Police Bhavan Kalaburagi

Police Bhavan Kalaburagi

Sunday, March 11, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:
ಶ್ರೀ ಚನ್ನಬಸಪ್ಪ ತಂದೆ ಶರಣಪ್ಪ ದುಕಾನ ಸಾಹಂದ್ರಕಿ ರವರು ನನಗೆ ಹಿರಿಯರ ಆಸ್ತಿ ಸರ್ವೆ ನಂ-451 ನೇದ್ದರಲ್ಲಿ 2 ಎಕರೆ 25 ಗುಂಟೆ ಜಮಿನು ನನ್ನ ಪಾಲಿಗೆ ಬಂದಿದ್ದು, 4 ವರ್ಷಗಳ ಹಿಂದೆ 1 ಎಕರೆ ಮಾರಾಟ ಮಾಡಿ 1 ಎಕರೆ 25 ಗುಂಟೆ ಜಮೀನು ಉಳಿಸಿಕೊಂಡಿರುತ್ತೆನೆ. ಮೊಮ್ಮಗನಾದ ಶೇಖಪ್ಪ ತಂದೆ ಶಿವಣ್ಣ ದುಕಾನ ಇತನು ನೀನಗೆ ಕೇವಲ ಹೆಣ್ಣು ಮಕ್ಕಳ ಸಂತಾನ ಇದ್ದು ನನಗೆ 1 ಎಕರೆ ಹೊಲ ಕೊಡು ಅಂತಾ ಕೇಳುತ್ತಾ ಬಂದಿದ್ದು ಇದೆ ವಿಷಯದಲ್ಲಿ ನನ್ನ ಮೇಲೆ ವೈಮಸ್ಸು ಇಟ್ಟುಕೊಂಡಿದ್ದರಿಂದ ಊರ ಹಿರಿಯರು ಇದರ ಬಗ್ಗೆ ಪಂಚಾಯತ ಮಾಡಿರುತ್ತಾರೆ. ದಿನಾಂಕ: 10-3-12 ರಂದು ಮದ್ಯಾಹ್ನ ಹೊಲದಲ್ಲಿ ಗಳ್ಯಾ ಹೊಡೆದು ಮರಳಿ ಮನೆಗೆ ಬರುತ್ತಿರುವಾಗ ಶ್ರೀನಿವಾಸ ಕುಲ್ಕರ್ಣಿ ರವರ ಹೊಲದ ಪಕ್ಕದಲ್ಲಿ ನಾನು ಬರುವದು ನನಗೆ ಕಾಯುತ್ತಾ ಶೇಖಪ್ಪ ದುಕಾನ ಇವನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಎಡ ಹಣೆಯ ಮೇಲೆ ಬಲವಾಗಿ ಹೊಡೆದು ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: ನಂ 54/2012 ಕಲಂ 341, 504, 506,307 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ಶ್ರೀಮತಿ ನಾಗಮ್ಮಾ ಗಂಡ ಕಲ್ಯಾಣಿ ಬನಹಟ್ಟಿ ಸಾ: ಕಣ್ಣಿ ಗ್ರಾಮ ತಾ:ಜಿ: ಗುಲಬರ್ಗಾ ಸಧ್ಯ ಅಂಬೇಡ್ಕರ ನಗರ ಶರಣಸಿರಸಗಿ ಗ್ರಾಮ ರವರು ದಿನಾಂಕ:06-03-2012 ರಂದು ರಾತ್ರಿ 9-30 ಗಂಟೆ ಸುಮಾರಿಗೆ ಶೈಲೇಶ ತಂದೆ ಸುರೇಶ ಕಾಂಬಳೆ ಸಾ: ಘಾಟಗೇ ಲೇಔಟ್ ಗುಲಬರ್ಗಾ, ಪಿಂಟೂ @ ವೆಂಕಟೇಶ ತಂದೆ ಹಣಮಂತರಾಯ ಭಾವಿಕಟ್ಟಿ ಸಾ: ಹಳೆ ಜೇವರ್ಗಿ ರೋಡ ಸಂಪಗಿ ನಗರ ಗುಲಬರ್ಗಾ ಇವರು ಬಜಾಜ ಪಲ್ಸರ ಕೆಎ 32 ಇಎ 3193 ನೇದ್ದರ ನನ್ನ ಮನೆ ಮುಂದೆ ಬಂದು ನಿನ್ನ ಗಂಡ ಕಲ್ಯಾಣಿ ಎಲ್ಲಿದ್ದಾನೆ ನಮಗೆ ಕೊಡಬೇಕಾದ 2000/- ರೂ. ಕೊಡುತ್ತಿಲ್ಲಾ ಅಂತಾ ಕೇಳಿದನು, ಅದಕ್ಕೆ ನಾನು ನನ್ನ ಗಂಡ ಬಾಂಬೆಗೆ ಹೋಗಿದ್ದಾನೆ ಯುಗಾದಿಗೆ ವಾಪಸ್ಸು ಬರುತ್ತಾನೆ ಅವರು ಬಂದು ನಂತರ ಕೊಡುತ್ತಾರೆ ಅಂದಿದ್ದಕ್ಕೆ ನನಗೆ ಮತ್ತು ನನ್ನ ತಮ್ಮ ಅನಿಲ ಇಬ್ಬರಿಗೂ ಅವಾಚ್ಯವಾಗಿ ಬೈದು ತಲೆಯ ಕೂದಲು ಹಿಡಿದು ಜಗ್ಗಾಡಿ ಮಾನ ಭಂಗ ಉದ್ದೇಶದಿಂದ ಕೈ ಹಿಡಿದು ಜಗ್ಗಿ, ಕೈಯಿಂದ ಹೊಡೆ ಬಡಿ ಮಾಡಿ ಜೀವ ಭಯ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 80/2012 ಕಲಂ 504, 341,323, 354, 506 ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: