Police Bhavan Kalaburagi

Police Bhavan Kalaburagi

Saturday, July 29, 2017

Yadgir District Reported Crimes


                           Yadgir District Reported Crimes

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 116/2017 ಕಲಂ. 78(3) ಕೆ.ಪಿ ಕಾಯ್ದೆ;- ದಿನಾಂಕ: 29/07/2017 ರಂದು 11-30 ಎಎಮ್ ಕ್ಕೆ ಶ್ರೀ ಶ್ರೀಕಾಂತ ಎ.ಎಸ್.ಐ ವಡಗೇರಾ ಪೊಲೀಸ್ ಠಾಣೆ ರವರು ಠಾಣೆಗೆ ಹಾಹರಾಗಿ ಒಬ್ಬ ಆರೋಪಿ, ಮುದ್ದೆಮಾಲು, ಜಪ್ತಿ ಪಂಚನಾಮೆ ಹಾಜರಪಡಿಸಿ, ವರದಿ ನೀಡಿದ್ದು, ಜಪ್ತಿ ಪಂಚನಾಮೆ ಸಾರಾಂಶವೇನೆಂದರೆ ಇಂದು ದಿನಾಂಕ: 29/07/2017 ರಂದು ನಾಯ್ಕಲ್ ಗ್ರಾಮದ ಪೆಟ್ರೋಲ್ ಬಂಕ ಹತ್ತಿರ ಒಬ್ಬನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿದ್ದಾನೆ ಎಂದು ಖಚಿತ ಬಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೇಬರು ಯಾದಗಿರಿ ರವರ ಮಾರ್ಗದರ್ಶನದಲ್ಲಿ ನಾನು ಮತ್ತು ಸಿಬ್ಬಂದಿಯವರು ಪಂಚರೊಂದಿಗೆ ಹೋಗಿ ನಾಯ್ಕಲ್ ಗ್ರಾಮದ ಪೆಟ್ರೋಲ್ ಬಂಕ ಹತ್ತಿರ ಸ್ವಲ್ಪ ದೂರದಲ್ಲಿ ಜೀಪನ್ನು ನಿಲ್ಲಿಸಿ, ಇಳಿದು ಮರೆಯಾಗಿ ನಿಂತು ನೋಡಲಾಗಿ ಅಲ್ಲಿ ಒಬ್ಬ ಮನುಷ್ಯನು ಹೋಗಿ ಬರುವ ಸಾರ್ವಜನಿಕರಿಗೆ 1/- ರೂ. 80/- ರೂ. ಗೆಲ್ಲಿರಿ ಮಟ್ಕಾ ಆಡಿರಿ ಎಂದು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುವುದನ್ನು ನೋಡಿ, ಖಚಿತಪಡಿಸಿಕೊಂಡು ಅವನ ಮೇಲೆ ಎ.ಎಸ್.ಐ ಸಾಹೇಬರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಅವನಿಗೆ ವಶಕ್ಕೆ ಪಡೆದುಕೊಂಡು ಹೆಸರು ವಿಳಾಸ ವಿಚಾರಿಸಿದಾಗ ತನ್ನ ಹೆಸರು ರಮೇಶ @ ರಾಮು ತಂದೆ ಸಿದ್ದಪ್ಪ ವಡ್ಡರ, ವ:30, ಜಾ:ವಡ್ಡರ, ಉ:ಕೂಲಿ ಸಾ:ನಾಯ್ಕಲ್ ತಾ:ಶಹಾಪೂರ ಅಂತಾ ಹೇಳಿ ತಾನು ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟ್ಕಾ ನಂಬರಗಳನ್ನು ಬರೆದುಕೊಳ್ಳುತ್ತಿರುವುದಾಗಿ ಒಪ್ಪಿಕೊಂಡನು. ಅವನಿಗೆ ಅಂಗಶೋಧನೆ ಮಾಡಲಾಗಿ ಅವನ ಹತ್ತಿರ ನಗದು ಹಣ ರೂ. 4050=00, ಒಂದು ಮೊಬೈಲ್ ಅ:ಕಿ:500=00, ಮಟ್ಕಾ ನಂಬರಗಳನ್ನು ಬರೆದ ಒಂದು ಚೀಟಿ ಅ:ಕಿ: 00=00 ಮತ್ತು ಒಂದು ಬಾಲ ಪೆನ ಅ:ಕಿ: 00=00 ಇವುಗಳು ದೊರೆತ್ತಿದ್ದು ಜಪ್ತಿ ಪಡಿಸಿಕೊಂಡಿದ್ದು, ಸದರಿ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸುತ್ತಿದ್ದು, ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಆರೋಪಿ ಮತ್ತು ಮುದ್ದೆಮಾಲನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸದರಿ ಅಪರಾಧ ಪ್ರಕರಣವು ಅಸಂಜ್ಞೇಯ ಸ್ವರೂಪದ್ದಾಗಿರುವುದರಿಂದ ಪ್ರಕರಣ ದಾಖಲ ಮಾಡಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ಅನುಮತಿ ಕೋರಿಕೊಂಡಿದ್ದು, ಮಾನ್ಯ ನ್ಯಾಯಾಲಯವು ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲು ಅನುಮತಿ ಕೊಟ್ಟ ಮೇರೆಗೆ ಸದರಿ ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 116/2017 ಕಲಂ: 78(3) ಕೆ.ಪಿ ಎಕ್ಟ್ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 156/2017 ಕಲಂ: 279, 337, 338, ಐಪಿಸಿ.;- ದಿನಾಂಕ 28/07/2017 ರಂದು ಮಧ್ಯಾಹ್ನ 1-00 ಗಂಟೆಗೆ ಫಿರ್ಯಾಧಿ ಮತ್ತು ಇನ್ನೊಬ್ಬನು ಕೂಡಿಕೊಂಡು ತಮ್ಮ ಮೋಟಾರ ಸೈಕಲ ನಂ  ಕೆ.ಎ-05-ಇಬಿ-9046 ನೆದ್ದರ ಮೇಲೆ ಶಿವಪೂರದಿಂದ ರಾಮಸಮುದ್ರ ಕಡೆಗೆ ಬರುವಾಗ ಮಾರ್ಗಮಧ್ಯ ಗುರುಮಿಠಕಲ-ರಾಮಸಮುದ್ರ ರೋಡಿನ ಮೇಲೆ ಹೋಗುವಾಗ ಎದಿರುಗಡೆಯಿಂದ ಒಂದು ಲಾರಿ ನಂ ಎ.ಪಿ-07-ಟಿ.ಎಫ್-5195 ನೆದ್ದರ ಚಾಲಕನು ತನ್ನ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ಓಡಿಸಿಕೊಂಡು ಬಂದು ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಡಿದ್ದರಿಂದ ಫಿರ್ಯಾಧಿಗೆ ಮತ್ತು ಇನ್ನೊಬ್ಬನಿಗೆ ಭಾರಿ ರಕ್ತಗಾಯ, ತರಚಿದಗಾಯ ಮತ್ತು ಗುಪ್ತಗಾಯವಾದ ಬಗ್ಗೆ ಪ್ರಕರಣ ದಾಖಲು ಆಗಿರುತ್ತದೆ.

ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 147/2017 ಕಲಂ. 193 ಐಪಿಸಿ;- ದಿನಾಂಕ:27/07/2017 ರಂದು ರಾತ್ರಿ 10:00 ಗಂಟೆಗೆ ಶ್ರೀ ಭಿರಪ್ಪ ತಂ. ಸಾಯಬಣ್ಣ ಪೂಜಾರಿ ವಃ 45 ಜಾಃ ಕುರುಬರು ಉಃ ಪೊಲೀಸ್ ಮುಖ್ಯ ಪೇದೆ ಹೆಚ್.ಸಿ.-148 ಸಾಃ ಭೀಮರಾಯನ ಗುಡಿ ಪೊಲೀಸ್ ಠಾಣೆ ತಾಃ ಶಹಾಪೂರ ಜಿಃ ಯಾದಗಿರಿ ಇವರು ಒಂದು ಅಜರ್ಿಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೆನೆಂದರೆ ನಾನು ಭಿಮರಾಯನ ಗುಡಿ ಠಾಣೆಯಲ್ಲಿ 1 ವರ್ಷ 3 ತಿಂಗಳಿಂದ ಮುಖ್ಯ ಪೇದೆ ಅಂತಾ ಕರ್ತವ್ಯ ನಿರ್ವಹಿಸುತ್ತಿದ್ದು ನನಗೆ ಕೋರ್ಟ ಕರ್ತವ್ಯ  ನೇಮಿಸಿರುತ್ತಾರೆ. ಭೀಮರಾಯನ ಗುಡಿ ಪೊಲೀಸ ಠಾಣೆ ಗುನ್ನೆ ನಂ.09/2015 ಸ್ಪೆಷಲ್ ಕೆಸ್ ನಂ.(ಎ)35/2015 ನೇದ್ದರಲ್ಲಿ ಮಾನ್ಯ ಜಿಲ್ಲಾ ಸತ್ರ ನ್ಯಾಯಾಲಯ ಯಾದಗಿರದಲ್ಲಿ ಪಿಡಬ್ಲೂ-1, 2, 3, 5 ರವರುಗಳು ಈ ಮೊದಲು ದಿನಾಂಕ 24/11/2016 ರಂದು ಮಾನ್ಯ ಘನ ನ್ಯಾಯಾಲಯದಲ್ಲಿ ಪಿರ್ಯಾದಿ ಪಿಡಬ್ಲೂ-1, ಶರಣಬಸವ ತಂ. ಶಾಂತಪ್ಪ ಮ್ಯಾಗೇರಿ ವಃ 22 ಜಾಃ ಮಾದಿಗ (ಪ.ಜಾತಿ) ಉಃ ವಿದ್ಯಾಥರ್ಿ ಸಾಃ ಶಿರವಾಳ ತಾಃ ಶಹಾಪೂರ ಮತ್ತು ಪಿಡಬ್ಲೂ-2 ಬಸಲಿಂಗಪ್ಪ ತಂ. ರಾಮಸ್ವಾಮಿ ತಳಗೇರಿ ವಃ 30 ಜಾಃಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃ ಶಹಪೂರ ಪಿಡಬ್ಲೂ-3 ಅಭಿಲಾಷ ತಂ. ನಿಂಗಪ್ಪ ಮಲ್ಲಬಾದಿ ವಃ21 ಜಾಃಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃಶಹಪೂರ, ಪಿಡಬ್ಲೂ-5 ಹಣಮಂತ ತಂ. ವೀರಭದ್ರಪ್ಪ ಮ್ಯಾಗೇರಿ ವಃ 20 ಜಾಃ ಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃ ಶಹಪೂರ ರವರು ಸಾಕ್ಷಿ ಸಮಯದಲ್ಲಿ ಪಿರ್ಯಾದಿಯ ಅನುಸಾರವಾಗಿ ತಮ್ಮ ಸಾಕ್ಷಿಗಳನ್ನು ನುಡಿದಿರುತ್ತಾರೆ. ಇಂದು ದಿನಾಂಕ: 27/07/2017 ರಂದು ಯಾದಗಿರಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಸದರಿ ಸ್ಪೆಷಲ್ ಕೆಸ್ ನಂ.(ಎ)35/2015 ರಲ್ಲಿ ಸಾಕ್ಷಿದಾರರಾದ ಪಿಡಬ್ಲೂ-1, ಶರಣಬಸವ ತಂ. ಶಾಂತಪ್ಪ ಮ್ಯಾಗೇರಿ ವಃ 22 ಜಾಃ ಮಾದಿಗ (ಪ.ಜಾತಿ) ಉಃ ವಿದ್ಯಾಥರ್ಿ ಸಾಃ ಶಿರವಾಳ ತಾಃ ಶಹಾಪೂರ ಮತ್ತು ಪಿಡಬ್ಲೂ-2 ಬಸಲಿಂಗಪ್ಪ ತಂ. ರಾಮಸ್ವಾಮಿ ತಳಗೇರಿ ವಃ 30 ಜಾಃಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃ ಶಹಪೂರ ಪಿಡಬ್ಲೂ-3 ಅಭಿಲಾಷ ತಂ. ನಿಂಗಪ್ಪ ಮಲ್ಲಬಾದಿ ವಃ21 ಜಾಃಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃ ಶಹಪೂರ , ಪಿಡಬ್ಲೂ-5 ಹಣಮಂತ ತಂ. ವೀರಭದ್ರಪ್ಪ ಮ್ಯಾಗೇರಿ ವಃ 20 ಜಾಃ ಮಾದಿಗ (ಪ.ಜಾತಿ) ಉಃ ಕೂಲಿಕೆಲಸ ಸಾಃ ಶಿರವಾಳ ತಾಃ ಶಹಪೂರ ಇವರುಗಳ ಸಾಕ್ಷಿಗಳಿದ್ದು ಸಾಕ್ಷಿ ನುಡಿಯುವ ಸಮಯದಲ್ಲಿ ಸಾಯಂಕಾಲ 4-30 ಗಂಟೆ ಸುಮಾರಿಗೆ ನ್ಯಾಯಾಂಗದ ವಿಚಾರಣೆ ಕಾಲಕ್ಕೆ ನಾಲ್ಕು ಜನರು ಈ ಮೊದಲು ನ್ಯಾಯಾಲಯದಲ್ಲಿ ನುಡಿದ ಹೇಳಿಕೆಯ ವಿರುದ್ದವಾಗಿ ಸುಳ್ಳು ಸಾಕ್ಷಿಯನ್ನು ನುಡಿದಿರುತ್ತಾರೆ. ಸುಳ್ಳು ಸಾಕ್ಷಿ ನುಡಿದಿದ್ದರಿಂದ ಮಾನ್ಯ ನ್ಯಾಯಾಲಯದ ನ್ಯಾಯಾಧಿಶರ ಮೌಖಿಕ ಆಧೇಶದ ಪ್ರಕಾರ ಸದರಿಯವರ ಮೇಲೆ ಕ್ರಮ ಕೈಕೊಳ್ಳುವಂತೆ ನನಗೆ ಆಧೇಶ ನೀಡಿದ್ದರಿಂದ ಸದರಿಯವರ ಮೇಲೆ ಮುಂದಿನ ಸೂಕ್ತ ಕ್ರಮಕ್ಕಾಗಿ ಠಾಣೆಗೆ ಬಂದಿದ್ದು ಸದರಿಯವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿರಿ ಅಂತಾ ಮಾನ್ಯರವರಲ್ಲಿ ವಿನಂತಿ. ಅಂತಾ ಕೊಟ್ಟ ಅಜರ್ಿಸಾರಾಂಶ ಇರುತ್ತದೆ. ಕಾರಣ ಸದರಿ ಮೇಲ್ಕಂಡ ಅಜರ್ಿಯ ಸಾರಾಂಶವು ಕಲಂ.193 ಐಪಿಸಿ ಅಡಿಯಲ್ಲಿ ಬರುವುದರಿಂದ ಅಸಂಜ್ಞೆಯ ಪ್ರಕರಣವಾಗಿದ್ದು ಗುನ್ನೆ ದಾಖಲಿಸಿಕೊಳ್ಳಲು ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಡಿದ್ದು ಮಾನ್ಯ ನ್ಯಾಯಾಲಯವು ಇಂದು ದಿನಾಂಕ. 11-15 ಎಎಂಕ್ಕೆ ಪರವಾನಿಗೆ ನೀಡಿದ್ದರ ಮೇಲಿಂದ ಠಾಣೆ ಗುನ್ನೆ ನಂ.147/2017 ಕಲಂ.193 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.


ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 317/2017.ಕಲಂ 323 341 354 504 506 ಸಂ 34 ಐ.ಪಿ.ಸಿ.;- ದಿನಾಂಕ 28/07/2017 ರಂದು 12-00 ಗಂಟೆಗೆ ಶ್ರೀಮತಿ ಜುಬೆದಾಬೆಗಂ  ಗಂಡ ಉಸ್ಮಾನ್ ಜಮಾದಾರ ವ|| 45 ವರ್ಷ ಜಾ|| ಮುಸ್ಲಿಂ ಉ|| ಮನೆ ಕೆಲಸ ಸಾ|| ದೋರನಳ್ಳಿ ತಾ|| ಶಹಾಪೂರ ಇವರು ಠಾಣೆಗೆ ಹಾಜಗಾಗಿ ಒಂದು ಗಣಕ ಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿಸಿದ ದೂರು ಹಾಜರ ಪಡಿಸಿದ್ದು ಸದರಿ ದೂರಿನ ಸಾರಾಂಶ ವೆನೆಂದರೆ ದಿನಾಂಕ 26/07/2017 ರಂದು ಸಾಯಂಕಾಲ ಅಂದಾಜು 4-30 ಗಂಟೆಗೆ ನಾನು ನಮ್ಮ ಮನೆಯ ಮುಂದೆ ಇದ್ದೆನು. ಹಿಂದಿನ ಜಗಳದ ವೈಶಮ್ಯದಿಂದ ಅದೇ ಸಮಯಕ್ಕೆ ನಮ್ಮ ಸಂಬಂದಿಕರಾದ 1] ರಾಜೆಸಾಬ ತಂದೆ ಚಾಂದಪಾಶಾ ಕಾನಳ್ಳಿ, 2] ಅಫ್ರೂಜ ಹೈಮದ ತಂದೆ ಚಾಂದಪಾಶಾ ಕಾನಳ್ಳಿ, 3] ಸಹರಾ ಬೆಗಂ ಗಂಡ ಚಾಂದಪಾಶ ಕಾನಳ್ಳಿ, ಈ ಮುರು ಜನರು ಕೂಡಿಕೊಂಡು ಬಂದವರೆ ಅವರೆಲ್ಲರು ನನಗೆ ಎಲೇ ಬೋಸುಡಿ ರಂಡಿ ನಿನಗೆ ಬಹಾಳ ಸೊಕ್ಕು ಬಂದಿದೆ ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಇತ್ಯಾಯಾದಿ ಅವಾಚ್ಚ ಶಬ್ದಗಳಿಂದ ಬೈಯುತ್ತಿರುಗ್ಗೆ ನನ್ನ ಗಂಡನಿಗೆ ಎಕೆ ಬೈಯುತ್ತಿರುವಿರಿ ಎಂದು ಕೇಳಿದ ಕೂಡಲೆ ಅವರಲ್ಲಿಯ ರಾಜುಸಾಬನು ಹೊಡೆಯಲು ಮೈಮೆಲೆ ಬಂದ ತಕ್ಷಣ ಅಂಜಿ ಓಡುತ್ತಿದ್ದ ನನಗೆ ಸಹರಾ ಬೆಗಂ ಇವಳು ನನಗೆ ತೆಕ್ಕಿಗೆ ಬಿದ್ದು ಮುಂದೆ ಹೊಗದಂತೆ ಹಿಡಿದು ನಿಲ್ಲಿಸಿದಳು, ಆಗ ರಾಜೆಸಾಬನು ತನ್ನ ಕೈಯಿಂದ ಎಡಗಡೆ ಜುಬ್ಬಕ್ಕೆ ಹೊಡೆಯ ತೋಡಗಿದನು. ಅಫ್ರೂಜ ಹೈಮದನು ನನ್ನ ತಲೆಯ ಮೇಲಿನ ಕೂದಲು ಹಿಡಿದು ಎಳೆದಾಡ ತೊಡಗಿದನು ಜಗಳವನ್ನು ನೋಡಿ ಅಲ್ಲಿಯೆ ಇದ್ದ ದೇವಪ್ಪ ತಂದೆ ಭೀಮರಾಯ ಗುತ್ತೆದಾರ, ಭೀಮಣ್ಣ ತಂದೆ ದೇವಿಂದ್ರಪ್ಪ ಯಮನೂರ ಇವರೆಲ್ಲರು ಜಗಳ ಬಿಡಿಸಿದ ಕೂಡಲೆ ಮತ್ತೆ ಅವರೆಲ್ಲರು ಎಲೆ ಸೂಳೆ ನಿನ್ನ ಗಂಡನಿಗೆ ಬುದ್ದಿಮಾತು ಹೇಳು ಇಲ್ಲದಿದ್ದರೆ ನಿನ್ನ ಜೀವ ಹೋಡೆಯುತ್ತೆವೆ ಎಂದು ಜೀವದ ಭಯ ಹಾಕಿದರು ಜಗಳದಲ್ಲಿ ನನಗೆ ಗಾಯ ಪೆಟ್ಟು ಆಗಿರುವದಿಲ್ಲಾ ಆಸ್ಪತ್ರೆಗೆ ಹೊಗುವದಿಲ್ಲಾ ನನ್ನ ಗಂಡನ ಸಂಗಡ ವಿಚಾರಣೆ ಮಾಡಿ ತಡವಾಗಿ ದೂರು ನೀಡಿದ್ದರ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 317/2017 ಕಲಂ 323.341.354.504.506.ಸಂ34 ಐ.ಪಿ.ಸಿ. ನ್ನೆದ್ದರ ಪ್ರಕಾರ ಪ್ರಕರಣ ಧಾಖಲಿಸಿ ಕೊಂಡು ತನಿಕೆ ಕೈಕೊಂಡೆನು

No comments: