Police Bhavan Kalaburagi

Police Bhavan Kalaburagi

Thursday, January 19, 2012

GULBARGA DIST REPORTED CRIME



ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:
ಶ್ರೀ ರಾಜಶೇಖರ ತಂದೆ ಧೂಳಪ್ಪ ಗುಡ್ಡಾ ಸಾಬಿದನೂರ ಹಾವಪ್ಲಾಟ ನಂ:75 ಕರುಣೇಶ್ವರ ನಗರ ಗುಲಬರ್ಗಾ ರವರು ನನ್ನ ಮನೆಯ ಹತ್ತಿರದಲ್ಲಿರುವ ನಾಗಪ್ಪ ತಂದೆ ಶಿವಶರಣಪ್ಪ ಹಯ್ಯಾಳ ಇವರ ಕಾಂಪ್ಲೇಕ್ಸದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿರುತ್ತೆನೆ. ಮುಂಜಾನೆ 11 ಗಂಟೆಗೆ ಮನೆಗೆ ಕೀಲಿ ಹಾಕಿಕೊಂಡು ರಾಮ ಮಂದಿರ ಕಡೆಗೆ ಕಿರಾಣಿ ಸಾಮಾನು ತರಲು ಹೋಗಿ ಮರಳಿ ನನ್ನ ಕಿರಾಣಿ ದುಕಾನಕ್ಕೆ ಬಂದು ನನ್ನ ಹೆಂಡತಿಯಿಂದ ಮನೆಯ ಕೀಲಿ ಕೈ ತೆಗೆದುಕೊಂಡು ಮನೆಗೆ ಬಂದಾಗ ಮನೆಯ ಬಾಗಿಲಿಗೆ ಹಾಕಿದ ಕೀಲಿ ಕೊಂಡಿ ಮುರಿದು ಬಾಗಿಲು ಖುಲ್ಲಾ ಇದ್ದು ಗಾಬರಿಗೊಂಡು ನೋಡಲಾಗಿ ಬೆಡ್ ರೂಮನಲ್ಲಿ ಎಲ್ಲಾ ಸಾಮಾನುಗಳು ಚೆಲ್ಲಾ ಪಿಲ್ಲಿಯಾಗಿರುತ್ತವೆ. ಲಾಕರದಲ್ಲಿಟ್ಟ ಬಂಗಾರದ ಆಭರಣಗಳು ಇರಲಿಲ್ಲಾ. ನನ್ನ ಹೆಂಡತಿಗೆ ತಿಳಿಸಿದ್ದರಿಂದ ಅವಳು ಸಹ ಅಂಗಡಿಯಿಂದ ಬಂದು ಇಬ್ಬರು ನೋಡಲಾಗಿ ಯಾರೋ ಕಳ್ಳರು ಬಂಗಾರದ ಆಭರಣಗಳು 14 ತೊಲೆ, ಬೆಳ್ಳಿಯ ಆಭರಣಗಳು 6 ತೊಲೆ, ಮತ್ತು ನಗದು ಹಣ 5000/- ರೂ ಹೀಗೆ ಒಟ್ಟು 3,19,700/- ರೂ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2012 ಕಲಂ. 454, 380 ಐಪಿಸಿ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: