Police Bhavan Kalaburagi

Police Bhavan Kalaburagi

Wednesday, February 20, 2013

GULBARGA DISTRICT REPORTED CRIMES


ವಾರಸುದಾರರಿಲ್ಲದ ಮೂರು ಮೋಟಾರ ಸೈಕಲಗಳು ಜಪ್ತಿ:
ನಿಂಬರ್ಗಾ ಪೊಲೀಸ್ ಠಾಣೆ:ದಿನಾಂಕ 19/02/2013 ರಂದು ಸಾಯಂಕಾಲ ಶ್ರೀ ಆರ್. ರವೀಂದ್ರನಾಥ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ ರವರು ಮತ್ತು ಸಿಬ್ಬಂಧಿಯವರಾದ ಲಕ್ಷ್ಮಣ, ಭೀಮರಾಯ ಪಾಟೀಲ,ಭೀಮಾಶಂಕರ ರವರೊಂದಿಗೆ ಹಳ್ಳಿಗಳ ಭೇಟ್ಟಿ ಕುರಿತು ಭೂಸನೂರ ಕಡೆಗೆ ಹೊರಟಾಗ ಭೂಸನೂರ ಕೆನಾಲ ಬ್ರಿಡ್ಜ ಹತ್ತಿರ ಮೂರು ಮೋಟಾರ ಸೈಕಲಗಳು ನಿಂತಿರುವದು ಕಂಡು ನೋಡಲು, ಯಾರೂ ವಾಹನದ ಮಾಲಿಕರು ಇರದೆ ಇರುವದನ್ನು ಕಂಡು ಹೋಗಿ ಬರುವ ಜನರಿಗೆ ವಿಚಾರಿಸಲು ಅವರು ಸುಮಾರು 2-3 ದಿವಸಗಳಿಂದ ಈ ಮೂರು  ವಾಹನಗಳು ಇಲ್ಲೆ ಇವೆ. ಇವುಗಳು ಯಾರಿಗೆ ಸಂಭಂಧಪಟ್ಟಿರುವವು ಅಂತ ಗೊತ್ತಿಲ್ಲ ಅಂತಾ ತಿಳಿಸಿದ್ದರಿಂದ ಮೂರು ಮೋಟಾರ ಸೈಕಲಗಳಾದ ಒಂದು ಹಿರೋ ಹೊಂಡಾ ಪ್ಯಾಶನ ಪ್ಲಸ್ ಕಪ್ಪು ಕಲರ್ ನಂ: ಎಮ.ಎಚ್-25/ಎಸ್-7047, ಚೆಸ್ಸಿ ನಂ: MBLHA10EL99G00236, ಇಂಜನ್ ನಂ: No. HA10EB99F28058  ಇರುತ್ತದೆ. ಯಮಹಾ ಮೋಟಾರ ಸೈಕಲ್ ಕಪ್ಪು ಕಲರ್ ನಂ: ಕೆಎ-32 ಎಕ್ಸ್-4807 ಚೆಸ್ಸಿನ ನಂ: No.ME154B019A2005043, ಇಂಜನ್ ನಂ:54B1005014 ಇರುತ್ತದೆ. ಮತ್ತು ಒಂದು ಹಿರೋ ಹೊಂಡಾ ಸ್ಪಲೇಂಡರ್ ಮೋಟಾರ ಸೈಕಲ್ ಕಪ್ಪು ಬಣ್ಣದ್ದು  ನಂಬರ ಇರುವದಿಲ್ಲ ಚೆಸ್ಸಿ ನಂ: MBLHA10EYAHF01831,ಇಂಜನ ನಂ:HA10EFAHF05369 ಇರುತ್ತದೆ. ಅವುಗಳ ಅಂದಾಜ ಕಿಮ್ಮತ್ತು  55,000/- ರೂಪಾಯಿಗಳದ್ದು  ಯಾರೂ ವಾರಸದಾರರು ಇಲ್ಲದ ಪ್ರಯುಕ್ತ ವಶಕ್ಕೆ ತೆಗೆದುಕೊಂಡು ಪಿ.ಎಸ.ಐ ರವರು ಠಾಣೆ ಗುನ್ನೆ ನಂ: 17/2013 ಕಲಂ 41(ಡಿ) 102 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರೇವಣಸಿದ್ದಪ್ಪಾ ತಂದೆ ಹಣಮಂತ ಕೊಚಟ್ಟಿ ವ:18 ಉ:ವಿದ್ಯಾರ್ಥಿ ಸಾ:ಕೊಳಸಾಪೈಲ ಶಹಾಬಾದ ರವರು ನಾನು ಮತ್ತು ಮತ್ತು ತಾಲುಶ್ರೀಕಾಂತ ಕೂಡಿ ಕೋಳಸಾ ಫೈಲದ ಬಾಬು ಜಗಜೀವನರಾಮ ಪಾರ್ಕದಲ್ಲಿ ದಿನಾಂಕ:19/02/2013 ರಂದು 3.30 ಪಿಎಂ ಸುಮಾರಿಗೆ ಮಾತನಾಡುತ್ತಾ ಕುಳಿತಿದ್ದಾಗ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ಇತನು ಬಂದು ನಮ್ಮ ತಾಯಿಯ ಜೊತೆ ಜಗಳ ತೆಗೆದಿದ್ದಿಯಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಮತ್ತು ಬ್ಲೇಡದಿಂದ ಹೊಡೆದು ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ, 323, 324, 504 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರಾಘವೇಂದ್ರ ತಂದೆ ವೆಂಕಪ್ಪಾ ಮೇಘಪಾಲ ವ:18  ಉ:ಕೂಲಿ ಕೆಲಸ ಸಾ:ಕೊಳಸಾಪೈಲ ಶಹಾಬಾದ ರವರು ನಾನು ದಿನಾಂಕ:19/02/2013 ರಂದು ಮಧ್ಯಾಹ್ನ 3.30 ಗಂಟೆ ಸುಮಾರಿಗೆ ಬಾಬು ಜಗಜೀವನರಾಮ ಪಾರ್ಕ ಕೋಳಸಾಫೈಲ ಹತ್ತಿರ ಹೋಗುತ್ತಿರುವಾಗ ರೇವಣಸಿದ್ದಪ್ಪ ತಂದೆ ಹಣಮಂತ,ಶ್ರೀಕಾಂತ ತಂದೆ ಭೀಮರಾಯ ಸಾಂಬಾ ರವರು ಕೂಡಿಕೊಂಡು ಬಂದು ರೇವಣಸಿದ್ದನು ಇತನು ನನಗೆ ನಿಮ್ಮ ತಾಯಿ ಅವಾಚ್ಯವಾಗಿ ಬೈದಿರುತ್ತಾಳೆ  ಅಂತಾ ಕೈ ಮುಷ್ಠಿಮಾಡಿ ಮೂಗಿಗೆ ಹೊಡೆದನು ಮತ್ತು ಶ್ರೀಕಾಂತನು ಕೂಡಾ ಅವಾಚ್ಯ ಶಬ್ದಗಳಿಂದ ಕೈಯಿಂದ ಬಲಮಗ್ಗಲಿಗೆ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ, 323, 32,4 504, ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: