Police Bhavan Kalaburagi

Police Bhavan Kalaburagi

Wednesday, August 25, 2021

BIDAR DISTRICT DAILY CRIME UPDATE 25-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 25-08-2021

 

ಮನ್ನಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್ ಸಂ. 05/2021, ಕಲಂ. 174 ಸಿ.ಆರ್.ಪಿ.ಸಿ :-

ನರಸಪ್ಪಾ ತಂದೆ ಭೀಮಣ್ಣಾ ಲದ್ದೆಕರ್ ವಯ 20 ವರ್ಷ, ಜಾತಿ: ಎಸ್.ಟಿ ಗೊಂಡ, ಸಾ: ಬರೀದಾಬಾದ ಗ್ರಾಮ, ತಾ: ಜಿ: ಬೀದರ ರವರ ತಂದೆಯವರಾದ ಭೀಮಣ್ಣಾ ಇವರು ತಮ್ಮೂರಿನ ಬಸವರಾಜ ತಂದೆ ಅಪ್ಪರಾವ ಪಾಟೀಲ್ ರವರ ಹೋಲದಲ್ಲಿ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 24-08-2021 ರಂದು ತಂದೆಯವರು ಬಸವರಾಜ ರವರ ಹೊಲಕ್ಕೆ ಹೋಗಿ ಕಬ್ಬಿಗೆ ನೀರು ಬಿಡಲು ಕರೆಂಟ ಚಾಲು ಮಾಡಲು ಹೋದಾಗ ಸ್ಟಾಟರ್ ಡಬ್ಬಿಯ ಕರೆಂಟ ತಂದೆಯವರಿಗೆ ಹತ್ತಿ ಮೃತಪಟಿರುತ್ತಾರೆ, ಸದರಿ ಘಟನೆಯು ಆಕಸ್ಮಿಕವಾಗಿದ್ದು ಯಾರದೇ ಮೇಲೆ ಯಾವುದೆ ಅನುಮಾನ ದೂರು ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಮಂಠಾಳ ಪೊಲೀಸ್ ಠಾಣೆ ಅಪರಾಧ ಸಂ. 77/2021, ಕಲಂ. 379 ಐಪಿಸಿ :-

ಫಿರ್ಯಾದಿ ಬಸೀರ ತಂದೆ ಅಬ್ದುಲಸಾಬ ಮುಲ್ಲಾ ವಯ: 60 ವರ್ಷ, ಜಾತಿ: ಮುಸ್ಲಿಂ, ಸಾ: ಉರ್ಕಿ ಗ್ರಾಮ, ತಾ: ಬಸವಕಲ್ಯಾಣ ರವರ ಕ್ರೂಜರ್ ವಾಹನ ಸಂ. ಕೆಎ-33/ಎಮ್-4375 ನೇದನ್ನು ಫಿರ್ಯಾದಿಯವರ ತಂಗಿಯ ಮಗನಾದ ಸಾಜೀದ ತಂದೆ ಬಾಬು ರಾಜುವಾಲೆ ವಯ: 26 ವರ್ಷ, ಸಾ: ಆಲಗೂಡ ಗ್ರಾಮ ಇತನು ಚಲಾಯಿಸಿಕೊಂಡಿದ್ದು, ಹೀಗಿರುವಾಗ ದಿನಾಂಕ 17-08-2021 ರಂದು 1900 ಗಂಟೆಗೆ ಸಾಜೀದ ಇತನು ಸದರಿ ವಾಹನವನ್ನು ಚಿಕ್ಕಪ್ಪನಾದ ಮೈನೋದ್ದಿನ ರಾಜುವಾಲೆ ರವರ ಮನೆಯ ಎದರುಗಡೆ ಇರುವ ನೀರಿನ ಟ್ಯಾಂಕ ಪಕ್ಕದಲ್ಲಿ ನಿಲ್ಲಿಸಿರುವುದನ್ನು ದಿನಾಂಕ 18-08-2021 ರಂದು 0100 ಗಂಟೆಯಿಂದ 0130 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ನಂತರ ಸದರಿ ವಾಹನವನ್ನು ಎಲ್ಲಾ ಕಡೆಗೆ ಹುಕುಕಾಡಿದರು ಸಹ ಸಿಕ್ಕಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಭಾಲ್ಕಿ ನಗರ ಪೊಲೀಸ್ ಠಾಣೆ ಅಪರಾಧ ಸಂ. 152/2021, ಕಲಂ. 379 ಐಪಿಸಿ :-

ದಿನಾಂಕ 12-08-2021 ರಂದು ಫಿರ್ಯಾದಿ ವೆಂಕಟೇಶಮೂರ್ತಿ.ಜೆ ತಂದೆ ಜವರೆಗೌಡ ಸಾ: ಆರ.ನಗರ ಮೈಸೂರ ಜಿಲ್ಲೆ, ಸದ್ಯ: ತಹಸಿಲ ಕಛೇರಿ ಭಾಲ್ಕಿ ರವರು ತನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ ಮೋಟಾರ್ ಸೈಕಲ್ ನಂ. ಕೆಎ-39/ಕೆ 0862 ನೇದನ್ನು ತೆಗೆದುಕೊಂಡು ಕೆಲಸಕ್ಕೆಂದು ಭಾಲ್ಕಿ ನಗರದಲ್ಲಿ ಹೋಗಿ ತನ್ನ ವಾಹನವನ್ನು ಕುಮಾರ ಬಾರ ಹಿಂದುಗಡೆ ಇರುವ ಒಂದು ಬ್ಯಾಂಗಲ್ ಸ್ಟೋರ್ ಹತ್ತಿರ ನಿಲ್ಲಿಸಿ ಶಾಪಿಂಗ ಮಾಡಲು ಹೋಗಿ ಅಂದಾಜು ಅರ್ಧ ಗಂಟೆಯ ನಂತರ ಬಂದು ನೋಡಲು ಫಿರ್ಯಾದಿಯು ನಿಲ್ಲಿಸಿದ ಜಾಗದಲ್ಲಿ ಫಿರ್ಯಾದಿಯವರ ಸದರಿ ಮೋಟಾರ್ ಸೈಕಲ್ ಇರಲಿಲ್ಲ, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ, ಸದರಿ ಮೋಟಾರ್ ಸೈಕಲನ್ನು ಎಲ್ಲಾ ಕಡೆಗೆ ಹುಡುಕಾಡಿದೂರ ಸಹ ಸಿಕ್ಕಿರುವುದಿಲ್ಲ, ಕಳುವಾದ ಮೋಟಾರ್ ಸೈಕಲ ವಿವರ KA-39/K-0862, Chassis No. MBLHA10EZBHL53562, Engine No. HA10EFBH46942, ಅ.ಕಿ 15,000/- ರೂ. ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 24-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಔರಾದ(ಬಿ) ಪೊಲೀಸ್ ಠಾಣೆ ಅಪರಾಧ ಸಂ. 107/2021, ಕಲಂ. 279, 338 ಐಪಿಸಿ :-

ದಿನಾಂಕ 24-08-2021 ರಂದು ಫಿರ್ಯಾದಿ ರಮೇಶ ತಂದೆ ಠಾವರಾವ ಸಾ: ಖಂಡಿಕೇರಿ ತಾಂಡಾ ಔರಾದ(ಬಿ) ರವರ ಅಣ್ಣನ ಮಗನಾದ ವಿಕ್ರಮ ತಂದೆ ವಿನಾಯಕರಾವ ಚೌಹಾಣ ವಯ: 16 ವರ್ಷ ಇತನು ಮತ್ತು ವಿಜಯ ತಂದೆ ಭೀಮರಾವ ರಾಠೋಡ ಸಾ: ಖಂಡಿಕೇರಿ ತಾಂಡೆ ಇಬ್ಬರು ಔರಾದ(ಬಿ) ಪಟ್ಟಣಕ್ಕೆ ಬಂದು .ಪಿ.ಎಂ.ಸಿ ಕ್ರಾಸ ಹತ್ತಿರ ಬಂದಾಗ ಅಲ್ಲಿ ಒಂದು ಕಾರ್ಯಕ್ರಮದಲ್ಲಿದ್ದ ಹೈಡ್ರಾ ಕ್ರೇನ ನಂ. ಎಂ.ಹೆಚ್-24/ಡಿ-6860 ನೇದರ ಚಾಲಕನಾದ ಆರೋಪಿ ಸೋಮನಾಥ ತಂದೆ ಧನಾಜಿ ಸಾ: ಚಂದ್ರೇಶ್ವರ ಸಾ: ಸಂಗಮ, ತಾ: ದೇವಣಿ, ಜಿ: ಲಾತೂರ ಮಹಾರಾಷ್ಟ್ರ ಇತನು ಅತ್ತ ಇತ್ತ ನೋಡದೇ ನಿಷ್ಕಾಳಜಿತನದಿಂದ ಚಲಾಯಿಸಿ ಹೈಡ್ರಾ ಕ್ರೇನ ಮುಂದೆ ಇದ್ದ ಕೊಂಡಿ ಒಮ್ಮೇಲೆ ವಿಕ್ರಮ ಇತನ ಬಲಗಾಲಿನ ಮೇಲೆ ಬಿದ್ದು ಕಾಲು ಮೂರಿದು ಭಾರಿ ಗುಪ್ತಗಾಯ ಮತ್ತು ರಕ್ತಗಾಯವಾಗಿರುತ್ತದೆ, ಗಾಯಗೊಂಡ ವಿಕ್ರಮ ಇತನಿಗೆ ಚಿಕಿತ್ಸೆ ಕುರಿತು ಔರಾದ(ಬಿ) ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Tuesday, August 24, 2021

BIDAR DISTRICT DAILY CRIME UPDATE 24-08-2021

 ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ 24-08-2021

 

ಬಸವಕಲ್ಯಾಣ ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್ ನಂ. 17/2021, ಕಲಂ. 174 ಸಿ.ಆರ್.ಪಿ.ಸಿ :-

ಫಿರ್ಯಾದಿ ತುಕ್ಕಣ್ಣಾ ತಂದೆ ಸಾಯಿಬಣ್ಣಾ ಕಂಠೆಕರ ವಯ: 75 ವರ್ಷ, ಜಾತಿ:  ಕುರುಬ, ಸಾ: ರಾಜೇಶ್ವರ ರವರ ಮಗನಾದ ರಾಜಕುಮಾರ ಇತನು ಯಾವಾಗಲು ಸರಾಯಿ ಕುಡಿಯುವ ಚಟವುಳ್ಳನಾಗಿದ್ದು, ಸರಾಯಿ ಕುಡಿದಾಗ ಮನೆಯಲ್ಲಿ ಯಾರಿಗೂ ಹೇಳದೇ ಲಾರಿ ಮೇಲೆ ಹೋಗುತ್ತಿದ್ದನು, ಒಂದೊಂದು ವಾರದ ನಂತರ ತಿರುಗಿ ಮನೆಗೆ ಬರುತಿದ್ದ, ಅದರಂತೆ ದಿನಾಂಕ 19-08-2021 ರಂದು ಮಗ ರಾಜಕುಮಾರ ಇವನು ಮನೆಯಿಂದ ಹೋದವನು ತಿರುಗಿ ಮನೆಗೆ ಬಂದಿರುವುದಿಲ್ಲಾ, ಹೀಗಿರಲು ದಿನಾಂಕ 19-08-2021 ರಂದು ರಾಜಕುಮಾರ ಇತನು ಸರಾಯಿ ಕುಡಿದ ಅಮಲಿನಲ್ಲಿ ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ತನ್ನ ಮಗನ ಸಾವಿನಲ್ಲಿ ನನ್ನದು ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಕುಶನೂರ ಪೊಲೀಸ್ ಠಾಣೆ ಅಪರಾಧ ಸಂ. 57/2021, ಕಲಂ. 279, 337, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 22-08-2021 ರಂದು ಫಿರ್ಯಾದಿ ಶೇಖ ಶೆಬ್ಬಿರ ತಂದೆ ರಸೂಲಸಾಬ ಸಾ: ಬೆಡಕುಂದಾ ರವರ ಹೆಂಡತಿಯ ತಮ್ಮಂದಿರಾದ ಚಾಂದ ತಂದೆ ಅಬ್ದುಲಸಾಬ ಮುಲ್ಲಾ ಇವರು ಕರೆ ಮಾಡಿ ನಾವು ತಪಶ್ಯಾಳ ಕ್ರಾಸೀನ ಬಳಿಗೆ ಕುಳಿತ್ತಿದ್ದು ನಮಗೆ ಕುಶನೂರ ಗ್ರಾಮಕ್ಕೆ ಹೋಗಲು ಯಾವುದೇ ವಾಹನ ಇಲ್ಲ ತಿಳಿಸಿದಕ್ಕೆ ಫಿರ್ಯಾದಿಯು ತನ್ನ ತ್ರೀಚಕ್ರ ವಾಹನ ನಂ. ಕೆಎ-38/ವಿ-7835 ನೇದನ್ನು ತೆಗೆದುಕೊಂಡು ಹೋಗಿ ತಪಶ್ಯಾಳ ಕ್ರಾಸ ಹತ್ತಿರ ಅವರಿಬ್ಬರಿಗೆ ನ್ನ ವಾಹನದಲ್ಲಿ ಕೂಡಿಸಿಕೊಂಡು ಮರಳಿ ಠಾಣಾ ಕುಶನೂರ ಗ್ರಾಮಕ್ಕೆ ಬರುತ್ತಿರುವಾಗ ಚಾಂದೂರಿ ಗ್ರಾಮದ ಶಿವಾರದಲ್ಲಿ ತಿರುವು ರಸ್ತೆಯಲ್ಲಿ ಎದುರಿನಿಂದ ಮೋಟಾರ್ ಸೈಕಲ್ ನಂ. ಕೆಎ-38/ವ್ಹಿ-7056 ನೇದರ ಚಾಲಕನಾದ ಆರೋಪಿ ಇಬ್ರಾಹೀಂ ತಂದೆ ರಶೀದಖಾನ ಪಠಾಣ ಸಾ: ಕೋರ್ಯಾಳ ಇತನು ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯವರ ತ್ರಿಚಕ್ರ ವಾಹನಕ್ಕೆ ಡಿಕ್ಕಿ ಮಾಡಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಓಡಿಡಿಕೊಂಡು ಹೋಗಿರುತ್ತಾನೆಮ, ಸದರಿ ಅಪಘಾತದಲ್ಲಿ ಫಿರ್ಯಾದಿಗೆ ಯಾವುದೇ ಗಾಯವಾಗಿರುವುದಿಲ್ಲಾ, ಚಾಂದಪಾಷಾ ಇವನಿಗೆ ಬಲಗಾಲಿನ ಮೋಲಕಾಲಿಗೆ ಭಾರಿ ಗುಪ್ತಗಾಯ, ಆರೀಫ ಪಾಷಾ ಇವನಿಗೆ ಬಲಗಾಲಿನ ಮೋಳಕಾಲಿನ ಕೆಳಭಾಗದಲ್ಲಿ ರಕ್ತಗಾಯವಾಗಿರುತ್ತದೆ, ನಂತರ ಅಲ್ಲಿ ಸೇರಿದ ಜನರು 108 ಅಂಬುಲೇನ್ಸಗೆ ಕರೆ ಮಾಡಿ ಅಂಬುಲೇನ್ಸದಲ್ಲಿ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 23-08-2021 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

 

ಧನ್ನೂರಾ ಪೊಲೀಸ್ ಠಾಣೆ ಅಪರಾಧ ಸಂ. 83/2021, ಕಲಂ. 78(3) ಕೆ.ಪಿ ಕಾಯ್ದೆ :-

ದಿನಾಂಕ 23-08-2021 ರಂದು ಬ್ಯಾಲಹಳ್ಳಿ[ಕೆ] ಗ್ರಾಮದಲ್ಲಿ ಕಣಜಿ [ಕೆ] ಕ್ರಾಸ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಹೇಳಿ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ಆಡಿಸುತ್ತಿದ್ದಾನೆಂದು ವೀರಣ್ಣ ಎಸ್. ದೊಡ್ಡಮನಿ ಸಿಪಿಐ ಭಾಲ್ಕಿ ಗ್ರಾಮಿಣ ವೃತ್ತ ರವರಿಗೆ ಖಚಿತ ಬಾತ್ಮಿ ಬಂದ ಮೆರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಕಟ್ಟಿತುಗಾಂವ ಮಾರ್ಗವಾಗಿ ಬ್ಯಾಲಹಳ್ಳಿ ಕಾರಂಜಾ ಬ್ರೀಜ್ಡ [ಡ್ಯಾಮ] ಎದುರುಗಡೆ ಇರುವ ಹುಮನಾಬಾದ - ಬೀದರ ರಸ್ತೆಯ ಸೇತುವೆ ಮೇಲೆ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಅಲ್ಲಿ ಕಣಜಿ[ಕೆ] ಕ್ರಾಸ ಹತ್ತಿರ ಸಾರ್ವಜನಿಕ ರಸ್ತೆ ಮೇಲೆ ಆರೋಪಿ ಅನೀಲಕುಮಾರ ತಂದೆ ರೇವಣಪ್ಪಾ ಮಾಹಗಾಂವ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಣಜಿ [ಕೆ] ಇತನು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಕೂಗುತ್ತಾ ಜನರಿಂದ ಹಣ ಪಡೆದು ಚೀಟಿ ಬರೆದುಕೊಟ್ಟು ನಸಿಬಿನ ಮಟಕಾ ಜೂಜಾಟ ನಡೆಸುತ್ತಿರುವುದನ್ನು ನೋಡಿ ಖಚಿತ ಪಡಿಸಿಕೊಂಡು ಸದರಿ ಆರೋಪಿತನ ಮೇಲೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿಗೆ ಹಿಡಿದುಕೊಂಡು ವಿಚಾರಣೆ ಮಾಡಲು ಆತನು ತಾನು ಜನರಿಂದ ಅಕ್ರಮವಾಗಿ ಹಣ ಪಡೆದು 01/- ರೂಪಾಯಿಗೆ 90/- ರೂಪಾಯಿ ಕೊಡುತ್ತೆನೆಂದು ಆಸೆ ತೋರಿಸಿ ಜನರಿಗೆ ಮಟಕಾ ಚೀಟಿ ಬರೆದುಕೊಡುತ್ತಿರುವುದಾಗಿ ಒಪ್ಪಿಕೊಂಡಿರುತ್ತಾನೆ, ನಂತರ ಆರೋಪಿಗೆ ಪಂಚರ ಸಮಕ್ಷಮ ಶೋಧನೆ ಮಾಡಿದ್ದು ಆತನ ಹತ್ತಿರ 1830/- ರೂ ನಗದು ಹಣ, ಒಂದು ಬಾಲ ಪೆನ್ನ ಹಾಗು ಮಟಕಾ ನಂಬರ ಬರೆದ 06 ಮಟಕಾ ಚೀಟಿಗಳು ದೊರೆತಿದ್ದು ನೇದವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.