Police Bhavan Kalaburagi

Police Bhavan Kalaburagi

Saturday, April 21, 2012

GULBARGA DIST REPORTED CRIMES

ಹಲ್ಲೆ ಪ್ರಕರಣ:
ರಾಘವೇಂದ್ರ ನಗರ ಪೊಲೀಸ್ ಠಾಣೆ
:ಶ್ರೀ ಚಂದ್ರಕಾಂತ ತಂದೆ ಮಹಾದೇವಪ್ಪ ಜಂಬಗಿ ಸಾ|| ವಿಜಯ ನಗರ ಕಾಲೋನಿ ಬ್ರಹ್ಮಪೂರ ಗುಲಬರ್ಗಾರವರು ನಮ್ಮ ಮನೆಯ ಮನೆಯ ಪಕ್ಕದಲ್ಲಿ ಅಂಬಾರಾಯ ತಂದೆ ಶಾಂತಪ್ಪ ಹಡಗಿಲ್ ಈತನ ಮನೆಯಿದ್ದು, ಗಲ್ಲಿಯ ಜಾಗೆಯ ಸಂಬಂಧ ನಮಗೆ ಮತ್ತು ಅಂಬಾರಾಯನ ಜೊತೆಗೆ ಕೆಲವು ವರ್ಷಗಳಿಂದ ಜಗಳ ನಡೆಯುತ್ತಾ ಬಂದಿದ್ದು ಇರುತ್ತದೆ. ದಿನಾಂಕ 17-04-2012 ರಂದು ರಾತ್ರಿ 9-30 ಗಂಟೆಯ ಸುಮಾರಿಗೆ ನನ್ನ ತಮ್ಮ, ಸಂಜು, ಶಿವಶರಣಪ್ಪ ಇವರೊಂದಿಗೆ ಮನೆಯ ಹತ್ತಿರ ಮಾತಾಡುತ್ತಾ ನಿಂತಾಗ,ಅಂಬಾರಾಯ ಈತನು ಕೈಯಲ್ಲಿ ಒಂದು ಕಬ್ಬಿಣದ ರಾಡ ಹಿಡಿದುಕೊಂಡು ಬಂದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:27/12 ಕಲಂ 341, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:

ಶ್ರೀ ಯಲ್ಲಪ್ಪಗೌಡ ತಂದೆ ಶೇಖರಗೌಡ  ಸಾ:ಬೇಂದ್ರೆ ನಗರ ಹೊಸ್ ಜೇವರ್ಗಿ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 20-04-12 ರಂದು ರಾಷ್ಟ್ರಪತಿ ಸರ್ಕಲ್ ಹತ್ತಿರವಿರುವ ಎಸ್,ಬಿ,ಹೆಚ್ ಬ್ಯಾಂಕ ಎ.ಟಿ.ಎಮ್ ದಿಂದ ಹಣ ತರಲು  ಬಸ್ಸ ಡಿಪೋ ನಂಬರ ಒಂದರಿಂದ ಹತ್ತಿರ ನಡೆದುಕೊಂಡು  ಬರುವಾಗ ಪಟೇಲ ಸರ್ಕಲ ಕಡೆಯಿಂದ ಒಬ್ಬ  ಮೋಟಾರ ಸೈಕಲ್  ನಂ: ಕೆಎ 32 ಎಲ್-4741 ರ ಸವಾರ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಭಾರಿಗಾಯ ಮತ್ತು ಗುಪ್ತಗಾಯಗೊಳಿಸಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2012  ಕಲಂ: 279 ,338 ಐ.ಪಿ.ಸಿ ಸಂ 187 ಐ,ಎಮ್,ವಿ,ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: