Police Bhavan Kalaburagi

Police Bhavan Kalaburagi

Wednesday, October 19, 2011

GULBARGA DIST REPORTED CRIMES

ಶಹಾಬಾದ ನಗರ ಠಾಣೆ : ಶ್ರೀಮತಿ ಪಾರ್ವತಿ ಗಂಡ ಸಿದ್ದಯ್ಯಾ ಮಠಪತಿ ಸಾ: ಭಂಕೂರ ರವರು, ನಾನು ಗ್ರಾಮ ಪಂಚಾಯತದಲ್ಲಿ ಗ್ರಂಥಾಲಯದ ಮೇಲ್ವಿಚಾರಕಿಯಾಗಿ ಕೆಲಸ ಮಾಡುತ್ತಿದ್ದು ಲಕ್ಷ್ಮಿಕಾಂತ ತಂದೆ ಮಲ್ಕಪ್ಪಾ ಕಂದಕೊಳ ಸಾ: ಭಂಕೂರ ಈತನು ಅವ್ಯಾಚವಾಗಿ ಬೈಯುವದು ಹಾಗೂ ಜೀವದ ಬೇದರಿಕೆ ಹಾಕುವದು ಮಾಡುತ್ತಿದ್ದಾನೆ ಮತ್ತು ನನಗೆ ಅಶ್ಲೀಲ ಪುಸ್ತಕಗಳನ್ನು ಓದಲಿಕ್ಕೆ ಕೊಡು ಅಂತಾ ಕೇಳುತ್ತಿದ್ದು ನನಗೆ ಅಶ್ಲೀಲವಾಗಿ ಬೈಯುವದು ಮಾಡುತ್ತಿದ್ದಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಹಾಬಾದ ನಗರ ಠಾಣೆಯಲ್ಲಿ ಗುನ್ನೆ ಸಂಖ್ಯೆ 158/2011 ಕಲಂ:    504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಘವೇಂದ್ರ ನಗರ ಠಾಣೆ : ಶ್ರೀ ಗೌರಿಶಂಕರ ತಂದೆ ದತ್ತಾತ್ರೇಯ ಮೈಲಾಪುರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಕೈಯಿಂದ ಬರೆದ ದೂರು ಹಾಜರುಪಡಿಸಿದ್ದು, ಅದರ ಸಾರಾಂಶವೇನೆಂದರೆ, ದಿನಾಂಕ 17-10-2011 ರಂದು ಬೆಳೀಗ್ಗೆ 7-15 ಗಂಟೆಗೆ ಅವರ ಹೆಂಡತಿ ಚಿತ್ರಲೇಖಾ ಮೈಲಾಪುರ ಇವರು ಹಾಲು ತರಲು ಶೆಟ್ಟಿ ಕಾಂಪ್ಲೇಕ್ಸಗೆ ಬಂದು ಮರಳಿ ಹೋಗುವಾಗ ಯಾರೋ ಇಬ್ಬರು ಅಪರಿಚಿತ ಮೋಟಾರ ಸೈಕಲ ಸವಾರರು ಅದರಲ್ಲಿ ಒಬ್ಬ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದು ಅವರು ನನ್ನ ಹೆಂಡತಿ ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಮಂಗಳ ಸೂತ್ರ ಕಿತ್ತಿಕೊಂಡು ಹೋಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಗುನ್ನೆ ನಂ 81/11 ಕಲಂ 392 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ಕಮಲಾಪೂರ ಠಾಣೆ : ಶ್ರೀಮತಿ ತೆಂಗೆಮ್ಮಾ ಗಂಡ ಮಲ್ಲಿನಾಥ ಗುತ್ತಿ ಸಾಃಗೋಗಿ(ಕೆ) ತಾಃಜಿಃ ಗುಲಬರ್ಗಾ ರವರು ದಿನಾಂಕ: 17/10/2011 ರಂದು ಬೆಳಿಗ್ಗೆ ನನ್ನ ಗಂಡ ಮಲ್ಲಿನಾಥ ಇವರು ಹೊಲದಲ್ಲಿ ಹಾಕಿರುವ ತೊಗರಿ ಬೆಳೆಗೆಳಿಗೆ ಕ್ರೀಮಿನಾಶಕ ಔಷಧವನ್ನು ಹೊಡೆಯುತ್ತಿದ್ದಾಗ ಔಷಧವು ಗಾಳಿಯ ಮೂಲಕ ಉಸಿರಾಟದೊಂದಿಗೆ ದೇಹದೊಳಗೆ ಹೋಗಿದ್ದು. ನಂತರ ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನನ್ನ ಗಂಡನು ಕೈ ತೊಳೆಯದೇ ಊಟ ಮಾಡಿದ್ದರಿಂದ ಕ್ರೀಮಿನಾಶಕ ಔಷಧ ದೇಹದೊಳಗೆ ಹೋಗಿ ತಲೆ ಸುತ್ತುತ್ತಿದೆ ವಾಂತಿ ಮಾಡುತ್ತಿದ್ದರಿಂದ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ಮಧ್ಯಾಹ್ನ 12-30 ಗಂಟೆಗೆ ತಂದು ಸೇರಿಕೆ ಮಾಡಿರುತ್ತೇವೆ. ಉಪಚಾರದಲ್ಲಿದ್ದ ಮಲ್ಲಿನಾಥ ಈತನು ಉಪಚಾರ ಫಲಕಾರಿಯಾಗದೇ ಇಂದು ದಿನಾಂಕ:18/10/2011 ರಂದು ಬೆಳಿಗ್ಗೆ 6-00 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾನೆ. ಕಾರಣ ಮಾನ್ಯರವರು ಮುಂದಿನ ಕಾನೂನು ಕ್ರಮ ಜರುಗಿಸಬೇಕು. ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಯುಡಿಆರ್ ನಂ. 10/2011 ಕಲಂ 174 ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಅಂಬಿಕಾ ತಂದೆ ಶಾಮರಾಯ ಹಲಗೆ ಸಾ: ಸುಂದರ ನಗರ ಗುಲಬರ್ಗಾ ರವರು, ನನ್ನ ಗಂಡ ಶಾಮರಾಯ ಜಿಲ್ಲಾ ಸರಕಾರಿ ಆಸ್ಪತ್ರೆಯ ಎದುರು ರೋಡಿನ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಮೋ/ಸೈಕಲ್ ನಂಬರ ಕೆಎ 32 ಕ್ಯೂ 3490 ರ ಚಾಲಕ ಪ್ರವೀಣ ತಂದೆ ಅಬ್ರಾಹಮ್ ಈತನು ಜಿ.ಜಿ.,ಹೆಚ್.ಸರ್ಕಲ್ ಕಡೆಯಿಂದ ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ರೋಡ ದಾಟಿ ಹೋಗುತ್ತಿದ್ದ ನನ್ನ ಗಂಡ ಶಾಮರಾಯ ಈತನಿಗೆ ಅಪಘಾತಪಡಿಸಿ ಗಾಯಗೊಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಗುನ್ನೆ ನಂ 132/11 ಕಲಂ: 279 .338 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆಳಂದ ಠಾಣೆ : ಶ್ರೀ ಶಿವರಾಜ ತಂದೆ ಶರಣಪ್ಪ ಬಿರದಾರ ಸಾ: ಮಟಕಿ ರವರು, ದಿನಾಂಕ:17-10-2011 ಅವಧಿ 8.00 ಪಿಎಂದಿಂದ 18/10/2011 8.00ರವರಿಗೆ ಮದ್ಯದ ರಾತ್ರಿ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಶ್ರೀ ಶರಣಬಸೇಶ್ವರ ಕೃಷಿ ಕೇಂದ್ರದ ತೊಗರಿ ಔಷದ ಅಂಗಡಿಯ ಹಿಂದಿನ ಪತ್ರೆಯನ್ನು ಕೊಯ್ದು ಒಳಗೆ ನುಗ್ಗಿ ಟೇಬಲ್ ಡ್ರಾ ಕೀಲಿ ಮುರಿದು ನಗದು ಹಣ 1000=00 ರೂ ಹಾಗೂ ಇಂಪ್ಯಾಕ್ಟ ತೊಗರಿ ಎಣ್ಣೆ ಹಾಗೂ ಪ್ರೋಕ್ಲೆನ್ ತೊಗರಿ ಎಣ್ಣೆ ಅ.ಕಿ 40800=00 ರೂ ಹೀಗೆ ಒಟ್ಟು 41800=00 ರಾತ್ರಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾರಣ ಕಳ್ಳತನ ಮಾಡಿದವರನ್ನು ಪತ್ತೆ ಹಚ್ಚಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಗುನ್ನೆ ನಂ. 243/2011 ಕಲಂ 457.380 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

No comments: