ ಮನೆಯ ಕಕಡೆಗೂ ಹೋಗಿರುವುದಿಲ್ಲ ಅಂದಿನಿಂದ ಎಲ್ಲಾ ಕಡೆಗೂ ಹುಡುಕಾಡಿದರೂ  ತಂದೆ ಸಿಕ್ಕಿರುವುದಿಲ್ಲ ನಂತರ ದಿನಾಂಕ:04-11-2020 ರಂದು 0800 ಗಂಟೆಗೆ ಫಿರ್ಯಾದಿ ಮತ್ತು ಸಂಜೀವಕುಮಾರ ಪರಶೆಟ್ಟಿ, ಗಣಪತಿ ಪಾರಶೆಟ್ಟಿ ಅವರೆಲ್ಲರೂ ತಂದೆಗೆ ಹುಡುಕುತ್ತಾ ಕಾಸರತೂಗಾಂವ ಗ್ರಾಮದ ನದಿಯ  ಕಡೆಗೆ ಹೋದಾಗ ನದಿಯಲ್ಲಿ ಮೃತಪಟ್ಟ ಮೃತ ದೇಹ ಇರುತ್ತದೆ. ಇವರ ತಂದೆಯವರು ಜೀವನದಲ್ಲಿ ಜಿಗಪ್ಸೆ ಹೊಂದಿ ಸತ್ತಿರುತ್ತಾರೆ   ಯಾರ ಮೇಲೆ ಯಾವುದೇ ತರಹದ ದೂರು ವಗೈರೆ ಇರುವುದಿಲ್ಲ ಮೃತಪಟ್ಟ ಬಗ್ಗೆ ಸಂಶಯ ಇರುತ್ತದೆ. ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ   ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.                                      

 


Wednesday, November 4, 2020

BIDAR DISTRICT DAILY CRIME UPDATE 04-11-2020

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 04-11-2020

 

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 23/2020, ಕಲಂ. 174(ಸಿ) ಸಿ.ಆರ್.ಪಿ.ಸಿ :-

ದಿನಾಂಕ 03-11-2020 ರಂದು ಫಿರ್ಯಾದಿ ಸೂರ್ಯಕಾಂತ ತಂದೆ ಶ್ರೀಪತರಾವ ಜಗದಾಳೆ ಸಾ: ಮರಖಲ್ ಗ್ರಾಮ ರವರು ತಮ್ಮೂರ ರಾಜಕುಮಾರ ತಂದೆ ಭವರಾವ ಜಗದಾಳೆ ರವರ ಜೊತೆಯಲ್ಲಿ ಮೋಹನಸಿಂಗ್ ಠಾಕೂರ ರವರ ಹೊಲ ಸರ್ವೆ ನಂ. 167 ನೇದರಲ್ಲಿ ಹೋದಾಗ ಹೊಲದಲ್ಲಿನ ಬೊರೆ ಮರದ ಕೆಳಗಡೆ ಅಂದಾಜು 65 ರಿಂದ 70 ವರ್ಷದ ಮದ್ಯದ ವಯಸ್ಸಿನ ಒಬ್ಬ ವ್ಯಕ್ತಿ ಮಲಗಿಕೊಂಡಿದ್ದು, ಫಿರ್ಯಾದಿಯು ಅವನ ಹತ್ತಿರ ಹೋಗಿ ನೋಡಲು ಸದರಿ ವ್ಯಕ್ತಿ ಮೃತಪಟ್ಟಿರುತ್ತಾನೆ, ಅವನ ಮೈಮೇಲೆ ಬಿಳಿ ಮತ್ತು ಚಾಕಲೇಟ್ ಬಣ್ಣದ ಗೇರೆಯುಳ್ಳ ಫೂಲ್ ಶರ್ಟ ಹಾಗು ಕೆಂಪು ಮತ್ತು ನಿಳಿ ಬಣ್ಣದ ಚೌಕಡ ಲುಂಗಿಯಿದ್ದು, ಅವನ ಮೈ ಮೇಲೆ ಮೇಲ್ನೊಟಕ್ಕೆ ಯಾವುದೆ ಗಾಯಗಳು ಕಂಡು ಬಂದಿರುವುದಿಲ್ಲ, ಅವನು ಅಪರಿಚಿತ ವ್ಯಕ್ತಿಯಾಗಿದ್ದು, ಸದರಿ ಅಪರಿಚಿತ ವ್ಯಕ್ತಿ ಮೃತಪಟ್ಟ ಬಗ್ಗೆ ಅವನ ಸಾವಿನಲ್ಲಿ ಸಂಶಯ ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 123/2020, ಕಲಂ. 454, 457, 380 ಐಪಿಸಿ :-

ದಿನಾಂಕ 31-10-2020 ರಂದು 2000 ಗಂಟೆಯಿಂದ ದಿನಾಂಕ 03-11-2020 ರಂದು 0800 ಗಂಟೆಯ ಅವಧಿಯಲ್ಲಿ ಬೀದರ ವೈಷ್ಣವಿ ಕಾಲೋನಿಯಲ್ಲಿರುವ ಫಿರ್ಯಾದಿ ಕಿರಣ ತಂದೆ ಸುರೇಶ ಡೊಂಗ್ರೆ ಸಾ: ವೈಷ್ಣವಿ ಕಾಲೊನಿ ಬೀದರ ರವರ ಮನೆಯ ಬಾಗಿಲಿನ ಕೀಲಿ ಮುರಿದು ಮನೆಯಲ್ಲಿ ಅಲಮಾರಾದಲ್ಲಿನ 1,35,000/- ರೂ ಮೌಲ್ಯದ ಬಂಗಾರದ ಆಭರಣಗಳು ಹಾಗೂ ಬೆಳ್ಳಿಯ ಸಾಮಾನುಗಳು ಹಾಗು ನಗದು ಹಣವನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಬೀದರ ನೂತನ ನಗರ ಪೊಲೀಸ್ ಠಾಣೆ ಅಪರಾಧ ಸಂ. 124/2020, ಕಲಂ. 379 ಐಪಿಸಿ :-

ದಿನಾಂಕ 16-10-2020 ರಂದು 2100 ಗಂಟೆಯಿಂದ 2200 ಗಂಟೆಯ ಅವಧಿಯಲ್ಲಿ ಫಿರ್ಯಾದಿ ಜೈಪಾಲ ರೆಡ್ಡಿ ತಂದೆ ಸಂಜೀವರೆಡ್ಡಿ ಸಾ: ಗಾದಗಿ, ಸದ್ಯ: ಲಾಡಗೇರಿ ಬೀದರ ರವರು ಬೀದರ ಪಾಪನಾಶ ಗೇಟ ಹತ್ತಿರ ನಿಲ್ಲಿಸಿದ ತನ್ನ  ಹೀರೊ ಸ್ಪ್ಲೆಂಡರ ಪ್ಲಸ್ ಮೋಟರ ಸೈಕಲ ನಂ. KA-38/L-9604, ಚಾಸಿಸ್ ನಂ. MBLHA10A10ALCHG28675, ಇಂಜಿನ್ ನಂ. HA10EJCHG17532, ಮಾಡಲ್: 2012, ಬಣ್ಣ: ಕಪ್ಪು ಹಾಗೂ .ಕಿ 25,000/- ರೂ ನೇದನ್ನು ಯಾರೋ ಅಪರಿಚಿತ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 03-11-2020 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.