Police Bhavan Kalaburagi

Police Bhavan Kalaburagi

Sunday, June 11, 2017

Yadgir District Reported Crimes


                                                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 192/2017 ಕಲಂ 279. 337 304(ಎ) ಐಪಿಸಿ  ;- ದಿನಾಂಕ 09/06/2017 ರಂದು ಮದ್ಯಾಹ್ನ 14-15 ಗಂಟೆಗೆ  ಫಿರ್ಯಾದಿ ಶ್ರೀ ಮಡಿವಾಳಪ್ಪ ತಂದೆ ಬಸನಗೌಡ ಮಲ್ಲೇದ ವಯ 50 ವರ್ಷ ಜಾತಿ ಲಿಂಗಾಯತ ರೆಡ್ಡಿ ಉಃ ಒಕ್ಕಲುತನ ಸಾಃ ಬಿಂಜಲಬಾವಿ ತಾಃ ಸಿಂದಗಿ ಜಿಃ ವಿಜಯಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ, ಇಂದು ದಿನಾಂಕ 09/06/2017 ರಂದು ಮುಂಜಾನೆ 06-30 ಗಂಟೆಗೆ ಬಿಂಜಲಬಾವಿ ಗ್ರಾಮದಿಂದ ಫಿರ್ಯಾದಿ ಮತ್ತು ಫಿರ್ಯಾದಿಯ ಹೆಂಡತಿ ಮೃತ ಲಕ್ಷ್ಮೀಬಾಯಿ ಹಾಗೂ ದೂರದ ಸಂಬಂಧಿಯಾದ ತಮ್ಮೂರ ಬಸನಗೌಡ ತಂದೆ ಮಡಿವಾಳಪ್ಪ ಚೌದ್ರಿ ರವರೆಲ್ಲರೂ ಕೂಡಿ ಶಹಾಪೂರ ತಾಲೂಕಿನ ದೋರನಳ್ಳಿ ಗ್ರಾಮದ ಸಿಮಿ ಮರೇಮ್ಮ ದೇವಸ್ಥಾನಕ್ಕೆ ದೇವರ ದರ್ಶನಕ್ಕೆಂದು ಮೊಟರ ಸೈಕಲ್ ಮೇಲೆ ತಳ್ಳಳ್ಳಿ ಗ್ರಾಮಕ್ಕೆ ಬಂದು ಫಿರ್ಯಾದಿಗೆ ಪರಿಚಯವಿರುವ ಶಾಂತಪ್ಪ ದೋರಿ ಈತನಿಗೆ ಭೇಟಿಯಾಗಿ ದೋರನಳ್ಳಿ ಗ್ರಾಮಕ್ಕೆ ಸಿಮಿ ಮರೆಮ್ಮ ದೇವರ ದರ್ಶನಕ್ಕೆ ಹೊಗೋಣ ಅಂತ ಹೇಳಿ ಕರೆದುಕೊಂಡು  ಆತನ ಮೋಟರ ಸೈಕಲ್ ನಂಬರ ಕೆಎ-33-ಆರ್-7668 ನೇದ್ದರ ಮೇಲೆ ಫಿರ್ಯಾದಿಯು ತನ್ನ ಹೆಂಡತಿಯನ್ನು ಕೂಡಿಸಿದ್ದು, ಮತ್ತು ಫಿರ್ಯಾದಿಯು, ಬಸನಗೌಡ ಈತನು ಚಲಾಯಿಸುತಿದ್ದ ಮೋಟರ ಸೈಕಲದ ಹಿಂದೆ ಕುಳಿತುಕೊಂಡು ಎಲ್ಲರೂ ಕೂಡಿ ದೇವರ ದರ್ಶನಕ್ಕೆ ಬರುತಿದ್ದಾಗ ಶಹಾಪೂರ-ಯಾದಗಿರಿ ಮುಖ್ಯೆ ರಸ್ತೆಯ ಮೇಲೆ ಬೇವಿನಹಳ್ಳಿ ಮುರಾಜರ್ಿ ಶಾಲೆ ದಾಟಿದ ನಂತರ ಶಾಂತಪ್ಪ ಈತನು ಮೋಟರ ಸೈಕಲನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿ ಮುಂಜಾನೆ 09-00 ಗಂಟೆಗೆ  ಬೇವಿನಹಳ್ಳಿ ಕೇನಾಲ ಹತ್ತಿರ ಒಮ್ಮಿಂದಲೆ ಸ್ಕೀಡ್ಡಾಗಿ ಮೋಟರ ಸೈಕಲ ಸಮೇತ ರೋಡಿನ ಮೇಲೆ ಬಿದ್ದರು ಬಸನಗೌಡ ಮತ್ತು ಫಿರ್ಯಾದಿ ಅವರ ಹಿಂದಿನಿಂದಲೆ ಮೋಟರ ಸೈಕಲ್ ಚಲಾಯಿಸಿಕೊಂಡು ಹೋಗುತಿದ್ದರಿಂದ ಅಪಘಾತವಾಗಿದ್ದನ್ನು ನೋಡಿ ಅವರ ಮೋಟರ ಸೈಕಲ್ ರೋಡಿನ ಬದಿಗೆ ನಿಲ್ಲಿಸಿ ಅಪಘಾತವಾಗಿ ರೋಡನ ಮೇಲೆ ಬಿದ್ದವರ ಹತ್ತಿರ ಹೋಗಿ ನೋಡಲಾಗಿ ಫಿರ್ಯಾದಿಯ ಹೆಂಡತಿಗೆ ತಲೆಗೆ ಭಾರಿ ಗುಪ್ತಗಾಯವಾಗಿ ಮೂಗಿನಿಂದ ರಕ್ತ ಬರುತಿತ್ತು. ಮತ್ತು ಹಣೆಯ ಮೇಲೆ ಭಾರಿ ಗುಪ್ತಗಾಯವಾಗಿ ಹಣೆ ಉಬ್ಬಿತ್ತು. ಶಾಂತಪ್ಪ ದೊರೆ ಈತನಿಗೆ ಯಾವುದೇ ಗಾಯವಗೈರೆ ಆಗಿರುವುದಿಲ್ಲ ಗಾಯಗೊಂಡ ಲಕ್ಷ್ಮೀಬಾಯಿ ಇವಳನ್ನು ಉಪಚಾರ ಕುರಿತು ಶಹಾಪೂರ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದ್ದು, ವೈದ್ಯಾಧಿಕಾರಿಗಳು ಉಪಚಾರ ಮಾಡಿದ ನಂತರ ಹೆಚ್ಚಿನ ಉಪಚಾರ ಕುರಿತು ಮುಂದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದ ಮೇರೆಗೆ ಲಕ್ಷ್ಮೀಬಾಯಿ ಇವಳನ್ನು ಹೆಚ್ಚಿನ ಉಪಚಾರ ಕುರಿತು ಅಂಬುಲೇನ್ಸ ವಾಹನದಲ್ಲಿ ಹಾಕಿಕೊಂಡು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು  ಉಪಚಾರ ಪಡೆಯುತ್ತಾ ಮುಂಜಾನೆ 11-30 ಗಂಟೆಗೆ ಲಕ್ಷ್ಮೀಬಾಯಿ ಇವಳು ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ ಸದರಿ ತನ್ನ ಹೆಂಡತಿ ಲಕ್ಷ್ಮೀಬಾಯಿ ಇವಳ ಸಾವಿಗೆ ಶಾಂತಪ್ಪ ದೋರಿ ಸಾಃ ತಳ್ಳಳ್ಳಿ ಈತನು ಮೋಟರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನಿಂದ ಚಲಾಯಿಸಿದ್ದರಿಂದ ಈ ಘಟನೆ ಜರುಗಿರುತ್ತದೆ ಸದರಿಯವನ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 192/2017 ಕಲಂ 279 304[ಎ] ಐ.ಪಿ.ಸಿ ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.     

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 99/2017 ಕಲಂ 435 ಐಪಿಸಿ;- ಹಂಪನಗೌಡ ತಂದೆ ಚಂದ್ರಾಮಗೌಡ ಪೊಲೀಸ್ ಪಾಟೀಲ್ ವ|| 56 ವರ್ಷ  ಉ|| ಒಕ್ಕಲುತನ ಸಾ|| ಬೇಳಗುಂದಿ ತಾ||ಜಿ|| ಯಾದಗಿರಿ ಬರೆದುಕೊಂಡುವದೆನೆಂದರೆ ನನ್ನದೊಂದು ಹೊಲ ಸವರ್ೆ ನಂ.1 ನೆದ್ದು ನಮ್ಮೂರ ಸೀಮಾಂತರದಲ್ಲಿ ಭೀಮಾ ನದಿಯ ದಂಡೆಗೆ ಹೊಂದಿ ಇರುತ್ತದೆ ಅದರ ಪಕ್ಕದಲಿದ್ದ ನನ್ನ ಹೊಲ ಸವರ್ೆ ನಂ. 184 ಕ್ಕೆ ನೀರಾವರಿ ಮಾಡುವ ಕುರಿತು ನಾನು ನನ್ನ ಹೊಲ ಸವರ್ೆ ನಂ.1 ರಲ್ಲಿ ಎರಡು ಮೋಟರಗಳನ್ನು ಕೂಡಿಸಿ ಪೈಪ ಲೈನ್ ಮಾಡಿಕೊಂಡಿದ್ದು ಇರುತ್ತದೆ. ನನ್ನಂತೆ ನಮ್ಮೂರಿನ ವೆಂಕಟರೆಡ್ಡಿ ತಂದೆ ಬಸನಗೌಡ ಮತ್ತು ಬಸವರಾಜಪ್ಪಗೌಡ ತಂದೆ ವೀರಭದ್ರಪ್ಪಗೌಡ ಇವರು ಸಹ ತಮ್ಮ ಹೊಲಗಳಿಗೆ ಪೈಪ ಲೈನ್ ಮಾಡಿಕೊಳಲು ನನ್ನ ಹೊಲ ಸವರ್ೆ ನಂ.1 ರಲ್ಲಿ ಮೋಟರ ಕೂಡಿಸುತ್ತೆವೆ ಅಂತಾ ಅಂದಾಗ ನಾನು  ತಕರಾರು  ಮಾಡಿದ್ದು ಆಗ ಅವರು ಊರಿನ ಬುದ್ದಿವಂತರ ಸಮಕ್ಷಮದಲ್ಲಿ ಮಾತು ಕಥೆಯಾಡಿ 2004 ನೇ ಸಾಲಿನಲ್ಲಿ ವೆಂಕಟರೆಡ್ಡಿ ತಂದೆ ಬಸನಗೌಡ ಎರಡು ಮೋಟರಗಳನ್ನು ಮತ್ತು ಬಸವರಾಜಪ್ಪಗೌಡನಿಗೆ ಮೋಟರ ಇಟ್ಟುಕೊಳಲು ಪರವಾನಿಗೆ ನೀಡುವಂತೆ ಬುದ್ದಿವಂತರು ಹೇಳಿದ್ದರಿಂದ ನಾನು ಅವರಿಗೆ ಅನುಕೂಲ ಮಾಡಿಕೊಟ್ಟಿದ್ದೆನು
   ನಾನು ಅನುಕೂಲ ಮಾಡಿಕೊಟ್ಟ ನಂತರ ವೆಂಕಟರೆಡ್ಡಿ ತಂದೆ ಬಸನಗೌಡ ಇತನು ಎರಡು ಮೋಟಾರು ಇಟ್ಟುಕೊಳ್ಳುತ್ತೇನೆ ಅಂತಾ ಹೇಳಿ ಈಗ ಒಟ್ಟು 5 ಮೋಟರಗಳನ್ನು ಇಟ್ಟುಕೊಂಡು ತನ್ನ ಹೊಲಗಳಿಗೆ ನಿರಾವರಿ ಮಾಡಿಕೊಂಡಿರುತ್ತಾನೆ ಇದರಿಂದಾಗಿ ನದಿ ದಂಡೆಗಿದ್ದ ನನ್ನ ಹೊಲದಲ್ಲಿ ನಾನು ಸಾಗುವಳಿ ಮಾಡಲು ತೊಂದರೆಯಾಗಿದ್ದು ಆದರೂ ನಾನು ಯಾರೀಗೂ ಏನು ಹೇಳಿರುವದಿಲ್ಲ  ಇದಾದ ನಂತರ ನಾನು ನನ್ನ ಹೊಲವನ್ನು ಈಗ ಸುಮಾರು ದಿವಸಗಳಿಂದ ಬೆಳಗುಂದಿ ಬಸನಗೌಡ ಎಂಬಾತನಿಗೆ ಲೀಜಿಗೆ ಕೊಟ್ಟಿದ್ದು ಆದರೆ ಈ ವರ್ಷ ಆತನು ಮಾಡುವದಿಲ್ಲ ಅಂತಾ ಹೇಳಿದ್ದರಿಂದ ನಾನು ಈಗ ನಾಗೇಶ ಎಂಬಾತನಿಗೆ ಲೀಜಿಗೆ ಕೊಟ್ಟಿರುತ್ತೆನೆ.ಕಳೆದವಾರ ನಾನು ನನ್ನ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗಿ ಮೊನ್ನೆ ದಿನಾಂಕ-08/06/2017 ರಂದು ವಾಪಸ ಬಂದಿದ್ದು ಆಗ ನಾನು ನಿರಾವರಿ ಮಾಡಿದ ನನ್ನ ಹೊಲ ಸವರ್ೆ ನಂ.184 ರ ಕಡೆಗೆ ಹೋಗಿ ನೋಡಲು ನನ್ನ ಹೊಲದಲ್ಲಿಯ 20 ಪೀಟಿನ 6 ಪೈಪ್ ಗಳು ಮತ್ತು 80 ಪೀಟಿನಷ್ಟು ಉದ್ದದ ಕೇಬಲ್ ವೈರ್ ಸುಟ್ಟುದ್ದು ಕಂಡು ಬಂದಿತು.ಈ ಘಟನೆಯು ದಿನಾಂಕ-06/06/2017 ಮತ್ತು 07/06/2017 ರ ಅವಧಿಯಲ್ಲಿ ಆಗಿರುತ್ತದೆ,
   ಯಾರೋ ನನಗೆ ಆಗದವರು ನಾನು ಮಾಡಿದ ನೀರಾವರಿ ಭೂಮಿಗೆ ನೀರು ತಲುಪದಂತೆ ಮಾಡಿ ನನಗೆ ಹಾನಿ ಮಾಡಬೇಕೆಂಬ ಉದೇಶದಿಂದ ನನ್ನ ಪೈಪ್ ಮತ್ತು ವೈರನ್ನು ಸುಟ್ಟು ಸುಮಾರು 15 ಸಾವಿರಗಳಷ್ಟು ಹಾನಿ  ಮಾಡಿದ್ದು ಇರುತ್ತದೆ ನನ್ನ ಹೊಲದಲ್ಲಿಯ ಪೈಪ್ ಮತ್ತು ವೈರನ್ನು ಸುಟ್ಟವರು ಯಾರೆಂಬುದು ಪತ್ತೆ ಮಾಡಿ ನನಗೆ ನ್ಯಾಯಾ ದೊರಕಿಸಿಕೊಡಬೇಕಾಗಿ ವಿನಂತಿ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 98/2017 ಕಲಂ. 8(ಸಿ), 20(ಬಿ) ಎನ್.ಡಿ.ಪಿ.ಎಸ್. ಆ್ಯಕ್ಟ 1985 ;- ದಿನಾಂಕ 10/06/2017 ರಂದು 2-45 ಪಿಎಂಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಜಪ್ತಿ ಪಂಚನಾಮೆ ಮತ್ತು ವರದಿಯನ್ನು ಹಾಜರಪಡಿಸಿದ್ದು ಸಾರಾಂಶವೆನೆಂದರೆ ಮಾನ್ಯ ಪಿ.ಎಸ್.ಐ ಸಾಹೆಬರು 12-45 ಪಿಎಂಕ್ಕೆ ಠಾಣೆಯಲಿದ್ದಾಗ  ಹತ್ತಿಕುಣಿ ರೋಡಿನ ಮೇಲೆ ಕಾಳಪ್ಪ ಕಟ್ಟಗಿ ಅಡ್ಡದ ಹತ್ತಿರ ಯಾರೋ ಇಬ್ಬರೂ ಗಾಂಜಾವನ್ನು ತೆಗೆದುಕೊಂಡು ನಿಂತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ವೈದ್ಯಾಧಿಕಾರಿಗಳು, ಪಂಚರೊಂದಿಗೆ ಹೋಗಿ 1-30 ಪಿಎಂಕ್ಕೆ ದಾಳಿ ಮಾಡುವಷ್ಟರಲ್ಲಿ ಒಬ್ಬನು ಪೊಲಿಸ್ ಜೀಪನ್ನು ನೋಡಿ ಓಡಿ ಹೋಗಿದ್ದು ಒಬ್ಬನು ಕೈಗೆ ಸಿಕ್ಕಿ ಬಿದ್ದಿದು ಸದರಿಯವನ ಹತ್ತಿರ ಒಟ್ಟು 326 ಗ್ರಾಂ ಗಾಂಜಾ ಅಂ.ಕಿ 600/- ರೂ ದಷ್ಟು ಗಾಂಜಾ ಸಿಕ್ಕಿದ್ದು ಜಪ್ತಿ ಪಂಚನಾಮೆ ಕೈಕೊಂಡು ಠಾಣೆಗೆ 2-45 ಪಿಎಂಕ್ಕೆ ಬಂದು ಜಪ್ತಿ ಪಂಚನಾಮೆ ಸಂಗಡ ವರದಿಯನ್ನು ಕೊಟ್ಟಿದ್ದು ಸದರಿ ಜಪ್ತಿ ಪಂಚನಾಮೆ ಆಧಾರದ ಮೇಲಿಂದ ಠಾಣೆ ಗುನ್ನೆ ನಂ.98/2017 ಕಲಂ. 8(ಸಿ), 20(ಬಿ) ಎನ್.ಡಿ.ಪಿ.ಎಸ್. ಆ್ಯಕ್ಟ 1985 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

No comments: