ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿ: 25.07.2012 ರಂದು ರಾತ್ರಿ 2-30 ಗಂಟೆಯ ಸುಮಾರಿಗೆ ಕೆಎ/25-ಎ-5957 ನೇದ್ದರ ಟಾಟಾ
ಸುಮೊ ಚಾಲಕ ನಿಂಗಯ್ಯ ಇತನು ಹುಮನಾಬಾದ ರಿಂಗರೋಡ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ
ಹೊರಟಿದ್ದು, ಸೇಡಂ ರಿಂಗ ರೋಡ ಕಡೆಯಿಂದ ಕೆಎ-25 ಬಿ-1255 ನೇದ್ದರ ಲಾರಿ ಚಾಲಕ ಅಲ್ತಾಪ್ ಇತನು
ಅತಿವೇಗ ಮತ್ತು ಅಲಕ್ಷತನದಿಂದ ನಡೆಸುತ್ತಾ ಬಂದು ಲಾರಿ ಚಾಲಕ ಬಲಭಾಗಕ್ಕೆ ಹೊರಳಿಸಿದ್ದರಿಂದ ಎರಡು
ವಾಹನಗಳ ಚಾಲಕರು ತಮ್ಮ ವಾಹನಗಳನ್ನು ನಿರ್ಲಕ್ಷತನದಿಂದ ಚಲಾಯಿಸಿದ್ದರಿಂದ ಮತ್ತು ಇಬ್ಬರು ವಾಹನ ಚಾಲಕರು ತಮ್ಮ ತಮ್ಮ ಸೈಡಿಗೆ ಡಿಗೆ ಹೋಗದೇ ಇದುದ್ದರಿಂದ
ಒಂದಕ್ಕೊಂದ್ದು ಡಿಕ್ಕಿ ಹೊಡೆದಿದ್ದು
ಡಿಕ್ಕಿ ಹೊಡೆದ ರಭಸಕ್ಕೆ ಬೆಂಕಿ ಉಂಟಾಗಿ ಎರಡು ವಾಹನಗಳು ಸುಟ್ಟಿದ್ದು ಅಲ್ಲದೆ ಲಾರಿಯಲ್ಲಿ
ಸಾಗಿಸುತ್ತಿದ್ದ ಎಮ್ಮೆಗಳಲ್ಲಿ 3 ಎಮ್ಮೆಗಳು ಸ್ಥಳದಲ್ಲಿ ಸತ್ತಿದ್ದು. ಮತ್ತು 3 ಜನರಿಗೆ ಭಾರಿ
ಸುಟ್ಟಗಾಯಗಳಾಗಿರುತ್ತವೆ, ಅಂತಾ ಸಮತೋಷಕುಮಾರು ತಂದೆ ಬಸವಣಪ್ಪಾ ಗುಂಡಪ್ಪನವರ ಸಾ|| ಅಯ್ಯರವಾಡಿ
ಅಂಭಭವಾನಿ ಗುಡಿ ಹತ್ತಿರ ಬಂಬೂ ಬಜಾರ ಗುಲರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ
ಗುನ್ನೆ ನಂ:246/2012 ಕಲಂ 279, 337, 338, 429 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
No comments:
Post a Comment