Police Bhavan Kalaburagi

Police Bhavan Kalaburagi

Wednesday, October 19, 2011

GULBARGA DIST REPORTED CRIMES

ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ಮಾರುತಿ ಮೇತ್ರಿ ಸಾಃ ಮಹಾರಾಜವಾಡಿ, ತಾಃ ಔರಾದ, ಹಾ.ವ: ಕಾವೇರಿ ನಗರ ಗುಲಬರ್ಗಾ ರವರು, ನಾನು ಮತ್ತು ನರಸಿಂಗ ಡಾವರಗಾಂವೆ ಪಾನಿಪೂರಿ ವ್ಯಾಪಾರ ಮಾಡಿಕೊಂಡು ದಿನಾಂಕ 18-10-2011 ರಂದು ರಾತ್ರಿ 11-00 ಸುಮಾರಿಗೆ ಗಂಜ ರೋಡಿಗೆ ಇರುವ ಗಾಂಧಿ ನಗರ ಕ್ರಾಸ ಹತ್ತಿರ ಇರುವ ಬೊರವೆಲ್ ದಲ್ಲಿ ತಮ್ಮ ಭಾಂಡೆಗಳನ್ನು ತೊಳೆಯುತ್ತಿದ್ದಾಗ ಟಾಟಾ ಸುಮೊ ನಂ. ಕೆ.ಎ 32 ಎಮ್ 3506 ನೇದ್ದರ ಚಾಲಕನು ತನ್ನ ಟಾಟಾ ಸುಮೊವನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಬೊರವೆಲ್ ಹತ್ತಿರ ಭಾಂಡೆ ತೊಳೆಯುತ್ತಿದ್ದ ನರಸಿಂಗ ಇತನಿಗೆ ಅಪಘಾತಪಡಿಸಿ ನಂತರ ಬೊರವೆಲ್ ಗೆ ಅಪಘಾತಪಡಿಸಿ ಹಾನಿಗೊಳಿಸಿ ತನ್ನ ಟಾಟಾ ಸುಮೊ ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಅಪಘಾತದಿಂದ ನರಸಿಂಗ ಇತನಿಗೆ ಗುಪ್ತಗಾಯವಾಗಿದ್ದು ಇರುತ್ತದೆ. ಮತ್ತು ಬೋರವೆಲ್ ಹಾನಿ ಆಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಗುನ್ನೆ 64/2011 ಕಲಂ 279, 337, 427 ಐಪಿಸಿ & 187 ಐ,ಎಮ,ವಿ ಆಕ್ಟ ನೇದ್ದರಲ್ಲಿ ಪ್ರಕರಣ ದಾಖಲಾಗಿದೆ.

ನಿಂಬರ್ಗಾ ಠಾಣೆ :ಶ್ರೀಮತಿ ಮಂದಾಕಿನಿ ಗಂಡ ನಿಜಲಿಂಗಪ್ಪ ಚೌಲೆ ಸಾ|| ಭೂಸನೂರ ಗ್ರಾಮ ರವರು, ನಾವು ನಮ್ಮ ಹೊಲ ಸರ್ವೆ ನಂ. 307 , 4 ಎಕರೆ ನೇದ್ದರಲ್ಲಿ ಅದರಲ್ಲಿ ಕಬ್ಬು ಮತ್ತು ತೊಗರಿ ಬೇಳೆ ಹಾಕಿದ್ದು ತೊಗರಿ ಬೆಳೆಯಲ್ಲಿ ಸದಿ ತೆಗೆಯಲು ಹೋದಾಗ ನಮ್ಮ ಮಾವನಾದ ಶಿವಶರಣಪ್ಪ ಚೌಲ ಇವರು ನಮ್ಮ ಹೊಲದ ಬಾಂದಾರಿಯ ಹುಲ್ಲು ಕೊಯ್ಯುವಾಗ ನಮ್ಮ ಹೊಲದ ಬಾಜು ಹೊಲದವನಾದ ನಾಗರಾಜ ತಂದೆ ಸಿದ್ದಣ್ಣ ಗವಿ , ಶರಣಮ್ಮ ತಂದೆ ಸಿದ್ದಣ ಗವಿ ಮತ್ತು ಬಸಮ್ಮಾ ಗಂಡ ಸಿದ್ದಣ್ಣಾ ಗವಿ ಇವರು ಕೂಡಿಕೊಂಡು ಬಂದು ಇದು ನಮ್ಮ ಹೊಲದ ಬಾಂದಾರಿ ಇದೆ ಅಂತ ನಮ್ಮ ಸಂಗಡ ವಿನಾಕಾರಣ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ ಮಾಡಿ ಗಾಯಪಡಿಸಿದ್ದಾರೆ. ಮತ್ತು ನಾಗರಾಜ ಈತನು ಮಾನ ಭಂಗ ಮಾಡುವ ಉದ್ದೇಶದಿಂದ ಕೈ ಹಿಡಿದು ಜಗ್ಗಾಡಿ, ಎಡಗೈ ನಡುವಿನ ಕೈ ಬೆರಳಿಗೆ ಕಚ್ಚಿ ರಕ್ತಗಾಯಪಡಿಸಿತ್ತಾನೆ. ಕಾರಣ ಸದರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಗುನ್ನೆ ನಂ. 115/2011, ಕಲಂ. 323, 324, 354, 504, 34 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಕೊಳ್ಳಲಾಗಿದೆ.

No comments: