Police Bhavan Kalaburagi

Police Bhavan Kalaburagi

Saturday, June 24, 2017

Yadgir District Reported Crimes


                                                   Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 107/2017  ಕಲಂ 279, 304 (ಎ) ಐಪಿಸಿ;- ದಿನಾಂಕ-23/06/2017 ರಂದು   ನಿಂಗಪ್ಪ ತಂದೆ ಮಲ್ಲಪ್ಪ ಕ್ವಾಟೆ ಕುರಬರ ಮನೆಯಲಿದ್ದಾಗ ನನಗೆ ನಿಂಗಪ್ಪ ತಂದೆ ಮಲ್ಲಯ್ಯ ಕ್ವಾಟೆ ಕುರಬರ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಾನು ಮತ್ತು ನಿನ್ನ ಮಗ ಮಲ್ಲಪ್ಪ ಇಬ್ಬರು ಕೂಡಿ ನಮ್ಮ ಹೊಲಗಳಿಗೆ ಹೋಗುವಾಗ ಸಾಯಂಕಾಲ 5-30 ಗಂಟೆಗೆ ಯಾದಗಿರಿ - ರಾಯಚೂರ ಮುಖ್ಯ ರಸ್ತೆಯ ಮೇಲೆ ನಾವಿಬ್ಬರು ನಡೆದುಕೊಂಡು  ಪೊಲಪ್ಪ ತಂದೆ ತಿಪ್ಪಣ್ಣ ಉಪ್ಪಾರ ಇವರ ಹೊಲದ ಹತ್ತಿರ ಹೋಗುತ್ತಿರುವಾಗ ಎದುರಿನಿಂದ ಅಂದರೆ ಯಾದಗಿರಿ ಕಡೆಯಿಂದ ಅತಿ ವೇಗ ಮತ್ತು ಅಲಕ್ಷತನದಿಂದ ಕ್ರಶರ್ ಚಾಲಕನು ನಡೆಸಿಕೊಂಡು ಬಂದು ನನ್ನ ಮುಂದೆ ಹೊಗುತಿದ್ದ ಮಲ್ಲಪ್ಪ ಇತನಿಗೆ ಅಪಘಾತ ಪಡಿಸಿದನು, ನಾನು ನೋಡುತಿದ್ದಂತೆ ಕ್ರಶರ ಮುಂದೆ ಹೊಗಿ ನಿಂತಿತು ಆಗ ನಾನು ಮಲ್ಲಪ್ಪನಿಗೆ ಏನು ಆಯಿತು ಅಂತಾ ನೋಡುವಷ್ಟರಲ್ಲಿ ಕ್ರಶರ ಚಾಲಕನು ತನ್ನ ವಾಹನವನ್ನು ಬಿಟ್ಟು ಓಡಿ ಹೋದನು ಆಗ ನಾನು ಮಲ್ಲಪ್ಪನಿಗೆ ನೋಡಲಾಗಿ ಆತನಿಗೆ ಮುಖಕ್ಕೆ ಬಾರಿ ರಕ್ತಗಾಯವಾಗಿ ಮೂಗಿನಲ್ಲಿ ರಕ್ತ ಸೋರುತಿತ್ತು, ಮತ್ತು ಬಲಗಾಲಿನ ತೋಡೆ ಮುರಿದಿತ್ತು ಹಾಗೂ ಎದೆ ಮತ್ತು ಹೊಟ್ಟೆಯ ಮೇಲೆ ತರಚಿದ ಗಾಯವಾಗಿದ್ದು ಸ್ಥಳದಲ್ಲಿ ಸತ್ತಿದ್ದಾನೆ ಅಂತಾ ತಿಳಿಸಿದ್ದರಿಂದ ನಾನು ಮತ್ತು ನನ್ನ ಹೆಂಡತಿ ಬನ್ನಮ್ಮ ನನ್ನ ಮಕ್ಕಳಾದ ಭೀರಪ್ಪ, ಸಾಬರೆಡ್ಡಿ ಸ್ಥಳಕ್ಕೆ ಬಂದು ನೋಡಲಾಗಿ ನನ್ನ ಮಗನು ಅಪಘಾತದಲ್ಲಿ ಸತ್ತು ಆತನ ಹೆಣ ಅಂಗಾತಾಗಿ ರೋಡಿನ ಕೆಳಗೆ ಬಿದ್ದಿತ್ತು  ಕ್ರಶರನ್ನು ಪರಿಶಿಲಿಸಿ ನೋಡಲಾಗಿ ಅದರ ನಂಬರ ಕೆಎ-33 ಎಮ್ -2869 ಇರುತ್ತದೆ. ಇಂದು ದಿನಾಂಕ-23/06/2017 ರಂದು ರಾತ್ರಿ 8-00 ಗಂಟೆಗೆ ಬಂದು ಪಿಯರ್ಾಧಿಯನ್ನು ನೀಡಿರುತ್ತೆನೆ .ಕಾರಣ ಕ್ರಷರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿ ಅಪಘಾತ ಪಡಿಸಿದ್ದರಿಂದ ನನ್ನ ಮಗ ಮೃತಪಟ್ಟಿರುತ್ತಾನೆ ಕಾರಣ ಕೆಎ-33 ಎಮ್ 2869 ನೆದ್ದರ ವಾಹನ ಚಾಲಕನ ಮೇಲೆ ಮುಂದಿನ ಕ್ರಮ ಜರುಗಿ ಅಂತಾ ಹೇಳಿ ಗಣಕಿಕರಿಸಿದ ಪಿಯರ್ಾಧಿ ಹೇಳಿಕೆ ಇರುತ್ತದೆ


ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 106/2017 ಕಲಂ 447,323,354,504,506 ಸಂಗಡ 34 ಐಪಿಸಿ;-ದಿನಾಂಕ-23/06/2017 ರಂದು ಬೆಳಿಗ್ಗೆ- 9-00 ಗಂಟೆಗೆ ನಾನು ಶ್ರೀಮತಿ ಶಶಮ್ಮ ಗಂಡ ಪಾಂಡಪ್ಪ  ಮತ್ತು ನನ್ನ ಗಂಡ ಪಾಂಡಪ್ಪ ಮತ್ತು ನನ್ನ ದೊಡ್ಡಮಾವನ ಹೆಂಡತಿಯಾದ ಗಂಗಮ್ಮ ಗಂಡ ಯಂಕಟರಾಮಣ್ಣ 3 ಜನರು ಕೂಡಿ ನಾವು ನಮ್ಮ ಹೊಲಕ್ಕೆ ಹೋಗಿ ಬಿತ್ತಲು ಅಂತಾ ಹೋದೆವು ಅಲ್ಲಿ ನನ್ನ ಗಂಡನ ಹೆಸರಿನಲ್ಲಿ ಇರುವ ಹೊಲ ಸವರ್ೆ ನಂಬರ 62 ರಲ್ಲಿ ನೋಡಲಾಗಿ ಹೊಲದಲ್ಲಿ ಅಕ್ರಮವಾಗಿ ಪ್ರವೇಶ ಮಾಡಿ  ನಮ್ಮ ಹೊಲದಲ್ಲಿ 1) ರಾಮಪ್ಪ ತಂದೆ ಯಂಕಣ್ಣ 2) ಶಂಕ್ರಪ್ಪ ತಂದೆ ರಾಮಪ್ಪ 3) ಯಂಕಟಪ್ಪ ತಂದೆ ರಾಮಪ್ಪ 4) ಸಾವಿತ್ರಮ್ಮ ಗಂಡ ರಾಮಪ್ಪ ಇವರೆಲ್ಲರು ಸೇರಿ ನಮ್ಮ ಹೊಲದಲ್ಲಿ 9-30 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿ ಗಳೆ ಹೊಡೆಯುತ್ತಿರುವಾಗ ನಾನು ಹೋಗಿ ನಮ್ಮ ಹೊಲದಲ್ಲಿ ಯಾಕೆ ಗಳೆ ಹೊಡೆಯುತಿದ್ದರಿ ಅಂತಾ ಕೇಳಿದಾಗ ನಿಂದು ಏನೆ ಸೂಳೆ ಈ ಹೊಲ ನಮ್ಮದು ನಾವು ಗಳೆ ಹೋಡೆಯುತ್ತೆವೆ ನಿವು ಏನುಮಾಡುತ್ತಿರಿ ಮಾಡಿರಿ ಅಂತಾ ಅವಾಚ್ಯವಾಗಿ ಲೇ ರಂಡಿ ಸೂಳೆ ಈದು ನಮ್ಮ ಹೊಲ ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಶಂಕ್ರಪ್ಪ ಇತನು ನನಲೆ ತಲೆಗೆ ಮತ್ತು ಎಡಗಡೆ ಕೈಗೆ ಹೊಡೆದು ಕೈಹಿಡಿದು ಜಗ್ಗಿ ಎಳದಾಡಿ ನನಗೆ ಅವಮಾನ ಮಾಡಿ ಕೆಳಗೆ ಬಿಳಿಸಿದನು ನಾನು ಕೇಳಗೆ ಬಿದ್ದಾಗ ರಾಮಪ್ಪ ತಂದೆ ಯಂಕಣ್ಣ, ಇತನು ಕಾಲಿನಿಂದ ಹೊಟ್ಟೆಗೆ ಒದ್ದನು ಮತ್ತು ಯಂಕಟಪ್ಪ ತಂದೆ ರಾಮಪ್ಪ, ಇತನು ಕೂದಲು ಹಿಡಿದು ಎಳದಾಡಿದನು, ಸಾವಿತ್ರಮ್ಮ ಗಂಡ ರಾಮಪ್ಪ ಈಕೆಯು ಈ ಸೂಳೆ ಪದೆ ಪದೆ ನಮ್ಮ ತಂಟೆಗೆ ಬರುತ್ತಾಳೆ ಇವಳಿಗೆ ಬಹಳ ಸೊಕ್ಕು ಬಂದಿಗೆ ಲೇ ಸೂಳೆ ಮಗಳೆ  ಇನ್ನೊಂದು ಸಲ ಈ ಹೊಲಕ್ಕೆ ಬಂದರೆ  ಖಲಾಸ ಮಾಡಿ  ಬಿಡೋಣ ಅಂತಾ ಜೀವದ ಬೇದರಿಕೆ ಹಾಕಿ ಬೈದಾಡಿ ನನಗೆ ಹೊಡೆಯುತ್ತಿರುವಾಗ ಜಗಳವನ್ನು ನನ್ನ ಗಂಡ ಪಾಂಡಪ್ಪ ತಂದೆ ಯಂಕಣ್ಣ ಮತ್ತು ನನ್ನ ದೊಡ್ಡಮಾವನ ಹೆಂಡತಿಯಾದ ಗಂಗಮ್ಮ ಗಂಡ ದಿ. ಯಂಕಟಪ್ಪ  ಮತ್ತು ನಮ್ಮ ಹಿಂದೆ ಗಳೆ ಹೊಡೆಯಲು ಬಂದ ನನ್ನ ತಮ್ಮ ಶಂಕ್ರಪ್ಪ ತಂದೆ ಮಾರೆಪ್ಪ ಎಲ್ಲರು ಕೂಡಿ ಜಗಳ ಬಿಡಿಸಿದರು ಇಲ್ಲದಿದ್ದರೆ ನನಗೆ ಇನ್ನೂ ಹೊಡೆ ಬಡೆ ಮಾಡುತಿದ್ದರು   
  ಕಾರಣ ನನಗೆ ಅವಾಚ್ಯವಾಗಿ ಬೈದು ಹೊಡೆಬಡೆ ಮಾಡಿ ಕೂದಲು ಮತ್ತು ಕೈಹಿಡಿದು ಜಗ್ಗಾಡಿ ಅವಮಾನ ಮಾಡಿ ಜೀವದ ಬೇದರಿಕೆ ಹಾಕಿದರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ನಮಗೆ ಉಪಚಾರ ಕುರಿತು ಆಸ್ಪತ್ರೆಗೆ ಹೋಗುವದಿಲ್ಲ  ಅಂತಾ ದೂರಿನ ಅಜರ್ಿ ಇರುತ್ತದೆ

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 103/2017 ಕಲಂ.341.323.504.506.302 ಸಂ. 34 ಐಪಿಸಿ;-ದಿನಾಂಕ. 23/06/2017 ರಂದು ಪಿರ್ಯಾದಿ ಶ್ರೀ ಅಂಬರಿಶ್ ತಂ. ಯಲ್ಲಪ್ಪ ಸಿಂದೂಳ ವಃ 23 ಜಾಃ ಸಿಂಧೂಳ ಉಃ ಕೂಲಿ ಕೆಲಸ ಸಾಃ ಶಶಿದರ ಕಾಲೋನಿ ಹೊಸಳ್ಳಿ ಕ್ರಾಸ್ ಯಾದಗಿರಿ ಈತನು ಠಾಣೆಗೆ ಹಾಜರಾಗಿ ಒಂದು ಅಜರ್ಿಯನ್ನು ಹಾಜರಪಡಿಸಿದ್ದರ ಸಾರಾಂಶವೆನೆಂದರೆ ಇಂದು ದಿನಾಂಕ.23/06/2017 ರಂದು ಮದ್ಯಾಹ್ನ 2:00 ಪಿಎಂ ಸುಮಾರಿಗೆ ನಾನು ಮತ್ತು ನಮ್ಮ ಬಾಮೈದನಾದ ಯಲ್ಲಪ್ಪ ತಂ. ಫಕೀರಪ್ಪ ಸಿಂದೂಳ, ನಮ್ಮ ಕಾಕನ ಮಗನಾದ ದುರ್ಗಪ್ಪ ತಂ. ಮಾರೆಪ್ಪ ಸಿಂದೂಳ ಕೂಡಿಕೊಂಡು ಯಾದಗಿರಿ ನಗರದಲ್ಲಿರುವ ಭಾಗ್ಯಲಕ್ಷ್ಮೀ ಟಾಕೀಸ್ನಲ್ಲಿ ಡಿಜೆ ಅಂತಾ ತೆಲಗೂ ಸಿನೆಮಾ ನೋಡಿ ಸಿನೆಮಾ ಬಿಟ್ಟ ನಂತರ ಅಂದಾಝು ಸಮಯ 4-30 ಪಿಎಂ ಸುಮಾರಿಗೆ ಟಾಕೀಸದಿಂದ ನಮ್ಮ ಕಾಲೋನಿಮಗೆ ನನ್ನ ಮೋ.ಸೈಕಲ್ ಹಿರೋ ಹೊಂಡಾ ಸ್ಪ್ಲೆಂಡರ ಪ್ಲಸ್ ಮೇಲೆ ನಾವು ಮೂರು ಜನರು ಹೊರಟೆವು. ಅಂಬೇಡ್ಕರ ಚೌಕದಲ್ಲಿ ಹೋಗುತ್ತಿರುವಾಗ ಚೌಕ ಹತ್ತಿರ ಮೌನೇಶ ತಂ. ಸಂಜಪ್ಪ ಕರಕರಮೊಂಡರ, ಯಲಿಗ್ಯಾ ತಂ. ಯಲ್ಲಪ್ಪ ಕರಕರಮೊಂಡರ, ನಾಗಪ್ಪ ತಂ. ಸಂಜಪ್ಪ ಕರಕರ ಮೊಂಡರ, ದೇವಪ್ಪ ತಂ. ಂನ್ನಪ್ಪ ಕರಕರಮೊಂಡರ ಇವರು ನಾಲ್ಕು ಜನರು ನಾವು ಅಂಬೇಡ್ಕರ ಚೌಕದಲ್ಲಿ ಬರುತ್ತಿರುವಾಗ ನಮಗೆ ನೋಡಿ ಅಡ್ಡ ಬಂದು ನಮಗೆ ತಡೆದು ನಿಲ್ಲಿಸಿ ಏ ಬೋಸಡಿ ಮಕ್ಕಳೆ ನಾವು ಯಾದಗಿರದಲ್ಲಿ ಅಲ್ಲಲ್ಲಿ ಓಣಿಯಲ್ಲಿ ನಮ್ಮ ಹಂದಿಗಳನ್ನು ಸಾಕಲು ಬಿಟ್ಟಿರುತ್ತೇವೆ ನೀವು ನಮ್ಮ ಹಂದಿಗಳನ್ನು ಕದ್ದೊಯ್ದು ಮಾರುತ್ತಿರಿ ಮತ್ತು ತಿನ್ನುತ್ತಿರಿ ಇವತ್ತು ಸಿಕ್ಕಿರಿ ಮಕ್ಕಳೆ ಜೀವ ಸಹಿತ ಬಿಡುವುದಿಲ್ಲಾ. ನಿಮಗೆ ಖಲಾಸ ಮಾಡುತ್ತೇವೆ ಅಂತಾ ಬೈದವರೆ ಮೌನೇಶ ಈತನು ಯಲ್ಲಪ್ಪನಿಗೆ ಕೈ ಮುಷ್ಟಿ ಮಾಡಿ ಎದೆಗೆ, ಹೊಟ್ದಟೆಗೆ ಜೋರಾಗಿ ಗುದ್ದಿ ಕಾಲಿನಿಂದ ಒದ್ದನು. ಮತ್ತು ಇವರಿಗೆ ಕೊಲೆ ಮಾಡಿ ಬಿಡೋಣ ನಮ್ಮ ಹಂದಿಗಳ ನಮಗೆ ಸಿಗುತ್ತವೆ ಅಂತಾ ಅನ್ನುತ್ತಿರುವಾಗ  ಯಲಿಗ್ಯಾ ಈತನು ನನಗೆ ಕಪಾಳಕ್ಕೆ ಹೊಡೆದು ಯಲ್ಲಪ್ಪನಿಗೆ ಕಾಲನಿಂದ ಒದ್ದನು ಆಗ ನಾಗಪ್ಪನು ದುರ್ಗಪ್ಪನಿಗೆ ಕಾಲಿನಿಂದ ಒದ್ದನು. ದೇವಪ್ಪನು ಯಲ್ಲಪ್ಪನಿಗೆ ನೆಲಕ್ಕೆ ಹಾಕಿ ಕಾಲಿನಿಂದ ಒದ್ದು ಈ ಸೂಳೆ ಮಕ್ಕಳಿಗೆ ಇವತ್ತು ಜೀವಸಹಿತ ಬಿಡಬಾರದು ಅಂತಾ ಬೈಉತ್ತಿರುವಾಗ ನಾವು ಸತ್ತೆವೆಪ್ಪೊ  ಅಂತಾ ಚವೀರಾಡುತ್ತಿದ್ದೆವು ಆಗ ಜಬಲಮ್ಮ ಗಂ ರಾಜಪ್ಪ ಮತ್ತು ಅಲ್ಲೆ ಚೌಕನಲ್ಲಿದ್ದ ಈತರರು ಬಂದು ಜಗಳಾ ಬಿಡಿಸಿದ್ದು ಯಲ್ಲಪ್ಪ ತಂ. ಫಕಿರಪ್ಪ ಈತನು ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲಾ. ಕೂಡಲೆ ಅವನಿಗೆ ಉಪಚಾರ ಕುರಿತು ಒಂದು ಅಟೋದಲ್ಲಿ ಹಾಕಿಕೊಂಡು ಯಾದಗಿರಿ ಸಕರ್ಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದೆವು. ಉಪಚಾರ ಹೊಂದುತ್ತಾ ಅಂದಾಜು ಸಮಯ 5-45 ಪಿಎಂ ಸುಮಾರಿಗೆ ಮೃತಪಟ್ಟಿರುತ್ತಾನೆ. ನಂತರ ಸದರಿ ವಿಷಯ ಅವನ ಮನೆಯವರಿಗೆ ಮತ್ತು ಸಂಭಂದಿಕರಿಗೆ ತಿಳಿಸಿದಾಗ ಅವರೆಲ್ಲರೂ ಆಸ್ಪತ್ರೆಗೆ ಬಂದು ಮೃತ ಯಲ್ಲಪ್ಪನಿಗೆ ನೋಡಿ ವಿಷಯ ತಿಳಿದುಕೊಂಡರು ಸದರಿ ಘಟನೆ ಇಂದು ದಿನಾಂಕ 23/06/2017 ರಂದು ಸಾಯಂಕಾಲ 5 ಗಂಟೆ ಸುಆಂರಿಗೆ ಅಂಬೆಡ್ಕ ಚೌಕ ಹತ್ತಿರ ಜರುಗಿರುತ್ತದೆ. ಕಾರಣ ಮೌನೆಶ, ಯಲಿಗ್ಯಾ, ನಾಗಪ್ಪ, ದೇವಪ್ಪ, ಇವರು ಹಂದಿಯ ವಿಷಯದಲ್ಲಿ ಹಿಂದಿನಿಂದ ನಮ್ಮ ಸಂಗಡ ತಕರಾರು ಮಾಡುತ್ತಾ ನಮ್ಮ ಹಂದಿಗಳನ್ನು ಮಾರಾಟ ಮಾಡುತ್ತಿರಿ, ತಿನ್ನುತ್ತಿರಿ, ಒಂದಲ್ಲಾ ಒಂದು ದಿನ ನಿಮಗೆ ನೋಡಿ ನಮ್ಮ ಕೈಗೆ ಸಿಗುರಿ ಅನ್ನುತ್ತಾ ತಕರಾರು ಮಾಡಿಕೊಂಡು ಬಂದಿದ್ದು ಇಂದು ದಿನಾಂಕ 23/06/2017 ರಂದು ನಾವು ಸಿಮಾ ನೋಡಿ ಬಿಟ್ಟ ನಂತರ ಮನೆ ಕಡೆಗೆ ಹೋಗುತ್ತಿರುವಾಗ ನಮಗೆ ತಡೆದು ನಿಲ್ಲಿಸಿ 5 ಪಿಎಂ ಸುಮಾರಿಗೆ ಹೊಡೆ ಬಡೆ ಮಾಡಿದ್ದರಿಂದ ಆ ಗಾಯಗಳಿಂದ ಯಲ್ಲಪ್ಪ ಈತನು ಕೊಲೆಯಾಗಿರುತ್ತಾನೆ ಕೊಲೆ ಮಾಡಿದ ನಾಲ್ಕು ಜನರ ಮೆಲ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಕೊಟ್ಟ ಅಜರ್ಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.103/2017 ಕಲಂ.341, 323, 302, 504, 506, ಸಂ.34 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಕೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 104/2017 ಕಲಂ. 78 (3) ಕೆ.ಪಿ. ಆಕ್ಟ ;- ದಿನಾಂಕ 23/06/2017 ರಂದು ಸಾಯಂಕಾಲ 05-30 ಗಂಟೆಗೆ ಶ್ರೀ ಮಹಾಂತೇಶ ಸಜ್ಜನ ಪಿ.ಎಸ್.ಐ ಯಾದಗಿರಿ ನಗರ ಠಾಣೆ ಇವರು ಒಬ್ಬ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ ಠಾಣೆಗೆ ಬಂದು ಒಂದು ಜ್ಞಾಪನ ನೀಡಿದ್ದರ ಸಾರಾಂಶವೇನೆಂದರೆ, ಈ ಮೂಲಕ ನಿಮಗೆ ಜ್ಞಾಪನ ಕೊಡುವುದೇನಂದರೆ ದಿನಾಂಕ 23/06/2017 ರಂದು ಮಧ್ಯಾಹ್ನ 03 ಗಂಟೆಯ ಸುಮಾರಿಗೆ ನಾನು ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಲಕ್ಷ್ಮೀ ಟಾಕೇಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಯಾರೋ ಮೂರು ಜನ ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಕೂಡಲೆ ನಾನು ಇಬ್ಬರೂ ಪಂಚರು ಹಾಗೂ ಸಿಬ್ಬಂದಿ ಜನರಿಗೆ ಠಾಣೆಗೆ ಬರಮಾಡಿಕೊಂಡೆನು.  ಪಂಚರಿಗೆ ಹಾಗೂ ಸಿಬ್ಬಂದಿ ಜನರಾದ ಪ್ರಕಾಶ ಪಿ.ಸಿ 303, ರವಿ ರಾಠೋಡ ಪಿ.ಸಿ 269 ಮತ್ತು ವಿಠ್ಠಲ್ ಹೆಚ್.ಸಿ 86 ರವರಿಗೆ ದಾಳಿ ಮಾಡುವ ಬಗ್ಗೆ ವಿಷಯ ತಿಳಿಸಿದೆನು. ನಂತರ ಎಲ್ಲರು ಕೂಡಿ ಸರಕಾರಿ ಜೀಪ ನಂ. ಕೆಎ 33 ಜಿ 0075 ನೇದ್ದರಲ್ಲಿ ಮಧ್ಯಾಹ್ನ 03-30 ಗಂಟೆಗೆ ದಾಳಿ ಕುರಿತು ಠಾಣೆಯಿಂದ ಹೊರಟೆವು. ನಂತರ ಸ್ಥಳಕ್ಕೆ ಹೋಗಿ ಲಕ್ಷ್ಮೀ ಟಾಕೀಜ್ ಹತ್ತಿರ ಸ್ವಲ್ಪ ದೂರದಲ್ಲಿ ಜೀಪ ನಿಲ್ಲಿಸಿ, ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಾಗಿ ನಿಂತು ನೋಡಿದಾಗ ಅಲ್ಲಿ 03 ಜನರು ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ 80/-ರೂಪಾಯಿ ಗೆಲ್ಲಿರಿ ಮಟ್ಕಾ ಆಡಿರಿ ಎಂದು ಅವರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದನ್ನು ನೋಡಿ ಖಚಿತಪಡಿಸಿಕೊಂಡು ಮಧ್ಯಾಹ್ನ 03-50 ಗಂಟೆ ಸುಮಾರಿಗೆ ಅವರ ಮೇಲೆ ದಾಳಿ ಮಾಡಿ ಹಿಡಿಯುತ್ತಿದ್ದಾಗ ಒಬ್ಬ ವ್ಯಕ್ತಿ ಸಿಕ್ಕಿದ್ದು, ಇಬ್ಬರು ಓಡಿ ಹೋದರು, ಓಡಿ ಹೋಗುವಾಗ ಒಬ್ಬನ ಜೇಬಿನಿಂದ 2 ಮೋಬೈಲ್ ಹಾಗೂ 200/- ರೂ|| ಗಳು ಕೆಳಗೆ ಬಿದ್ದದಿರುತ್ತವೆ. ಹಿಡಿದವನ ಹೆಸರು ಪಂಚರ ಸಮಕ್ಷಮದಲ್ಲಿ ವಿಚಾರಿಸಲಾಗಿ ಅವನು ತನ್ನ ಹೆಸರು ಸಾಬಣ್ಣ ತಂದೆ ಗಂಗಪ್ಪ ಪೂಜಾರಿ ವಯಾ 45 ವರ್ಷ, ಜಾ|| ಕುರುಬರು ಉ|| ಕೂಲಿ ಕೆಲಸ ಸಾ|| ಹಿರೆಅಗಸಿ ಯಾದಗಿರಿ ಅಂತಾ ತಿಳಿಸಿದನು. ಅವನ ಅಂಗ ಶೋದನೆ ಮಾಡಲಾಗಿ ಅವನ ಹತ್ತಿರ 700=00 ಹಾಗೂ 02 ಮಟ್ಕಾ ನಂಬರ ಬರೆದ ಚಿಟ್ಟಿಗಳು ಸಿಕ್ಕಿರುತ್ತವೆ. ಸಿಕ್ಕಿಬಿದ್ದ ಸಾಬಣ್ಣನಿಗೆ ಓಡಿ ಹೋದವರ ಹೆಸರು ವಿಚಾರಿಸಲಾಗಿ ಮೊಬೈಲ್ಗಳು ಜೇಬಿನಿಂದ ಬಿದ್ದವನ ಹೆಸರು ಪಾಪ್ಯಾ ಹಾಗೂ ಇನ್ನೊಬ್ಬನ ಹೆಸರು ಲಕ್ಷ್ಮೀರೆಡ್ಡಿ ಅಂತಾ ತಿಳಿಸಿದನು. ನಂತರ ಮಟ್ಕಾ ಜೂಜಾಟದಲ್ಲಿ ಸಿಕ್ಕ ಒಟ್ಟು 900=00 ರೂ. ನಗದು ಹಣ, ಮಟ್ಕಾ ನಂಬರಗಳನ್ನು ಬರೆದ 2 ಚೀಟಿ ಮತ್ತು ಒಂದು ಬಾಲಪೆನ ಹಾಗೂ 1) ಸ್ಯಾಮಸಂಗ್ ಗ್ಯಾಲಾಕ್ಷಿ ಜೆ7 ಮೋಬೈಲ್ ಅ.ಕಿ 8000/- 2) ಒಂದು ಸಾದಾ ಸ್ಯಾಮಸಂಗ ಮೊಬೈಲ್ ಅ:ಕಿ: 600=00 ರೂ. ಹೀಗ್ಗೆ ಒಟ್ಟು 9500=00 ಇವುಗಳನ್ನು ಜಪ್ತಿ ಮಾಡಿಕೊಂಡು ದಿನಾಂಕ 23/06/2017 ರಂದು 4-15 ಪಿಎಮ್ ದಿಂದ 5-15 ಪಿಎಮ್ ದವರೆಗೆ ವಿವರವಾಗಿ ಜಪ್ತಿ ಪಂಚನಾಮೆ ಕೈಕೊಂಡಿದ್ದು, ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ಇಂದು ದಿನಾಂಕ 24/06/2017 ರಂದು ಬೆಳಿಗ್ಗೆ 10-30 ಗಂಟೆಗೆ ಗುನ್ನೆ ನಂ.104/2017 ಕಲಂ.78(3)ಕೆ.ಪಿ.ಆಕ್ಟ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 77/2017 ಕಲಂ 78(3)  ಕೆ.ಪಿ ಯಾಕ್ಟ ;- : ದಿನಾಂಕ:22/06/2017 ರಂದು 19.30 ಗಂಟೆಗೆ ಆರೋಪಿತನು ಬಲಶೆಟ್ಟಿಹಾಳ ಚನ್ನಮ್ಮ ಚೌಕ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಜನರಿಂದಾ ಹಣ ಪಡೆದು ಇದು ಬಾಂಬೆ ಮಟಕಾ ಜೂಜಾಟ ಒಂದು ರೂಪಾಯಿ ಹಚ್ಚಿದರೆ ಎಂಬತ್ತು ರೂಪಾಯಿ ಬರುತ್ತದೆ ಅದೃಷ್ಟ ಇದ್ದರೆ ನಂಬರ ಹಚ್ಚಿರಿ ಅಂತಾ ಜನರಿಂದಾ ಹಣ ಪಡೆದು ಮಟಕಾ ಚೀಟಿ ಬರೆದು ಕೊಡುವಾಗ ಪಿಯರ್ಾದಿ ಮತ್ತು ಸಿಬ್ಬಂದಿಯವರಾದ ಅಂಬಯ್ಯ ರಾಠೋಡ ಎ.ಎಸ್.ಐ ಹೆಚ್.ಸಿ-130 ಪಿ.ಸಿ-293, ಎಪಿಸಿ-144 ರವರೊಂದಿಗೆ ದಾಳಿ ಮಾಡಿ ಹಿಡಿದು ಸದರಿಯವನಿಂದ 980=00 ರೂ ನಗದು ಹಣ, ಒಂದು ಮಟಕಾ ನಂಬರ ಬರೆದ ಚೀಟ, ಒಂದು ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಅಂತಾ ಪಂಚನಾಮೆಯ ಸಾರಾಂಶದ ಮೇಲಿಂದ ಕ್ರಮ ಜರುಗಿಸಲು ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ಕ್ರಮ ಜರುಗಿಸಿದ್ದು ಇರುತ್ತದೆ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 61/2017 ಕಲಂ 323,324,341,504,506 ಸಂ. 34 ಐಪಿಸಿ;- ದಿನಾಂಕ: 23/06/2017 ರಂದು 8 ಎ.ಎಮ್.ಕ್ಕೆ ಪಿಯರ್ಾಧಿಯು ತನ್ನ ಮನೆಯಿಂದ ಗ್ರಾಮದ ಮಾಲಿಗೌಡರ ಮನೆಯ ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ ಆರೋಪಿತರು ಬಂದು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯವಾಗಿ ಏನಲೇ ಮಗನೆ ನಿನ್ನ ಸೊಕ್ಕು ಬಹಳ ಆಗಿದೆ ಅಂತಾ ಅನ್ನುತ್ತಾ ಒಮ್ಮಿಂದೊಮ್ಮೆಲೆ ಸಿದ್ದಪ್ಪನು ಪಿಯರ್ಾಧಿಯ ಕುತ್ತಿಗೆಯನ್ನು ಹಿಡಿದು ಬಲಗೈಯಿಂದ ಹೊಡೆದನು. ಇನ್ನೊಬ್ಬ ಆರೋಪಿತನು ಒಂದು ಬಡಿಗೆಯನ್ನು ತಂದು ಪಿಯರ್ಾಧಿಯ ಬೆನ್ನಿಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಅದೇ ಬಡಿಗೆಯಿಂದ ಹೆಡಕಿಗೆ ಹೊಡೆದು ರಕ್ತಗಾಯ ಮಾಡಿದನು. ಸಾಕ್ಷಿದಾರರು ಬಂದು ಜಗಳ ನೋಡಿ ಬಿಡಿಸಿದ್ದು ಆಗ ಆರೋಪಿ ಸಿದ್ದಪ್ಪನು ಪಿಯರ್ಾಧಿಗೆ ಇವತ್ತು ಉಳಿದಿದಿ ಮಗನೆ ಇನ್ನೊಂದು ಸಾರಿ ಸಿಕ್ಕರೆ ನಿನ್ನನ್ನು ಜೀವ ಸಹಿತ ಬೀಡುವುದಿಲ್ಲ ಅಂತಾ ಬೆದರಿಕೆ ಹಾಕಿದ ಬಗ್ಗೆ ಸಂಕ್ಷಿಪ್ತ ಪಿಯರ್ಾಧಿ.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 62/2017 ಕಲಂ 279,337,338 ಐಪಿಸಿ ;- ದಿನಾಂಕ: 21/06/2017 ರಂದು ಪಿಯರ್ಾಧಿಯಾದ ಅಶೋಕಪಾಟೀಲ ಹಾಗೂ ತನ್ನ ಗೆಳೆಯರು ಕೂಡಿ ಖಾಸಗಿ ಕೆಲಸದ ನಿಮಿತ್ಯ ಕಾರ್ ನಂ: ಕೆ.ಎ-32 ಪಿ-0304 ನೇದ್ದರಲ್ಲಿ ಜೇವಗರ್ಿಯಿಂದ ಶಹಾಪೂರಕ್ಕೆ ಬಂದು ತಮ್ಮ ಕೆಲಸ ಮುಗಿಸಿಕೊಂಡು ಮರಳಿ ರಾತ್ರಿ ಜೇವಗರ್ಿ ಹೋಗುವ ಕುರಿತು ಶಹಾಪೂರದಿಂದ ಭೀ.ಗುಡಿ ಮುಖಾಂತರ ಹೋಗುತ್ತಿರುವಾಗ ಪ್ರಜ್ವಲಕುಮಾರನು ಕಾರ್ ಚಲಾಯಿಸುತ್ತಿದ್ದು ಭೀ.ಗುಡಿ ಕೃಷಿ ಕಾಲೇಜ ಹತ್ತಿರ 7:30 ಪಿ.ಎಮ್.ಕ್ಕೆ ಹೋಗುತ್ತಿದ್ದಾಗ ಕಾರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗುತಿದ್ದನು. ಕಾರಿನಲ್ಲಿದ್ದ ಸಾಕ್ಷಿದಾರರು ಸಾವಧಾನವಾಗಿ ಚಲಾಯಿಸು ಅಂತಾ ಹೇಳಿದರು ಕೂಡ ಅತಿ ವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಒಮ್ಮೆಲೆ ಬಲಗಡೆ ಕಟ್ ಹೊಡೆದಿದ್ದರಿಂದ ಕಾರ್ ರೋಡಿನ ಬಲಗಡೆ ಹೋಗಿ ಕೃಷಿ ಕಾಲೇಜಿನ ಕಂಪೌಂಡಿಗೆ ಹೊಂದಿಕೊಂಡಿರುವ ಗಿಡಕ್ಕೆ ಡಿಕ್ಕಿಪಡಿಸಿದ್ದು ಕಾರನಲ್ಲಿದ್ದ ಪಿಯರ್ಾಧಿಗೆ ಬಲಗಾಲ ತೊಡೆಯ ಮೇಲೆ ಮುರಿದಂತಾಗಿದ್ದು ಮತ್ತು ಮೊಳಕಾಲು ಕೆಳಗೆ ಮುರಿದಂತಾಗಿರುತ್ತದೆ. ಹಾಗೂ ಶಂಕರಗೌಡ ಈತನಿಗೂ ಸಾದಾ ಮತ್ತು ಭಾರಿ ರಕ್ತಗಾಯವಾಗಿರುತ್ತದೆ. ಅಂತಾ ಪಿಯರ್ಾಧಿ ಸಂಕ್ಷಿಪ್ತ ಸಾರಾಂಶವಿರುತ್ತದೆ.  
  
ಕೊಡೇಕಲ ಪೊಲೀಸ್ ಠಾಣೆ ಗುನ್ನೆ ನಂ. 55/2017 ಕಲಂ 78 (111) ಕೆ ಪಿ ಆಕ್ಟ;- ದಿನಾಂಕ: 23.06.2017 ರಂದು 8-15 ಗಂಟೆಗೆ  ಸಿಪಿಐ  ಸಾಹೇಬರು ಹುಣಸಗಿ  ರವರು ಠಾಣೆಗೆ ಹಾಜರಾಗಿ ತಾವು ಪೂರೈಸಿದ ಜಪ್ತಿ ಪಂಚನಾಮೆಯನ್ನು ಜ್ಞಾಪನಾ ಪತ್ರದೊಂದಿಗೆ ಆರೋಪಿ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಮತ್ತು ಆತನಿಂದ ಜಪ್ತಿ ಮಾಡಿದ ಮುದ್ದೆಮಾಲಿನೊಂದಿಗೆ ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದು, ಸಿಪಿಐ ಸಾಹೇಬರು ಹುಣಸಗಿ ರವರು ಹಾಜರ ಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಏನಂದರೆ ಇಂದು ದಿನಾಂಕ 23.06.2017 ರಂದು 5:15 ಪಿ.ಎಮ್ ಗಂಟೆಗೆ ಕಕ್ಕೇರಾ ಉಪಠಾಣೆಯಲ್ಲಿ ಇದ್ದಾಗ ಕಕ್ಕೇರಾ ಪಟ್ಟಣದ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಮಟಕಾ ಜೂಜಾಟ ಬರೆದುಕೊಳ್ಳುತ್ತಿದ್ದಾನೆ ಅಂತಾ ಖಚಿತ ಬಾತ್ಮೀ ಬಂದ ಮೇರೆಗೆ ಪಿಸಿ-147 ರವರಿಗೆ ಇಬ್ಬರು ಪಂಚರನ್ನು ಕರೆದುಕೊಂಡು ಬರಲು ತಿಳಿಸಿದ್ದು, ಪಿಸಿ-147 ರವರು ಪಂಚರನ್ನಾಗಿ ಶ್ರೀ ಹುಸೇನ್ ಸಾಬ್ ತಂದೆ ಮದನ್ಸಾಬ್ ಶಹಾನಿ ವಯಃ55, ಉಃಒಕ್ಕಲುತನ, ಜಾಃಮುಸ್ಲಿಂ, ಸಾಃಕಕ್ಕೇರಾ ಮತ್ತು ಶ್ರೀ ಚಿದಾನಂದ ತಂದೆ ಅಮರಪ್ಪ ಭೋವಿ ವಯಃ35, ಉಃಕೂಲಿ,ಜಾಃಕಬ್ಬಲಿಗ, ಸಾಃಕಕ್ಕೇರಾ ಇವರಿಗೆ ಉಪಠಾಣೆಗೆ 5:20 ಪಿ.ಎಮ್ ಕ್ಕೆ ಕರೆದುಕೊಂಡು ಬಂದಿದ್ದು, ಸದರಿಯವರಿಗೆ ವಿಷಯ ತಿಳಿಸಿ ದಾಳಿಗೆ ಹಾಜರಾಗಲು ಕೋರಿಕೊಂಡಿದ್ದು, ನಂತರ ಸಿಪಿಐ ಸಾಹೇಬರು ಮತ್ತು ಉಪಠಾಣೆಯ ಸಿಬ್ಬಂದಿಯವರಾದ ಎ.ಎಸ್.ಐ ಶಾಮಸುಂದರ್, ಪಿಸಿ-147 ಮಹಿಬೂಬ್ ಅಲಿ, ಪಿಸಿ-132 ವೆಂಕಟೇಶ, ಜೀಪ್ ಚಾಲಕ ಎ.ಪಿಸಿ-144 ವಿಕಾಸ್ ರವರು ಹಾಗೂ ಪಂಚರು ಕೂಡಿ ಉಪಠಾಣೆಯಿಂದ 5:25 ಪಿ.ಎಮ್ ಗಂಟೆಗೆ ಜೀಪ್ ನಂಬರ್ ಕೆ.ಎ-33 ಜಿ-0164 ನೇದ್ದರಲ್ಲಿ ಕುಳಿತು ಹೊರಟು 5:30 ಗಂಟೆಗೆ ಭಾತ್ಮೀ ಬಂದ ಸ್ಥಳವಾದ ಕಕ್ಕೇರಾ ಪಟ್ಟಣದ ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಜೀಪಿನಿಂದ ಇಳಿದು ಮರೆಯಲ್ಲಿ ನಿಂತು ನೋಡಲಾಗಿ ಒಬ್ಬನು ಮಹಷರ್ಿ ವಾಲ್ಮೀಕಿ ವೃತ್ತದ ಹತ್ತಿರ ಸಾರ್ವಜನಿಕ ರಸ್ತೆಯ ಮೇಲೆ ನಿಂತು ಹೋಗಿ ಬರುವ ಸಾರ್ವಜನಿಕರಿಂದ ಹಣ ಪಡೆದು ಚೀಟಿ ಬರೆದುಕೊಡುತ್ತಿದ್ದುದು ಖಚಿತವಾಗಿದ್ದು 5:35 ಗಂಟೆಗೆ ದಾಳಿ ಮಾಡಿ ಮಟಕಾ ಬರೆದುಕೊಳ್ಳುತ್ತಿದ್ದ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಈತನಿಗೆ ಹಿಡಿದು ವಶಕ್ಕೆ ಪಡೆದುಕೊಂಡು ಸದರಿಯವನಿಂದ 1 ಬಾಲ್ ಪೆನ್, 2 ಮಟಕಾ ಅಂಕಿ ಸಂಖ್ಯೆ ಬರೆದ ಚೀಟಿ, 1040/- ರೂ ನಗದು ಹಣ ನೇದ್ದವುಗಳನ್ನು ಪಂಚರ ಸಮಕ್ಷಮದಲ್ಲಿ 5:35 ಪಿ.ಎಮ್ ಗಂಟೆಯಿಂದ 6:30 ಪಿ.ಎಮ್ ಗಂಟೆ ವರೆಗೆ ಜಪ್ತಿ ಪಂಚನಾಮೆ ಮಾಡುವ ಮೂಲಕ ಜಪ್ತಿ ಮಾಡಿ ಆರೋಪಿತನಾದ ಬಾಬುಲಾಲ್ ತಂದೆ ಗೇವರಚಂದ್ ಜೈನ್ ವಯಃ68, ಜಾಃಜೈನ್, ಉಃಕಿರಾಣಿ ವ್ಯಾಪಾರ ಸಾಃದುಂದಾಡ, ತಾಃಲೋಣಿ, ಜಿಃಜೋದಪೂರ, ರಾಃರಾಜ್ಯಸ್ಥಾನ್ ಹಾಃವಃ ಕಕ್ಕೇರಾ ತಾ:ಸುರಪೂರ ಹಾಗೂ ಸದರಿಯವನಿಂದ ಜಪ್ತಿ ಮಾಡಿದ ಮುದ್ದೆಮಾಲು ಹಾಗೂ ಜಪ್ತಿ ಪಂಚನಾಮೆಯೊಂದಿಗೆ 8-15 ಪಿ ಎಂ ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ್ದು ಈ ಬಗ್ಗೆ ಆರೋಪಿತನ ಮೇಲೆ ಕಾನೂನು ಕ್ರಮ ಕೈಕೊಳ್ಳುಲು ಸೂಚಿಸಿದ್ದು  ಸಿಪಿಐ ಸಾಹೇಬರು ಹುಣಸಗಿ ರವರು ಹಾಜರುಪಡಿಸಿದ ಜಪ್ತು ಪಂಚನಾಮೆ ಮತ್ತು ಜ್ಞಾಪನಾ ಪತ್ರದಲ್ಲಿಯ ಸಾರಾಂಶವು ಅಸಂಜ್ಞೇಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆಗಾಗಿ ಯಾದಿ ಬರೆದು ನಿವೇದಿಸಿಕೊಂಡಿದ್ದು. ಇಂದು ದಿನಾಂಕ: 24.06.2017 ರಂದು 3-00 ಪಿಎಂ ಪಿಸಿ-291 ಸಂಗನಗೌಡ ರವರು ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಬಂದು ಪರವಾನಿಗೆ ಯಾದಿಯನ್ನು ಹಾಜರಪಡಿಸಿದ್ದು. ನಿನ್ನ ಸಿಪಿಐ ಸಾಹೇಬರು ರವರು ಹಾಜರಪಡಿಸಿದ ಜಪ್ತಿ ಪಂಚನಾಮೆ ಮತ್ತು ಜ್ಞಾಪಾನ ಪತ್ರದ ಸಾರಾಂಶ ಮೇಲಿಂದ ಠಾಣಾ ಗುನ್ನೆ ನಂ: 55/2017 ಕಲಂ: 78 () ಕೆ.ಪಿ. ಎಕ್ಟ್ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
 


No comments: